TOP STORIES:

ತನ್ನ ಸೇವಾ ತಂಡವನ್ನು ಒಟ್ಟುಸೇರಿಸಿ ಪರರ ಕಷ್ಟಗಳಿಗೆ ಸ್ಪಂದಿಸುವ,ಯುವ ಮನಸ್ಸಿನ ತೆರೆಮರೆಯ ಸೇವಾ ಮಾಣಿಕ್ಯ ಸುಕೇಶ್ ಜಿ ಅಂಚನ್.


ಮೂಡಬಿದ್ರೆ ತಾಲೂಕಿನ ತೋಡಾರಿನ ಗಿರಿಯ ಸುವರ್ಣ ಮತ್ತು ಗುಲಾಬಿ ದಂಪತಿಗಳ ನಾಲ್ಕನೇ ಪುತ್ರನಾಗಿ ಜನಿಸಿದರು. ತನ್ನಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ, ಬಂಗಾಬೆಟ್ಟು,ಪ್ರೌಢ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ಬಂಗಾಬೆಟ್ಟು,ಮಿಜಾರು ಇಲ್ಲಿ ಮುಗಿಸಿದರು.

ಬಡತನದಲ್ಲಿ ಹುಟ್ಟಿದ ಇವರು ಬಡವರ ಕಷ್ಟ ಏನೆಂದು ತಿಳಿದುಕೊಂಡಿದ್ದರು.ಕಷ್ಟದಲ್ಲೆ ಜೀವನ ಸಾಗಿಸುತ್ತಿದ್ದ ಇವರಿಗೆವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು ಆದರೆ, ಶಾಲೆಯ ದಿನಗಳಲ್ಲಿ ನಾಟಕ,ನೃತ್ಯ ಮತ್ತು ಇನ್ನಿತರ ಚಟುವಟಿಕೆಗಳಲ್ಲಿಭಾಗವಹಿಸುತ್ತಿದ್ದರು.

ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ, ಕೆಲಸವನ್ನು ಹುಡುಕುತ್ತಾ ಮಹಾನಗರವಾದ ಮುಂಬೈಗೆ ಹೋಗುತ್ತಾರೆ. ಚಿಕ್ಕಂದಿನಿಂದಲೇಕಷ್ಟ, ನೋವು ಏನೆಂದು ತಿಳಿದಿದ್ದ ಇವರಿಗೆ, ಬಡವರ ಪಾಲಿಗೆ ಆಸರೆಯಾಗಬೇಕು ಎನ್ನುವ ತವಕ ಅವರಲ್ಲಿ ಆಗಲೇ ಇತ್ತು. ಹಾಗೆಯೇಮುಂಬೈನಲ್ಲಿ ಕೆಲಸ ಮಾಡುತ್ತಾಲೆ,ಅಲ್ಲಿದ್ದ ನೊಂದವರಿಗೆ ಆಸರೆಯಾದರು.ಲಾಕ್ ಡೌನ್ ಸಂದರ್ಭದಲ್ಲಿ, ಮುಂಬೈನಲ್ಲಿಗೃಹಿಣಿಯೊಬ್ಬಳು ಸಂಕಷ್ಟದಲ್ಲಿದ್ದಾಗ ಅವರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸುವ ದೊಡ್ಡ ಕಾರ್ಯವನ್ನು ಮಾಡಿದವರು. ಅಷ್ಟಲ್ಲದೇ ಲಾಕ್ ಡೌನ್ ನಲ್ಲಿ ಹಲವು ಬಡವರಿಗೆ ತಮ್ಮ ಸ್ವಂತ ಖರ್ಚಿನಿಂದ ಕಿಟ್ ವಿತರಿಸಿ ನೊಂದವರ ಪಾಲಿಗೆ ಆಸರೆಯಾದರು.

ಮುಂದಿನ ದಿನಗಳಲ್ಲಿ ಮುಂಬೈನಿಂದ ಊರಿಗೆ ಬಂದ ಇವರು 21-05-2020 ರಂದು ಕನಸಿನ ಯೋಜನೆಯಾದ#ನವಚೇತನ_ಸೇವಾ_ಬಳಗ_(ರಿ.) ವನ್ನು ತಮ್ಮ ಆತ್ಮೀಯ ಗೆಳೆಯನಾದ ಜಯಂತ್ ಕೋಟ್ಯಾನ್ ಕುಕ್ಯಾಡಿಯವರೊಂದಿಗೆಜೊತೆಗೂಡಿ ತೋಡಾರಿನಲ್ಲಿ ಪ್ರಾರಂಭಿಸಿದರು. ಬಳಗದಲ್ಲಿ ತರುಣರನ್ನು ಒಟ್ಟುಗೂಡಿಸಿ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು #28_ಸೇವಾ_ಕಾರ್ಯ ವನ್ನು ಮಾಡುವ ಮೂಲಕ ಬಡವರ, ಅನಾರೋಗ್ಯದಲ್ಲಿದ್ದ,ನೊಂದವರ ಕಣ್ಣೊರೆಸುವಕಾರ್ಯವನ್ನು ಮಾಡಿದರು. ಸುಮಾರು #8_ಲಕ್ಷಕ್ಕೂ_ಮಿಕ್ಕಿ_ಹಣವನ್ನು ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾದ ಮಾಣಿಕ್ಯ. ದೇವಸ್ಥಾನಗಳ ಬ್ರಹ್ಮಕಳಶ, ಮಹೋತ್ಸವ ಇರಲಿ, ಜಾತ್ರೆ ಇರಲಿ ಅಥವಾ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇವರ ತಂಡವುಸೇವಾ ಕಾರ್ಯದ ನಿಮಿತ್ತ ಹಾಜರಿರುತ್ತಿದ್ದರು. #ಭವತಿ_ಭಿಕ್ಷಾಂ_ದೇಹಿ ಎಂಬ ಯೋಜನೆಯಲ್ಲಿ ಬ್ರಹ್ಮ ಬೈದರ್ಕಳ ಗರಡಿ ಮಿಜಾರುಇಲ್ಲಿಯ ವಾರ್ಷಿಕ ಉತ್ಸವದಲ್ಲಿ,ಗುರುಪುರ ಬಂಡಿ ಜಾತ್ರೆಯಲ್ಲಿ,ದುರ್ಗಾ ಪರಮೇಶ್ವರಿ ದೇವಸ್ಥಾನ, ಇರುವೈಲು ಇದರ ಜಾತ್ರೆಯಸಂದರ್ಭದಲ್ಲಿ ಸುಮಾರು #2_ಲಕ್ಷಕ್ಕೂ ಅಧಿಕ ಧನ ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾಗಿದ್ದಾರೆ.

ತಂಡದಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿರುವುದ್ದಲ್ಲದೇ, ಪರೋಕ್ಷವಾಗಿ, ತಂಡದ ಸದಸ್ಯರಿಗೆ ಹಾಗೂ ಇತರರಿಗೂ ಸಹಾಯಮಾಡುತ್ತ,ನಿಸ್ವಾರ್ಥವಾದ ಸೇವೆಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ#ನವಚೇತನ_ಕಲಾ_ವೇದಿಕೆ ಸಂಸ್ಥೆಯನ್ನು ಪ್ರಾರಂಭಿಸಿ ತೆರೆಮರೆಯಲ್ಲಿ ಇರುವ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಕೂಡಮಾಡುತ್ತಿದ್ದಾರೆ.

ಸದಾ ನಿಸ್ವಾರ್ಥ ಮನೋಭಾವದ ವ್ಯಕ್ತಿಯಾದ ಇವರು ಎಲ್ಲರ ಆಪತ್ಕಾಲಕ್ಕೂ ನೆರವಾಗುತ್ತ,ತನ್ನೊಳಗೆ ನೋವು ಇದ್ದರೂ,ಬಡವರಮುಖದಲ್ಲಿ ನಗು ಕಾಣಬೇಕು ಎನ್ನುವ,ಯಾರಿಗೂ ಕೇಡನ್ನು ಬಯಸದ,ಸಹಾಯ ಹಸ್ತ ಚಾಚಿ ಬಂದವರಿಗೆ ಇಲ್ಲ ಎನ್ನದೆ ಕರ ಚಾಚಿನೀಡುವ ವ್ಯಕ್ತಿತ್ವದ, ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಮೇರು ವ್ಯಕ್ತಿತ್ವದ,

ಎಲ್ಲರೊಂದಿಗೆ ಆತ್ಮೀಯರಾಗಿ ಇದ್ದು ಕಷ್ಟ ಕಾಲಕ್ಕೂ ಸ್ಪಂದಿಸುವ #ಯುವ_ಚೇತನ ರಾಗಿದ್ದಾರೆ.

ನಿಸ್ವಾರ್ಥ ಮನಸ್ಸಿನ, ನೊಂದ ಜೀವಕ್ಕೆ ಆಸರೆಯಾಗುವ, ಎಲ್ಲರೊಂದಿಗೆ ಬೆರೆತು ನಾಯಕ  ಎನಿಸಿರುವ #ನವ_ಚೇತನ ಬಳಗದ#ಯುವ_ಚೇತನ ರಾದ ಸುಕೇಶ್ ಜಿ ಅಂಚನ್ ರವರು ನಮ್ಮ ಇಂದಿನ #ಪರಿಚಯ_ಸಂಚಿಕೆ ಚೇತನ ಆಗಿದ್ದಾರೆ.

ರಾಜೇಶ್ ಎಸ್ ಬಲ್ಯ


Related Posts

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »