TOP STORIES:

ಗರ್ಭಿಣಿ ಹೊಟ್ಟೆ ಆಕಾರ ನೋಡಿದ್ರೆ ಮಗು ಗಂಡೋ, ಹೆಣ್ಣೋ ಅಂತ ತಿಳಿಯತ್ತಾ?; ಪ್ರೆಗ್ನೆಸಿಯ ಸತ್ಯ ಮಿಥ್ಯಗಳು ಇಲ್ಲಿವೆ


ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನವಜಾತ ಶಿಶುಗಳು ಅಥವಾ ಹುಟ್ಟಲಿರುವ ಶಿಶು ಯಾವುದು ಎಂಬ ಕುತೂಹಲ ಸಾಮಾನ್ಯ. ಅನೇಕರು ಗರ್ಭಿಣಿಯರ ಹೊಟ್ಟೆಯ ಆಕಾರ ನೋಡಿ ಅನೇಕರು ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಅಂದಾಜು ಮಾಡುತ್ತಾರೆ. ಅಲ್ಲದೇ ಅನೇಕ ಗರ್ಭಿಣಿಯರು ಕೂಡ ಈ ಕುರಿತು ವಿಚಾರವನ್ನು ಅಂತರ್ಜಾಲದಲ್ಲಿ ಹುಡುಕುತ್ತಾರೆ.  ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿನ ಅನೇಕ ವಿಚಾರಗಳ ಕುರಿತು ನಮ್ಮ ಸುತ್ತ ಮುತ್ತಲಿನವರು ಅನೇಕ ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಅವೆಲ್ಲವೂ ಸತ್ಯವಾಗಿರುವುದಿಲ್ಲ, ಅವುಗಳಲ್ಲಿ ಸತ್ಯಕ್ಕೆ ದೂರವಾದ ಮತ್ತು ಅವೈಜ್ಞಾನಿಕವಾದ ಮಾಹಿತಿಗಳು ಬಹಳಷ್ಟಿರುತ್ತವೆ. ನವಜಾತ ಶಿಶುವಿನ ತಾಯಂದಿರು ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಭಾವಿ ಅಮ್ಮಂದಿರ ಸುತ್ತಮುತ್ತ ತರಾವರಿ ಸಲಹೆಗಳನ್ನು ನೀಡುವ ಅಥವಾ ಊಹೆಗಳನ್ನು ಮಾಡುವ ಜನರ ದಂಡೇ ಇರುತ್ತದೆ ಎಂಬುವುದು ಸರ್ವಕಾಲಿಕ ಸತ್ಯ.

 

ಒಂದು ನವಜಾತ ಶಿಶುವಿನ ತಾಯಿ ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಮಹಿಳೆ ಆದಾಗಲೇ ದುರ್ಬಲಳಾಗಿರಬಹುದು ಅಥವಾ ಹೊಸ ಅನುಭವದ ಒತ್ತಡದ ಮನಸ್ಥಿತಿಯಲ್ಲಿ ಇರಬಹುದು, ಅಂತಹ ಸಂದರ್ಭದಲ್ಲಿ ಆಧಾರವಿಲ್ಲದ ಸಲಹೆಗಳಿಗೆ ಕಿವಿ ಕೊಡದೆ, ತಜ್ಞರು ನೀಡುವ ಮಾಹಿತಿಗಳನ್ನು ನಂಬುವುದು ಬಹಳ ಅಗತ್ಯ. ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

 

ಮಿಥ್ಯ 1: ಗರ್ಭಿಣಿಯ ಹೊಟ್ಟೆ ಎಷ್ಟು ಉಬ್ಬಿದೆ ಎಂಬುದನ್ನು ಆಧರಿಸಿ ಅದರ ಲಿಂಗವನ್ನು ನಿರ್ಧರಿಸಲಾಗುತ್ತದೆ. ಗರ್ಭಿಣಿಯ ಹೊಟ್ಟೆ ಕಡಿಮೆ ಉಬ್ಬಿದ್ದರೆ ಒಳಗಿರುವುದು ಗಂಡು ಮಗು. ಹೊಟ್ಟೆ ದೊಡ್ಡದಿದ್ದರೆ ಅದು ಹೆಣ್ಣು ಮಗು.
ಸತ್ಯ: ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್‍ಹೆಚ್‍ಎಸ್) ಪ್ರಕಾರ, ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಹೊಟ್ಟೆಯ ಗಾತ್ರಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಗರ್ಭಿಣಿಯ ಹೊಟ್ಟೆಯ ಗಾತ್ರ ಮತ್ತು ಆಕಾರವು ಆಕೆಯ ಸ್ನಾಯುವಿನ ಗಾತ್ರ, ರಚನೆ, ಭಂಗಿ ಮತ್ತು ಆಕೆಯ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಅವಲಂಬಿಸಿದೆ.

ಮಿಥ್ಯ 2 : ಕೊಲಸ್ಟ್ರಮ್ ಅಥವಾ ತಾಯಿಯ ಆರಂಭದ ಎದೆಹಾಲನ್ನು ಮಗುವಿಗೆ ಕುಡಿಸಬಾರದು. ಅದು ಅಶುದ್ಧವಾಗಿರುತ್ತದೆ.

ಸತ್ಯ : ಕೊಲಸ್ಟ್ರಮ್ ಎಂದರೆ ಹಳದಿ ಬಣ್ಣವುಳ್ಳ , ತಾಯಿಯ ಪ್ರಪ್ರಥಮ ಎದೆ ಹಾಲು. ಅತ್ಯಧಿಕ ಪ್ರೊಟೀನ್ ಹೊಂದಿರುವ ಆ ಹಾಲು ಸೋಂಕು ನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಇದನ್ನು ಕುಡಿಸಲು ಸೂಚಿಸಲಾಗುತ್ತದೆ. ಆದರೆ, ಭಾರತದಲ್ಲಿ ಕೆಲವು ಮಹಿಳೆಯರು ಇದನ್ನು ಇಂದಿಗೂ ಅಶುದ್ಧವೆಂದು ಭಾವಿಸಿದ್ದು, ಮಗುವಿಗೆ ಕುಡಿಸಲು ನಿರಾಕರಿಸುತ್ತಾರೆ.

ಮಿಥ್ಯ 3: ನವಜಾತ ಶಿಶುವಿನ ಜೀವನ ಸಿಹಿಯಾಗಿರಬೇಕು ಎಂಬುದರ ಸಂಕೇತವಾಗಿ, ಅದಕ್ಕೆ ಪ್ರಥಮವಾಗಿ ಜೇನು ತುಪ್ಪವನ್ನು ನೆಕ್ಕಿಸುವುದು ಅತ್ಯಂತ ಪುರಾತನ ಸಂಪ್ರದಾಯ.

ಸತ್ಯ: ನವಜಾತ ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ನಾಜೂಕಾಗಿ ಇರುತ್ತದೆ. ಮಗುವಿಗೆ ಅದರ ಮೊದಲ ಹುಟ್ಟುಹಬ್ಬಕ್ಕಿಂತ ಮೊದಲು ಜೇನು ತುಪ್ಪವನ್ನು ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಾರಣವೇನೆಂದರೆ, ಅದು ನವಜಾತ ಶಿಶುವಿನ ಅಪಕ್ವ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಲ್ಲ ಬ್ಯಾಕ್ಟೀರಿಯಾವಾದ ಕ್ಲೋಸ್ಟ್ರಿಡಿಯಂ ಬೊಟುಲಿನಮ್ ಬೀಜಕಗಳನ್ನು ಹೊಂದಿರುತ್ತದೆ, ಮತ್ತು ಆ ಬ್ಯಾಕ್ಟೀರಿಯಾ ಶಿಶುವಿಗೆ ಮಾರಕ ರೋಗವನ್ನು ಉಂಟು ಮಾಡಬಹುದು.

ಮಿಥ್ಯ 4: ನವಜಾತ ಶಿಶುವಿನ ಆಹಾರ ಕ್ರಮದಲ್ಲಿ ಜ್ಯೂಸ್‍ಗಳನ್ನು ಕೂಡ ಸೇರಿಸಬೇಕು.
ಸತ್ಯ : ಹಣ್ಣಿನ ರಸದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಮಗುವಿನ ಕರುಳಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು . ಏಕೆಂದರೆ ಆರಂಭದಲ್ಲಿ , ಅದರಲ್ಲೂ ಮುಖ್ಯವಾಗಿ ಜನಿಸಿದ ಒಂದು ವರ್ಷದವರೆಗೆ ಅವುಗಳಲ್ಲಿ ಹಣ್ಣಿನ ರಸವನ್ನು ಜೀರ್ಣ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವುದಿಲ್ಲ.

 

ಮಿಥ್ಯ 5 : ಎರಡನೇ ಮತ್ತು ಮೂರನೆಯ ಶಿಶುಗಳಿಗೆ ಹೋಲಿಸಿದರೆ, ಮೊದಲ ಮಗು ತಡವಾಗಿ ಹೊರ ಬರುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿದೆ.

ಸತ್ಯ : ವಾಸ್ತವ ಏನೆಂದರೆ, ನಿಮ್ಮ ಋತುಚಕ್ರದ ಅವಧಿಯ ಉದ್ದವು ನಿಮ್ಮ ಮಗುವಿನ ಆಗಮನವನ್ನು ನಿರ್ಧರಿಸುತ್ತದೆ. ನಿಮ್ಮ ಋತುಚಕ್ರದ ಅವಧಿ ಕಡಿಮೆ ಇದ್ದರೆ ಹೆರಿಗೆ ಬೇಗ ಆಗಬಹುದು, ಉದ್ದನೆಯ ಋತುಚಕ್ರದ ಅವಧಿ ಇದ್ದಲ್ಲಿ ಹೆರಿಗೆ ಕೂಡ ತಡ ಆಗಬಹುದು.ಆದರೂ ಋತುಚಕ್ರದ ಅವಧಿ 28 ದಿನಗಳದ್ದಾಗಿದ್ದರೆ, ನಿಮಗೆ ಹೆರಿಗೆಗೆ ನಿಗದಿ ಪಡಿಸಿದ ದಿನಾಂಕದ ಹತ್ತಿರದ ತಾರೀಖಿನಲ್ಲೇ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »