TOP STORIES:

FOLLOW US

ಹಸಿದವರಿಗೆ ಅನ್ನ ನೀಡುವ ವಾರಿಯರ್‍ಸ್ ಇವರು! ಸದ್ದಿಲ್ಲದೆ ಸಾಗಿದೆ ಮಾನವೀಯ ಸೇವೆ


ಮಂಗಳೂರು: ಕೊರೋನಾ ಯಾರನ್ನು ಬಿಟ್ಟಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಣ್ಣಿಗೆ ಕಾಣದ ಪುಟ್ಟ ವೈರಸ್ ಎಲ್ಲರನ್ನೂ ಕಾಡಿದೆ. ಕೊರೋನಾ ದಾಳಿಯಿಂದ ಲಕ್ಷಾಂತರ ಮಂದಿಯ ಬದುಕು ಧೂಳೀಪಟವಾಗಿರುವುದು ಅಷ್ಟೇ ಸತ್ಯ.

(Copyrights owned by: billavaswarriors.com )

ಕೊರೋನಾ ಮೊದಲ ಅಲೆ ಮುಗಿಯಿತು ಎನ್ನವಾಗಲೇ ಎರಡನೆಯ ಧಾಂಗುಡಿಯಿಟ್ಟಿತ್ತು. ಇದರ ದಾಳಿಗೆ ಸಿಲುಕಿದವರು ಅದೆಷ್ಟೋ ಮಂದಿ. ಈ ನಡುವೆ ಕರ್ಫ್ಯೂ, ಲಾಕ್‌ಡೌನ್‌ನಿಂದಾಗಿ ಬದುಕು ಕಳೆದುಕೊಂಡವರಿಗೆ ಲೆಕ್ಕವಿಲ್ಲ.

ಕಾಡಿದ ಕೊರೋನಾದಿಂದಾಗಿ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ನಿರ್ಗತಿಕರು, ಭಿಕ್ಷೆ ಬೇಡಿಕೊಂಡು ದಿನ ಕಳೆಯುತ್ತಿದ್ದವರ ಸ್ಥಿತಿಯಂತೂ ಮತ್ತಷ್ಟು ಶೋಚನೀಯವಾಗಿದೆ. ಆದರೆ ಮಂಗಳೂರಿನಲ್ಲಿ ಯುವಕರ ತಂಡವೊಂದು ಇವರ ನೆರವಿಗೆ ನಿಂತಿದೆ. ಸದ್ದಿಲ್ಲದೆ ಅನ್ನದಾನದ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಇವರು ಕೊರೋನಾ ವಾರಿಯರ್‍ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ನಿಜವಾಗಿಯೂ ಹಸಿದವರ ಪಾಲಿನ ವಾರಿಯರ್‍ಸ್!

ಸಮಾನ ಮನಸ್ಕ ಯುವಕರ ತಂಡ

ಮಂಗಳೂರಿನ ಉರ್ವದಲ್ಲಿ ಪುಟ್ಟ ಹೋಟೆಲ್ ನಡೆಸುತ್ತಿರುವ ರಕ್ಷಿತ್ ಸಾಲಿಯಾನ್ ನೇತೃತ್ವದ ತಂಡವೇ ಕೊರೋನಾ ಅವಯಲ್ಲಿ ಹಸಿದವರ ಪಾಲಿಗೆ ಸಂಜೀವಿನಿಯಾದ ತಂಡ. ಕೊರೋನಾ ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಮನೆಯಿಂದ ಹೊರಬರಲಾಗದ ಸ್ಥಿತಿಯಿದೆ. ಮನೆ ಇದ್ದವರು ಮನೆಯಲ್ಲಿ ತುತ್ತು ಅನ್ನವನ್ನಾದರೂ ತಿಂದು ದಿನ ಕಳೆಯಬಹುದು. ಆದರೆ ನಿರ್ಗತಿಕರು, ಅಂಗವಿಕಲರು, ಡೇರೆ ಹಾಕಿಕೊಂಡು ಬದುಕು ಕಟ್ಟಿಕೊಂಡವರ ಪಾಡೇನು? ಇವರ ಬಗ್ಗೆ ಯೋಚನೆ ಬಂದದ್ದೇ ತಡ ರಕ್ಷಿತ್ ಸಾಲಿಯಾನ್ ನೇತೃತ್ವದ ಸಮಾನ ಮನಸ್ಕ ಯುವಕರು ಒಂದು ತಂಡ ಕಟ್ಟಿದ್ದರು. ಈ ತಂಡದ ಶ್ರಮದಿಂದಾಗಿ ನಿತ್ಯ ಹಸಿವಿನಿಂದ ಬಳಲುತ್ತಿರುವವರ ಹಸಿವು ನೀಗುತ್ತಿದೆ.

ಯಾವುದೇ ಪ್ರಚಾರ ಬಯಸದೆ ನಿರಂತರ ನೂರಾರು ಮಂದಿಗೆ ಅನ್ನದಾನ ಮಾಡುತ್ತಿದ್ದಾರೆ. ಇವರ ಈ ರೀತಿಯ ಸೇವೆಗೆ ವ್ಯಾಪಕ ಶ್ಲಾಘನೆಯೂ ವಕ್ತವಾಗುತ್ತಿದೆ. ಸಮಾಜದಲ್ಲಿ ಯಾರೂ ಹಸಿದಿರಬಾರದು, ನಮ್ಮಿಂದಾದ ನೆರವು ನೀಡಬೇಕು ಎಂಬ ಮಾನವೀಯ ನೆಲಯಲ್ಲಿ ಯುವಕರ ತಂಡ ಕೆಲಸ ಮಾಡುತ್ತಿದೆ.

ವರುಷದಿಂದ ನಿರಂತರ ಸೇವೆ

ಕಳೆದ ವರ್ಷ ಕೊರೋನಾ ಮೊದಲ ಅಲೆಯ ಲಾಕ್‌ಡೌನ್‌ನ ಮೊದಲ ದಿನದಿಂದ ಯುವಕರ ತಂಡ ಈ ಕಾರ್ಯವನ್ನು ಪ್ರಾರಂಭಿಸಿದೆ. ಅಲ್ಲಿಂದ ಶುರುವಾದ ಈ ಕಾಯಕ ಈ ವರ್ಷ ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿಯೂ ಮುಂದುವರಿದಿದೆ.

(Copyrights owned by: billavaswarriors.com )

ಲಾಕ್‌ಡೌನ್‌ನಿಂದಾಗಿ ಯಾರೂ ಕೂಡ ಹಸಿವಿನಿಂದ ಕಂಗೆಡಬಾರದು. ಅದಕ್ಕಾಗಿ ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ. ಹಸಿದವರಿಗೆ ಅನ್ನ ನೀಡುವುದರಲ್ಲಿ ನಮಗೆ ಖುಷಿ ಇದೆ ಎನ್ನುತ್ತಾರೆ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ರಕ್ಷಿತ್ ಸಾಲಿಯಾನ್.

ಕಳೆದ ವರ್ಷ ೧೫ ಸಾವಿರಕ್ಕೂ ಅಕ ಮಂದಿಗೆ ಊಟ

ಕಳೆದ ವರ್ಷ ಲಾಕ್‌ಡೌನ್ ಅವಯಲ್ಲಿ ೧೫,೦೦೦ಕ್ಕೂ ಹೆಚ್ಚು ಆಹಾರದ ಪೊಟ್ಟಣದ ಜೊತೆಗೆ ನೀರಿನ ಬಾಟಲಿಗಳು, ೨೫೦ಕ್ಕಿಂತಲೂ ಅಕ ರೇಷನ್ ಕಿಟ್‌ಗಳನ್ನು ಹಂಚಲಾಗಿದ್ದು ಈ ಬಾರಿಯೂ ಅದೇ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿದಿನ ೩೦೦ರಷ್ಟು ಮಂದಿಗೆ ಆಹಾರ ಒದಗಿಸುತ್ತಿದ್ದೇವೆ. ಆಹಾರ ಪೂರೈಕೆಯಲ್ಲೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಬುಧವಾರ ನೂರಾರು ಮಂದಿಗೆ ಗುಣಮಟ್ಟದ ಮಾಸ್ಕ್‌ನ್ನು ಕೂಡ ಹಂಚಿದ್ದೇವೆ. ಸ್ಟೇಟ್ ಬ್ಯಾಂಕ್ ಪರಿಸದಲ್ಲಿ ಹಲವು ಮಂದಿಗೆ ಸೊಳ್ಳೆ ಪರದೆ ವಿತರಿಸುವ ಕೆಲಸವೂ ಆಗಿದೆ ಎನ್ನತ್ತಾರೆ ರಕ್ಷಿತ್ ಸಾಲಿಯಾನ್.

ತಂಡದ ವಾರಿಯರ್‍ಸ್ ಇವರು

ನಿರ್ಗತಿಕರ ನೆರವಿಗೆ ನಿಂತಿರುವ ಸಮಾನ ಮನಸ್ಕ ಯುವಕರ ತಂಡದಲ್ಲಿ ೧೦ ಮಂದಿಯಿದ್ದು, ಪ್ರತಿಯೊಬ್ಬರೂ ಆಹಾರ ವಿತರಣೆಯ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಜೋಶುವಾ ಡಿಸೋಜಾ, ಸಂಜಯ್ ಕಾಮತ್, ಚೈತನ್ಯ, ಹರಿಪ್ರಸಾದ್, ರಾಹುಲ್ ಪೈ, ಮಹೇಶ್, ನಿತಿನ್ ಮಾಡ, ಅರುಣ್ ಪೈ, ಅಜಿತ್ ಕಾಮತ್, ಸಂದೇಶ್, ಆಯುಷ್ಮಾನ್ ಅಮೀನ್, ಪುಣಿಕ್ ಶೆಟ್ಟಿ ಮುಂತಾದವರು ತಂಡದಲ್ಲಿ ವಾರಿಯರ್‍ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ದಿನಕ್ಕೆ ಸುಮಾರು ೩೦೦ ಮಂದಿಗೆ ಆಹಾರ

ನಗರದ ಉರ್ವ, ಮಣ್ಣಗುಡ್ಡೆ, ಪಿವಿಎಸ್ ಸ್ಟೇಟ್‌ಬ್ಯಾಂಕ್, ಹಂಪನಕಟ್ಟೆ, ಅಳಕೆ ಹೀಗೆ ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ ಆಹಾರ ವಿತರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವರು ಮನೆಯಲ್ಲಿ ಯಾವ ಆಹಾರ ಪದಾರ್ಥವೂ ಇಲ್ಲ ಎಂದು ಕರೆ ಮಾಡುತ್ತಾರೆ. ಅವರಿಗೂ ಅಗತ್ಯ ದಿನಸಿಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ನಿತ್ಯ ಮಾಡುತ್ತಿದ್ದೇವೆ. ಈ ರೀತಿ ಕೆಲಸ ಮಾಡುವುದರಲ್ಲೂ ಒಂದು ರೀತಿಯ ಖುಷಿಯಿದೆ.

ಬರಹ – ರಕ್ಷಿತ್ ಸಾಲಿಯಾನ್.

(Copyrights owned by: billavaswarriors.com )


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »