TOP STORIES:

ಗರ್ಭಿಣಿ ಹೊಟ್ಟೆ ಆಕಾರ ನೋಡಿದ್ರೆ ಮಗು ಗಂಡೋ, ಹೆಣ್ಣೋ ಅಂತ ತಿಳಿಯತ್ತಾ?; ಪ್ರೆಗ್ನೆಸಿಯ ಸತ್ಯ ಮಿಥ್ಯಗಳು ಇಲ್ಲಿವೆ


ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನವಜಾತ ಶಿಶುಗಳು ಅಥವಾ ಹುಟ್ಟಲಿರುವ ಶಿಶು ಯಾವುದು ಎಂಬ ಕುತೂಹಲ ಸಾಮಾನ್ಯ. ಅನೇಕರು ಗರ್ಭಿಣಿಯರ ಹೊಟ್ಟೆಯ ಆಕಾರ ನೋಡಿ ಅನೇಕರು ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಅಂದಾಜು ಮಾಡುತ್ತಾರೆ. ಅಲ್ಲದೇ ಅನೇಕ ಗರ್ಭಿಣಿಯರು ಕೂಡ ಈ ಕುರಿತು ವಿಚಾರವನ್ನು ಅಂತರ್ಜಾಲದಲ್ಲಿ ಹುಡುಕುತ್ತಾರೆ.  ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿನ ಅನೇಕ ವಿಚಾರಗಳ ಕುರಿತು ನಮ್ಮ ಸುತ್ತ ಮುತ್ತಲಿನವರು ಅನೇಕ ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಅವೆಲ್ಲವೂ ಸತ್ಯವಾಗಿರುವುದಿಲ್ಲ, ಅವುಗಳಲ್ಲಿ ಸತ್ಯಕ್ಕೆ ದೂರವಾದ ಮತ್ತು ಅವೈಜ್ಞಾನಿಕವಾದ ಮಾಹಿತಿಗಳು ಬಹಳಷ್ಟಿರುತ್ತವೆ. ನವಜಾತ ಶಿಶುವಿನ ತಾಯಂದಿರು ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಭಾವಿ ಅಮ್ಮಂದಿರ ಸುತ್ತಮುತ್ತ ತರಾವರಿ ಸಲಹೆಗಳನ್ನು ನೀಡುವ ಅಥವಾ ಊಹೆಗಳನ್ನು ಮಾಡುವ ಜನರ ದಂಡೇ ಇರುತ್ತದೆ ಎಂಬುವುದು ಸರ್ವಕಾಲಿಕ ಸತ್ಯ.

 

ಒಂದು ನವಜಾತ ಶಿಶುವಿನ ತಾಯಿ ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಮಹಿಳೆ ಆದಾಗಲೇ ದುರ್ಬಲಳಾಗಿರಬಹುದು ಅಥವಾ ಹೊಸ ಅನುಭವದ ಒತ್ತಡದ ಮನಸ್ಥಿತಿಯಲ್ಲಿ ಇರಬಹುದು, ಅಂತಹ ಸಂದರ್ಭದಲ್ಲಿ ಆಧಾರವಿಲ್ಲದ ಸಲಹೆಗಳಿಗೆ ಕಿವಿ ಕೊಡದೆ, ತಜ್ಞರು ನೀಡುವ ಮಾಹಿತಿಗಳನ್ನು ನಂಬುವುದು ಬಹಳ ಅಗತ್ಯ. ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

 

ಮಿಥ್ಯ 1: ಗರ್ಭಿಣಿಯ ಹೊಟ್ಟೆ ಎಷ್ಟು ಉಬ್ಬಿದೆ ಎಂಬುದನ್ನು ಆಧರಿಸಿ ಅದರ ಲಿಂಗವನ್ನು ನಿರ್ಧರಿಸಲಾಗುತ್ತದೆ. ಗರ್ಭಿಣಿಯ ಹೊಟ್ಟೆ ಕಡಿಮೆ ಉಬ್ಬಿದ್ದರೆ ಒಳಗಿರುವುದು ಗಂಡು ಮಗು. ಹೊಟ್ಟೆ ದೊಡ್ಡದಿದ್ದರೆ ಅದು ಹೆಣ್ಣು ಮಗು.
ಸತ್ಯ: ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್‍ಹೆಚ್‍ಎಸ್) ಪ್ರಕಾರ, ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಹೊಟ್ಟೆಯ ಗಾತ್ರಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಗರ್ಭಿಣಿಯ ಹೊಟ್ಟೆಯ ಗಾತ್ರ ಮತ್ತು ಆಕಾರವು ಆಕೆಯ ಸ್ನಾಯುವಿನ ಗಾತ್ರ, ರಚನೆ, ಭಂಗಿ ಮತ್ತು ಆಕೆಯ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಅವಲಂಬಿಸಿದೆ.

ಮಿಥ್ಯ 2 : ಕೊಲಸ್ಟ್ರಮ್ ಅಥವಾ ತಾಯಿಯ ಆರಂಭದ ಎದೆಹಾಲನ್ನು ಮಗುವಿಗೆ ಕುಡಿಸಬಾರದು. ಅದು ಅಶುದ್ಧವಾಗಿರುತ್ತದೆ.

ಸತ್ಯ : ಕೊಲಸ್ಟ್ರಮ್ ಎಂದರೆ ಹಳದಿ ಬಣ್ಣವುಳ್ಳ , ತಾಯಿಯ ಪ್ರಪ್ರಥಮ ಎದೆ ಹಾಲು. ಅತ್ಯಧಿಕ ಪ್ರೊಟೀನ್ ಹೊಂದಿರುವ ಆ ಹಾಲು ಸೋಂಕು ನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಇದನ್ನು ಕುಡಿಸಲು ಸೂಚಿಸಲಾಗುತ್ತದೆ. ಆದರೆ, ಭಾರತದಲ್ಲಿ ಕೆಲವು ಮಹಿಳೆಯರು ಇದನ್ನು ಇಂದಿಗೂ ಅಶುದ್ಧವೆಂದು ಭಾವಿಸಿದ್ದು, ಮಗುವಿಗೆ ಕುಡಿಸಲು ನಿರಾಕರಿಸುತ್ತಾರೆ.

ಮಿಥ್ಯ 3: ನವಜಾತ ಶಿಶುವಿನ ಜೀವನ ಸಿಹಿಯಾಗಿರಬೇಕು ಎಂಬುದರ ಸಂಕೇತವಾಗಿ, ಅದಕ್ಕೆ ಪ್ರಥಮವಾಗಿ ಜೇನು ತುಪ್ಪವನ್ನು ನೆಕ್ಕಿಸುವುದು ಅತ್ಯಂತ ಪುರಾತನ ಸಂಪ್ರದಾಯ.

ಸತ್ಯ: ನವಜಾತ ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ನಾಜೂಕಾಗಿ ಇರುತ್ತದೆ. ಮಗುವಿಗೆ ಅದರ ಮೊದಲ ಹುಟ್ಟುಹಬ್ಬಕ್ಕಿಂತ ಮೊದಲು ಜೇನು ತುಪ್ಪವನ್ನು ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಾರಣವೇನೆಂದರೆ, ಅದು ನವಜಾತ ಶಿಶುವಿನ ಅಪಕ್ವ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಲ್ಲ ಬ್ಯಾಕ್ಟೀರಿಯಾವಾದ ಕ್ಲೋಸ್ಟ್ರಿಡಿಯಂ ಬೊಟುಲಿನಮ್ ಬೀಜಕಗಳನ್ನು ಹೊಂದಿರುತ್ತದೆ, ಮತ್ತು ಆ ಬ್ಯಾಕ್ಟೀರಿಯಾ ಶಿಶುವಿಗೆ ಮಾರಕ ರೋಗವನ್ನು ಉಂಟು ಮಾಡಬಹುದು.

ಮಿಥ್ಯ 4: ನವಜಾತ ಶಿಶುವಿನ ಆಹಾರ ಕ್ರಮದಲ್ಲಿ ಜ್ಯೂಸ್‍ಗಳನ್ನು ಕೂಡ ಸೇರಿಸಬೇಕು.
ಸತ್ಯ : ಹಣ್ಣಿನ ರಸದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಮಗುವಿನ ಕರುಳಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು . ಏಕೆಂದರೆ ಆರಂಭದಲ್ಲಿ , ಅದರಲ್ಲೂ ಮುಖ್ಯವಾಗಿ ಜನಿಸಿದ ಒಂದು ವರ್ಷದವರೆಗೆ ಅವುಗಳಲ್ಲಿ ಹಣ್ಣಿನ ರಸವನ್ನು ಜೀರ್ಣ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವುದಿಲ್ಲ.

 

ಮಿಥ್ಯ 5 : ಎರಡನೇ ಮತ್ತು ಮೂರನೆಯ ಶಿಶುಗಳಿಗೆ ಹೋಲಿಸಿದರೆ, ಮೊದಲ ಮಗು ತಡವಾಗಿ ಹೊರ ಬರುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿದೆ.

ಸತ್ಯ : ವಾಸ್ತವ ಏನೆಂದರೆ, ನಿಮ್ಮ ಋತುಚಕ್ರದ ಅವಧಿಯ ಉದ್ದವು ನಿಮ್ಮ ಮಗುವಿನ ಆಗಮನವನ್ನು ನಿರ್ಧರಿಸುತ್ತದೆ. ನಿಮ್ಮ ಋತುಚಕ್ರದ ಅವಧಿ ಕಡಿಮೆ ಇದ್ದರೆ ಹೆರಿಗೆ ಬೇಗ ಆಗಬಹುದು, ಉದ್ದನೆಯ ಋತುಚಕ್ರದ ಅವಧಿ ಇದ್ದಲ್ಲಿ ಹೆರಿಗೆ ಕೂಡ ತಡ ಆಗಬಹುದು.ಆದರೂ ಋತುಚಕ್ರದ ಅವಧಿ 28 ದಿನಗಳದ್ದಾಗಿದ್ದರೆ, ನಿಮಗೆ ಹೆರಿಗೆಗೆ ನಿಗದಿ ಪಡಿಸಿದ ದಿನಾಂಕದ ಹತ್ತಿರದ ತಾರೀಖಿನಲ್ಲೇ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ.


Related Posts

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »