TOP STORIES:

FOLLOW US

ಲೇಡಿಹಿಲ್ ಗೆ ಶ್ರೀ ನಾರಾಯಣ ಗುರು ವೃತ್ತ ಎಂದು ಪುನರ್ ನಾಮಕರಣ ಬೇಕೆ..? ಕಾರಣಗಳು ಇಲ್ಲಿವೆ


Credits: Billavaswarriors.com – Special article

ಕೇರಳದ ಚೆಂಬಝತ್ತಿ ಎಂಬಲ್ಲಿ ಜನಿಸಿದ ಬ್ರಹ್ಮಶ್ರಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾನ ಸಮಾಜದ ತತ್ವಕ್ಕಾಗಿ ಇಂದು ಇಡೀ ವಿಶ್ವಕ್ಕೆ ಗುರುವಾಗಿ ನಿಂತಿದ್ದಾರೆ. ಓರ್ವ ಈಳವ(ಬಿರುವ) ಸಮುದಾಯದ ಸದಸ್ಯನಾಗಿದ್ದು, ಪಕ್ವತೆ ಪಡೆದಾಗ ಸಮಾಜಿಕ ಅನ್ಯಾಯದ ವಿರುದ್ಧ ಹೋರಾಡಿ ಸಮಾಜಿಕ ನವೋತ್ಥಾನಕ್ಕೆ ಕಾರಣೀಕರ್ತರಾದ ಶ್ರೀ ನಾರಾಯಣ ಗುರುಗಳು ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರಿಂದಲೂ ಅರಾಧಿಸಲ್ಪಟ್ಟವರಾಗಿದ್ದಾರೆ. ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಇಂತಹ ಅವತಾರ ಪುರುಷನ ಹೆಸರು ನಾಮಕರಣ ಮಾಡಿದರೆ ಅದು ವಿದ್ಯಾವಂತರ ನಗರವಾದ ಮಂಗಳೂರಿಗೆ ಹೊಸ ಶೋಭೆ ನೀಡಲಿದೆ ಎಂದರೆ ತಪ್ಪಾಗಲಾರದು.ಲೇಡಿಹಿಲ್ ವೃತ್ತದಿಂದ ಶ್ರೀ ನಾರಾಯಣ ಗುರುಗಳ ಪ್ರತಿಶ್ಠಾಪನೆಯಿರುವ. ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ, ಬಿಲ್ಲವರ ಪ್ರಮುಖ ಆರಾಧನ ಕೇಂದ್ರವಾದ ಕುದ್ರೋಳಿ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆ ಆರಂಭವಾಗುತ್ತೆ. ಸಾವಿರಾರು ಭಕ್ತರು ದಿನಂಪ್ರತಿ ಇದೇ ರಸ್ತೆಯನ್ನು ಬಳಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಲೇಡಿಹಿಲ್ ಹೆಸರು ಮಂಗಳೂರಿನ ನಿವಾಸಿಗಳಿಗೆ ಪರಿಚಿತವಾಗಿರಬಹುದು ಆದರೆ ಹೊರಜಿಲ್ಲೆಗಳಿಂದ , ನೆರೆಯ ರಾಜ್ಯಗಳಿಂದ ಬರುವ ಭಕ್ತರಿಗೆ ಈ ವೃತ್ತ ಕುದ್ರೋಳಿ ದೇವಸ್ಥಾನಕ್ಕೆ ಹೋಗುವ ವೃತ್ತ ಎಂದೇ ಪರಿಚಿತವಾಗಿದೆ. ನಗರದ ಮಧ್ಯದಿಂದ ದೇವಸ್ಥಾನಕ್ಕೆ ಧ್ವಾರ ಹಾಗೂ ರಸ್ತೆಯಿದ್ದರೂ ಟ್ರಾಫಿಕ್ ಸಮಸ್ಯೆಯ ಬಹುದೊಡ್ಡ ಭಕ್ತಗಣ ಲೇಡಿಹಿಲ್ ವೃತ್ತದ ಮುಂದಿನ ರಸ್ತೆಯಿಂದಲೇ ಕುದ್ರೋಳಿಗೆ ತೆರೆಳುವ ವಾಡಿಕೆಯನ್ನು ಬೆಳೆಸಿಕೊಂಡಿದ್ದಾರೆ. ಅದಲ್ಲದೆ ಪಾಲಿಕೆ,ಜಿಲ್ಲೆ, ರಾಜ್ಯ ಆಡಳಿತಗಳು ಕುದ್ರೋಳಿ ದೇವಸ್ಥಾನದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದು ಇದೇ ರಸ್ತೆಯನ್ನು ಗಮನದಲ್ಲಿಟ್ಟುಕೊಂಡಾಗಿದೆ. ಇಲ್ಲಿಯ ವರೆಗೂ ಯಾವೊಬ್ಬನೂ ಇದರ ಬಗ್ಗೆ ಆಕ್ಶೇಪವೆತ್ತಲಿಲ್ಲ. ಹೀಗಿರುವಾಗ ಇಷ್ಟೆಲ್ಲಾ ಮಹತ್ವವಿರುವ ರಸ್ತೆಯ ಆರಂಭದಲ್ಲಿರುವ ವೃತ್ತಕ್ಕೆ ಶ್ರೀ ನಾರಾಯಣ ಗುರುಗಳ ಹೆಸರು ಕೊಡುವಲ್ಲಿ ಯಾಕೆ ಹಿಂದೇಟು ಎಂಬ ಪ್ರಶ್ನೆ ಉದ್ಭವಿಸುತ್ತದೆ.

(Billavaswarriors.com – Special article)

ಕುದ್ರೋಳಿ ದೇವಸ್ಥಾನದ ಉದ್ಧಾರಕರಾದ ಹಾಗೂ ಜಿಲ್ಲೆಯ ಬಿಲ್ಲವರ ಹೆಮ್ಮೆಯಾದ ಶ್ರೀ ಜನಾರ್ಧನ ಪೂಜಾರಿಯವರು ಶ್ರೀ ನಾರಾಯಣ ಗುರುಗಳ ಅತೀ ದೊಡ್ಡ ಭಕ್ತರು. ಗುರುಗಳ ಹಾದಿಯಲ್ಲಿ ನಡೆದು ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದವರು. ಲೇಡಿಹಿಲ್ ವೃತ್ತಕ್ಕೆ ಗುರುಗಳ ಹೆಸರನ್ನಿಡಬೇಕೆಂಬ ಅವರ ಬಹಳ ಕಾಲದ ಕನಸಾಗಿತ್ತು. ಅಧಿಕಾರದಲ್ಲಿರುವಾಗ ಜನಾರ್ಧನ ಪೂಜಾರಿಯವರು ಧರ್ಮ-ಜಾತಿ ನೋಡದೆ ಎಲ್ಲರನ್ನೂ ಸಮಾನವಾಗಿ ನೋಡಿದವರು. ಇಂದು ನಾರಾಯಣ ಗುರು ವೃತ್ತ ಎಂಬ ನಾಮಕರಣ ಬೇಡ ಎಂದು ಸರಕಾರಿ ಕಛೇರಿಗಳಿಗೆ ಅಲೆಯುವವರು ಒಂದು ಕಾಲದಲ್ಲಿ ಜನಾರ್ಧನ ಪೂಜಾರಿಗಳ ಹಿಂದೆ ಜೈ ಹಾಕಿದವರು, ಬೇಕಾದ ಅನುದಾನ, ಸವಲತ್ತುಗಳನ್ನು ಪಡೆದುಕೊಂಡವರು. ಇಂದು ಮಾತ್ರ ಅವರಿಗೆ ಪೂಜಾರಿಯವರ ಕನಸು ನನಸು ಮಾಡಲು ಅಂಜಿಕೆ. ಇದು ಅನ್ನ ಕೊಟ್ಟ ಕೈಗಳಿಗೆ ದ್ರೋಹ ಬಗೆದಂತೆ.

ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿ ಶ್ರೀ ನಾರಾಯಣ ಗುರು ವೃತ್ತವಿದ್ದರೆ ಯಾರಿಗೂ ಏನೂ ನಶ್ಟವಿಲ್ಲ. ವೃತ್ತದ ಸುತಮುತ್ತಲು ನಾಲ್ಕು ಶಾಳೆಗಳಿವೆ. ನಾರಾಯಣ ಗುರುಗಳ ನಾಮ ಜಪಿಸಿ ಅವರ ಹಾದಿಯಲ್ಲಿ ನಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಗುರು ವೃತ್ತ ಉತ್ತಮ ಹಾದಿಯಾಗಲಿದೆ. ಪಾಲಿಕೆ ಹಾಗೂ ಸರಕಾರ ಈ ಬಗ್ಗೆ ತುರ್ತು ಗಮನ ಹರಿಸಿ ಜನಾರ್ಧನ ಪೂಜಾರಿಯವರ ಕಸನು, ಲಕ್ಷಾಂತರ ಬಿಲ್ಲವರ ಮನದಾಸೆ ಹಾಗೂ ಕೋಟಿಗಟ್ಟಲೆ ಶ್ರೀ ನಾರಾಯಣ ಗುರುಗಳ ಅಭಿಮಾನಿಗಳ ಬಯಕೆ ಈಡೇರಿಸಬೇಕಾದು ಈಗಿನ ಮೊದಲ ಆಧ್ಯತೆ.

Credits: Billavaswarriors.com – Special article


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »