TOP STORIES:

FOLLOW US

60 ಹೆಚ್ಚು ಕೋವಿಡ್ ಮೃತರ ಶವ ಸಂಸ್ಕಾರ, ಕೊರೋನಾ ವಾರಿಯರ್‌ ನಾಗಾರ್ಜುನ್ ಪೂಜಾರಿ


ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್. ಪೂಜಾರಿ ಹಾಗೂ ಜಯ. ಡಿ. ಪೂಜಾರಿ. ರವರ ಪುತ್ರನಾಗಿದ್ದು, ಉಡುಪಿಯ ಗುಂಡಿಬೈಲಿನಲ್ಲಿ ನೆಲೆಸಿದ್ದಾರೆ. ಉಡುಪಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸತತ ಮೂರು – ನಾಲ್ಕು ತಿಂಗಳಿಂದ ಕೋರೋನಾ ಸೋಂಕಿತ ಮೃತದೇಹವನ್ನು ದಹನ ಮಾಡುವ ಕಾರ್ಯದಲ್ಲಿ ಮತ್ತೆರಡು ಜನ ಒಳಗೊಂಡ ತಂಡಕ್ಕೆ ಸಾರಥಿಯಂತೆ ಇದ್ದು ಅವರಿಗೂ ಧೈರ್ಯ ನೀಡುತ್ತ ಮಾನವೀಯತೆಯಿಂದ ನಿಸ್ವಾರ್ಥವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

ಕ್ರಿಕೆಟ್ ಲೋಕದ ಅತ್ಯದ್ಭುತ ಪ್ರತಿಭೆ ಕೂಡಾ ಹೌದು ನಾಗಾರ್ಜುನ್

ತನ್ನ ಹದಿಮೂರನೆಯ ವಯಸ್ಸಿಗೇ ದೊಡ್ಡಣಗುಡ್ಡೆ ಫ್ರೆಂಡ್ಸ್ ತಂಡದ ಮೂಲಕವಾಗಿ ಟೆನಿಸ್ ಕ್ರಿಕೆಟ್ ಗೆ ಪರಿಚಯ ಕಂಡು ನಂತರ ಗುರುಶ್ರೀ ಗುಂಡಿಬೈಲು ಹಾಗೂ ವಿಷ್ಣುಮೂರ್ತಿ ದೊಡ್ಡಣಗುಡ್ಡೆ, ಸಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ ಹಾಗೂ ಲೋಕಲ್ ಬಾಯ್ಸ್ ಉಡುಪಿ ತಂಡದ ಪರವಾಗಿ ಬಹಳಷ್ಟು ಪಂದ್ಯಾಟವನ್ನು ಗೆಲ್ಲಿಸಿಕೊಟ್ಟ ಕ್ರಿಕೆಟಿಗ.

ಜಿಲ್ಲೆ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಆಲ್-ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು. ಟೆನಿಸ್ ಕ್ರಿಕೆಟ್‌ನ ಜನಪ್ರಿಯ ತಂಡಗಳಾದ ಉಡುಪಿಯ ಎ.ಕೆ. ಸ್ಪೋರ್ಟ್ಸ್, ಉಡುಪಿ ಫ್ರೆಂಡ್ಸ್, ಬಿಬಿಸಿ ಅಗ್ರಹಾರ, ಸೈಮಂಡ್ಸ್ ಕಡಿಯಾಳಿ, ರಿಯಲ್ ಫೈಟರ್ಸ್ ನಂತಹ ತಂಡಗಳನ್ನು ಪ್ರತಿನಿಧಿಸಿ ಅಪಾರ ಯಶಸ್ಸನ್ನು ಕೂಡಾ ತನ್ನದಾಗಿಸಿಕೊಂಡಿದ್ದಾರೆ.

ಕರಾವಳಿಯ ಭಾಗದಲ್ಲಿ ಜನಪ್ರಿಯತೆಯನ್ನು ಪಡೆದಿರುವ 40 ಗಜಗಳ ಮಾದರಿಯ ಪಂದ್ಯಾಕೂಟಗಳಲ್ಲಿ ಆ ಪಂದ್ಯಾಕೂಟಗಳ ಶ್ರೇಷ್ಠ ತಂಡಗಳೆನಿಸಿಕೊಂಡ ಜಾನ್ಸನ್ ಕುಂದಾಪುರ, ಚಾಲೆಂಜ್ ಕುಂದಾಪುರ , ಈಗಲ್ಸ್ ಕುಂಭಾಶಿಯ ಪರವಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ.

2011 ರಿಂದ ಈಚೆಗೆ ತನ್ನನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ತನ್ನ ಸಾಧನೆಗಾಗಿ 350 +ಕ್ಕೂ ಮಿಗಿಲಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ, 170ಕ್ಕೂ ಹೆಚ್ಚು ಉತ್ತಮ ದಾಂಡಿಗ ಹಾಗೂ ಉತ್ತಮ ಬೌಲರ್ ಪ್ರಶಸ್ತಿ ಮತ್ತು 45 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಇವರ ಮುಡಿಗೇರಿದೆ.

ಉಡುಪಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡಕ್ಕೆ ಸತತ ಮೂರು ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ತನ್ನ ಉತ್ತಮ ರೀತಿಯ ದಾಂಡಿಗ ಹಾಗೂ ನಿಖರವಾಗಿ ಚೆಂಡನ್ನು ತಿರುಗಿಸಬಲ್ಲ ಚಾಣಾಕ್ಷ ಎಸೆತಗಾರನಾಗಿ ತನ್ನನ್ನು ಗುರುತಿಸಿಕೊಂಡು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿಕೊಂಡಿದ್ದಾರೆ.

“ಕೋರೋನಾ ಪ್ರಾರಂಭವಾದಾಗ ಪಾಸಿಟಿವ್ ಬಂದ ಪ್ರಕರಣದ ಶವವನ್ನು ಬೀಡಿನಗುಡ್ಡೆಯಲ್ಲಿ ಸುಡಲಾಗಿತ್ತು . ಇದು ಅಲ್ಲಿಗೆ ಬರುವ ಸಾರ್ವಜನಿಕರಿಗೆ ಆತಂಕ ಹುಟ್ಟಿಸಿತ್ತು. ಆದ್ದರಿಂದ ಇಂದ್ರಾಳಿಯಲ್ಲಿರುವ ಶವಾಗಾರವನ್ನು ಸ್ವಚ್ಛ ಗೊಳಿಸಿ ಅಲ್ಲಿ ಸುಡುವ ಕೆಲಸ ಆರಂಭಿಸಿದ್ದೆ. ಐವತ್ತು ಶವಗಳನ್ನ ಸಂಸ್ಕಾರ ಮಾಡುವವರೆಗೆ ಮನೆಯವರಿಗೂ ಗೊತ್ತಿರಲಿಲ್ಲ. ಇಲ್ಲಿ ಎರಡು ಹೆಣ ಸುಡುವ ಪೆಟ್ಟಿಗೆ ಇದೆ. ಈ ಹಿಂದೆ ಕೋವಿಡ್ ನಿಂದ ಮರಣ ಹೊಂದಿದವರನ್ನು ಹೂಳಲಾಗ್ತಾ ಇತ್ತು.

ಆದರೆ ಅದು ಹಿಂದುಗಳ ಕ್ರಮವಲ್ಲ. ಸತ್ತ ಮೇಲೆ ಮನೆಯವರು ಬೂದಿಯೂ ಸಿಕ್ಕಿಲ್ಲ ಎಂಬ ಪಶ್ಚಾತ್ತಾಪ ಪಡಬಾರದಲ್ಲ. ಪಿಪಿಇ ಕಿಟ್ ಬಳಸಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ, ಮನೆಯ ಒಳಗೆ ಹೋಗುವ ಮೊದಲು ನನ್ನ ಮತ್ತು ಮನೆಯವರ ಆರೋಗ್ಯದ ದೃಷ್ಟಿಯಿಂದ ಸ್ವಚ್ಚತೆಯನ್ನು ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ”.

“ಒಂದು ಹೆಣ ಸುಡಲು 350 ರಿಂದ 400 ಕೆಜೆ , ಅಂದರೆ ರೂ 1200 ಕಟ್ಟಿಗೆ ಬೇಕಾಗುತ್ತದೆ. ಕೆಲವರು ಶವ ಸಂಸ್ಕಾರಕ್ಕೆ ಹಣ ಕೊಡುತ್ತಾರೆ. ಇನ್ನು ಬಡವರು ಅಷ್ಟು ಶಕ್ತರಾಗಿರುವುದಿಲ್ಲ. ಆಗ ನಾವೇ ಮುಂದೆ ನಿಂತು ನಿಭಾಯಿಸುತ್ತೇವೆ. ಈ ಎಲ್ಲಾ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಇದೆ. ಕೊರೊನ ಸಂಕಷ್ಟ ಸಮಯದಲ್ಲಿ ಇದು ಒಂದು ಸಣ್ಣ ಸೇವೆ ಎಂದು ಕೆಲಸ ಮುಂದುವರಿಸಿದ್ದೇನೆ”, ಎನ್ನುತ್ತಾರೆ ನಾಗಾರ್ಜುನ್.

ಲಾಕ್ ಡೌನ್ ಶುರುವಾದಾಗಿನಿಂದ ಒಂದು ರಜೆಯ ನ್ನೂ ತೆಗೆದುಕೊಂಡಿಲ್ಲವಂತೆ ನಾಗಾರ್ಜುನ್. ಆಗಲೂ ಸ್ಯಾನಿಟೈಸೇಶನ್, ನಿರಾಶ್ರಿತರಿಗೆ ಊಟ ಕೊಡುವುದು ನಡೆದೇ ಇತ್ತು. ಅಲ್ಲದೇ ಪ್ರತಿ ದಿನ 10-30 ಮನೆಗಳಿಗೆ ಹೋಗಿ ಕೊರೋನಾ ಜಾಗ್ರತಿ ಮೂಡಿಸುವ ಕೆಲಸ ಕೂಡ ಮಾಡ್ತ ಇದ್ದಾರೆ.

ಇನ್ನು ನಿತ್ಯದ ಸೇವೆ ಹೊರತು ಪಡಿಸಿ ಕ್ರಿಕೆಟ್ ಆಡುವುದು ಇವರ ಆಸಕ್ತಿ. ಈಗ ಕೆಲಸದ ಒತ್ತಡದಿಂದ ಆಡಲು ಆಗುತ್ತಿಲ್ಲ. ಆದರೂ ಸ್ಥಳೀಯ ಕಡೆ ಕ್ರಿಕೆಟ್ ಪಂದ್ಯಾಟವಿದ್ದರೆ ಇವರು ಹಾಜರ್. ಇಷ್ಟು ಕೆಲಸ ನಿರಂತರ ಮಾಡುತ್ತಿದ್ದರೂ ಎಲೆ ಮರೆ ಕಾಯಿಯಂತೆ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.

Special: Billavaswarriors.com team


Share:

More Posts

Category

Send Us A Message

Related Posts

ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ  ಶ್ರೀ


Read More »

ಸೌದಿ ಬಿಲ್ಲವಾಸ್ ದಮ್ಮಾಮ್ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ


Share       ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.21ರಿಂದ 28ರವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾ ಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು. ಶುಕ್ರವಾರ ಗುರು ಪ್ರಾರ್ಥನೆ, ಪುಣ್ಯಾಹ ಹೋಮ,


Read More »

ಬಿಲ್ಲವ ಸಮಾಜ ಸೇವಾ ಸಂಘ ಪುಣೆ  ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ “ವಿಶ್ವ ಬಿಲ್ಲವ ಕ್ರಿಕೆಟ್” ಪಂದ್ಯಾಟದ


Share       ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ  ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ  ತಯಾರಿಯ ಬಗ್ಗೆ  ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ


Read More »

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


Share       ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್


Read More »

ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ


Share       ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ. MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman


Read More »