TOP STORIES:

”ಲೀಫ್ ಆರ್ಟ್’ ಎಂಬ ಕಲೆಯಿಂದ ಜನಮಣ್ಣನೆ ಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್


ಬಲ್ಲವನೇ ಬಲ್ಲ ಬೆಲ್ಲದ ರುಚಿಯಎಂಬಂತೆ ಒಬ್ಬ ಕಲಾವಿದನಿಗೆ ಮಾತ್ರ ಗೊತ್ತು ಕಲೆಯ ಬೆಲೆ. ಅವನಲ್ಲಿ ಮೂಡುವ ವಿಶಿಷ್ಟಚಟುವಟಿಕೆಯೇ ಕಲೆ ಎಂಬಂತೆ ಪೆನ್ಸಿಲ್ ಸ್ಕೆಚ್,ಪೈಂಟಿಂಗ್,ಚಿತ್ರಕಲೆ ಇವೆಲ್ಲವನ್ನು ಹೊರತುಪಡಿಸಿ ಪಚ್ಚನೆಯ ಪತ್ರೆಗಳಲ್ಲಿ ಹಲವಾರುನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗಲೀಫ್ ಆರ್ಟ್ಎಂಬ ಕಲೆಯಿಂದ ಜನಮಣ್ಣನೆಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್.

   (Copyrights owned by: billavaswarriors.com )

ಲೀಫ್ ಆರ್ಟಿಸ್ಟ್ ಎಂದೇ ಪ್ರಸಿದ್ದಿ ಹೊಂದಿರುವ ಇವರು ಮೋಹನ್ ಬಿ.ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರ.ಪ್ರಾಂತ್ಯಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ,ಹೋಲಿ ರೋಸರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಮೂಡಬಿದಿರೆಯಆಳ್ವಾಸ್ ಕಾಲೇಜಿನಲ್ಲಿ ೩ನೇ ವರುಷದ  ವೀಷ್ಯುಲ್ ಆರ್ಟ್ಸ್ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಪೆನ್ಸಿಲ್ ಸ್ಕೆಚ್,ಸಾಬೂನಿನಲ್ಲಿದೇವರ ಕಲಾಕೃತಿ,ವಾಲ್ ಪೈಟಿಂಗ್,ರಂಗೋಲಿ ಮತ್ತು ಪೆನ್ಸಿಲ್ ಮೊನೆಯಿಂದ ಮೈಕ್ರೋ ಆರ್ಟ್ ಹೀಗೆ ಹಲವಾರು ಕಲೆಗಳನ್ನುಹೊಂದಿರುವ ಕಲಾಭಂಡಾರಿ ಎಂದೆನಿಸಿಕೊಂಡಿದ್ದಾರೆ.

   (Copyrights owned by: billavaswarriors.com )

ಪಚ್ಚೆ ಪತ್ರೆಗಳಲ್ಲಿ ಮೂಡಿದ ನಗುಮುಖಗಳು:

ಲಾಕ್ ಡೌನ್ ವೇಳೆ ಕೇವಲ ವೆಕ್ಟರ್ ಫಾರ್ಮ್ ನಲ್ಲಿ ಪೇಪರ್ ಕಟ್ಟಿಂಗ್ ಮಾಡುತ್ತಿದ್ದ ಇವರು ಎಲೆಗಳಲ್ಲೇಕೆ ಪ್ರಯತ್ನಿಸಬಾರದು ಎಂದುಕುತೂಹಲದಿಂದ ಒಂದ್ಹೆಜ್ಜೆ ಮುಂದಿಟ್ಟರು.ಮೊದಲ ಪ್ರಯತ್ನದಲ್ಲಿ ಸೋತರೂ ಎರಡನೇ ಬಾರಿ ರಶ್ಮಿಕಾ ಮಂದಣ್ಣರವರಮುಖಚಿತ್ರವನ್ನು ಎಲೆಯ ಮೇಲೆ ಬಿಡಿಸುವಲ್ಲಿ ಫಲಕಾರಿಯಾದರು.

ನಂತರ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿ, ಸಿ.ಎಂ ಬಿ.ಎಸ್ ಎಡಿಯೂರಪ್ಪ, ಡಾ.ವೀರೇಂದ್ರ ಹೆಗ್ಗಡೆ,ಸನ್ನಿಧ್ಪೂಜಾರಿ,ಹರೀಶ್ ಪೂಂಜ,ಶಾಸಕ ಉಮಾನಾಥ್ ಕೋಟ್ಯಾನ್,ಸಿನಿಮಾ ದಿಗ್ಗಜರಾದಸುದೀಪ್, ದರ್ಶನ್,ಜಗ್ಗೇಶ್ ಹೀಗೆ ಅನೇಕಕಲಾವಿದರ ,ಸಾಧಕರ ಮುಖಚಿತ್ರಗಳನ್ನು ಎಲೆಗಳಲ್ಲಿ ಬರೆದು ಒಂದು ವರುಷದಲ್ಲಿ ಒಟ್ಟು ೨೦೦ ಲೀಫ್ ಅರ್ಟ್ ಗಳನ್ನುತಯಾರಿಸಿದ್ದಾರೆ.

ಹಸಿರೆಲೆಗಳಲ್ಲಿ ಹಸನ್ಮುಖಗಳು ಅನಾವರಣಗೊಂಡಿದ್ದು ಹೇಗೆ?

ತಾಳ್ಮೆ ಮತ್ತು ಸಹನೆ ಇರುವವರಿಗೆ ಎಲ್ಲವೂ ಹೆದ್ದಾರಿಯಾಗುತ್ತದೆ ಎಂಬುದು ಕಲೆಯಲ್ಲಿ ಎದ್ದು ಕಾಣುತ್ತಿದೆ.”ಹೂವಿನಷ್ಟೇನಾಜ಼ೂಕಾದ ಎಲೆಗಳ ಮೇಲೆ ಯಾವುದೇ ಕಲಾಕೃತಿ ಬರೆಯಲು ರಿಂದ ಎರಡೂವರೆ ಗಂಟೆ ಬೇಕಾಗುತ್ತದೆ.ಇಲ್ಲಿ ತಮಗೆ ಬೇಕಾದಎಲೆಗಳನ್ನು ಆರಿಸಿಕೊಳ್ಳಬಹುದು.ನಾನು ಮೊದಲನೇ ಬಾರಿ ಹಲಸಿನ ಎಲೆಗಳನ್ನು ಬಳಸಿದೆ,ನಂತರ ಅಶ್ವಥ ಎಲೆಗಳನ್ನು ಜಾಸ್ತಿ ದಿನಸಂಗ್ರಹಿಸಬಹುದೆಂಬ ಕಾರಣಕ್ಕೆ ಅದನ್ನು ಬಳಸಲು ಮುಂದಾದೆ.ಮೊದಲಿಗೆ ಎಲೆಗಳ ಮೇಲೆ ಸ್ಕೆಚ್ ತಯಾರಿಸಿ ಅದರ ಮೇಲೆಕಟ್ಟಿಂಗ್ ಬ್ಲೇಡ್ ನಿಂದ ತಿರುವುಗಳನ್ನು ಬಿಡಿಸಿ ತದನಂತರ ಕಟ್ಟಿಂಗ್ ಮುಗಿಸಿದ ಮೇಲೆ ಎಲೆಯನ್ನು ಆಕಾಶದಾಚೆಗೆ ಎತ್ತಿ ಹಿಡಿದಲ್ಲಿಹೊಸ ವಿನ್ಯಾಸವೊಂದು ಮೂಡಿ ಬರುತ್ತದೆ.ಅದುವೇ ಲೀಫ್ ಆರ್ಟ್. ಇವುಗಳನ್ನು ಫ್ರೇಮ್ ಹಾಕಿ ಕೂಡಇಟ್ಟುಕೊಳ್ಳಬಹುದು.ಅನೇಕ ಸಮಾರಂಭಗಳಿಗೆ ಇದನ್ನು ಉಡುಗೊರೆಯಾಗಿಯೂ ಕೊಡಬಹುದು“‌ ಎನ್ನುತ್ತಾರೆ ಅಕ್ಷಯ್.

(Copyrights owned by: billavaswarriors.com )

ಲೀಫ್ ಆರ್ಟ್ ಕಲಾವಿದನ ಮನದ ಮಾತು:

ನನ್ನ ಪ್ರತಿ ಕಾರ್ಯದಲ್ಲಿ ನನಗೆ ಸಹಕರಿಸಿದವರು ನನ್ನ ಹೆತ್ತವರು,ಶಿಕ್ಷಕರು ಹಾಗೂ ಸ್ನೇಹಿತರು. ನನಗೆಂದೂ ಸ್ಪೂರ್ತಿಯಾದವರುವಿಲಾಸ್ ನಾಯಕ್.ಹಲವಾರು ಟಿ.ವಿ ಚಾನಲ್ ನವರು ಸಂದರ್ಶನ ಮಾಡಿದ್ದರಿಂದ ಇದೀಗ ಎಲ್ಲರೂಲೀಫ್ ಆರ್ಟಿಸ್ಟ್ಎಂದುಗುರುತಿಸುತ್ತಾರೆ.ಇದರಿಂದಾಗಿ ಲೀಫ್ ಆರ್ಟ್ ಗೆ ಸುಮಾರು ಬೇಡಿಕೆಗಳು ಸಹ ಬಂದಿವೆ.ನನ್ನ ಸಾಧನೆಯ ಹಾದಿಯಲ್ಲಿಬೆನ್ನೆಲುಬಾಗಿ ನಿಂತು ಸಹಕರಿಸಿದವರಿಗೆ ನಾನು ಸದಾ ಚಿರರುಣಿಎನ್ನುತ್ತಾರೆ ಅಕ್ಷಯ್.

ಸಂದ ಗೌರವಗಳು:

ಇವರ ಸಾಧನೆಯನ್ನು ಗುರುತಿಸಿ ವೀರಕೇಸರಿ ಬೆಳ್ತಂಗಡಿ ವತಿಯಿಂದಕಲಾರತ್ನ ಪುರಸ್ಕಾರಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಗೌರವಿಸಲಾಗಿದೆ.ಇದಲ್ಲದೆ‌ ಸಿ.ಎಂ.ಎಡಿಯೂರಪ್ಪರವರು ತನ್ನ ಶಿಕ್ಷಣಕ್ಕಾಗಿ ಒಂದು ಲಕ್ಷ ಮೊತ್ತವನ್ನ ಹಾಗೇಡಾ.ವೀರೇಂದ್ರ ಹೆಗ್ಗಡೆಯವರು ತನ್ನ ಕಲೆಯನ್ನು ಗುರುತಿಸಿ ಅವರೇ ಖುದ್ದಾಗಿ ವೀಡಿಯೋ ಮಾಡಿ ತನಗೆ ಆಶೀರ್ವದಿಸಿದ್ದು  ತನ್ನಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಅಕ್ಷಯ್ ರವರ ಅಭಿಪ್ರಾಯ.

ಜೀವನದ ಪಥದಲ್ಲಿ ಸಾಧನೆ ಎಂಬ ಕೀರ್ತಿಯನ್ನು  ತಮ್ಮದಾಗಿಸಿ ಇನ್ನಷ್ಟು ಜನಮನಗಳನ್ನು ಗೆದ್ದು ನಿಮ್ಮ ಕಲೆಯನ್ನು ಬೆಳೆಸಲುಇನ್ನಷ್ಟು ಅವಕಾಶ ದೊರೆಯಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾನಿಮ್ಮ ಮೇಲೆ ಇರೆಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

www.billavaswarriors.com


✍️
ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »