TOP STORIES:

ಅಶಕ್ತ ಕುಟುಂಬಕ್ಕೆ ಬಿರುವೆರ್ ಕುಡ್ಲದಿಂದ ರೂ: 50 ಸಾವಿರ ಆರ್ಥಿಕ ನೆರವು ಹಸ್ತಾಂತರ


ಕುದ್ರೋಳಿ:- ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ವತಿಯಿಂದ ಕುಪ್ಪೆ ಪದವಿನ ಜಗದೀಶ್ ಜಯಶ್ರೀ ಅವರ ಪುತ್ರ ಎರಡುವರ್ಷದ ಶಮಿತ್ ಚಿಕಿತ್ಸೆಗಾಗಿ 50 ಸಾವಿರ ಆರ್ಥಿಕ ನೆರವನ್ನು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದವಠಾರದಲ್ಲಿ ಹಸ್ತಾಂತರಿಸಲಾಯಿತು.

ಕ್ಷೇತ್ರದ ಮೊಕ್ತೇಸರ ಸಾಯೀರಾಮ್ ಅವರು ನೆರವಿನ ಚೆಕ್ ಹಸ್ತಾಂತರಿಸಿ, ಬಿರುವೆರ್ ಕುಡ್ಲ  ಸಮಾಜಮುಖೀ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿರುವೆರ್ ಕುಡ್ಲ ವಕ್ತಾರ ದಿನೇಶ್ ರಾಯಿ ಅವರು ಬಿರುವೆರ್ ಕುಡ್ಲದ ಕುರಿತಾಗಿ ಮಾಹಿತಿ ನೀಡಿ,

ಬಿರುವೆರ್ ಕುಡ್ಲದ  ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್‍ಬಾಗ್ ನೇತೃತ್ವದಲ್ಲಿ ಅವರ ಸದಸ್ಯರ,ಸ್ನೇಹಿತರ,ದಾನಿಗಳಕೊಡುಗೆಯಿದೆ.

ನಮ್ಮ ಸಂಘಟನೆಯು ಶಾರದಾ ಹುಲಿ ವೇಷ ಕುಣಿತ, ಕುದ್ರೋಳಿ ಕ್ಷೇತ್ರದ ದಸರದಲ್ಲಿ ಭಾಗವಹಿಸುತ್ತಾ ಬಂದಿದೆ. ಹುಲಿ ವೇಷದಲ್ಲಿಬಂದ ಹಣವನ್ನು ಸೇವಾ ರೂಪದಲ್ಲಿ ಖರ್ಚು ಮಾಡುತ್ತಿದ್ದೆವು. ಕಳೆದ 8 ವರ್ಷದಿಂದ ಸಂಸ್ಥೆಯು ಬಡ ವರ್ಗದ ಸೇವೆಗಾಗಿ  5 ಕೋಟಿರೂ.ನಷ್ಟು ನೆರವಿಗೆ ವಿನಿಯೋಗಿಸಿದ್ದೇವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಲ್ಲಿ ಎಲ್ಲಾ ಜಾತಿ ಧರ್ಮದ ಕುಟುಂಬಕ್ಕೆನೆರವು ನೀಡಲಾಗಿದೆ.ಬೇರೆ ಬೇರೆ ಘಟಕಗಳು ತಮ್ಮ ಕರ್ತವ್ಯ ನಿರತವಾಗಿದೆ. ಕೊರೊನಾ ಸಂದರ್ಭದಲ್ಲಿ ನೀಡಿದ ಉಚಿತವಾಗಿ  ಸೇವೆನೀಡುವ ಆಂಬುಲೆನ್ಸ್  ನಿರ್ವಹಣೆ ಮಾಡುತ್ತಿದ್ದೇವೆ.ಹೀಗೆ ನಮ್ಮಿಂದಾದ ಸೇವೆ ಸಮಾಜಕ್ಕೆ ನಿರಂತರವಾಗಿ ಮಾಡುತ್ತಾ  ಬಂದಿದ್ದೇವೆಎಂದರು.

ನೆರವು ಪಡೆದ ಕುಟುಂಬದ ಸದಸ್ಯರಾದ ಸಂಜಿತ್ ಅಚಾರ್ಯ ಮನವಿ ಮಾಡಿ,

ಪ್ರತೀ ತಿಂಗಳು 50 ಸಾವಿರ ವೆಚ್ಚ  ಬರುತ್ತಿದ್ದು,ಬಡ ಕುಟುಂಬಕ್ಕೆ ಭರಿಸಲು ಕಷ್ಟವಾಗುತ್ತಿದೆ.

ಬಿರುವೆರ್ ಕುಡ್ಲದ ನೆರವಿಗೆ ಕೃತಜ್ಞತೆ ವ್ಯಕ್ತ ಪಡಿಸುತ್ತೇವೆ.

ಇತರರೂ ಮುಂದೆ ಬಂದು ಸಹಾಯ ಮಾಡಿದರೆ ನಮಗೆ ಮಗುವಿನ ರಕ್ಷಣೆಗೆ ಸಹಾಯವಾಗುತ್ತದೆ‌ ಎಂದು ಮನವಿ ಮಾಡಿದರು.

ಪ್ರಮುಖರಾದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ವಸಂತ ಪೂಜಾರಿ, ವೆಂಕಟೇಶ್ ಭಂಡಾರಿ,ರಾಧಕೃಷ್ಣಮುಂಬಾಯಿ ಅಧ್ಯಕ್ಷ  ರಾಕೇಶ್ ಪೂಜಾರಿ ಬಳ್ಳಾಲ್‍ಬಾಗ್,ವಿನು ಶೆಟ್ಟಿ  ತಲಪಾಡಿ,ಲತೀಶ್ ಪೂಜಾರಿ,ಕಿಶೋರ್ ಬಾಬು,ರಾಕೇಶ್ಚಿಲಿಂಬಿ,ಲೋಹಿತ್ ಗಟ್ಟಿ,ರಾಮ್‍ಪ್ರಸಾದ್ ಎಕ್ಕೂರ್,ಗಣೇಶ್ ಚಿಲಿಂಬಿ,ವಾಝಿ ಫೆರ್ನಾಂಡಿಸ್,ಪ್ರಾಣೇಶ್ ಬಂಗೇರ,ವಿಘ್ನೇಶ್  ಮತ್ತಿತರರು ಉಪಸ್ಥಿತರಿದ್ದರು.


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »