TOP STORIES:

ಶ್ರೀ ದೇವದಾಸ್ ಶಾಂತಿಯವರಿಗೆ ತಂತ್ರ ದೀಕ್ಷೆ


ನಮ್ಮ ನಾರಾಯಣ ಗುರು ವೈದಿಕ ಸಮಿತಿಯ(ರಿ.) ಸದಸ್ಯರಾದ ಶ್ರೀ ದೇವದಾಸ್ ಶಾಂತಿಯವರಿಗೆ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಋದಂಭರಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ , ಶ್ರೀ ಮಾತ್ತಾನಂ ಅಶೋಕನ್ ತಂತ್ರಿ ಹಾಗೂ ಶ್ರೀ ಉಷೇಂದ್ರನ್ ತಂತ್ರಿ ಯವರ ನೇತೃತ್ವದಲ್ಲಿ ತಾ. 20-02-2021 ನೇ ಶನಿವಾರ ಕೇರಳದ ಶ್ರೀ ಕ್ಷೇತ್ರ ಮಾತ್ತಾನಂ ಚೆರ್ತಲದಲ್ಲಿ ಜರಗಿತು.


ಶ್ರೀಯುತರು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ, ಶ್ರೀ ನಾರಾಯಣ ಶಾಂತಿಯವರಿಂದ ವೈದಿಕ ಶಿಕ್ಷಣ ಪ್ರಾರಂಭಿಸಿ,

ಕೊಕ್ಕಡ ದಿವಂಗತ ಶ್ರೀ ಅನಂತ ಪದ್ಮನಾಭ ಶಾಸ್ತ್ರಿಯವರಿಂದ ಹಾಗೂ ಶ್ರೀ ಅಮರಸಿಂಹಜ ಇವರಿಂದ ಸಂಸ್ಕೃತ ಶಿಕ್ಷಣ ಪಡೆದು,
ಶ್ರೀ ಕ್ರಷ್ಣಮೂರ್ತಿ ಪೆಜತ್ತಾಯ , ಮಹೇಶ್ ಮೂರ್ತಿ ಐತ್ತಾಳ್, ಭಾಷ್ಯಂ ಸ್ವಾಮಿ ಮತ್ತು ದಿವಂಗತ ಶ್ರೀ ವಿಜಯನ್ ತಂತ್ರಿಯವರಿಂದ ಜ್ಯೋತಿಷ್ಯ ಅಭ್ಯಾಸ ಮಾಡಿದರು.

ಶ್ರೀ ಶ್ರೀನಿವಾಸ ಶಾಸ್ತ್ರಿ , ದಿವಂಗತ ಶ್ರೀ ಸುಬ್ಬರಾವ್ ಮತ್ತು ಶ್ರೀ ದಿವಾಕರ ಅಗ್ನಿಹೋತ್ರಿ ಯವರಿಂದ ವೇದೋಕ್ತ ಪೌರೋಹಿತ್ಯವನ್ನು ಅಭ್ಯಸಿಸಿರುತ್ತಾರೆ.

ಸುಮಾರು 20 ವರ್ಷಗಳ ಕಾಲ, ದಿವಂಗತ ಶ್ರೀ ಮಾತ್ತಾನಂ ವಿಜಯನ್ ತಂತ್ರಿಯವರಿಂದ ಹಾಗೂ , ಅವರ ಶಿಷ್ಯ ಪರಂಪರೆಯಿಂದ ಶಾಸ್ತ್ರೀಯವಾಗಿ ತಂತ್ರೋಕ್ತ ವಿಧಿ ವಿಧಾನಗಳನ್ನು ಅಧ್ಯಯನ ಮಾಡಿರುತ್ತಾರೆ.

ಕರ್ನಾಟಕದ ನಾರಾಯಣ ಗುರು ಪರಂಪರೆಯಲ್ಲಿ ತಂತ್ರಗಮವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ ತಂತ್ರ ದೀಕ್ಷೆಯನ್ನು ಪಡೆದ ಮೊದಲಿಗರಾಗಿರುತ್ತಾರೆ.

ತಮ್ಮನ್ನು ನಾರಾಯಣ ಗುರು ವೈದಿಕ ಸಮಿತಿಯು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

ನಿಮ್ಮಿಂದ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಸೇವೆ ಲಭಿಸಲಿ ಹಾಗೂ ನಮ್ಮ ಸಮಾಜದ ಯುವ ಪೀಳಿಗೆಗಳಿಗೆ ಮಾರ್ಗದರ್ಶನ ನೀಡುವಂತಹ ಶಕ್ತಿಯನ್ನು ಶ್ರೀ ನಾರಾಯಣ ಗುರುಗಳು ಮತ್ತು ಶ್ರೀ ದೇವರು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇವೆ.

ನಾರಾಯಣ ಗುರು ವೈದಿಕ ಸಮಿತಿ(ರಿ.) ಕರ್ನಾಟಕ. ಮಂಗಳೂರು


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »