TOP STORIES:

FOLLOW US

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಮುಂಬೈಯ ನಿಷ್ಠಾವಂತ ಪತ್ರಕರ್ತ ನವೀನ್ ಕೆ ಇನ್ನ ಆಯ್ಕೆ


ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು, ಕಳೆದ ಎರಡು ದಶಕಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿದೆ.
ಸಂಘವು ಪ್ರತಿ ವರ್ಷ ದತ್ತಿನಿಧಿ ಪ್ರಶಸ್ತಿಯನ್ನು ಪ್ರಧಾನಿಸುತ್ತಿದ್ದು ಈ ಬಾರಿಯ ನ್ಯಾಯವಾದಿ ಮಹಮ್ಮದ್ ಇಬ್ರಾಹಿಂ ಪಾರ ಸ್ವರಣಾರ್ಥ, ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ದುಬೈ ಅವರು ನೀಡುವ ದತ್ತಿನಿಧಿ ಪ್ರಶಸ್ತಿಗೆ ಮುಂಬಯಿಯ ಪ್ರಾಮಾಣಿಕ, ನಿಷ್ಠಾವಂತ ಪತ್ರಕರ್ತ ನವೀನ್ ಕೆ ಇನ್ನ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ ಜುಲೈ 13ರಂದು ಬೆಳ್ಳಿಗ್ಗೆ, ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಲಯನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್, ಕರ್ನಾಟಕ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ಉಪ ಸಭಾಪತಿ ಎಂ. ಕೆ. ಪ್ರಾಣೇಶ್, ಕರ್ನಾಟಕ ಮುಖ್ಯಮಂತ್ರಿಗಳ ಸಲಹೆಗಾರ ಕೆ ವಿ ಪ್ರಭಾಕರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾಸರಗೋಡು ಸಂಸದರಾದ ಮೋಹನ್ ಉಣ್ಣಿತ್ತಾನ್,ಕೇರಳ ಶಾಸಕ ಎನ್ ಎ ನೆಲ್ಲಿಕುನ್ನು ಮೊದಲಾದ ಗಣ್ಯರು ಪ್ರಶಸ್ತಿ ಪ್ರಧಾನಿಸಲಿರುವರು.
ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹೊಂದಿರುತ್ತದೆ.

ನವೀನ್ ಕೆ. ಇನ್ನ, ಪರಿಚಯ ಮತ್ತು ಸಾಧನೆ.

ಕಳೆದ 33 ವರ್ಷಗಳಿಂದ ಮುಂಬಯಿ ಮಹಾನಗರದ ದೈನಿಕ ಕರ್ನಾಟಕ ಮಲ್ಲ ದಲ್ಲಿ ವರದಿಗಾರನಾಗಿ, ಛಾಯಾಚಿತ್ರಗ್ರಾಹಕನಾಗಿ, ಜಾಹಿರಾತು ಪ್ರತಿನಿಧಿಯಾಗಿ, ಕ್ರೀಡಾ ಅಂಕಣ ಕಾರನಾಗಿ ಕಾರ್ಯನಿರ್ವಹಿಸುತ್ತಿರುವ ನವೀನ್ ಕೆ.ಇನ್ನ ಅವರು
ಸಮಾಜಮುಖಿ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವವರು. ಮುಂಬಯಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ಶ್ರಮಿಸುತ್ತಾ ಬಂದವರಲ್ಲಿ ಪ್ರಮುಖ ಸಾಲಲ್ಲಿ ನಿಲ್ಲುವ ಅರ್ಹತೆ ಪಡೆದವರು ನವೀನ್ ಕೆ.ಇನ್ನ. ಪತ್ರಿಕೆ ಮುಖೇನ
ಸಾಮಾಜಿಕ ,ಶೈಕ್ಷಣಿಕ, ವೈದ್ಯಕೀಯ ಸೇವೆ, ಮುಂಬಯಿ ಮಹಾನಗರದ ಹೆಚ್ಚಿನ ವಿವಿಧ ಜಾತೀಯ, ಸಂಘಟನೆ, ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ,ಕಲಾ ಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವವರು.

ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಲೇಖನಗಳು ಅಲ್ಲದೆ ಮುಂಬಯಿ ಮಹಾನಗರದ ಹಾಗೂ ತುಳುನಾಡಿನ ನೂರಾರು ಧಾರ್ಮಿಕ ಕ್ಷೇತ್ರಗಳ ಪರಿಚಯ ಲೇಖನಗಳು ಕರ್ನಾಟಕ ಮಲ್ಲದಲ್ಲಿ ಪ್ರಸಾರಮಾಡಿದವರು. ‘

ಪತ್ರಕರ್ತನಾಗಿ ಸಾಧನೆಗಳು:


‘ಬೀದಿಯಲ್ಲಿ ಅಣಕು ನಾಟಕವಾಗುತ್ತಿರುವ ಭೂತಾರಾಧನೆ’ ಎಂಬ ಲೇಖನಕ್ಕೆ ಓದುಗರಿಂದ ಪ್ರಶಂಸೆ ಹಾಗೂ ಬೆಂಬಲ ವ್ಯಕ್ತ. ಈ ಲೇಖನದ ಬಗ್ಗೆ ನೂರಕ್ಕೂ ಹೆಚ್ಚು ಮಿಕ್ಕಿ ಪತ್ರಗಳು ಬಂದಿದ್ದು ತುಂಬಾ ಚರ್ಚೆಗೆ ಕಾರಣವಾಯಿತು. ದೈವ ದೇವರುಗಳ ಬಗ್ಗೆ ಅನನ್ಯ ನಂಬಿಕೆ, ಭಕ್ತಿ ವಿಶ್ವಾಸ. ಮುಂಬಯಿ ಮಹಾನಗರದಲ್ಲಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದ ಮೂವರು ಎಳೆ ಪ್ರಾಯದ ಮಕ್ಕಳನ್ನು ಅವರವರ ಊರಿನ ಮನೆಗೆ ತಲುಪಿಸಿದ ತೃಪ್ತಿ.
ಸನ್ಮಾನ -ಪ್ರಶಸ್ತಿಗಳು- ಪತ್ರಕರ್ತರ ವೇದಿಕೆ(ರಿ) ಬೆಂಗಳೂರು ಉಡುಪಿ ಜಿಲ್ಲಾ ಘಟಕ ನೀಡುವ ರಾಜೇಶ ಶಿಬಾಜೆ ಗೌರವ.
ಇನ್ನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಸನ್ಮಾನ.
ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇವರಿಂದ ಯಕ್ಷ ರಕ್ಷಾ ಕಲಾ ಪ್ರಶಸ್ತಿ,
ಕಲಾಜಗತ್ತು ಮುಂಬಯಿ ಇವರಿಂದ ತೌಳವ ಶ್ರೀ ಪ್ರಶಸ್ತಿ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ 12ನೇಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇವರಿಂದ ಸನ್ಮಾನ
ಮುಂಬಯಿ ಮಹಾನಗರದ ಹಾಗೂ ನಾಡಿನ ಅನೇಕ ಧಾರ್ಮಿಕ ಸಾಮಾಜಿಕ ಸಂಸ್ಥೆಗಳಲ್ಲಿ‌ ಹಲವಾರು ಸನ್ಮಾನ, ಪ್ರಶಸ್ತಿಗಳು ಇವರ ಸಾಧನೆಗೆ ದೊರೆತಿವೆ.


Share:

More Posts

Category

Send Us A Message

Related Posts

ಬಂಟ್ವಾಳ: ಬಾಳೆಕಲ್ಲು ಗರಡಿಮನೆ ದೇವಕಿ ನಿಧನ


Share       ಬಂಟ್ವಾಳ: ಬಾಳೆಕಲ್ಲು ಗರಡಿಮನೆ ಶ್ರೀ ಕೊರಗಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ದೇವಕಿ(85 ವ ) ಇವರು 21.10.2024 ನೇ ಸೋಮವಾರ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಎರಡು


Read More »

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »