TOP STORIES:

FOLLOW US

” ಹಿಂದು ಮತ್ತು ಕ್ರೈಸ್ತರ ಸಾಮರಸ್ಯದ ಸಂಕೇತ ಶ್ರಿ ಮಂಗ್ಲಿಮಾರ್ ಅಣ್ಣಪ್ಪಪಂಜುರ್ಲಿ ದೈವಸ್ಥಾನ “


ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ಶ್ರಿ ಅಣ್ಣಪ್ಪಪಂಜುರ್ಲಿ ದೈವಸ್ತಾನ ಹಿಂದು ಮತ್ತೂ ಕ್ರೈಸ್ತರ ನಡುವಿನ ಸಾಮರಸ್ಯದ ಕೊಂಡಿ ಯಾಗಿದೆ. ಹೌದು ಅಮ್ಟಾಡಿ ಗ್ರಾಮದ ಗ್ರಾಮ ದೈವ ಅಣ್ಣಪ್ಪ ಪಂಜುರ್ಲಿಯ ಗುಡಿ (ಸಾನ) ಕಟ್ಟಿಸಿದವರು ಅಗತ್ತಿಮಾರು ಸಾಲ್ವದೊರ್ ಕಾಮತ್ (ಸಾಲು ಕಂಬತ್ತಿ)ಮೂಲತಃ ಕ್ರೈಸ್ತಧರ್ಮದವರಾದ ಇವರು ಅಣ್ಣಪ್ಪ ಪಂಜುರ್ಲಿ ದೈವದ ಪರಮಭಕ್ತರು,ಇವರು ಆ ಕಾಲದಲ್ಲಿ ಆಗರ್ಭ ಶ್ರಿಮಂತರಗಿದ್ದರು, ವರ್ಷದಲ್ಲಿ 12 ಪೂಜೆಗಳನ್ನು ಇಗರ್ಜಿಯಲ್ಲಿ ಸಲ್ಲಿಸಿದರೆ ಅದಕ್ಕೂ ಮಿಗಿಲಾಗಿ 13 ನೇಮಗಳನ್ನು ಅಣ್ಣಪ್ಪನಿಗೆ ನೀಡುತಿದ್ದರು. ಇವರಿಗೆ ತುಳುನಾಡಿನ ಸತ್ಯ ದೈವವಾದ ಅಣ್ಣಪ್ಪ ಪಂಜುರ್ಲಿಯ ಮೇಲೆ ಈ ರೀತಿಯಾದ ನಂಬಿಕೆ, ಭಕ್ತಿ ಬರಲು ಒಂದು ಕಾರಣವಿದೆ.


ಬಹಳ ವರ್ಷಗಳ ಹಿಂದೆ ಇದೆ ಸಾಲು ಕಂಬತ್ತಿ ತನ್ನ ಗೆಳೆಯರೊಂದಿಗೆ ನಲ್ಕೆಮಾರ್ ಗೆ ಬಂದು ಸಾರಾಯಿ ಸೇವಿಸಿ,ಅಮಲೆರಿಸಿಕೊಂಡು ದೈವಸ್ತಾನದ ಕಡೆ ಬರುವುದು ವಾಡಿಕೆಯಾಗಿತ್ತು, ಅಪ್ಪಟ ಕ್ರೈಸ್ತನಾಗಿದ್ದ ಇವನಿಗೆ ಸ್ವಲ್ಪ ಸ್ವಧರ್ಮದ ಮೇಲೆ ಪ್ರೀತಿ, ಊರಿನಲ್ಲಿ ಶ್ರಿಮಂತನೆಂಬ ಅಹಂಕಾರ ಹಾಗೂ ಮದಿರೆಯ ಅಮಲಿನಲ್ಲಿ ದೈವಸ್ತಾನವನ್ನು ಅದರ ಸುತ್ತಮುತ್ತಲಿನ ಪ್ರದೇಶವನ್ನು ಅಶೌಚಗೊಳಿಸುತಿದ್ದನು, ಇದರಿಂದ ಬೇಸರಗೊಂಡ ಗ್ರಾಮಸ್ತರು ವರ್ಷದ ನೇಮದ ಸಮಯದಲ್ಲಿ ನೇರವಾಗಿ ಅಣ್ಣಪ್ಪನ ಬಳಿ ದೂರು ಕೊಟ್ಟರು ಅದಕ್ಕೆ ದೈವವು “ನಾನು ನಿಮಗೊಂದು ಉಪಾಯ ಹೇಳುತ್ತೇನೆ ಮುಂದಿನ ಅಮಾವಾಸ್ಯೆಯ ದಿನ ರಾತ್ರಿ ನೀವೆಲ್ಲರೂ ಒಟ್ಟು ಸೇರಿ ದೈವಸ್ತಾನ ಪ್ರಾಂಗಣದ ತುಂಬಾ ನೆಲ್ಲಿಕಾಯಿಯನ್ನು ಹರಡಿಬಿಡಿ ಮುಂದಿನದ್ದು ನಾನು ನೋಡಿಕೊಳ್ಳುತ್ತೆನೆ “ಎಂದು ಅಭಯದ ನುಡಿಯನ್ನು ಕೊಟ್ಟಿತು.

@beautyoftulunad
ಹಾಗೆ ಗ್ರಾಮಸ್ತರು ದೈವ ಹೇಳಿದಂತೆಯೆ ನಡೆದುಕೊಂಡರು, ಆ ಅಮಾವಾಸ್ಯೆಯ ದಿನ ಸಾಲು ಕಂಬತ್ತಿ ಸಾರಾಯಿಯ ನಶೆಯಲ್ಲಿ ದೈವಸ್ತಾನದ ಪ್ರಾಂಗಣಕ್ಕೆ ಬಂದಾಗ ಚೆಲ್ಲಿದ್ದ ನೆಲ್ಲಿಕಾಯಿಯ ಅರಿವಿಲ್ಲದೆ ಅದರ ಮೇಲೆ ಕಾಲಿಟ್ಟು ಜಾರಿ ಬಿಳುತ್ತಾನೆ, ಅವನು ನೆಲಕ್ಕೆ ಬಿಳುತಿದ್ದಂತೆಯೆ ಅಣ್ಣಪ್ಪ ಪಂಜುರ್ಲಿಯು ಆತನ ಕೊರಳನ್ನು ಅಮುಕಿ ಹಿಡಿಯುತ್ತದೆ ಇದನ್ನು ನೋಡಿದ ಆತನ ಹಿಂಬಾಲಕರು ಹೆದರಿ ಓಡಿ ಹೋಗುತ್ತಾರೆ, ಆಗ ಸಾಲು ಕಂಬತ್ತಿಯು “ಯಾರು ನೀನು ಎಂದು ಕೇಳುತ್ತಾನೆ, ನನಗೆ ಏನೂ ಮಾಡಬೇಡ, ನನ್ನನ್ನೂ ಬಿಟ್ಟುಬಿಡು ಎಂದು ಕೇಳಿಕೊಳ್ಳು ತ್ತಾನೆ ಆಗ ದೈವವು “ನಾನು ಅಣ್ಣಪ್ಪ ದೈವ, ನೀನು ನನ್ನ ಸನ್ನಿಧಾನವನ್ನು ಹಾಳುಮಾಡುತಿದ್ದಿ ಎಂದು ಕೋಪದಿಂದ ನುಡಿಯಿತು ಆಗ ಭಯಗೊಂಡ ಸಾಲು ಕಂಬತ್ತಿ “ನನ್ನನ್ನೂ ಬಿಟ್ಟುಬಿಡು, ನಿನಗೆ ಏನು ಬೇಕೆಂದು ಕೇಳು ನಾನು ಕೊಡುತ್ತೇನೆ, ನನ್ನ ಜೀವನ ಪರಿಯಂತ ನಿನ್ನ ಆರಾಧನೆಯನ್ನು ಮಾಡಿಕೊಂಡು ಬರುತ್ತೇನೆ, ನನ್ನನ್ನು ನಂಬು” ಎಂದು ಕೇಳಿಕೊಂಡ ನಂತರ ಆತನನ್ನು ಬಿಟ್ಟು ಮಾಯವಾಗಿ ಹೋಯಿತು.

@beautyoftulunad
ನಂತರ ಸಾಲು ಕಂಬತ್ತಿಯು ಚರ್ಚಿನ ಸ್ತಳದಲ್ಲಿ ಅಣ್ಣಪ್ಪನಿಗೆ ಗುಡಿಯನ್ನು ಕಟ್ಟಿ, ವರ್ಷಂಪ್ರತಿ ಅದ್ದೂರಿಯಿಂದ ನೇಮೊತ್ಸವವನ್ನು ಮಾಡಿ ಅಣ್ಣಪ್ಪನನ್ನು ಭಕ್ತಿಪೂರ್ವಕವಾಗಿ
ಆರಾಧಿಸಿಕೊಂಡು ಬಂದ, ಇದ್ದಕ್ಕೆಯೆ “ಭಯವೆ ಭಕ್ತಿಯ ಮೂಲವೆಂದು ಹಿರಿಯರು ಹೇಳಿರಬೇಕು. ಈ ವಿಷಯವು ಮೊಡಂಕಾಪು ಇಗರ್ಜಿಯವರಿಗೆ ತಲುಪಿತು, ಆದರೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದರು, ಒಂದು ದಿನ ವಂದನಿಯ ಧರ್ಮ ಗುರುಗಳಾದ ಬಲ್ತಾಜಾರ್ ಅರಾನ್ಹಾ ಅವರು ಸಾಲು ಕಂಬತ್ತಿಯನ್ನು ಕರೆದು ದೇವರ ಸಮ್ಮುಖದಲ್ಲಿ ತಪ್ಪಿತಸ್ಥ, ಧರ್ಮ ಬಾಹಿರ ಕೆಲಸ ಮಾಡಿದವನು ಎಂದು ಹೇಳಿ ಒಂದು ಮಾತನ್ನು ಹೇಳಿದರು “ನೀನು ಸತ್ತರೆ ನರಕಕ್ಕೆ ಹೋಗುತ್ತಿ, ನಿನಗೆ ಸ್ವರ್ಗ ಸಿಗುವುದಿಲ್ಲ ಎಂದು ಹೇಳುತ್ತಾರೆ ಆಗ ಸಾಲು ಕಂಬತಿ ನಾನು ದೈವವನ್ನು ನಂಬುತ್ತೆನೆ, ಏಸುಸ್ವಾಮಿಯನ್ನು ನಂಬುತ್ತೆನೆ ನನ್ನ ಭಕ್ತಿ ಅಚಲ ಹಾಗಾಗಿ ನಾನು ಸತ್ತರೆ ಖಂಡಿತವಾಗಿ ಸ್ವರ್ಗಕ್ಕೆಹೋಗುತ್ತೇನೆ, ಇದರ ಗುರುತಾಗಿ ನಾನು ಸತ್ತದಿನ ಇಗರ್ಜಿಯ ಮುಖ್ಯದ್ವಾರದಲ್ಲಿ ನನ್ನ ಕೈಯ ಪಡಿಯಚ್ಚು ಮೂಡುತ್ತದೆ ಎಂದು ಹೇಳಿ ಹೋಗುತ್ತಾರೆ. @beautyoftulunad

“ಹಾಗೆಯೆ ಸಾಲು ಕಂಬತ್ತಿ ಸತ್ತ ದಿನ ಆತನ ಕೈಯ ಪಡಿಯಚ್ಚು ಮುಖ್ಯದ್ವಾರದಲ್ಲಿ ಇದ್ದದನ್ನು ಕಂಡ ಗುರುಗಳು ಅಚ್ಛರಿಗೊಂಡು ಸಾಲುಕಂಬತ್ತಿಗಾಗಿ ವಿಶೇಷ ಪೂಜೆ ಮಾಡಿದರು ಕೆಲವು ವರ್ಷಗಳ ಹಿಂದೆ ಆತನ ಕೈಯ ಗುರುತು ಮುಖ್ಯದ್ವಾರದಲ್ಲಿ ಕಾಣಸಿಗುತ್ತಿತ್ತು, ಇಗರ್ಜಿಯ ಪುನರ್ ನವೀಕರಣದ ನಂತರ ಈ ದ್ವಾರವನ್ನು ತೆರವುಗೊಳಿಸಿದ್ದಾರೆ. ಹಾಗಾಗಿ ಸಾಲು ಕಂಬತ್ತಿಯನ್ನು ಈಗಲೂ ದೈವ ವಲಸರಿ ನೇಮದ ಸಂಧರ್ಬ “ಸಾಲ್ ಕಂಬತ್ತಿ ಮಲ್ತಿನ ಕಟ್ಟ್ ಯನ್ನ “ಎಂದು ಆತನ ಭಕ್ತಿಯನ್ನು ಸ್ಮರಿಸುತ್ತದೆ. ಆಧಾರ ಗ್ರಂಥ: ” ಮಂಗ್ಲಿಮಾರ್ ಶ್ರಿ ಅಣ್ಣಪ್ಪ ಸ್ವಾಮಿ, ಜುಮಾದಿ ಬಂಟ ಪರಿವಾರ ದೈವಗಳು ನಡೆದು ಬಂದ ದಾರಿ ” ಬರಹ : ಫನಿಷ್ ಅಮ್ಟಾಡಿ

inputs: beauty of tulunad


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »