TOP STORIES:

FOLLOW US

ಹಸಿದವರಿಗೆ ಅನ್ನ ನೀಡುವ ವಾರಿಯರ್‍ಸ್ ಇವರು! ಸದ್ದಿಲ್ಲದೆ ಸಾಗಿದೆ ಮಾನವೀಯ ಸೇವೆ


ಮಂಗಳೂರು: ಕೊರೋನಾ ಯಾರನ್ನು ಬಿಟ್ಟಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಣ್ಣಿಗೆ ಕಾಣದ ಪುಟ್ಟ ವೈರಸ್ ಎಲ್ಲರನ್ನೂ ಕಾಡಿದೆ. ಕೊರೋನಾ ದಾಳಿಯಿಂದ ಲಕ್ಷಾಂತರ ಮಂದಿಯ ಬದುಕು ಧೂಳೀಪಟವಾಗಿರುವುದು ಅಷ್ಟೇ ಸತ್ಯ.

(Copyrights owned by: billavaswarriors.com )

ಕೊರೋನಾ ಮೊದಲ ಅಲೆ ಮುಗಿಯಿತು ಎನ್ನವಾಗಲೇ ಎರಡನೆಯ ಧಾಂಗುಡಿಯಿಟ್ಟಿತ್ತು. ಇದರ ದಾಳಿಗೆ ಸಿಲುಕಿದವರು ಅದೆಷ್ಟೋ ಮಂದಿ. ಈ ನಡುವೆ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಬದುಕು ಕಳೆದುಕೊಂಡವರಿಗೆ ಲೆಕ್ಕವಿಲ್ಲ.

ಕಾಡಿದ ಕೊರೋನಾದಿಂದಾಗಿ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ನಿರ್ಗತಿಕರು, ಭಿಕ್ಷೆ ಬೇಡಿಕೊಂಡು ದಿನ ಕಳೆಯುತ್ತಿದ್ದವರ ಸ್ಥಿತಿಯಂತೂ ಮತ್ತಷ್ಟು ಶೋಚನೀಯವಾಗಿದೆ. ಆದರೆ ಮಂಗಳೂರಿನಲ್ಲಿ ಯುವಕರ ತಂಡವೊಂದು ಇವರ ನೆರವಿಗೆ ನಿಂತಿದೆ. ಸದ್ದಿಲ್ಲದೆ ಅನ್ನದಾನದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಇವರು ಕೊರೋನಾ ವಾರಿಯರ್‍ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ನಿಜವಾಗಿಯೂ ಹಸಿದವರ ಪಾಲಿನ ವಾರಿಯರ್‍ಸ್!

ಸಮಾನ ಮನಸ್ಕ ಯುವಕರ ತಂಡ

ಮಂಗಳೂರಿನ ಉರ್ವದಲ್ಲಿ ಪುಟ್ಟ ಹೋಟೆಲ್ ನಡೆಸುತ್ತಿರುವ ರಕ್ಷಿತ್ ಸಾಲಿಯಾನ್ ನೇತೃತ್ವದ ತಂಡವೇ ಕೊರೋನಾ ಅವಯಲ್ಲಿ ಹಸಿದವರ ಪಾಲಿಗೆ ಸಂಜೀವಿನಿಯಾದ ತಂಡ. ಕೊರೋನಾ ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಮನೆಯಿಂದ ಹೊರಬರಲಾಗದ ಸ್ಥಿತಿಯಿದೆ. ಮನೆ ಇದ್ದವರು ಮನೆಯಲ್ಲಿ ತುತ್ತು ಅನ್ನವನ್ನಾದರೂ ತಿಂದು ದಿನ ಕಳೆಯಬಹುದು. ಆದರೆ ನಿರ್ಗತಿಕರು, ಅಂಗವಿಕಲರು, ಡೇರೆ ಹಾಕಿಕೊಂಡು ಬದುಕು ಕಟ್ಟಿಕೊಂಡವರ ಪಾಡೇನು? ಇವರ ಬಗ್ಗೆ ಯೋಚನೆ ಬಂದದ್ದೇ ತಡ ರಕ್ಷಿತ್ ಸಾಲಿಯಾನ್ ನೇತೃತ್ವದ ಸಮಾನ ಮನಸ್ಕ ಯುವಕರು ಒಂದು ತಂಡ ಕಟ್ಟಿದ್ದರು. ಈ ತಂಡದ ಶ್ರಮದಿಂದಾಗಿ ನಿತ್ಯ ಹಸಿವಿನಿಂದ ಬಳಲುತ್ತಿರುವವರ ಹಸಿವು ನೀಗುತ್ತಿದೆ.

ಯಾವುದೇ ಪ್ರಚಾರ ಬಯಸದೆ ನಿರಂತರ ನೂರಾರು ಮಂದಿಗೆ ಅನ್ನದಾನ ಮಾಡುತ್ತಿದ್ದಾರೆ. ಇವರ ಈ ರೀತಿಯ ಸೇವೆಗೆ ವ್ಯಾಪಕ ಶ್ಲಾಘನೆಯೂ ವಕ್ತವಾಗುತ್ತಿದೆ. ಸಮಾಜದಲ್ಲಿ ಯಾರೂ ಹಸಿದಿರಬಾರದು, ನಮ್ಮಿಂದಾದ ನೆರವು ನೀಡಬೇಕು ಎಂಬ ಮಾನವೀಯ ನೆಲಯಲ್ಲಿ ಯುವಕರ ತಂಡ ಕೆಲಸ ಮಾಡುತ್ತಿದೆ.

ವರುಷದಿಂದ ನಿರಂತರ ಸೇವೆ

ಕಳೆದ ವರ್ಷ ಕೊರೋನಾ ಮೊದಲ ಅಲೆಯ ಲಾಕ್‌ಡೌನ್‌ನ ಮೊದಲ ದಿನದಿಂದ ಯುವಕರ ತಂಡ ಈ ಕಾರ್ಯವನ್ನು ಪ್ರಾರಂಭಿಸಿದೆ. ಅಲ್ಲಿಂದ ಶುರುವಾದ ಈ ಕಾಯಕ ಈ ವರ್ಷ ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿಯೂ ಮುಂದುವರಿದಿದೆ.

(Copyrights owned by: billavaswarriors.com )

ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಹಸಿವಿನಿಂದ ಕಂಗೆಡಬಾರದು. ಅದಕ್ಕಾಗಿ ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಹಸಿದವರಿಗೆ ಅನ್ನ ನೀಡುವುದರಲ್ಲಿ ನಮಗೆ ಖುಷಿ ಇದೆ ಎನ್ನುತ್ತಾರೆ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ರಕ್ಷಿತ್ ಸಾಲಿಯಾನ್.

ಕಳೆದ ವರ್ಷ ೧೫ ಸಾವಿರಕ್ಕೂ ಅಕ ಮಂದಿಗೆ ಊಟ

ಕಳೆದ ವರ್ಷ ಲಾಕ್‌ಡೌನ್ ಅವಯಲ್ಲಿ ೧೫,೦೦೦ಕ್ಕೂ ಹೆಚ್ಚು ಆಹಾರದ ಪೊಟ್ಟಣದ ಜೊತೆಗೆ ನೀರಿನ ಬಾಟಲಿಗಳು, ೨೫೦ಕ್ಕಿಂತಲೂ ಅಕ ರೇಷನ್ ಕಿಟ್‌ಗಳನ್ನು ಹಂಚಲಾಗಿದ್ದು ಈ ಬಾರಿಯೂ ಅದೇ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿದಿನ ೩೦೦ರಷ್ಟು ಮಂದಿಗೆ ಆಹಾರ ಒದಗಿಸುತ್ತಿದ್ದೇವೆ. ಆಹಾರ ಪೂರೈಕೆಯಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಬುಧವಾರ ನೂರಾರು ಮಂದಿಗೆ ಗುಣಮಟ್ಟದ ಮಾಸ್ಕ್‌ನ್ನು ಕೂಡ ಹಂಚಿದ್ದೇವೆ. ಸ್ಟೇಟ್ ಬ್ಯಾಂಕ್ ಪರಿಸದಲ್ಲಿ ಹಲವು ಮಂದಿಗೆ ಸೊಳ್ಳೆ ಪರದೆ ವಿತರಿಸುವ ಕೆಲಸವೂ ಆಗಿದೆ ಎನ್ನತ್ತಾರೆ ರಕ್ಷಿತ್ ಸಾಲಿಯಾನ್.

ತಂಡದ ವಾರಿಯರ್‍ಸ್ ಇವರು

ನಿರ್ಗತಿಕರ ನೆರವಿಗೆ ನಿಂತಿರುವ ಸಮಾನ ಮನಸ್ಕ ಯುವಕರ ತಂಡದಲ್ಲಿ ೧೦ ಮಂದಿಯಿದ್ದು, ಪ್ರತಿಯೊಬ್ಬರೂ ಆಹಾರ ವಿತರಣೆಯ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಜೋಶುವಾ ಡಿಸೋಜಾ, ಸಂಜಯ್ ಕಾಮತ್, ಚೈತನ್ಯ, ಹರಿಪ್ರಸಾದ್, ರಾಹುಲ್ ಪೈ, ಮಹೇಶ್, ನಿತಿನ್ ಮಾಡ, ಅರುಣ್ ಪೈ, ಅಜಿತ್ ಕಾಮತ್, ಸಂದೇಶ್, ಆಯುಷ್ಮಾನ್ ಅಮೀನ್, ಪುಣಿಕ್ ಶೆಟ್ಟಿ ಮುಂತಾದವರು ತಂಡದಲ್ಲಿ ವಾರಿಯರ್‍ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ದಿನಕ್ಕೆ ಸುಮಾರು ೩೦೦ ಮಂದಿಗೆ ಆಹಾರ

ನಗರದ ಉರ್ವ, ಮಣ್ಣಗುಡ್ಡೆ, ಪಿವಿಎಸ್ ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಅಳಕೆ ಹೀಗೆ ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ ಆಹಾರ ವಿತರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವರು ಮನೆಯಲ್ಲಿ ಯಾವ ಆಹಾರ ಪದಾರ್ಥವೂ ಇಲ್ಲ ಎಂದು ಕರೆ ಮಾಡುತ್ತಾರೆ. ಅವರಿಗೂ ಅಗತ್ಯ ದಿನಸಿಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ನಿತ್ಯ ಮಾಡುತ್ತಿದ್ದೇವೆ. ಈ ರೀತಿ ಕೆಲಸ ಮಾಡುವುದರಲ್ಲೂ ಒಂದು ರೀತಿಯ ಖುಷಿಯಿದೆ.

ಬರಹ – ರಕ್ಷಿತ್ ಸಾಲಿಯಾನ್.

(Copyrights owned by: billavaswarriors.com )


Share:

More Posts

Category

Send Us A Message

Related Posts

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »