TOP STORIES:

ಸಂಘಟನೆಗಳು ಸಾಕಷ್ಟಿವೆ, ಅನ್ಯಾಯವಾದಾಗ ಹೋರಾಟ ಮಾಡಿದವುಗಳೆಷ್ಟು ?


ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಬಹಳವಾಗಿ ತಮ್ಮ ಜಾತಿಯ ಬೇಡಿಕೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಬಳಿಕೊಂಡೊಯ್ಯುವವರೆಂದರೆ  ಸ್ವಾಮೀಜಿಗಳು. ಅದು ತಮ್ಮ ಜಾತಿಯ ನಾಯಕನನ್ನು ಹೈಕಮಾಂಡ್ ಕೆಳಗಿಳಿಸುವುದನ್ನು ತಡೆಯಲುಆಗಿರಬಹುದು ಅಥವಾ ತಮ್ಮ ಜಾತಿಯ ನಾಯಕರಿಗೆ ಮಂತ್ರಿ ಪದವಿಯನ್ನು ನೀಡುವುದಾಗಿ ರಬಹುದು ಸ್ವಾಮೀಜಿಗಳ  ಮುತುವರ್ಜಿಗೆ ಮೆಚ್ಚಬೇಕಾಗಿದೆ.

ನಮ್ಮಲ್ಲಿ ಎಲ್ಲರಿಗೂ ಅನಿಸುವುದುಂಟು ಅರೇ, ಸ್ವಾಮೀಜಿಗಳಿಗೆ ಯಾಕೆ ಬೇಕಿತ್ತು ಎಂದು. ಹೌದು, ಅವರು ಅಲ್ಲಿ ರಾಜಕೀಯದವಿಷಯಕ್ಕೆ ಹೋಗದಿದ್ದರೂ ಅವರ ಮಠ, ಮಾನ್ಯತೆಗೆ ಯಾವುದೇ ಕುಂದು ಕೊರತೆ ಇಲ್ಲ. ಆದರೆ ಅವರಿಗೆ ತಾನು ಹುಟ್ಟಿದ ಜಾತಿಯಅಭಿಮಾನ, ತನ್ನವರು ಎಂಬ ಪ್ರೇಮದಿಂದ ಜಾತಿಗೆ ಸಂಬಂಧಿತ ಯಾವುದೇ ಹೋರಾಟಕ್ಕೂ ಅವರು ಬದ್ಧರಾಗಿ, ಸಿದ್ಧರಾಗಿರುತ್ತಾರೆ.

ನಮ್ಮಲ್ಲಿಯೂ ಮಠಗಳಿವೆ, ಮಠಾಧಿಪತಿಗಳಿದ್ದಾರೆ. ಅವರಿಗೆ ಬಹುಷ: ಸರ್ವ ಜಾತಿಯವರನ್ನು ಸಮಾನವಾಗಿ ನೋಡಬೇಕೆನ್ನುವಹಂಬಲವೋ, ನಮ್ಮನ್ನು ಜಾತಿ ನಾಯಕರು ಮಾನ್ಯತೆ ನೀಡುತ್ತಿಲ್ಲ ಎಂಬ ಬೇಸರವೋ, ಜಾತಿಗಲ್ಲ  ಭಾಷಣಗಳಿಗೆ ಸೀಮಿತವೋ, ಅವರವರ ಮಹದಾಸೆಗಳಿಂದ ಜಾತಿ ಅವರಿಗೆ ಕಾಣುತ್ತಿಲ್ಲವೋ ಎಂಬ ಪ್ರಶ್ನೆ ಮೂಡುವುದು‌ ಸಹಜ. ನಮ್ಮ  ಜಾತಿಗೆಅವಮಾನವಾದಾಗ, ರಾಜಕೀಯ ಕ್ಷೇತ್ರದಲ್ಲಿ ಅನ್ಯಾಯವಾದಾಗ ಖಂಡನೆ, ಹೋರಾಟ, ಉಪವಾಸ ಇತ್ಯಾದಿ ನಮ್ಮಸ್ವಾಮೀಜಿಗಳಿಂದ  ನಡೆದಿವೆಯೇ ಎನ್ನುವುದು ಹಿರಿಯರ, ಕಿರಿಯರ ಪ್ರಶ್ನೆ.

ಇವರದ್ದು ದಾರಿಯಾದರೆ ನಮ್ಮ ಸಂಘಟನೆಗಳ ಬಗ್ಗೆ ನೋಡೋಣ. ನಮ್ಮ ಸಮಾಜದ ಸಂಘಟನೆಗಳ ಹಲವಾರುಕಾರ್ಯಕ್ರಮಗಳಿಗೆ ಭಾಗವಹಿಸಿದಾಗ ಕಂಡ ಒಳ್ಳೆಯ ಅಂಶಗಳೆಂದರೆ ಯುವ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸುವುದು, ವಿದ್ಯಾರ್ಥಿವೇತನ, ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ ನೀಡುವುದು ಶ್ಲಾಘನೀಯ. ಆದರೆ ನಮ್ಮ ಸಮಾಜದ ಕೆಲವುನಾಯಕರೆನಿಸಿಕೊಂಡವರ ಜಾತಿ ಪ್ರೇಮದ ನಾಟಕ ಗಮನಿಸಿದಾಗ ಆಕ್ರೋಶದ ಜೊತೆಗೆ ಬೇಸರ ಮೂಡುವುದು ಸಹಜ. ಇದುಹಲವಾರು ಯುವಕರ, ಹಿರಿಯರ ಅಭಿಪ್ರಾಯ. ಇದಕ್ಕೊಂದು ಉದಾಹರಣೆಯೆಂಬಂತೆ  ಕುರ್ಚಿಗಾಗಿ ಹಪಹಪಿಸುವ ನಾಯಕರುನಮ್ಮಲ್ಲಿ ಕಾಣಸಿಗುತ್ತಾರೆ. ನಮ್ಮವರ ಬ್ಯಾಂಕಲ್ಲಿ ಉದ್ಯೋಗ ಕೇಳಿದರೆ  ಎಷ್ಟು ಕೋಟಿ ಇಡುತ್ತಿಯ ಇಂತಹ ದರ್ಪದ ಮಾತು. ಕೋಟಿಇದ್ದರೆ ಪಾಪದವ ಇವರ ಬ್ಯಾಂಕಿಗೆ ಉದ್ಯೋಗಕ್ಕಾಗಿ ಹೋಗುತ್ತಾನೆಯೇ?….ಇದು‌ ನಮ್ಮಲ್ಲಿ ಅದೆಷ್ಟೋ ಜನರಿಗೆ ಆದ ಪ್ರಸಂಗಗಳು.

ವೇದಿಕೆಯಲ್ಲಿ ಮೈಕ್ ಸಿಕ್ಕೊಡನೆ ಉಕ್ಕಿ ಹರಿವ ಜಾತಿಪ್ರೇಮ ವೇದಿಕೆಯಿಂದ ಇಳಿದಂತೆ ಇತರ ಜಾತಿಗಳ ಮೇಲೆ ವ್ಯಾಮೋಹಉಂಟಾಗಿ ನಮ್ಮವರನ್ನೇ ಮರೆಯುವ ಜಾಯಮಾನದ ನಾಯಕರಿದ್ದಾರೆ. ನುಡಿದಂತೆ ನಡೆ ಎಂಬ ವಾಕ್ಯ ಪಕ್ಕಕ್ಕಿರಿಸಿ ನಾ ಆಕಡೆ ನೀಈಕಡೆ ಎಂಬಂತಾಗಿದೆ. ಇದಕ್ಕೆ ಕಾರಣವೂ ಇದೆ. ನಮ್ಮ ಸಂಘಸಂಸ್ಥೆಗಳ ಬಹುಪಾಲು ನಾಯಕರುಗಳು ಕೆಲವು ಪಕ್ಷದಲ್ಲಿಯೂಕರ್ತವ್ಯ ನಿರ್ವಹಿಸುವುದರಿಂದ ಅದೂ ಇರಬಹುದು ಎಂಬ ಅನುಮಾನ ಸಹಜ. ಜಾತಿ ಸಂಘಸಂಸ್ಥೆಗಳಲ್ಲಿ ನಾನು ಜಾತಿಯಪರವಾಗಿ ನನ್ನ ಪಕ್ಷ ನಂತರ ಎಂಬ ನಾಯಕರುಗಳು ಇರಬಹುದು ಇಲ್ಲವೆಂದಲ್ಲ. ಆದರೆ ಪಕ್ಷಕ್ಕಾಗಿ ತಾನು ಜಾತಿಯನ್ನು ತಯಾರುಮಾಡುವಂತಿರಬಾರದು. ಇದಕ್ಕೆ ಒಳ್ಳೆಯ ಪರಿಹಾರ ಜಾತಿ ನಾಯಕರುಗಳು ರಾಜಕೀಯ ಪಕ್ಷ ತೊರೆದು ನಾಯಕರಾಗಬೇಕು. ಆಗಮಾತ್ರ ಜನರಿಗೆ ನಂಬಿಕೆ ಬರಬಹುದು. ರಾಜಕೀಯ ರಹಿತ ವ್ಯಕ್ತಿಯಿದ್ದಾಗ ಸಂಘಸಂಸ್ಥೆಗಳಿಗೆ ಸರಕಾರದ ನೆರವು, ಬೇಡಿಕೆಯನ್ನುಸುಲಭವಾಗಿ ಸಲ್ಲಿಸಬಹುದು.

ನಮ್ಮ ಆರಾಧ್ಯ ಶಕ್ತಿಗಳ ಬಗ್ಗೆ ಕೆಲವು ರಾಜಕೀಯ ಪುಡಾರಿಗಳು ಮಾತನಾಡುವಾಗ ನಮ್ಮವರೇ ಸುಮ್ಮನಿದ್ದರು. ಅವರಹೇಳಿಕೆಯನ್ನು ಖಂಡಿಸುವ, ದೂರು ನೀಡುವ ಕೆಲಸ ಮಾಡಲಿಲ್ಲ. ನಮ್ಮ ಬೇರೆ ಸಂಘಟನೆಗಳು ನೋಡಿಕೊಳ್ಳಲಿ ಅಥವಾ ಅವರಿಗೆಯಾಕೆ ಶತ್ರುಗಳಾಗಬೇಕು ಎಂಬ ಹೇಡಿತನವೇ ಗೊತ್ತಾಗದು. ಜಾತಿಗೆ ಅವಮಾನವಾದಾಗ ನಮ್ಮ ಸಮಾಜದ ಯಾರಾದರೊಬ್ಬ ವ್ಯಕ್ತಿವೈಯಕ್ತಿಕವಾಗಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದರೆ ವ್ಯಕ್ತಿಯ ಪರವಾಗಿ ನಿಲ್ಲದೆ ಆತನನ್ನು ನಮ್ಮವರೇಟೀಕಿಸುವ, ಆತನ ವಿರುದ್ಧ ಅಪಪ್ರಚಾರದ ಷಡ್ಯಂತ್ರ ಮಾಡುವ ಶಕುನಿ ಬುದ್ಧಿಯು ನಮ್ಮಲ್ಲಿದೆ. ಇದನ್ನು ಮೊದಲು ಸಂಘಟನೆಯನಾಯಕ ಮಹನೀಯರು ಗಮನಿಸಿ ತಾವೇ ಸ್ವತಃ ಬೀದಿಗಿಳಿಯಬೇಕು ಇಲ್ಲವೇ ಕುಕೃತ್ಯ ಎಸಗುವವರನ್ನು ತಡೆಯಬೇಕಾಗಿದೆ.

ಇನ್ನು ಮಾತೆತ್ತಿದರೆ ನಾವು ಜಾತಿಗಾಗಿ ನಮ್ಮಲ್ಲಿ ಸಣ್ಣ ಸಮಸ್ಯೆಯಾದರೂ ನಾವು ಬರಲು ಸಿದ್ಧ ಎಂದು ಬೊಬ್ಬಿಡುವ ನಾಯಕರುಇದ್ದಾರೆ. ಯಾರು ಮೊದಲು ಧ್ವನಿಯೆತ್ತುತ್ತಾರೆ ನೋಡುವ, ನಮಗ್ಯಾಕೆ ಅವರ ಉಸಾಬರಿ, ಒಂದು ಅರ್ಜಿ ಕೊಡಿ, ನೋಡುವ, ಇತ್ಯಾದಿ ಸಬೂಬು ಹೇಳುವ  ಸಂಘಟನೆಗಳಿಗೆ ಕೊರತೆಯಿಲ್ಲ.  ಕೆಲವೊಂದು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ನಮ್ಮಸಂಘಟನೆಗಳಿಗೆ ಇನ್ನೂ ಬಂದಿಲ್ಲ.

ಯಾವಾಗ ತನ್ನ ಜಾತಿಯ ಸಾಮಾನ್ಯನಿಗೂ ಅನ್ಯಾಯವಾದಾಗ ಅವರಿಗೆ ಬಲವನ್ನು ತುಂಬುವ ಶಕ್ತಿ ನಮ್ಮ ಜಾತಿ ಸಂಘಟನೆಗಳಿಗೆಬರುತ್ತದೋ ಆವಾಗ ಯಾವೊಬ್ಬ ಯುವಕ ಜಾತಿರಹಿತ ಬೇರೆಬೇರೆ ಸಂಘಟನೆಗಳಿಗೆ ಆಕರ್ಷಿತನಾಗಲಾರ. ಬಿಳಿ ಅಂಗಿಧರಿಸಿದವರಿಗೆ ಮಾತ್ರ ನಾಯಕನಾಗದೆ ಯಾವಾಗ ನಮ್ಮ ಜಾತಿಯ ಆರ್ಥಿಕ ಹಿಂದುಳಿದವರಿಗೂ ಕಾಣಸಿಕ್ಕಿ ಅವರ ಸಮಸ್ಯೆಪರಿಹರಿಸುತ್ತಾನೋ ಆತ ನಿಜವಾದ ನಾಯಕ.

ಜನಾರ್ದನ ಪೂಜಾರಿಯಂತೆ ಸಣ್ಣ ಪ್ರಾಯದಿಂದ ವಯೋವೃದ್ಧರನ್ನೂ  ಮಾತನಾಡಿಸುವ ಗುಣ ನಮ್ಮ ನಾಯಕರಿಗೆ ಬರಬೇಕಾಗಿದೆ. ಅವರನ್ನು  ರಾಜಕೀಯವಾಗಿ ಸೋಲಿಸಲು ನಮ್ಮವರೇ ಕಾರಣ ಎಂದರೆ ತಪ್ಪಾಗಲಾರದು. ಅಂದು ಅವರ ಬಗ್ಗೆ  ಏಕವಚನದಲ್ಲಿಮಾತನಾಡುತ್ತಿದ್ದವರು ಇಂದು ಅವರ ಆಶೀರ್ವಾದಕ್ಕಾಗಿ ಅವರ ಕಾಲಿಗೆರಗುವುದು  ಪ್ರಾಯಶ್ಚಿತ್ತವೇನೋ ಎನ್ನುವಂತಿದೆ.

ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಎರಡು ದಿನದ ಹೋರಾಟವಾಗಬಾರದು. ಯಾವುದೇ ವಿಷಯದ ಬಗ್ಗೆ ಒಂದುಸಂಘಟನೆ ಅದರ ನೇತೃತ್ವ ವಹಿಸಿಕೊಂಡ ಮೇಲೆ ಉಳಿದ ನಮ್ಮ ಸಂಘಟನೆಗಳು ಅವರಿಗೆ ಬೆನ್ನೆಲುಬಾಗಿ ನಿಂತಾಗ ನಮ್ಮವರಿಗೂನಮ್ಮ ಸಂಘಟನೆಗಳ ಬಗ್ಗೆ ಹೆಮ್ಮೆ ಜೊತೆಗೆ ಇತರರಿಗೂ ನಮ್ಮ ಸಂಘಟನೆಗಳ ಸಾಮರ್ಥ್ಯ ತಿಳಿಯುವುದು.

ನಮ್ಮಲ್ಲಿ ಸಂಘಟನೆಗಳು ಸಾಕಷ್ಟಿವೆ. ಆದರೆ ನಮ್ಮವರಿಗೆ ಅನ್ಯಾಯವಾದಾಗ ಹೋರಾಟ ಮಾಡಿದ ಹೋರಾಟ ಮಾಡಿದವುಗಳೆಷ್ಟು  ಎಂಬುದನ್ನು ಅಲ್ಲಿಯ ನಾಯಕರುಗಳೇ ತಮಗೆ ಪ್ರಶ್ನಿಸಬೇಕಾಗಿದೆ. ಇತ್ತೀಚಿಗೆ ಸಾಮಾಜಿಕ ವಿಷಯವೊಂದರ ಬಗ್ಗೆ ನಾನು ಬರೆದಾಗಅದರ ಪರವಾದ ಕ್ಷುಲ್ಲಕ ಮನಸ್ಥಿತಿಯವರು ಪ್ರಶ್ನಿಸಿದಾಗ ನಮ್ಮ ಜಾತಿಯ ಸುರತ್ಕಲ್ನ ಸಂಘಟನೆಯೊಂದರ ಸದಸ್ಯ ನನಗೆ ಫೋನ್ಮಾಡಿ ನಿಮಗೆ ಏನಾದರೂ ತೊಂದರೆಯಾದರೆ ನಾವಿದ್ದೇವೆ ಎನ್ನುವ ಭರವಸೆ, ಧೈರ್ಯದ ಮಾತು ನಿಜವಾಗಿಯೂ ನಮ್ಮಲ್ಲಿಯೂಇಂತಹ ಸಂಘಟನೆ  ಇದೆಯಲ್ಲಾ ಎನ್ನುವ ಹೆಮ್ಮೆ ಮೂಡಿತು. ಉಳಿದಂತೆ ನಾನು ಸಂಘಟನೆಗಳ ಬಗ್ಗೆ ಬರೆದರೆ ಯಾವ ಸಂಘಟನೆ, ಎಲ್ಲಿ, ಯಾರು ಎಂದು ಕೇಳುವ ನಮ್ಮ ಸಂಘಟನೆಯ ಪ್ರಮುಖರೂ ಇದ್ದಾರೆ. ಅವರಿಗೆ ತಪ್ಪನ್ನು ತಪ್ಪೆಂದು ಹೇಳಬಾರದು.

ಇತ್ತೀಚಿಗೆ ಒಂದು ಕೈಗಾರಿಕೆಯ ಕೆಲಸದ ಹೊತ್ತಿನಲ್ಲಿ ಬೇರೆ ರಾಜ್ಯದ ವ್ಯಕ್ತಿ  ಓರ್ವನ ಜಾತಿಯ ಕುರಿತಂತೆ ಅವಹೇಳನ ಮಾಡಿದ್ದಕ್ಕೆ ಆತತನ್ನವರಿಗೆ ತಿಳಿಸಿ, ಸಂಘಟನೆಗೆ ದೂರು ನೀಡಿದ ಕೆಲವೇ ಗಂಟೆಯಲ್ಲಿ ವ್ಯಕ್ತಿಯ ವಿರುದ್ಧ ಕ್ರಮವಹಿಸಿದರು. ಇದೇ ಸ್ಥಿತಿನಮ್ಮವರಿಗಾದರೆ ನಿನಗ್ಯಾಕೆ ಬೇಕು, ಅವನೇ ತಪ್ಪು ಮಾಡಿರಬೇಕು ಇತ್ಯಾದಿ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹಲವಾರುವರ್ಷಗಳ ಹಿಂದೆ ನಮ್ಮ ಜಾತಿಯ ಅಸಂಖ್ಯಾತ ಮಂದಿ ಮತಾಂತರ ಹೊಂದಿದ್ದಾರೆ. ಈಗಲೂ ಹೊಂದುತ್ತಿದ್ದಾರೆ. ಅಲ್ಲಿ ನಮ್ಮವರಿದ್ದರೆತಕ್ಷಣ ಅದರ ಬಗ್ಗೆ ನಿಗಾವಹಿಸುವ ಕ್ರಮ ನಮ್ಮ ಸಂಘಟನೆಗಳಿಗಿವೆ. ನಮ್ಮ ಸಂಘಟನೆಗಳ ನಾಯಕರು ನಮ್ಮ ಸಂಘಟನೆ ಸೇರಿಎಂದು ಬೇರೆಯವರಿಗೆ ಉಪದೇಶ ಮಾಡುವುದಲ್ಲ ಬದಲಾಗಿ ತನ್ನ ಕುಟುಂಬ ವರ್ಗವನ್ನೇ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದಾಗಎಲ್ಲರಿಗೂ ಮಾದರಿಯಾಗುವರು.

ಮೊದಲು ನಮ್ಮವರು ಎಂದರೆ ನಮ್ಮ ಜಾತಿ, ನಮ್ಮ ಗುರುಗಳು, ನಮ್ಮ ಆರಾಧ್ಯ ಶಕ್ತಿಗಳು, ನಮ್ಮವರ ವ್ಯಾಪಾರ,  ನಮ್ಮವರಪತ್ರಿಕೆಗಳು, ನಮ್ಮವರ ಬ್ಯಾಂಕ್, ನಮ್ಮ ಸಂಘಸಂಸ್ಥೆಗಳು ಇತ್ಯಾದಿಗಳಲ್ಲಿ ಜಾತಿಪ್ರೇಮ ಮೂಡಬೇಕು.

ನಮ್ಮಲ್ಲಿ ಹಲವಾರು ಸಂಘಟನೆಗಳಿದ್ದರೂ ಎಲ್ಲರನ್ನು  ಒಂದೆಡೆ ಸೇರಿಸಬೇಕಾಗಿದೆ. ಯಾವುದೇ ಸಮಸ್ಯೆಯನ್ನು ಒಗ್ಗಟ್ಟಾಗಿ ಬಗ್ಗೆಹರಿಸಿದಾಗ ಮಾತ್ರ ಬಿಲ್ಲವರು ಬಲ್ಲವರಾಗಲು ಸಾಧ್ಯ. ನಾಯಕರುಗಳು ವೇದಿಕೆಗೆ ಸೀಮಿತವಾಗದೆ ಜನಸಾಮಾನ್ಯರೊಂದಿಗೆಬೆರೆತಾಗ ಮಾತ್ರ ಅಭಿವೃದ್ಧಿ ಸಾಧ್ಯ.

 

✍ ದೀಪಕ್ ಬೀರ

       ಪಡುಬಿದ್ರಿ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »