TOP STORIES:

ತನ್ನ ಸೇವಾ ತಂಡವನ್ನು ಒಟ್ಟುಸೇರಿಸಿ ಪರರ ಕಷ್ಟಗಳಿಗೆ ಸ್ಪಂದಿಸುವ,ಯುವ ಮನಸ್ಸಿನ ತೆರೆಮರೆಯ ಸೇವಾ ಮಾಣಿಕ್ಯ ಸುಕೇಶ್ ಜಿ ಅಂಚನ್.


ಮೂಡಬಿದ್ರೆ ತಾಲೂಕಿನ ತೋಡಾರಿನ ಗಿರಿಯ ಸುವರ್ಣ ಮತ್ತು ಗುಲಾಬಿ ದಂಪತಿಗಳ ನಾಲ್ಕನೇ ಪುತ್ರನಾಗಿ ಜನಿಸಿದರು. ತನ್ನಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ, ಬಂಗಾಬೆಟ್ಟು,ಪ್ರೌಢ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ಬಂಗಾಬೆಟ್ಟು,ಮಿಜಾರು ಇಲ್ಲಿ ಮುಗಿಸಿದರು.

ಬಡತನದಲ್ಲಿ ಹುಟ್ಟಿದ ಇವರು ಬಡವರ ಕಷ್ಟ ಏನೆಂದು ತಿಳಿದುಕೊಂಡಿದ್ದರು.ಕಷ್ಟದಲ್ಲೆ ಜೀವನ ಸಾಗಿಸುತ್ತಿದ್ದ ಇವರಿಗೆವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು ಆದರೆ, ಶಾಲೆಯ ದಿನಗಳಲ್ಲಿ ನಾಟಕ,ನೃತ್ಯ ಮತ್ತು ಇನ್ನಿತರ ಚಟುವಟಿಕೆಗಳಲ್ಲಿಭಾಗವಹಿಸುತ್ತಿದ್ದರು.

ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ, ಕೆಲಸವನ್ನು ಹುಡುಕುತ್ತಾ ಮಹಾನಗರವಾದ ಮುಂಬೈಗೆ ಹೋಗುತ್ತಾರೆ. ಚಿಕ್ಕಂದಿನಿಂದಲೇಕಷ್ಟ, ನೋವು ಏನೆಂದು ತಿಳಿದಿದ್ದ ಇವರಿಗೆ, ಬಡವರ ಪಾಲಿಗೆ ಆಸರೆಯಾಗಬೇಕು ಎನ್ನುವ ತವಕ ಅವರಲ್ಲಿ ಆಗಲೇ ಇತ್ತು. ಹಾಗೆಯೇಮುಂಬೈನಲ್ಲಿ ಕೆಲಸ ಮಾಡುತ್ತಾಲೆ,ಅಲ್ಲಿದ್ದ ನೊಂದವರಿಗೆ ಆಸರೆಯಾದರು.ಲಾಕ್ ಡೌನ್ ಸಂದರ್ಭದಲ್ಲಿ, ಮುಂಬೈನಲ್ಲಿಗೃಹಿಣಿಯೊಬ್ಬಳು ಸಂಕಷ್ಟದಲ್ಲಿದ್ದಾಗ ಅವರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸುವ ದೊಡ್ಡ ಕಾರ್ಯವನ್ನು ಮಾಡಿದವರು. ಅಷ್ಟಲ್ಲದೇ ಲಾಕ್ ಡೌನ್ ನಲ್ಲಿ ಹಲವು ಬಡವರಿಗೆ ತಮ್ಮ ಸ್ವಂತ ಖರ್ಚಿನಿಂದ ಕಿಟ್ ವಿತರಿಸಿ ನೊಂದವರ ಪಾಲಿಗೆ ಆಸರೆಯಾದರು.

ಮುಂದಿನ ದಿನಗಳಲ್ಲಿ ಮುಂಬೈನಿಂದ ಊರಿಗೆ ಬಂದ ಇವರು 21-05-2020 ರಂದು ಕನಸಿನ ಯೋಜನೆಯಾದ#ನವಚೇತನ_ಸೇವಾ_ಬಳಗ_(ರಿ.) ವನ್ನು ತಮ್ಮ ಆತ್ಮೀಯ ಗೆಳೆಯನಾದ ಜಯಂತ್ ಕೋಟ್ಯಾನ್ ಕುಕ್ಯಾಡಿಯವರೊಂದಿಗೆಜೊತೆಗೂಡಿ ತೋಡಾರಿನಲ್ಲಿ ಪ್ರಾರಂಭಿಸಿದರು. ಬಳಗದಲ್ಲಿ ತರುಣರನ್ನು ಒಟ್ಟುಗೂಡಿಸಿ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು #28_ಸೇವಾ_ಕಾರ್ಯ ವನ್ನು ಮಾಡುವ ಮೂಲಕ ಬಡವರ, ಅನಾರೋಗ್ಯದಲ್ಲಿದ್ದ,ನೊಂದವರ ಕಣ್ಣೊರೆಸುವಕಾರ್ಯವನ್ನು ಮಾಡಿದರು. ಸುಮಾರು #8_ಲಕ್ಷಕ್ಕೂ_ಮಿಕ್ಕಿ_ಹಣವನ್ನು ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾದ ಮಾಣಿಕ್ಯ. ದೇವಸ್ಥಾನಗಳ ಬ್ರಹ್ಮಕಳಶ, ಮಹೋತ್ಸವ ಇರಲಿ, ಜಾತ್ರೆ ಇರಲಿ ಅಥವಾ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇವರ ತಂಡವುಸೇವಾ ಕಾರ್ಯದ ನಿಮಿತ್ತ ಹಾಜರಿರುತ್ತಿದ್ದರು. #ಭವತಿ_ಭಿಕ್ಷಾಂ_ದೇಹಿ ಎಂಬ ಯೋಜನೆಯಲ್ಲಿ ಬ್ರಹ್ಮ ಬೈದರ್ಕಳ ಗರಡಿ ಮಿಜಾರುಇಲ್ಲಿಯ ವಾರ್ಷಿಕ ಉತ್ಸವದಲ್ಲಿ,ಗುರುಪುರ ಬಂಡಿ ಜಾತ್ರೆಯಲ್ಲಿ,ದುರ್ಗಾ ಪರಮೇಶ್ವರಿ ದೇವಸ್ಥಾನ, ಇರುವೈಲು ಇದರ ಜಾತ್ರೆಯಸಂದರ್ಭದಲ್ಲಿ ಸುಮಾರು #2_ಲಕ್ಷಕ್ಕೂ ಅಧಿಕ ಧನ ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾಗಿದ್ದಾರೆ.

ತಂಡದಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿರುವುದ್ದಲ್ಲದೇ, ಪರೋಕ್ಷವಾಗಿ, ತಂಡದ ಸದಸ್ಯರಿಗೆ ಹಾಗೂ ಇತರರಿಗೂ ಸಹಾಯಮಾಡುತ್ತ,ನಿಸ್ವಾರ್ಥವಾದ ಸೇವೆಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ#ನವಚೇತನ_ಕಲಾ_ವೇದಿಕೆ ಸಂಸ್ಥೆಯನ್ನು ಪ್ರಾರಂಭಿಸಿ ತೆರೆಮರೆಯಲ್ಲಿ ಇರುವ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಕೂಡಮಾಡುತ್ತಿದ್ದಾರೆ.

ಸದಾ ನಿಸ್ವಾರ್ಥ ಮನೋಭಾವದ ವ್ಯಕ್ತಿಯಾದ ಇವರು ಎಲ್ಲರ ಆಪತ್ಕಾಲಕ್ಕೂ ನೆರವಾಗುತ್ತ,ತನ್ನೊಳಗೆ ನೋವು ಇದ್ದರೂ,ಬಡವರಮುಖದಲ್ಲಿ ನಗು ಕಾಣಬೇಕು ಎನ್ನುವ,ಯಾರಿಗೂ ಕೇಡನ್ನು ಬಯಸದ,ಸಹಾಯ ಹಸ್ತ ಚಾಚಿ ಬಂದವರಿಗೆ ಇಲ್ಲ ಎನ್ನದೆ ಕರ ಚಾಚಿನೀಡುವ ವ್ಯಕ್ತಿತ್ವದ, ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಮೇರು ವ್ಯಕ್ತಿತ್ವದ,

ಎಲ್ಲರೊಂದಿಗೆ ಆತ್ಮೀಯರಾಗಿ ಇದ್ದು ಕಷ್ಟ ಕಾಲಕ್ಕೂ ಸ್ಪಂದಿಸುವ #ಯುವ_ಚೇತನ ರಾಗಿದ್ದಾರೆ.

ನಿಸ್ವಾರ್ಥ ಮನಸ್ಸಿನ, ನೊಂದ ಜೀವಕ್ಕೆ ಆಸರೆಯಾಗುವ, ಎಲ್ಲರೊಂದಿಗೆ ಬೆರೆತು ನಾಯಕ  ಎನಿಸಿರುವ #ನವ_ಚೇತನ ಬಳಗದ#ಯುವ_ಚೇತನ ರಾದ ಸುಕೇಶ್ ಜಿ ಅಂಚನ್ ರವರು ನಮ್ಮ ಇಂದಿನ #ಪರಿಚಯ_ಸಂಚಿಕೆ ಚೇತನ ಆಗಿದ್ದಾರೆ.

ರಾಜೇಶ್ ಎಸ್ ಬಲ್ಯ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »