TOP STORIES:

ಹಸಿದವರಿಗೆ ಅನ್ನ ನೀಡುವ ವಾರಿಯರ್‍ಸ್ ಇವರು! ಸದ್ದಿಲ್ಲದೆ ಸಾಗಿದೆ ಮಾನವೀಯ ಸೇವೆ


ಮಂಗಳೂರು: ಕೊರೋನಾ ಯಾರನ್ನು ಬಿಟ್ಟಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಣ್ಣಿಗೆ ಕಾಣದ ಪುಟ್ಟ ವೈರಸ್ ಎಲ್ಲರನ್ನೂ ಕಾಡಿದೆ. ಕೊರೋನಾ ದಾಳಿಯಿಂದ ಲಕ್ಷಾಂತರ ಮಂದಿಯ ಬದುಕು ಧೂಳೀಪಟವಾಗಿರುವುದು ಅಷ್ಟೇ ಸತ್ಯ.

(Copyrights owned by: billavaswarriors.com )

ಕೊರೋನಾ ಮೊದಲ ಅಲೆ ಮುಗಿಯಿತು ಎನ್ನವಾಗಲೇ ಎರಡನೆಯ ಧಾಂಗುಡಿಯಿಟ್ಟಿತ್ತು. ಇದರ ದಾಳಿಗೆ ಸಿಲುಕಿದವರು ಅದೆಷ್ಟೋ ಮಂದಿ. ಈ ನಡುವೆ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಬದುಕು ಕಳೆದುಕೊಂಡವರಿಗೆ ಲೆಕ್ಕವಿಲ್ಲ.

ಕಾಡಿದ ಕೊರೋನಾದಿಂದಾಗಿ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ನಿರ್ಗತಿಕರು, ಭಿಕ್ಷೆ ಬೇಡಿಕೊಂಡು ದಿನ ಕಳೆಯುತ್ತಿದ್ದವರ ಸ್ಥಿತಿಯಂತೂ ಮತ್ತಷ್ಟು ಶೋಚನೀಯವಾಗಿದೆ. ಆದರೆ ಮಂಗಳೂರಿನಲ್ಲಿ ಯುವಕರ ತಂಡವೊಂದು ಇವರ ನೆರವಿಗೆ ನಿಂತಿದೆ. ಸದ್ದಿಲ್ಲದೆ ಅನ್ನದಾನದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಇವರು ಕೊರೋನಾ ವಾರಿಯರ್‍ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ನಿಜವಾಗಿಯೂ ಹಸಿದವರ ಪಾಲಿನ ವಾರಿಯರ್‍ಸ್!

ಸಮಾನ ಮನಸ್ಕ ಯುವಕರ ತಂಡ

ಮಂಗಳೂರಿನ ಉರ್ವದಲ್ಲಿ ಪುಟ್ಟ ಹೋಟೆಲ್ ನಡೆಸುತ್ತಿರುವ ರಕ್ಷಿತ್ ಸಾಲಿಯಾನ್ ನೇತೃತ್ವದ ತಂಡವೇ ಕೊರೋನಾ ಅವಯಲ್ಲಿ ಹಸಿದವರ ಪಾಲಿಗೆ ಸಂಜೀವಿನಿಯಾದ ತಂಡ. ಕೊರೋನಾ ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಮನೆಯಿಂದ ಹೊರಬರಲಾಗದ ಸ್ಥಿತಿಯಿದೆ. ಮನೆ ಇದ್ದವರು ಮನೆಯಲ್ಲಿ ತುತ್ತು ಅನ್ನವನ್ನಾದರೂ ತಿಂದು ದಿನ ಕಳೆಯಬಹುದು. ಆದರೆ ನಿರ್ಗತಿಕರು, ಅಂಗವಿಕಲರು, ಡೇರೆ ಹಾಕಿಕೊಂಡು ಬದುಕು ಕಟ್ಟಿಕೊಂಡವರ ಪಾಡೇನು? ಇವರ ಬಗ್ಗೆ ಯೋಚನೆ ಬಂದದ್ದೇ ತಡ ರಕ್ಷಿತ್ ಸಾಲಿಯಾನ್ ನೇತೃತ್ವದ ಸಮಾನ ಮನಸ್ಕ ಯುವಕರು ಒಂದು ತಂಡ ಕಟ್ಟಿದ್ದರು. ಈ ತಂಡದ ಶ್ರಮದಿಂದಾಗಿ ನಿತ್ಯ ಹಸಿವಿನಿಂದ ಬಳಲುತ್ತಿರುವವರ ಹಸಿವು ನೀಗುತ್ತಿದೆ.

ಯಾವುದೇ ಪ್ರಚಾರ ಬಯಸದೆ ನಿರಂತರ ನೂರಾರು ಮಂದಿಗೆ ಅನ್ನದಾನ ಮಾಡುತ್ತಿದ್ದಾರೆ. ಇವರ ಈ ರೀತಿಯ ಸೇವೆಗೆ ವ್ಯಾಪಕ ಶ್ಲಾಘನೆಯೂ ವಕ್ತವಾಗುತ್ತಿದೆ. ಸಮಾಜದಲ್ಲಿ ಯಾರೂ ಹಸಿದಿರಬಾರದು, ನಮ್ಮಿಂದಾದ ನೆರವು ನೀಡಬೇಕು ಎಂಬ ಮಾನವೀಯ ನೆಲಯಲ್ಲಿ ಯುವಕರ ತಂಡ ಕೆಲಸ ಮಾಡುತ್ತಿದೆ.

ವರುಷದಿಂದ ನಿರಂತರ ಸೇವೆ

ಕಳೆದ ವರ್ಷ ಕೊರೋನಾ ಮೊದಲ ಅಲೆಯ ಲಾಕ್‌ಡೌನ್‌ನ ಮೊದಲ ದಿನದಿಂದ ಯುವಕರ ತಂಡ ಈ ಕಾರ್ಯವನ್ನು ಪ್ರಾರಂಭಿಸಿದೆ. ಅಲ್ಲಿಂದ ಶುರುವಾದ ಈ ಕಾಯಕ ಈ ವರ್ಷ ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿಯೂ ಮುಂದುವರಿದಿದೆ.

(Copyrights owned by: billavaswarriors.com )

ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಹಸಿವಿನಿಂದ ಕಂಗೆಡಬಾರದು. ಅದಕ್ಕಾಗಿ ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಹಸಿದವರಿಗೆ ಅನ್ನ ನೀಡುವುದರಲ್ಲಿ ನಮಗೆ ಖುಷಿ ಇದೆ ಎನ್ನುತ್ತಾರೆ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ರಕ್ಷಿತ್ ಸಾಲಿಯಾನ್.

ಕಳೆದ ವರ್ಷ ೧೫ ಸಾವಿರಕ್ಕೂ ಅಕ ಮಂದಿಗೆ ಊಟ

ಕಳೆದ ವರ್ಷ ಲಾಕ್‌ಡೌನ್ ಅವಯಲ್ಲಿ ೧೫,೦೦೦ಕ್ಕೂ ಹೆಚ್ಚು ಆಹಾರದ ಪೊಟ್ಟಣದ ಜೊತೆಗೆ ನೀರಿನ ಬಾಟಲಿಗಳು, ೨೫೦ಕ್ಕಿಂತಲೂ ಅಕ ರೇಷನ್ ಕಿಟ್‌ಗಳನ್ನು ಹಂಚಲಾಗಿದ್ದು ಈ ಬಾರಿಯೂ ಅದೇ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿದಿನ ೩೦೦ರಷ್ಟು ಮಂದಿಗೆ ಆಹಾರ ಒದಗಿಸುತ್ತಿದ್ದೇವೆ. ಆಹಾರ ಪೂರೈಕೆಯಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಬುಧವಾರ ನೂರಾರು ಮಂದಿಗೆ ಗುಣಮಟ್ಟದ ಮಾಸ್ಕ್‌ನ್ನು ಕೂಡ ಹಂಚಿದ್ದೇವೆ. ಸ್ಟೇಟ್ ಬ್ಯಾಂಕ್ ಪರಿಸದಲ್ಲಿ ಹಲವು ಮಂದಿಗೆ ಸೊಳ್ಳೆ ಪರದೆ ವಿತರಿಸುವ ಕೆಲಸವೂ ಆಗಿದೆ ಎನ್ನತ್ತಾರೆ ರಕ್ಷಿತ್ ಸಾಲಿಯಾನ್.

ತಂಡದ ವಾರಿಯರ್‍ಸ್ ಇವರು

ನಿರ್ಗತಿಕರ ನೆರವಿಗೆ ನಿಂತಿರುವ ಸಮಾನ ಮನಸ್ಕ ಯುವಕರ ತಂಡದಲ್ಲಿ ೧೦ ಮಂದಿಯಿದ್ದು, ಪ್ರತಿಯೊಬ್ಬರೂ ಆಹಾರ ವಿತರಣೆಯ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಜೋಶುವಾ ಡಿಸೋಜಾ, ಸಂಜಯ್ ಕಾಮತ್, ಚೈತನ್ಯ, ಹರಿಪ್ರಸಾದ್, ರಾಹುಲ್ ಪೈ, ಮಹೇಶ್, ನಿತಿನ್ ಮಾಡ, ಅರುಣ್ ಪೈ, ಅಜಿತ್ ಕಾಮತ್, ಸಂದೇಶ್, ಆಯುಷ್ಮಾನ್ ಅಮೀನ್, ಪುಣಿಕ್ ಶೆಟ್ಟಿ ಮುಂತಾದವರು ತಂಡದಲ್ಲಿ ವಾರಿಯರ್‍ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ದಿನಕ್ಕೆ ಸುಮಾರು ೩೦೦ ಮಂದಿಗೆ ಆಹಾರ

ನಗರದ ಉರ್ವ, ಮಣ್ಣಗುಡ್ಡೆ, ಪಿವಿಎಸ್ ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಅಳಕೆ ಹೀಗೆ ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ ಆಹಾರ ವಿತರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವರು ಮನೆಯಲ್ಲಿ ಯಾವ ಆಹಾರ ಪದಾರ್ಥವೂ ಇಲ್ಲ ಎಂದು ಕರೆ ಮಾಡುತ್ತಾರೆ. ಅವರಿಗೂ ಅಗತ್ಯ ದಿನಸಿಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ನಿತ್ಯ ಮಾಡುತ್ತಿದ್ದೇವೆ. ಈ ರೀತಿ ಕೆಲಸ ಮಾಡುವುದರಲ್ಲೂ ಒಂದು ರೀತಿಯ ಖುಷಿಯಿದೆ.

ಬರಹ – ರಕ್ಷಿತ್ ಸಾಲಿಯಾನ್.

(Copyrights owned by: billavaswarriors.com )


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »