TOP STORIES:

ಚಳಿಗಾಲದಲ್ಲಿ ಸಿಹಿ ಪೊಟಾಟೋ ಪೌಷ್ಟಿಕಾಂಶ ಆಹಾರ


750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು.

 

ಆದಿ ಮಾನವರೂ ಕೂಡ ಕಾಡುಗಳಲ್ಲಿ ಸಿಗುತ್ತಿದ್ದ ಗಡ್ಡೆಯ ಗೆಣಸನ್ನು ತಿಂದು ಬದುಕು ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೆಣಸು ತಿಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ಕಾಡಬಹುದು ಎಂದು ಗೆಣಸಿನಿಂದ ದೂರ ಓಡುವವರೇ ಹೆಚ್ಚು. ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಸಿದರೆ ಪರಿಪೂರ್ಣ ಆಹಾರವಾಗಿಲಿದೆ. ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರದ ಸೇವನೆ ಅಗತ್ಯ. ಹೀಗಾಗಿ ಅದಕ್ಕೆ ಸಿಹಿ ಆಲೂಗಡ್ಡೆ ಅಥವಾ ಗೆಣಸು ಉತ್ತಮ ಆಹಾರವಾಗಿದೆ. ಇದರಲ್ಲಿ ಯಥೇಚ್ಛವಾದ ಕಾರ್ಬೋಹೈಡ್ರೇಟ್​, ಕೊಲೆಸ್ಟ್ರಾಲ್​ ಸೋಡಿಯಮ್​ನಂತಹ ಅಂಶಗಳು ಇರುತ್ತವೆ. ಇವು ದೇಹವನ್ನು ಬೆಚ್ಚಗಿರಿಸಿ, ಚಳಿಗಾಲದಲ್ಲಿ ಕಾಡುವ ಸುಸ್ತು ಹಾಗೂ ಇನ್ನಿತರ ಕಾಯಿಲೆಗಳಿಂದ ರಕ್ಷಿಸುತ್ತದೆ.

 

ಚಳಿಗಾಲದಲ್ಲಿ ಗಡ್ಡೆಗಳ ಬಳಕೆ ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ. ಉದಾಹರಣೆಗೆ ಬಿಟ್ರೂಟ್​, ಕ್ಯಾರೆಟ್​ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲಿ ಸಿಹಿ ಪೊಟಾಟೋ ಅಥವಾ ಗೆಣಸು ಕೂಡ ಹೌದು. ಈ ಕುರಿತು ಪೌಷ್ಟಿಕ ತಜ್ಞರಾದ ರಜುತಾ ದಿವೇಕರ್​ ಎನ್ನುವವರು ಗೆಣಸಿನ ಉಪಯೋಗಗಳನ್ನು ತಿಳಿಸಿದ್ದಾರೆ. 750BC ಯಿಂದಲೂ ಬಳಕೆಯಲ್ಲಿರುವ ಆಹಾರ ಗೆಣಸು. ಆದಿಮಾನವ ಕಾಡಿನಲ್ಲಿ ಹುಡುಕಿ ತಿನ್ನುತ್ತಿದ್ದು ಇದೇ ಗೆಣಸು. ಸಿಹಿ ಪೊಟಾಟೋ ಪೌಷ್ಟಿಕಾಂಶದ ಆಗರ ಎನ್ನುತ್ತಾರೆ ತಜ್ಞರು. ಹಸಿಯಾಗಿಯೂ ಸೇವಿಸಬಹುದಾದ ತರಕಾರಿ ಈ ಗೆಣಸು. ಅಲ್ಲದೆ ಇದನ್ನು ವಿವಿಧ ರೀತಿಯ ಸಿಹಿತಿನಿಸುಗಳನ್ನು ತಯಾರಿಸಿಯೂ ಸೇವಿಸಬಹುದು. ಆದ್ದರಿಂದ ಸಿಹಿ ಪೊಟಾಟೊ ಒಂದು ಪರಿಪೂರ್ಣ ಆಹಾರವಾಗಿದೆ.

 

ಗೆಣಸಿನ ಉಪಯೋಗಗಳು

ಮಧುಮೇಹಿಗಳಿಗೆ ಗೆಣಸು ಉತ್ತಮ ಆಹಾರವಾಗಿದೆ. ಅಲ್ಲದೆ ಬೊಜ್ಜು, ಪಿಸಿಒಡಿ ಸಮಸ್ಯೆ ಇರುವವರಿಗೆ ಉತ್ತಮ ನಾರಿನ ತರಕಾರಿಯಾಗಿದೆ.

ನೀವು ಜಿಮ್​ಗಳಿಗೆ ಹೋಗುವವರಾದರೆ ಅಥವಾ ಇನ್ನಿತರ ಟ್ರೈನಿಂಗ್​ಗಳಿಗೆ ತೆರಳುವವರಾದರೆ ಸಂಜೆ ಸಮಯದಲ್ಲಿ ಗೆಣಸು ಉತ್ತಮ ಸ್ನಾಕ್ಸ್​ ಆಗಲಿದೆ. ಗೆಣಸಿನ ಪರೋಟ ಅಥವಾ ಅದನ್ನು ಬೇಯಸಿ ಹಾಗೆಯೇ ತಿನ್ನಬಹುದು.

ಗೆಣಸಿನಲ್ಲಿ ಯಥೇಚ್ಛವಾದ ವಿಟಮಿನ್​ ಎ ಅಂಶವಿದೆ. ವಿಟಮಿನ್​ ಎ ರೋಗದ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಗೆಣಸು ನಿಮ್ಮ ದೇಹದ ಚರ್ಮವನ್ನು ಮೃದುಗೊಳಿಸುಲು ಸಹಾಯ ಮಾಡುತ್ತದೆ. ದೇಹ ಉಬ್ಬುವಿಕೆ, ಆಮ್ಲೀಯತೆಯಿಂದಲೂ ಇದು ರಕ್ಷಿಸಲಿದೆ.

ಗೆಣಸು ನಿಮಗೆ ನಿದ್ದೆ ಬರಲು ಸಹಾಯ ಮಾಡುತ್ತದೆ. ಹೀಗಾಗಿ ನೀವೇನಾದರೂ ನಿದ್ದೆಗಡುವ ಕೆಲಸವೇನಾದರೂ ಮಾಡಿದ್ದರೆ ಗೆಣಸಿನ ಖಾದ್ಯವನ್ನು ಸೇವಿಸಿ ಮಲಗಿ ನಿದ್ದೆ ಚೆನ್ನಾಗಿ ಬರಲಿದೆ.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »