TOP STORIES:

ಚಳಿಗಾಲದಲ್ಲಿ ಸಿಹಿ ಪೊಟಾಟೋ ಪೌಷ್ಟಿಕಾಂಶ ಆಹಾರ


750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು.

 

ಆದಿ ಮಾನವರೂ ಕೂಡ ಕಾಡುಗಳಲ್ಲಿ ಸಿಗುತ್ತಿದ್ದ ಗಡ್ಡೆಯ ಗೆಣಸನ್ನು ತಿಂದು ಬದುಕು ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೆಣಸು ತಿಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ಕಾಡಬಹುದು ಎಂದು ಗೆಣಸಿನಿಂದ ದೂರ ಓಡುವವರೇ ಹೆಚ್ಚು. ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಸಿದರೆ ಪರಿಪೂರ್ಣ ಆಹಾರವಾಗಿಲಿದೆ. ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರದ ಸೇವನೆ ಅಗತ್ಯ. ಹೀಗಾಗಿ ಅದಕ್ಕೆ ಸಿಹಿ ಆಲೂಗಡ್ಡೆ ಅಥವಾ ಗೆಣಸು ಉತ್ತಮ ಆಹಾರವಾಗಿದೆ. ಇದರಲ್ಲಿ ಯಥೇಚ್ಛವಾದ ಕಾರ್ಬೋಹೈಡ್ರೇಟ್​, ಕೊಲೆಸ್ಟ್ರಾಲ್​ ಸೋಡಿಯಮ್​ನಂತಹ ಅಂಶಗಳು ಇರುತ್ತವೆ. ಇವು ದೇಹವನ್ನು ಬೆಚ್ಚಗಿರಿಸಿ, ಚಳಿಗಾಲದಲ್ಲಿ ಕಾಡುವ ಸುಸ್ತು ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ಷಿಸುತ್ತದೆ.

 

ಚಳಿಗಾಲದಲ್ಲಿ ಗಡ್ಡೆಗಳ ಬಳಕೆ ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ. ಉದಾಹರಣೆಗೆ ಬಿಟ್ರೂಟ್​, ಕ್ಯಾರೆಟ್​ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲಿ ಸಿಹಿ ಪೊಟಾಟೋ ಅಥವಾ ಗೆಣಸು ಕೂಡ ಹೌದು. ಈ ಕುರಿತು ಪೌಷ್ಟಿಕ ತಜ್ಞರಾದ ರಜುತಾ ದಿವೇಕರ್​ ಎನ್ನುವವರು ಗೆಣಸಿನ ಉಪಯೋಗಗಳನ್ನು ತಿಳಿಸಿದ್ದಾರೆ. 750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು. ಅಲ್ಲದೆ ಇದನ್ನು ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿಯೂ ಸೇವಿಸಬಹುದು. ಆದ್ದರಿಂದ ಸಿಹಿ ಪೊಟಾಟೊ ಒಂದು ಪರಿಪೂರ್ಣ ಆಹಾರವಾಗಿದೆ.

 

ಗೆಣಸಿನ ಉಪಯೋಗಗಳು

ಮಧುಮೇಹಿಗಳಿಗೆ ಗೆಣಸು ಉತ್ತಮ ಆಹಾರವಾಗಿದೆ. ಅಲ್ಲದೆ ಬೊಜ್ಜು, ಪಿಸಿಒಡಿ ಸಮಸ್ಯೆ ಇರುವವರಿಗೆ ಉತ್ತಮ ನಾರಿನ ತರಕಾರಿಯಾಗಿದೆ.

ನೀವು ಜಿಮ್​ಗಳಿಗೆ ಹೋಗುವವರಾದರೆ ಅಥವಾ ಇನ್ನಿತರ ಟ್ರೈನಿಂಗ್​ಗಳಿಗೆ ತೆರಳುವವರಾದರೆ ಸಂಜೆ ಸಮಯದಲ್ಲಿ ಗೆಣಸು ಉತ್ತಮ ಸ್ನಾಕ್ಸ್​ ಆಗಲಿದೆ. ಗೆಣಸಿನ ಪರೋಟ ಅಥವಾ ಅದನ್ನು ಬೇಯಸಿ ಹಾಗೆಯೇ ತಿನ್ನಬಹುದು.

ಗೆಣಸಿನಲ್ಲಿ ಯಥೇಚ್ಛವಾದ ವಿಟಮಿನ್​ ಎ ಅಂಶವಿದೆ. ವಿಟಮಿನ್​ ಎ ರೋಗದ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಗೆಣಸು ನಿಮ್ಮ ದೇಹದ ಚರ್ಮವನ್ನು ಮೃದುಗೊಳಿಸುಲು ಸಹಾಯ ಮಾಡುತ್ತದೆ. ದೇಹ ಉಬ್ಬುವಿಕೆ, ಆಮ್ಲೀಯತೆಯಿಂದಲೂ ಇದು ರಕ್ಷಿಸಲಿದೆ.

ಗೆಣಸು ನಿಮಗೆ ನಿದ್ದೆ ಬರಲು ಸಹಾಯ ಮಾಡುತ್ತದೆ. ಹೀಗಾಗಿ ನೀವೇನಾದರೂ ನಿದ್ದೆಗಡುವ ಕೆಲಸವೇನಾದರೂ ಮಾಡಿದ್ದರೆ ಗೆಣಸಿನ ಖಾದ್ಯವನ್ನು ಸೇವಿಸಿ ಮಲಗಿ ನಿದ್ದೆ ಚೆನ್ನಾಗಿ ಬರಲಿದೆ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »