TOP STORIES:

FOLLOW US

ಹಾಸ್ಯ ಎಂದರೆ ಬೋಳಾರ್ – ಬೋಳಾರ್ ಎಂದರೆ ಹಾಸ್ಯ, ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ


ಅಭಿಪ್ರಾಯ ಸಂಗ್ರಹ

ದೈಜಿವರ್ಲ್ಡ್ ಟಿವಿಯ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮ ಟಿವಿ ಮುಖ್ಯಸ್ಥ, ಜನಪ್ರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ಹಾಗೂ ತುಳುನಾಡ ತಲೈವ ಅರವಿಂದ್ ಬೋಳಾರ್ ನಡೆಸಿಕೊಡುವ ಕಾರ್ಯಕ್ರಮ. ನಟನೆಯ ಬಗ್ಗೆ ಮಾತನಾಡುವುದಾರೆ ತುಳುನಾಡಿನಲ್ಲಿ ಅರವಿಂದ್ ಬೋಳಾರ್ ಅವರನ್ನು ಮೀರಿಸುವ ನಟರು ಸದ್ಯಕ್ಕೆ ಯಾರೂ ಇಲ್ಲ. ತುಳುನಾಡಿನಲ್ಲಿ ಇದೀಗ ಹಾಸ್ಯ ಎಂದರೆ ಬೋಳಾರ್ ಹಾಗೂ ಬೋಳಾರ್ ಎಂದರೆ ಹಾಸ್ಯ ಎಂಬ ಸ್ಥಿತಿಯುಂಟಾಗಿದೆ.

ಅರವಿಂದ್ ಬೋಳಾರ್ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಕಾರಣ ಅವರ ಪ್ರತಿಭೆ ಹಾಗೂ ಲಕ್ಷಾಂತರ ಅಭಿಮಾನಿಗಳ ಆಶೀರ್ವಾದ. ಇದೀಗ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮಕ್ಕೆ ಬರೋಣ. ಕಾರ್ಯಕ್ರಮದ ಹದಿನಾಲ್ಕು ಸಂಚಿಕೆಗಳು ಈಗಾಗಲೇ ಮುಗಿದಿವೆ. ಈ ಸರಣಿಯಲ್ಲಿ ಇನ್ನು ಎಷ್ಟು ಸಂಚಿಕೆಗಳು ಬಾಕಿ ಇವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಹದಿನಾಲ್ಕು ಸಂಚಿಕೆಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಬೋಳಾರರು ತನ್ನನ್ನು ಯಾಕೆ ತುಳುನಾಡ ಮಾಣಿಕ್ಯ ಅಥವಾ ತುಳುನಾಡ ತಲೈವ ಎಂಬ ಎಂದು ವೀಕ್ಷಕರು ಕರೆಯುತ್ತಾರೆ ಎಂದು ಸಾಬೀತುಪಡಿಸಿದ್ದಾರೆ. ಫಿಲೋಸಫಿ ಹಾಗೂ ಉತ್ತಮ ಸಂದೇಶಗಳೊಂದಿಗಿನ ಸ್ಕ್ರಿಪ್ಟ್ ಹೊಂದಿದ ಈ ಕಾರ್ಯಕ್ರಮದಲ್ಲಿ ಬೋಳಾರರು ನೂರಕ್ಕೆ ನೂರು ಶತಮಾನ ಹೊಸತನವನ್ನು ನೀಡುವಲ್ಲಿ ಸಫಲರಾಗಿದ್ದಾರೆ. ಕಳೆದ ವಾರ ಅವರು ಮಾಡಿದ Double Act ಅಂತೂ ಸ್ಥಳೀಯ ವಾಹಿನಿಗಳ ಇತಿಹಾಸದಲ್ಲಿ ಹೊಸ ಧಾಕಲೆಯನ್ನೇ ರಚಿಸಿದೆ. ಆಷ್ಟೊಂದು Perfection ಅದರಲ್ಲಿ ಇತ್ತು.

ಹಳೆ ಮಧ್ಯವನ್ನು ಹೊಸ ಬಾಟ್ಲಿಯಲ್ಲಿ ತುಂಬಿಸಿಕೊಟ್ಟಂತೆ ಪದೇ ಪದೇ ಹಳೆಯ ಹಾಸ್ಯ ಸಂಭಾಷಣೆ, ಕಲಾವಿದರ ಪೋಷಕರ ಹೆಸರು ಉಲ್ಲೇಖಿಸಿ “ ನಿನ್ನ ಅಮ್ಮೆ..ಎನ್ನ ಅಮ್ಮೆ” ಎಂದು ಅವರ ತೇಜೋವಧೆ ಮಾಡಿ, ಅಶ್ಲೀಲ ಮಾತುಗಳೊಂದಿಗೆ, ಸ್ಕ್ರಿಪ್ಟಿ ಬಗ್ಗೆ ಏನೆಂದು ಗೊತ್ತಿರದ, ಇನ್ನೂ Update ಆಗದ ಕೆಲವರು ಮಾಡುವ ಹಾಸ್ಯ ಕಾರ್ಯಕ್ರಮಗಳು ಜನರಿಂದ ತಿರಸ್ಕಾರಗೊಳ್ಳಲು ಆರಂಭವಾಗಿವೆ. ಕೆಲ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ದೊರಕುವ ನೀರಸ ಪ್ರತಿಕ್ರಿಯೆಯೇ ಇದನ್ನು ತೋರಿಸುತ್ತದೆ. ಆದರೆ ಬೋಳಾರ್ ಕಾರ್ಯಕ್ರಮಗಳು ಮಾತ್ರ ವೀಕ್ಷಕರನ್ನು ಹಿಡಿದು ನಿಲ್ಲಿಸುವಲ್ಲಿ ಸಫಲವಾಗುತ್ತಿವೆ. ಕಾರಣ ಬೋಳಾರರು ಹೊಸತನವನ್ನು ನೀಡುತ್ತಿದಾರೆ. ಅವರ ಹಾಸ್ಯಗಳಲ್ಲಿ ಪ್ರಸ್ತುತ ವಿದ್ಯಾಮಾನಗಳ ಆಗುಹೋಗುಗಳು ನೇರವಾಗಿ ಪ್ರತಿಫಲಿಸುತ್ತಿವೆ.

ಉತ್ತಮ ಸ್ಕ್ರಿಪ್ಟ್ ಹಾಗೂ ತಾಂತ್ರಿಕ ವರ್ಗವನ್ನು ಅವರು ಬಳಸುತ್ತಿದ್ದಾರೆ. ಫತಿಫಲವೆಂಬಂತೆ ದಿನೇ ದಿನೇ ವೀಕ್ಷಕರನ್ನು ಮನಬಿಚ್ಚಿ ನಗಿಸುವ ಜೊತೆಗೆ , ಸಮಾಜಿಕವಾಗಿ ಚಿಂತಿಸಲೂ ಅವರು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಓರ್ವ ಜವಬ್ದಾರಿಯುತ ಕಲಾವಿದನಾಗಿ ಬೋಳಾರ್ ಮಿಂಚಲು ಇದು ಕಾರಣವಾಗಿರಬಹುದು. ಚಿಂತನೆಯೊಂದಿಗೆ ನಮ್ಮನ್ನು ನಗಿಸುವ ಬೋಳಾರ್ ಅವರಿಗೆ ಧನ್ಯವಾದಗಳು.

ತುಳುನಾಡಿನ Updated ಕಲಾಭಿಮಾನಿಗಳ ಪರವಾಗಿ,


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »