TOP STORIES:

ಲೇಡಿಹಿಲ್ ಗೆ ಶ್ರೀ ನಾರಾಯಣ ಗುರು ವೃತ್ತ ಎಂದು ಪುನರ್ ನಾಮಕರಣ ಬೇಕೆ..? ಕಾರಣಗಳು ಇಲ್ಲಿವೆ


Credits: Billavaswarriors.com – Special article

ಕೇರಳದ ಚೆಂಬಝತ್ತಿ ಎಂಬಲ್ಲಿ ಜನಿಸಿದ ಬ್ರಹ್ಮಶ್ರಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾನ ಸಮಾಜದ ತತ್ವಕ್ಕಾಗಿ ಇಂದು ಇಡೀ ವಿಶ್ವಕ್ಕೆ ಗುರುವಾಗಿ ನಿಂತಿದ್ದಾರೆ. ಓರ್ವ ಈಳವ(ಬಿರುವ) ಸಮುದಾಯದ ಸದಸ್ಯನಾಗಿದ್ದು, ಪಕ್ವತೆ ಪಡೆದಾಗ ಸಮಾಜಿಕ ಅನ್ಯಾಯದ ವಿರುದ್ಧ ಹೋರಾಡಿ ಸಮಾಜಿಕ ನವೋತ್ಥಾನಕ್ಕೆ ಕಾರಣೀಕರ್ತರಾದ ಶ್ರೀ ನಾರಾಯಣ ಗುರುಗಳು ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರಿಂದಲೂ ಅರಾಧಿಸಲ್ಪಟ್ಟವರಾಗಿದ್ದಾರೆ. ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಇಂತಹ ಅವತಾರ ಪುರುಷನ ಹೆಸರು ನಾಮಕರಣ ಮಾಡಿದರೆ ಅದು ವಿದ್ಯಾವಂತರ ನಗರವಾದ ಮಂಗಳೂರಿಗೆ ಹೊಸ ಶೋಭೆ ನೀಡಲಿದೆ ಎಂದರೆ ತಪ್ಪಾಗಲಾರದು.ಲೇಡಿಹಿಲ್ ವೃತ್ತದಿಂದ ಶ್ರೀ ನಾರಾಯಣ ಗುರುಗಳ ಪ್ರತಿಶ್ಠಾಪನೆಯಿರುವ. ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ, ಬಿಲ್ಲವರ ಪ್ರಮುಖ ಆರಾಧನ ಕೇಂದ್ರವಾದ ಕುದ್ರೋಳಿ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆ ಆರಂಭವಾಗುತ್ತೆ. ಸಾವಿರಾರು ಭಕ್ತರು ದಿನಂಪ್ರತಿ ಇದೇ ರಸ್ತೆಯನ್ನು ಬಳಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಲೇಡಿಹಿಲ್ ಹೆಸರು ಮಂಗಳೂರಿನ ನಿವಾಸಿಗಳಿಗೆ ಪರಿಚಿತವಾಗಿರಬಹುದು ಆದರೆ ಹೊರಜಿಲ್ಲೆಗಳಿಂದ , ನೆರೆಯ ರಾಜ್ಯಗಳಿಂದ ಬರುವ ಭಕ್ತರಿಗೆ ಈ ವೃತ್ತ ಕುದ್ರೋಳಿ ದೇವಸ್ಥಾನಕ್ಕೆ ಹೋಗುವ ವೃತ್ತ ಎಂದೇ ಪರಿಚಿತವಾಗಿದೆ. ನಗರದ ಮಧ್ಯದಿಂದ ದೇವಸ್ಥಾನಕ್ಕೆ ಧ್ವಾರ ಹಾಗೂ ರಸ್ತೆಯಿದ್ದರೂ ಟ್ರಾಫಿಕ್ ಸಮಸ್ಯೆಯ ಬಹುದೊಡ್ಡ ಭಕ್ತಗಣ ಲೇಡಿಹಿಲ್ ವೃತ್ತದ ಮುಂದಿನ ರಸ್ತೆಯಿಂದಲೇ ಕುದ್ರೋಳಿಗೆ ತೆರೆಳುವ ವಾಡಿಕೆಯನ್ನು ಬೆಳೆಸಿಕೊಂಡಿದ್ದಾರೆ. ಅದಲ್ಲದೆ ಪಾಲಿಕೆ,ಜಿಲ್ಲೆ, ರಾಜ್ಯ ಆಡಳಿತಗಳು ಕುದ್ರೋಳಿ ದೇವಸ್ಥಾನದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದು ಇದೇ ರಸ್ತೆಯನ್ನು ಗಮನದಲ್ಲಿಟ್ಟುಕೊಂಡಾಗಿದೆ. ಇಲ್ಲಿಯ ವರೆಗೂ ಯಾವೊಬ್ಬನೂ ಇದರ ಬಗ್ಗೆ ಆಕ್ಶೇಪವೆತ್ತಲಿಲ್ಲ. ಹೀಗಿರುವಾಗ ಇಷ್ಟೆಲ್ಲಾ ಮಹತ್ವವಿರುವ ರಸ್ತೆಯ ಆರಂಭದಲ್ಲಿರುವ ವೃತ್ತಕ್ಕೆ ಶ್ರೀ ನಾರಾಯಣ ಗುರುಗಳ ಹೆಸರು ಕೊಡುವಲ್ಲಿ ಯಾಕೆ ಹಿಂದೇಟು ಎಂಬ ಪ್ರಶ್ನೆ ಉದ್ಭವಿಸುತ್ತದೆ.

(Billavaswarriors.com – Special article)

ಕುದ್ರೋಳಿ ದೇವಸ್ಥಾನದ ಉದ್ಧಾರಕರಾದ ಹಾಗೂ ಜಿಲ್ಲೆಯ ಬಿಲ್ಲವರ ಹೆಮ್ಮೆಯಾದ ಶ್ರೀ ಜನಾರ್ಧನ ಪೂಜಾರಿಯವರು ಶ್ರೀ ನಾರಾಯಣ ಗುರುಗಳ ಅತೀ ದೊಡ್ಡ ಭಕ್ತರು. ಗುರುಗಳ ಹಾದಿಯಲ್ಲಿ ನಡೆದು ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದವರು. ಲೇಡಿಹಿಲ್ ವೃತ್ತಕ್ಕೆ ಗುರುಗಳ ಹೆಸರನ್ನಿಡಬೇಕೆಂಬ ಅವರ ಬಹಳ ಕಾಲದ ಕನಸಾಗಿತ್ತು. ಅಧಿಕಾರದಲ್ಲಿರುವಾಗ ಜನಾರ್ಧನ ಪೂಜಾರಿಯವರು ಧರ್ಮ-ಜಾತಿ ನೋಡದೆ ಎಲ್ಲರನ್ನೂ ಸಮಾನವಾಗಿ ನೋಡಿದವರು. ಇಂದು ನಾರಾಯಣ ಗುರು ವೃತ್ತ ಎಂಬ ನಾಮಕರಣ ಬೇಡ ಎಂದು ಸರಕಾರಿ ಕಛೇರಿಗಳಿಗೆ ಅಲೆಯುವವರು ಒಂದು ಕಾಲದಲ್ಲಿ ಜನಾರ್ಧನ ಪೂಜಾರಿಗಳ ಹಿಂದೆ ಜೈ ಹಾಕಿದವರು, ಬೇಕಾದ ಅನುದಾನ, ಸವಲತ್ತುಗಳನ್ನು ಪಡೆದುಕೊಂಡವರು. ಇಂದು ಮಾತ್ರ ಅವರಿಗೆ ಪೂಜಾರಿಯವರ ಕನಸು ನನಸು ಮಾಡಲು ಅಂಜಿಕೆ. ಇದು ಅನ್ನ ಕೊಟ್ಟ ಕೈಗಳಿಗೆ ದ್ರೋಹ ಬಗೆದಂತೆ.

ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿ ಶ್ರೀ ನಾರಾಯಣ ಗುರು ವೃತ್ತವಿದ್ದರೆ ಯಾರಿಗೂ ಏನೂ ನಶ್ಟವಿಲ್ಲ. ವೃತ್ತದ ಸುತಮುತ್ತಲು ನಾಲ್ಕು ಶಾಳೆಗಳಿವೆ. ನಾರಾಯಣ ಗುರುಗಳ ನಾಮ ಜಪಿಸಿ ಅವರ ಹಾದಿಯಲ್ಲಿ ನಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಗುರು ವೃತ್ತ ಉತ್ತಮ ಹಾದಿಯಾಗಲಿದೆ. ಪಾಲಿಕೆ ಹಾಗೂ ಸರಕಾರ ಈ ಬಗ್ಗೆ ತುರ್ತು ಗಮನ ಹರಿಸಿ ಜನಾರ್ಧನ ಪೂಜಾರಿಯವರ ಕಸನು, ಲಕ್ಷಾಂತರ ಬಿಲ್ಲವರ ಮನದಾಸೆ ಹಾಗೂ ಕೋಟಿಗಟ್ಟಲೆ ಶ್ರೀ ನಾರಾಯಣ ಗುರುಗಳ ಅಭಿಮಾನಿಗಳ ಬಯಕೆ ಈಡೇರಿಸಬೇಕಾದು ಈಗಿನ ಮೊದಲ ಆಧ್ಯತೆ.

Credits: Billavaswarriors.com – Special article


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »