TOP STORIES:

FOLLOW US

ಕಂಬಳ ಲೋಕದ ಕಿಂಗ್‌ ‘ತಾಟೆ’: ₹ 8 ಲಕ್ಷಕ್ಕೂ ಅಧಿಕ ದರಕ್ಕೆ ಮಾರಾಟವಾಗಿದ್ದ ಕೋಣದ ಸಾಧನೆ ಏನು..?


ಮಂಗಳೂರು, ನವೆಂಬರ್‌ 6: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಋತುವಿನ ಆರಂಭದ ಎರಡೂಕಂಬಳಗಳು ಭರ್ಜರಿ ಯಶಸ್ಸುಗಳಿಸಿದೆ.

ಜೊತೆಗೆ ಕಂಬಳ ಕ್ಷೇತ್ರದ ಅತೀ ವೇಗದ ಓಟದ ಕೋಣ ಎಂಬ ಬಿರುದು ಪಡೆದತಾಟೆಎಂಬ ಕಂಬಳ ಕೋಣದ ಯಶಸ್ಸಿನನಾಗಲೋಟವೂ ಮುಂದುವರಿದಿದೆ. ಕಳೆದ ಎರಡು ಕಂಬಳದಲ್ಲೂ ಅಡ್ಡಹಲಗೆ ವಿಭಾಗದಲ್ಲಿತಾಟೆಕೋಣ ಪ್ರಥಮಸ್ಥಾನವನ್ನು ಪಡೆದಿದೆ.

ಕ್ರಿಕೆಟ್ ಲೋಕದ ದಿ ಬೆಸ್ಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಯಾದರೆ ಕಂಬಳ ಕ್ಷೇತ್ರದ ದಿ ಬೆಸ್ಟ್ ಫಿನೀಶರ್ ತಾಟೆಕೋಣ ಎನ್ನುವುದು ಕಂಬಳ ಕೂಟದ ಲಕ್ಷಾಂತರ ಮಂದಿ ಕಂಬಳ ಕೂಟದ ಅಭಿಮಾನಿಗಳ ಮಾತಾಗಿದೆ.


ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಮಾರಾಟವಾಗಿದ್ದ ತಾಟೆ

ಕೊನೆಯ ಹತ್ತು ಮೀಟರ್ ದೂರದಲ್ಲಿ ಗಾಳಿಯನ್ನು ಸೀಳಿ ಮುನ್ನುಗ್ಗುವ ತಾಟೆ ಎಲ್ಲರ ಹುಬ್ಬೇರಿಸುವಂತೆ ವಿಜಯದ ಗುರಿತಲುಪುತ್ತದೆ. ಇದೇ ಮಾದರಿಯಲ್ಲಿ ನೂರಾರು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಂಬಳ ಕ್ಷೇತ್ರಕ್ಕೆ ಹಗ್ಗ ಕಿರಿಯವಿಭಾಗದಲ್ಲಿ ಕಾಲಿಟ್ಟ ತಾಟೆ ಬಳಿಕ ಹಿಂದೆ ತಿರುಗಿ ನೋಡಲೇ ಇಲ್ಲ. ಹಗ್ಗ ಕಿರಿಯ ವಿಭಾಗದಲ್ಲಿ ನೂರಾರು ಪದಕಗಳನ್ನುಸಂಪಾದಿಸಿದ ಬಳಿಕ ನೇಗಿಲು ಹಿರಿಯ ವಿಭಾಗಕ್ಕೆ ಕಾಲಿಟ್ಟಾಗ ಎಂಟೂ ಮುಕ್ಕಾಲು ಲಕ್ಷ ರೂಪಾಯಿಗೆ ಕಂಬಳದ ಪ್ರಸಿದ್ಧಕೋಣಗಳ ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿಯವರ ಮಡಿಲು ಸೇರಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕೋಣಮಾರಾಟವಾಗಿದ್ದು ಕಂಬಳ ಕ್ಷೇತ್ರದಲ್ಲೇ ಭಾರಿ ಸಂಚಲನ ಮೂಡಿಸಿತ್ತು.

ಕಂಬಳದಲ್ಲಿ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಮೋಡಿ

ಇರುವೈಲುಗೆ ಬಂದ ಬಳಿಕ ಬೊಟ್ಟಿಮಾರ್ ಮತ್ತು ತಾಟೆ ಕೋಣಗಳ ಜೋಡಿ ಕಂಬಳ ಪ್ರೇಮಿಗಳನ್ನು ಮೋಡಿ ಮಾಡಿದೆ. ಹಲವುವರ್ಷಗಳ ಕಾಲ ಕೋಣಗಳ ಜೋಡಿ ಕಂಬಳ ಕೂಟದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬಾಚಿದೆ. 2019ರಲ್ಲಿ ಮಂಗಳೂರಿನಐಕಳದಲ್ಲಿ ನಡೆದ ಕಾಂತಾಭಾರೆ ಬೂಧಭಾರೆ ಜೋಡುಕರೆ ಕಂಬಳಕೂಟದಲ್ಲಿ ಕಂಬಳ ಇತಿಹಾಸದ ಅತೀ ವೇಗದ ಓಟ ಓಡಿದಖ್ಯಾತ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರ ಅಂದಿನ ಸಾಧನೆಗೆ ಕಾರಣ ಇದೇ ತಾಟೆ ಎನ್ನುವುದು ಕೂಡವಿಶೇಷವಾಗಿದೆ.

ತಾಟೆಯ ಓಟವನ್ನು ನೋಡಲೆಂದೇ ಕಂಬಳಕ್ಕೆ ಜನ ಸಾಗರ

ಕಂಬಳ ಕೂಟದಲ್ಲಿ ಎಲ್ಲರ ಕಣ್ಮನ ಸೆಳೆಯುವ ತಾಟೆ ಕೋಣ ಓಡುವ ರೀತಿಯೇ ಬಹಳ ವಿಶಿಷ್ಠವಾಗಿದೆ. ತಲೆ ಎತ್ತಿ ಓಡುವತಾಟೆ ವಿಜಯದ ಗುರಿಗೆ ಹಾರಿ ರೇಸ್‌ ಅನ್ನು ಅಂತಿಮ ಮಾಡುವುದೇ ವಿಶೇಷವಾಗಿದೆ. ಇಂದಿಗೂ ಜನ ಕಂಬಳಕ್ಕೆ ತಾಟೆಯಓಟವನ್ನು ನೋಡಲೆಂದೇ ಬರುವುದು. ಸದ್ಯ ನಾರಾವಿ ಯುವರಾಜ ಜೈನ್ ಅವರ ಯಜಮಾನಿಕೆಯ ತಂಡದಲ್ಲಿರುವ ತಾಟೆ, ಅಡ್ಡ ಹಲಗೆ ವಿಭಾಗದಲ್ಲಿ ಎರಡೂ ಕಂಬಳ ಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿ ಯಜಮಾನನ ನಂಬಿಕೆ ಉಳಿಸಿದೆ.

ತಾಟೆ ಓಟ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಒಟ್ಟಿನಲ್ಲಿ ಕರಾವಳಿಯಲ್ಲಿ ಕಂಬಳ ರಂಗು ಹೆಚ್ಚಾಗಿದೆ. ಓಟಗಾರನ ಪ್ರಸಿದ್ಧಿಗೆ ಓಡುವ ಕೋಣದ ಪ್ರಸಿದ್ಧಿಯೇಜಗದಗಲವಾಗಿದ್ದು ಕಂಬಳದ ಮೇಲಿರುವ ಜನರ ಪ್ರೀತಿಗೆ ಸಾಕ್ಷಿಯಾಗಿದೆ. ತಾಟೆಯ ಓಟದ ವಿಡಿಯೋಗಳು ಸಾಮಾಜಿಕಜಾಲತಾಣದಲ್ಲಿ, ರೀಲ್ಸ್‌ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಚಿಗರೆಯ ಓಟದ ತಾಟೆಯನ್ನು ಅಭಿಮಾನಿಗಳು ಪ್ರೀತಿಯಿಂದಕಿಂಗ್ ತಾಟೆ ಎಂದು ಬಿರುದು ನೀಡಿ ಅಭಿಮಾನ ತೋರಿಸಿದ್ದಾರೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »