TOP STORIES:

FOLLOW US

”ಲೀಫ್ ಆರ್ಟ್’ ಎಂಬ ಕಲೆಯಿಂದ ಜನಮಣ್ಣನೆ ಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್


ಬಲ್ಲವನೇ ಬಲ್ಲ ಬೆಲ್ಲದ ರುಚಿಯಎಂಬಂತೆ ಒಬ್ಬ ಕಲಾವಿದನಿಗೆ ಮಾತ್ರ ಗೊತ್ತು ಕಲೆಯ ಬೆಲೆ. ಅವನಲ್ಲಿ ಮೂಡುವ ವಿಶಿಷ್ಟಚಟುವಟಿಕೆಯೇ ಕಲೆ ಎಂಬಂತೆ ಪೆನ್ಸಿಲ್ ಸ್ಕೆಚ್,ಪೈಂಟಿಂಗ್,ಚಿತ್ರಕಲೆ ಇವೆಲ್ಲವನ್ನು ಹೊರತುಪಡಿಸಿ ಪಚ್ಚನೆಯ ಪತ್ರೆಗಳಲ್ಲಿ ಹಲವಾರುನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗಲೀಫ್ ಆರ್ಟ್ಎಂಬ ಕಲೆಯಿಂದ ಜನಮಣ್ಣನೆಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್.

   (Copyrights owned by: billavaswarriors.com )

ಲೀಫ್ ಆರ್ಟಿಸ್ಟ್ ಎಂದೇ ಪ್ರಸಿದ್ದಿ ಹೊಂದಿರುವ ಇವರು ಮೋಹನ್ ಬಿ.ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರ.ಪ್ರಾಂತ್ಯಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ,ಹೋಲಿ ರೋಸರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಮೂಡಬಿದಿರೆಯಆಳ್ವಾಸ್ ಕಾಲೇಜಿನಲ್ಲಿ ೩ನೇ ವರುಷದ  ವೀಷ್ಯುಲ್ ಆರ್ಟ್ಸ್ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಪೆನ್ಸಿಲ್ ಸ್ಕೆಚ್,ಸಾಬೂನಿನಲ್ಲಿದೇವರ ಕಲಾಕೃತಿ,ವಾಲ್ ಪೈಟಿಂಗ್,ರಂಗೋಲಿ ಮತ್ತು ಪೆನ್ಸಿಲ್ ಮೊನೆಯಿಂದ ಮೈಕ್ರೋ ಆರ್ಟ್ ಹೀಗೆ ಹಲವಾರು ಕಲೆಗಳನ್ನುಹೊಂದಿರುವ ಕಲಾಭಂಡಾರಿ ಎಂದೆನಿಸಿಕೊಂಡಿದ್ದಾರೆ.

   (Copyrights owned by: billavaswarriors.com )

ಪಚ್ಚೆ ಪತ್ರೆಗಳಲ್ಲಿ ಮೂಡಿದ ನಗುಮುಖಗಳು:

ಲಾಕ್ ಡೌನ್ ವೇಳೆ ಕೇವಲ ವೆಕ್ಟರ್ ಫಾರ್ಮ್ ನಲ್ಲಿ ಪೇಪರ್ ಕಟ್ಟಿಂಗ್ ಮಾಡುತ್ತಿದ್ದ ಇವರು ಎಲೆಗಳಲ್ಲೇಕೆ ಪ್ರಯತ್ನಿಸಬಾರದು ಎಂದುಕುತೂಹಲದಿಂದ ಒಂದ್ಹೆಜ್ಜೆ ಮುಂದಿಟ್ಟರು.ಮೊದಲ ಪ್ರಯತ್ನದಲ್ಲಿ ಸೋತರೂ ಎರಡನೇ ಬಾರಿ ರಶ್ಮಿಕಾ ಮಂದಣ್ಣರವರಮುಖಚಿತ್ರವನ್ನು ಎಲೆಯ ಮೇಲೆ ಬಿಡಿಸುವಲ್ಲಿ ಫಲಕಾರಿಯಾದರು.

ನಂತರ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿ, ಸಿ.ಎಂ ಬಿ.ಎಸ್ ಎಡಿಯೂರಪ್ಪ, ಡಾ.ವೀರೇಂದ್ರ ಹೆಗ್ಗಡೆ,ಸನ್ನಿಧ್ಪೂಜಾರಿ,ಹರೀಶ್ ಪೂಂಜ,ಶಾಸಕ ಉಮಾನಾಥ್ ಕೋಟ್ಯಾನ್,ಸಿನಿಮಾ ದಿಗ್ಗಜರಾದಸುದೀಪ್, ದರ್ಶನ್,ಜಗ್ಗೇಶ್ ಹೀಗೆ ಅನೇಕಕಲಾವಿದರ ,ಸಾಧಕರ ಮುಖಚಿತ್ರಗಳನ್ನು ಎಲೆಗಳಲ್ಲಿ ಬರೆದು ಒಂದು ವರುಷದಲ್ಲಿ ಒಟ್ಟು ೨೦೦ ಲೀಫ್ ಅರ್ಟ್ ಗಳನ್ನುತಯಾರಿಸಿದ್ದಾರೆ.

ಹಸಿರೆಲೆಗಳಲ್ಲಿ ಹಸನ್ಮುಖಗಳು ಅನಾವರಣಗೊಂಡಿದ್ದು ಹೇಗೆ?

ತಾಳ್ಮೆ ಮತ್ತು ಸಹನೆ ಇರುವವರಿಗೆ ಎಲ್ಲವೂ ಹೆದ್ದಾರಿಯಾಗುತ್ತದೆ ಎಂಬುದು ಕಲೆಯಲ್ಲಿ ಎದ್ದು ಕಾಣುತ್ತಿದೆ.”ಹೂವಿನಷ್ಟೇನಾಜ಼ೂಕಾದ ಎಲೆಗಳ ಮೇಲೆ ಯಾವುದೇ ಕಲಾಕೃತಿ ಬರೆಯಲು ರಿಂದ ಎರಡೂವರೆ ಗಂಟೆ ಬೇಕಾಗುತ್ತದೆ.ಇಲ್ಲಿ ತಮಗೆ ಬೇಕಾದಎಲೆಗಳನ್ನು ಆರಿಸಿಕೊಳ್ಳಬಹುದು.ನಾನು ಮೊದಲನೇ ಬಾರಿ ಹಲಸಿನ ಎಲೆಗಳನ್ನು ಬಳಸಿದೆ,ನಂತರ ಅಶ್ವಥ ಎಲೆಗಳನ್ನು ಜಾಸ್ತಿ ದಿನಸಂಗ್ರಹಿಸಬಹುದೆಂಬ ಕಾರಣಕ್ಕೆ ಅದನ್ನು ಬಳಸಲು ಮುಂದಾದೆ.ಮೊದಲಿಗೆ ಎಲೆಗಳ ಮೇಲೆ ಸ್ಕೆಚ್ ತಯಾರಿಸಿ ಅದರ ಮೇಲೆಕಟ್ಟಿಂಗ್ ಬ್ಲೇಡ್ ನಿಂದ ತಿರುವುಗಳನ್ನು ಬಿಡಿಸಿ ತದನಂತರ ಕಟ್ಟಿಂಗ್ ಮುಗಿಸಿದ ಮೇಲೆ ಎಲೆಯನ್ನು ಆಕಾಶದಾಚೆಗೆ ಎತ್ತಿ ಹಿಡಿದಲ್ಲಿಹೊಸ ವಿನ್ಯಾಸವೊಂದು ಮೂಡಿ ಬರುತ್ತದೆ.ಅದುವೇ ಲೀಫ್ ಆರ್ಟ್. ಇವುಗಳನ್ನು ಫ್ರೇಮ್ ಹಾಕಿ ಕೂಡಇಟ್ಟುಕೊಳ್ಳಬಹುದು.ಅನೇಕ ಸಮಾರಂಭಗಳಿಗೆ ಇದನ್ನು ಉಡುಗೊರೆಯಾಗಿಯೂ ಕೊಡಬಹುದು“‌ ಎನ್ನುತ್ತಾರೆ ಅಕ್ಷಯ್.

(Copyrights owned by: billavaswarriors.com )

ಲೀಫ್ ಆರ್ಟ್ ಕಲಾವಿದನ ಮನದ ಮಾತು:

ನನ್ನ ಪ್ರತಿ ಕಾರ್ಯದಲ್ಲಿ ನನಗೆ ಸಹಕರಿಸಿದವರು ನನ್ನ ಹೆತ್ತವರು,ಶಿಕ್ಷಕರು ಹಾಗೂ ಸ್ನೇಹಿತರು. ನನಗೆಂದೂ ಸ್ಪೂರ್ತಿಯಾದವರುವಿಲಾಸ್ ನಾಯಕ್.ಹಲವಾರು ಟಿ.ವಿ ಚಾನಲ್ ನವರು ಸಂದರ್ಶನ ಮಾಡಿದ್ದರಿಂದ ಇದೀಗ ಎಲ್ಲರೂಲೀಫ್ ಆರ್ಟಿಸ್ಟ್ಎಂದುಗುರುತಿಸುತ್ತಾರೆ.ಇದರಿಂದಾಗಿ ಲೀಫ್ ಆರ್ಟ್ ಗೆ ಸುಮಾರು ಬೇಡಿಕೆಗಳು ಸಹ ಬಂದಿವೆ.ನನ್ನ ಸಾಧನೆಯ ಹಾದಿಯಲ್ಲಿಬೆನ್ನೆಲುಬಾಗಿ ನಿಂತು ಸಹಕರಿಸಿದವರಿಗೆ ನಾನು ಸದಾ ಚಿರರುಣಿಎನ್ನುತ್ತಾರೆ ಅಕ್ಷಯ್.

ಸಂದ ಗೌರವಗಳು:

ಇವರ ಸಾಧನೆಯನ್ನು ಗುರುತಿಸಿ ವೀರಕೇಸರಿ ಬೆಳ್ತಂಗಡಿ ವತಿಯಿಂದಕಲಾರತ್ನ ಪುರಸ್ಕಾರಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಗೌರವಿಸಲಾಗಿದೆ.ಇದಲ್ಲದೆ‌ ಸಿ.ಎಂ.ಎಡಿಯೂರಪ್ಪರವರು ತನ್ನ ಶಿಕ್ಷಣಕ್ಕಾಗಿ ಒಂದು ಲಕ್ಷ ಮೊತ್ತವನ್ನ ಹಾಗೇಡಾ.ವೀರೇಂದ್ರ ಹೆಗ್ಗಡೆಯವರು ತನ್ನ ಕಲೆಯನ್ನು ಗುರುತಿಸಿ ಅವರೇ ಖುದ್ದಾಗಿ ವೀಡಿಯೋ ಮಾಡಿ ತನಗೆ ಆಶೀರ್ವದಿಸಿದ್ದು  ತನ್ನಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಅಕ್ಷಯ್ ರವರ ಅಭಿಪ್ರಾಯ.

ಜೀವನದ ಪಥದಲ್ಲಿ ಸಾಧನೆ ಎಂಬ ಕೀರ್ತಿಯನ್ನು  ತಮ್ಮದಾಗಿಸಿ ಇನ್ನಷ್ಟು ಜನಮನಗಳನ್ನು ಗೆದ್ದು ನಿಮ್ಮ ಕಲೆಯನ್ನು ಬೆಳೆಸಲುಇನ್ನಷ್ಟು ಅವಕಾಶ ದೊರೆಯಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾನಿಮ್ಮ ಮೇಲೆ ಇರೆಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

www.billavaswarriors.com


✍️
ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »