TOP STORIES:

FOLLOW US

ಲೇಡಿಹಿಲ್ ಗೆ ಶ್ರೀ ನಾರಾಯಣ ಗುರು ವೃತ್ತ ಎಂದು ಪುನರ್ ನಾಮಕರಣ ಬೇಕೆ..? ಕಾರಣಗಳು ಇಲ್ಲಿವೆ


Credits: Billavaswarriors.com – Special article

ಕೇರಳದ ಚೆಂಬಝತ್ತಿ ಎಂಬಲ್ಲಿ ಜನಿಸಿದ ಬ್ರಹ್ಮಶ್ರಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾನ ಸಮಾಜದ ತತ್ವಕ್ಕಾಗಿ ಇಂದು ಇಡೀ ವಿಶ್ವಕ್ಕೆ ಗುರುವಾಗಿ ನಿಂತಿದ್ದಾರೆ. ಓರ್ವ ಈಳವ(ಬಿರುವ) ಸಮುದಾಯದ ಸದಸ್ಯನಾಗಿದ್ದು, ಪಕ್ವತೆ ಪಡೆದಾಗ ಸಮಾಜಿಕ ಅನ್ಯಾಯದ ವಿರುದ್ಧ ಹೋರಾಡಿ ಸಮಾಜಿಕ ನವೋತ್ಥಾನಕ್ಕೆ ಕಾರಣೀಕರ್ತರಾದ ಶ್ರೀ ನಾರಾಯಣ ಗುರುಗಳು ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರಿಂದಲೂ ಅರಾಧಿಸಲ್ಪಟ್ಟವರಾಗಿದ್ದಾರೆ. ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಇಂತಹ ಅವತಾರ ಪುರುಷನ ಹೆಸರು ನಾಮಕರಣ ಮಾಡಿದರೆ ಅದು ವಿದ್ಯಾವಂತರ ನಗರವಾದ ಮಂಗಳೂರಿಗೆ ಹೊಸ ಶೋಭೆ ನೀಡಲಿದೆ ಎಂದರೆ ತಪ್ಪಾಗಲಾರದು.ಲೇಡಿಹಿಲ್ ವೃತ್ತದಿಂದ ಶ್ರೀ ನಾರಾಯಣ ಗುರುಗಳ ಪ್ರತಿಶ್ಠಾಪನೆಯಿರುವ. ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ, ಬಿಲ್ಲವರ ಪ್ರಮುಖ ಆರಾಧನ ಕೇಂದ್ರವಾದ ಕುದ್ರೋಳಿ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆ ಆರಂಭವಾಗುತ್ತೆ. ಸಾವಿರಾರು ಭಕ್ತರು ದಿನಂಪ್ರತಿ ಇದೇ ರಸ್ತೆಯನ್ನು ಬಳಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಲೇಡಿಹಿಲ್ ಹೆಸರು ಮಂಗಳೂರಿನ ನಿವಾಸಿಗಳಿಗೆ ಪರಿಚಿತವಾಗಿರಬಹುದು ಆದರೆ ಹೊರಜಿಲ್ಲೆಗಳಿಂದ , ನೆರೆಯ ರಾಜ್ಯಗಳಿಂದ ಬರುವ ಭಕ್ತರಿಗೆ ಈ ವೃತ್ತ ಕುದ್ರೋಳಿ ದೇವಸ್ಥಾನಕ್ಕೆ ಹೋಗುವ ವೃತ್ತ ಎಂದೇ ಪರಿಚಿತವಾಗಿದೆ. ನಗರದ ಮಧ್ಯದಿಂದ ದೇವಸ್ಥಾನಕ್ಕೆ ಧ್ವಾರ ಹಾಗೂ ರಸ್ತೆಯಿದ್ದರೂ ಟ್ರಾಫಿಕ್ ಸಮಸ್ಯೆಯ ಬಹುದೊಡ್ಡ ಭಕ್ತಗಣ ಲೇಡಿಹಿಲ್ ವೃತ್ತದ ಮುಂದಿನ ರಸ್ತೆಯಿಂದಲೇ ಕುದ್ರೋಳಿಗೆ ತೆರೆಳುವ ವಾಡಿಕೆಯನ್ನು ಬೆಳೆಸಿಕೊಂಡಿದ್ದಾರೆ. ಅದಲ್ಲದೆ ಪಾಲಿಕೆ,ಜಿಲ್ಲೆ, ರಾಜ್ಯ ಆಡಳಿತಗಳು ಕುದ್ರೋಳಿ ದೇವಸ್ಥಾನದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದು ಇದೇ ರಸ್ತೆಯನ್ನು ಗಮನದಲ್ಲಿಟ್ಟುಕೊಂಡಾಗಿದೆ. ಇಲ್ಲಿಯ ವರೆಗೂ ಯಾವೊಬ್ಬನೂ ಇದರ ಬಗ್ಗೆ ಆಕ್ಶೇಪವೆತ್ತಲಿಲ್ಲ. ಹೀಗಿರುವಾಗ ಇಷ್ಟೆಲ್ಲಾ ಮಹತ್ವವಿರುವ ರಸ್ತೆಯ ಆರಂಭದಲ್ಲಿರುವ ವೃತ್ತಕ್ಕೆ ಶ್ರೀ ನಾರಾಯಣ ಗುರುಗಳ ಹೆಸರು ಕೊಡುವಲ್ಲಿ ಯಾಕೆ ಹಿಂದೇಟು ಎಂಬ ಪ್ರಶ್ನೆ ಉದ್ಭವಿಸುತ್ತದೆ.

(Billavaswarriors.com – Special article)

ಕುದ್ರೋಳಿ ದೇವಸ್ಥಾನದ ಉದ್ಧಾರಕರಾದ ಹಾಗೂ ಜಿಲ್ಲೆಯ ಬಿಲ್ಲವರ ಹೆಮ್ಮೆಯಾದ ಶ್ರೀ ಜನಾರ್ಧನ ಪೂಜಾರಿಯವರು ಶ್ರೀ ನಾರಾಯಣ ಗುರುಗಳ ಅತೀ ದೊಡ್ಡ ಭಕ್ತರು. ಗುರುಗಳ ಹಾದಿಯಲ್ಲಿ ನಡೆದು ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದವರು. ಲೇಡಿಹಿಲ್ ವೃತ್ತಕ್ಕೆ ಗುರುಗಳ ಹೆಸರನ್ನಿಡಬೇಕೆಂಬ ಅವರ ಬಹಳ ಕಾಲದ ಕನಸಾಗಿತ್ತು. ಅಧಿಕಾರದಲ್ಲಿರುವಾಗ ಜನಾರ್ಧನ ಪೂಜಾರಿಯವರು ಧರ್ಮ-ಜಾತಿ ನೋಡದೆ ಎಲ್ಲರನ್ನೂ ಸಮಾನವಾಗಿ ನೋಡಿದವರು. ಇಂದು ನಾರಾಯಣ ಗುರು ವೃತ್ತ ಎಂಬ ನಾಮಕರಣ ಬೇಡ ಎಂದು ಸರಕಾರಿ ಕಛೇರಿಗಳಿಗೆ ಅಲೆಯುವವರು ಒಂದು ಕಾಲದಲ್ಲಿ ಜನಾರ್ಧನ ಪೂಜಾರಿಗಳ ಹಿಂದೆ ಜೈ ಹಾಕಿದವರು, ಬೇಕಾದ ಅನುದಾನ, ಸವಲತ್ತುಗಳನ್ನು ಪಡೆದುಕೊಂಡವರು. ಇಂದು ಮಾತ್ರ ಅವರಿಗೆ ಪೂಜಾರಿಯವರ ಕನಸು ನನಸು ಮಾಡಲು ಅಂಜಿಕೆ. ಇದು ಅನ್ನ ಕೊಟ್ಟ ಕೈಗಳಿಗೆ ದ್ರೋಹ ಬಗೆದಂತೆ.

ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿ ಶ್ರೀ ನಾರಾಯಣ ಗುರು ವೃತ್ತವಿದ್ದರೆ ಯಾರಿಗೂ ಏನೂ ನಶ್ಟವಿಲ್ಲ. ವೃತ್ತದ ಸುತಮುತ್ತಲು ನಾಲ್ಕು ಶಾಳೆಗಳಿವೆ. ನಾರಾಯಣ ಗುರುಗಳ ನಾಮ ಜಪಿಸಿ ಅವರ ಹಾದಿಯಲ್ಲಿ ನಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಗುರು ವೃತ್ತ ಉತ್ತಮ ಹಾದಿಯಾಗಲಿದೆ. ಪಾಲಿಕೆ ಹಾಗೂ ಸರಕಾರ ಈ ಬಗ್ಗೆ ತುರ್ತು ಗಮನ ಹರಿಸಿ ಜನಾರ್ಧನ ಪೂಜಾರಿಯವರ ಕಸನು, ಲಕ್ಷಾಂತರ ಬಿಲ್ಲವರ ಮನದಾಸೆ ಹಾಗೂ ಕೋಟಿಗಟ್ಟಲೆ ಶ್ರೀ ನಾರಾಯಣ ಗುರುಗಳ ಅಭಿಮಾನಿಗಳ ಬಯಕೆ ಈಡೇರಿಸಬೇಕಾದು ಈಗಿನ ಮೊದಲ ಆಧ್ಯತೆ.

Credits: Billavaswarriors.com – Special article


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »