TOP STORIES:

FOLLOW US

ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಪುಟಾಣಿ ಪ್ರತಿಭೆ ತನ್ವಿ ಅಮೀನ್


ಸಂಗೀತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಎಂತಹ ಕಟು ಮನಸ್ಸನ್ನು ಕೂಡ ಮಂತ್ರ ಮುಗ್ದವಾಗಿಸುವ ಶಕ್ತಿ ಇದೆ. ಹೀಗೆ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರುವ ಪುಟಾಣಿ ಪ್ರತಿಭೆ ತನ್ವಿ ಅಮೀನ್

ಉಡುಪಿ ಕೊಡವೂರಿನ ಗಣೇಶ ಮತ್ತು ತ್ರಿವೇಣಿ ಗಣೇಶ್ ದಂಪತಿಗಳ ಮುದ್ದಿನ ಮಗಳು ಇವರಿಗೆ  ಸಿಂಗಿಂಗ್, ಗಿಟಾರ್ ನುಡಿಸುವುದು, ಆಕ್ಟಿಂಗ್ ಹೀಗೆ ಅನೇಕ ಹವ್ಯಾಸ ಇವರಿಗೆ ಇದೆ

ಮೂಲತಃ ಉಡುಪಿಯವರಾದ ಇವರು ಪ್ರಸ್ತುತ ಬೆಹರೈನ್ ನಲ್ಲಿ ಇದ್ದು ಅಲ್ಲಿಯೂ ತನ್ನ ಪ್ರತಿಭೇನ ಬೆಳೆಸುತ್ತಿದ್ದಾರೆ.

*ಒಂದರಿಂದ ನಾಲ್ಕನೇ ತರಗತಿವರೆಗೆ ಕಟಪಾಡಿಯ ಎಸ್ ವಿ ಕೆ ಇಂಗ್ಲಿಷ್ ಮೀಡಿಯಂನಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ತಂದೆ ತಾಯಿ ಜೊತೆ ಹೊರದೇಶ ದಲ್ಲಿ ಮುಂದಿನ ಶಿಕ್ಷಣ ಆರಂಭಿಸಿದರು ಈಗ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸಣ್ಣ ಪ್ರಾಯದಲ್ಲಿ ಹಾಡುವುದು ರೂಡಿ ಮಾಡಿಕೊಂಡ ಇವರಿಗೆ ಸಂಗೀತ ಎಂದರೆ ಪಂಚ ಪ್ರಾಣ. ಬಹುಭಾಷೆಯ  ಗಾಯಕಿ ಹಿಂದಿ, ತುಳು, ಕನ್ನಡ, ಇಂಗ್ಲಿಷ್ ಹೀಗೆ ಎಲ್ಲಾ ಭಾಷೆಯಲ್ಲಿಯೂ ಹಾಡಿ ಸೈ ಎಣಿಸಿಕೊಂಡಿದ್ದಾರೆ.

ಹೊರದೇಶದಲ್ಲಿ ಬಿಲ್ಲವ ಸಂಘ, ಕನ್ನಡ ಸಂಘ, ಹೀಗೆಯೇ ಅನೇಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನಲ್ಲೂ ಪ್ರತಿಭೆ ಇದೆ ಎಂದು ತೋರಿಸಿದ್ದಾರೆ. ಕೇವಲ ಹಾಡುಗಾರ್ತಿ ಮಾತ್ರ ಅಲ್ಲ ಅನೇಕ ವೇದಿಕೆಯಲ್ಲಿ ಡ್ಯಾನ್ಸ್ ಪ್ರೋಗ್ರಾಮ್ ನೀಡಿದ್ದಾರೆ ಮತ್ತು ನಟನೆಯಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಡಿಸೆಂಬರ್ ನಲ್ಲಿ ನಡೆದ ಒಂದು ಕಾರ್ಯ ಕ್ರಮ ಒಟ್ರಾಸಿ ಮಂಡೆ ಬೆಚ್ಚ ನಾಟಕದಲ್ಲಿ ನಾಯಕಿ ಪಾತ್ರ ಮಾಡಿ ಜನ ಮನ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

ಇವರ ಈ ಸಾಧನೆ ತನ್ನ ಪರಿಶ್ರಮ ಮತ್ತು ತಂದೆ ತಾಯಿಯ ಪ್ರೋತ್ಸಹದಿಂದ ಸಂಗೀತ ವಿದ್ಯಾಭ್ಯಾಸಮಾಡಿ ಫೇಸ್ಬುಕ್ ಲೈವ್ ಪ್ರೋಗ್ರಾಮ್ ನೀಡಿ ಜನರನ್ನು ರಂಜಿಸುತ್ತಿದ್ದಾರೆ. ಇವರು ಭಾಗವಹಿಸಿದ ಹೆಚ್ಚಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ದೊರಕಿದೆ. ಇವರ ತಾಯಿ ಗಾಯಕಿ, ಕವನ, ಸಾಹಿತ್ಯಗಾರ ಆಗಿರುವುದರಿಂದ ತಾಯಿಯ ಸಪೋರ್ಟ್ ಸಂಪೂರ್ಣ ಸಿಕ್ಕಿತ್ತು ತನ್ವಿ ಅಮೀನ್ ಇನ್ಸ್ಟ ಗ್ರಾಮ್, ತನ್ವಿ ಅಮೀನ್ ಫೇಸ್ಬುಕ್ ಪೇಜ್, ತನ್ವಿ ಮ್ಯೂಸಿಕ್ ಯುಟ್ಯೂಬ್ ಚಾನಲ್ ನಂತಹ ಸೋಶಿಯಲ್ ಮೀಡಿಯಾದಲ್ಲಿ ತನ್ನ ಪ್ರತಿಭೇನ ತೋರಿಸುತ್ತಿದ್ದಾರೆ ಸದ್ಯಕ್ಕೆ ಇವರು ಹಾಡಿರುವ ನ್ಯಾಯದೂತೆ ಕಾರ್ಣಿಕದ ಅಜ್ಜೆ ಸಾಂಗ್ ಬಿಡುಗಡೆಯಾಗಲಿದೆ. ಗಾಂಧಿ ಜಯಂತಿ ದಿನ ಹಾಡಿದ ಸಾಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಹಿಂದಿ ಮೂವತ್ತು, ಕನ್ನಡ 15, ತುಳು 20, ಇಂಗ್ಲಿಷ್ ಸಾಂಗ್ 10, ಭಕ್ತಿಗೀತೆ 15 ಹೀಗೆ ಒಟ್ಟು ಟೋಟಲ್ 90 ಸಾಂಗ್ ಹಾಡಿರುವ ಹೆಗ್ಗಳಿಕೆ ಇವರದು.

ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೊಂದು ಸಾಧನೆ ಮಾಡಿರುವ ಇವರಿಗೆ ಮುಂದಿನ ಹಾದಿ ಸುಗಮವಾಗಲಿ ತುಳುನಾಡಿನ ಹೆಸರನ್ನು ಹೊರದೇಶದಲ್ಲಿಯೂ ಬೆಳೆಸಿದ ಇವರಿಗೆ ದೈವ ದೇವರುಗಳ ಅನುಗ್ರಹ ಸದಾ ಇರಲಿ ಎಂದು ಹಾರೈಸುವ.

ಬರಹ: ಪ್ರಶಾಂತ್ ಅಂಚನ್ ಮಸ್ಕತ್ತ್ 


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »