TOP STORIES:

FOLLOW US

”ಲೀಫ್ ಆರ್ಟ್’ ಎಂಬ ಕಲೆಯಿಂದ ಜನಮಣ್ಣನೆ ಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್


ಬಲ್ಲವನೇ ಬಲ್ಲ ಬೆಲ್ಲದ ರುಚಿಯಎಂಬಂತೆ ಒಬ್ಬ ಕಲಾವಿದನಿಗೆ ಮಾತ್ರ ಗೊತ್ತು ಕಲೆಯ ಬೆಲೆ. ಅವನಲ್ಲಿ ಮೂಡುವ ವಿಶಿಷ್ಟಚಟುವಟಿಕೆಯೇ ಕಲೆ ಎಂಬಂತೆ ಪೆನ್ಸಿಲ್ ಸ್ಕೆಚ್,ಪೈಂಟಿಂಗ್,ಚಿತ್ರಕಲೆ ಇವೆಲ್ಲವನ್ನು ಹೊರತುಪಡಿಸಿ ಪಚ್ಚನೆಯ ಪತ್ರೆಗಳಲ್ಲಿ ಹಲವಾರುನಗುಮುಖಗಳನ್ನು ಸೃಷ್ಟಿಸಿ ಅವುಗಳಿಗೆ ವಿಶೇಷವಾದ ಕಳೆಯನ್ನು ತುಂಬಿ ಇದೀಗಲೀಫ್ ಆರ್ಟ್ಎಂಬ ಕಲೆಯಿಂದ ಜನಮಣ್ಣನೆಪಡೆದಿರುವರು ಮೂಡುಬಿದಿರೆಯ ಅಕ್ಷಯ್ ಕೋಟ್ಯಾನ್.

   (Copyrights owned by: billavaswarriors.com )

ಲೀಫ್ ಆರ್ಟಿಸ್ಟ್ ಎಂದೇ ಪ್ರಸಿದ್ದಿ ಹೊಂದಿರುವ ಇವರು ಮೋಹನ್ ಬಿ.ಪೂಜಾರಿ ಮತ್ತು ಶೋಭಾ ದಂಪತಿಯ ಪುತ್ರ.ಪ್ರಾಂತ್ಯಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ,ಹೋಲಿ ರೋಸರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಮೂಡಬಿದಿರೆಯಆಳ್ವಾಸ್ ಕಾಲೇಜಿನಲ್ಲಿ ೩ನೇ ವರುಷದ  ವೀಷ್ಯುಲ್ ಆರ್ಟ್ಸ್ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.ಪೆನ್ಸಿಲ್ ಸ್ಕೆಚ್,ಸಾಬೂನಿನಲ್ಲಿದೇವರ ಕಲಾಕೃತಿ,ವಾಲ್ ಪೈಟಿಂಗ್,ರಂಗೋಲಿ ಮತ್ತು ಪೆನ್ಸಿಲ್ ಮೊನೆಯಿಂದ ಮೈಕ್ರೋ ಆರ್ಟ್ ಹೀಗೆ ಹಲವಾರು ಕಲೆಗಳನ್ನುಹೊಂದಿರುವ ಕಲಾಭಂಡಾರಿ ಎಂದೆನಿಸಿಕೊಂಡಿದ್ದಾರೆ.

   (Copyrights owned by: billavaswarriors.com )

ಪಚ್ಚೆ ಪತ್ರೆಗಳಲ್ಲಿ ಮೂಡಿದ ನಗುಮುಖಗಳು:

ಲಾಕ್ ಡೌನ್ ವೇಳೆ ಕೇವಲ ವೆಕ್ಟರ್ ಫಾರ್ಮ್ ನಲ್ಲಿ ಪೇಪರ್ ಕಟ್ಟಿಂಗ್ ಮಾಡುತ್ತಿದ್ದ ಇವರು ಎಲೆಗಳಲ್ಲೇಕೆ ಪ್ರಯತ್ನಿಸಬಾರದು ಎಂದುಕುತೂಹಲದಿಂದ ಒಂದ್ಹೆಜ್ಜೆ ಮುಂದಿಟ್ಟರು.ಮೊದಲ ಪ್ರಯತ್ನದಲ್ಲಿ ಸೋತರೂ ಎರಡನೇ ಬಾರಿ ರಶ್ಮಿಕಾ ಮಂದಣ್ಣರವರಮುಖಚಿತ್ರವನ್ನು ಎಲೆಯ ಮೇಲೆ ಬಿಡಿಸುವಲ್ಲಿ ಫಲಕಾರಿಯಾದರು.

ನಂತರ ಪ್ರಧಾನಮಂತ್ರಿಯಾದ ಶ್ರೀ ನರೇಂದ್ರ ಮೋದಿ, ಸಿ.ಎಂ ಬಿ.ಎಸ್ ಎಡಿಯೂರಪ್ಪ, ಡಾ.ವೀರೇಂದ್ರ ಹೆಗ್ಗಡೆ,ಸನ್ನಿಧ್ಪೂಜಾರಿ,ಹರೀಶ್ ಪೂಂಜ,ಶಾಸಕ ಉಮಾನಾಥ್ ಕೋಟ್ಯಾನ್,ಸಿನಿಮಾ ದಿಗ್ಗಜರಾದಸುದೀಪ್, ದರ್ಶನ್,ಜಗ್ಗೇಶ್ ಹೀಗೆ ಅನೇಕಕಲಾವಿದರ ,ಸಾಧಕರ ಮುಖಚಿತ್ರಗಳನ್ನು ಎಲೆಗಳಲ್ಲಿ ಬರೆದು ಒಂದು ವರುಷದಲ್ಲಿ ಒಟ್ಟು ೨೦೦ ಲೀಫ್ ಅರ್ಟ್ ಗಳನ್ನುತಯಾರಿಸಿದ್ದಾರೆ.

ಹಸಿರೆಲೆಗಳಲ್ಲಿ ಹಸನ್ಮುಖಗಳು ಅನಾವರಣಗೊಂಡಿದ್ದು ಹೇಗೆ?

ತಾಳ್ಮೆ ಮತ್ತು ಸಹನೆ ಇರುವವರಿಗೆ ಎಲ್ಲವೂ ಹೆದ್ದಾರಿಯಾಗುತ್ತದೆ ಎಂಬುದು ಕಲೆಯಲ್ಲಿ ಎದ್ದು ಕಾಣುತ್ತಿದೆ.”ಹೂವಿನಷ್ಟೇನಾಜ಼ೂಕಾದ ಎಲೆಗಳ ಮೇಲೆ ಯಾವುದೇ ಕಲಾಕೃತಿ ಬರೆಯಲು ರಿಂದ ಎರಡೂವರೆ ಗಂಟೆ ಬೇಕಾಗುತ್ತದೆ.ಇಲ್ಲಿ ತಮಗೆ ಬೇಕಾದಎಲೆಗಳನ್ನು ಆರಿಸಿಕೊಳ್ಳಬಹುದು.ನಾನು ಮೊದಲನೇ ಬಾರಿ ಹಲಸಿನ ಎಲೆಗಳನ್ನು ಬಳಸಿದೆ,ನಂತರ ಅಶ್ವಥ ಎಲೆಗಳನ್ನು ಜಾಸ್ತಿ ದಿನಸಂಗ್ರಹಿಸಬಹುದೆಂಬ ಕಾರಣಕ್ಕೆ ಅದನ್ನು ಬಳಸಲು ಮುಂದಾದೆ.ಮೊದಲಿಗೆ ಎಲೆಗಳ ಮೇಲೆ ಸ್ಕೆಚ್ ತಯಾರಿಸಿ ಅದರ ಮೇಲೆಕಟ್ಟಿಂಗ್ ಬ್ಲೇಡ್ ನಿಂದ ತಿರುವುಗಳನ್ನು ಬಿಡಿಸಿ ತದನಂತರ ಕಟ್ಟಿಂಗ್ ಮುಗಿಸಿದ ಮೇಲೆ ಎಲೆಯನ್ನು ಆಕಾಶದಾಚೆಗೆ ಎತ್ತಿ ಹಿಡಿದಲ್ಲಿಹೊಸ ವಿನ್ಯಾಸವೊಂದು ಮೂಡಿ ಬರುತ್ತದೆ.ಅದುವೇ ಲೀಫ್ ಆರ್ಟ್. ಇವುಗಳನ್ನು ಫ್ರೇಮ್ ಹಾಕಿ ಕೂಡಇಟ್ಟುಕೊಳ್ಳಬಹುದು.ಅನೇಕ ಸಮಾರಂಭಗಳಿಗೆ ಇದನ್ನು ಉಡುಗೊರೆಯಾಗಿಯೂ ಕೊಡಬಹುದು“‌ ಎನ್ನುತ್ತಾರೆ ಅಕ್ಷಯ್.

(Copyrights owned by: billavaswarriors.com )

ಲೀಫ್ ಆರ್ಟ್ ಕಲಾವಿದನ ಮನದ ಮಾತು:

ನನ್ನ ಪ್ರತಿ ಕಾರ್ಯದಲ್ಲಿ ನನಗೆ ಸಹಕರಿಸಿದವರು ನನ್ನ ಹೆತ್ತವರು,ಶಿಕ್ಷಕರು ಹಾಗೂ ಸ್ನೇಹಿತರು. ನನಗೆಂದೂ ಸ್ಪೂರ್ತಿಯಾದವರುವಿಲಾಸ್ ನಾಯಕ್.ಹಲವಾರು ಟಿ.ವಿ ಚಾನಲ್ ನವರು ಸಂದರ್ಶನ ಮಾಡಿದ್ದರಿಂದ ಇದೀಗ ಎಲ್ಲರೂಲೀಫ್ ಆರ್ಟಿಸ್ಟ್ಎಂದುಗುರುತಿಸುತ್ತಾರೆ.ಇದರಿಂದಾಗಿ ಲೀಫ್ ಆರ್ಟ್ ಗೆ ಸುಮಾರು ಬೇಡಿಕೆಗಳು ಸಹ ಬಂದಿವೆ.ನನ್ನ ಸಾಧನೆಯ ಹಾದಿಯಲ್ಲಿಬೆನ್ನೆಲುಬಾಗಿ ನಿಂತು ಸಹಕರಿಸಿದವರಿಗೆ ನಾನು ಸದಾ ಚಿರರುಣಿಎನ್ನುತ್ತಾರೆ ಅಕ್ಷಯ್.

ಸಂದ ಗೌರವಗಳು:

ಇವರ ಸಾಧನೆಯನ್ನು ಗುರುತಿಸಿ ವೀರಕೇಸರಿ ಬೆಳ್ತಂಗಡಿ ವತಿಯಿಂದಕಲಾರತ್ನ ಪುರಸ್ಕಾರಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಗೌರವಿಸಲಾಗಿದೆ.ಇದಲ್ಲದೆ‌ ಸಿ.ಎಂ.ಎಡಿಯೂರಪ್ಪರವರು ತನ್ನ ಶಿಕ್ಷಣಕ್ಕಾಗಿ ಒಂದು ಲಕ್ಷ ಮೊತ್ತವನ್ನ ಹಾಗೇಡಾ.ವೀರೇಂದ್ರ ಹೆಗ್ಗಡೆಯವರು ತನ್ನ ಕಲೆಯನ್ನು ಗುರುತಿಸಿ ಅವರೇ ಖುದ್ದಾಗಿ ವೀಡಿಯೋ ಮಾಡಿ ತನಗೆ ಆಶೀರ್ವದಿಸಿದ್ದು  ತನ್ನಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಅಕ್ಷಯ್ ರವರ ಅಭಿಪ್ರಾಯ.

ಜೀವನದ ಪಥದಲ್ಲಿ ಸಾಧನೆ ಎಂಬ ಕೀರ್ತಿಯನ್ನು  ತಮ್ಮದಾಗಿಸಿ ಇನ್ನಷ್ಟು ಜನಮನಗಳನ್ನು ಗೆದ್ದು ನಿಮ್ಮ ಕಲೆಯನ್ನು ಬೆಳೆಸಲುಇನ್ನಷ್ಟು ಅವಕಾಶ ದೊರೆಯಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾನಿಮ್ಮ ಮೇಲೆ ಇರೆಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

www.billavaswarriors.com


✍️
ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »