TOP STORIES:

ಮನ್ಸೂನ್​ನಲ್ಲಿ ಕಾಡುತ್ತಿದ್ಯಾ ಕೀಲು ನೋವು; ಇಲ್ಲಿದೆ ಇದಕ್ಕೆ ಪರಿಹಾರ


ಬೆಂಗಳೂರು: ಮಳೆಗಾಲದಲ್ಲಿ ಕೆಲವು ಮಂದಿಗೆ ಕೀಲು ನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಅವಧಿಯಲ್ಲಿ ನೋವು ಉಲ್ಬಣಗೊಳ್ಳಲು ನಿಖರವಾದ ಕಾರಣ ತಿಳಿದಿಲ್ಲ.

ಸಂಶೋಧನೆಗಳು ಕೂಡ ಈ ಬಗ್ಗೆ ಹೆಚ್ಚು ಸ್ಪಷ್ಟವಾಗಿ ತಿಳಿಸಿಲ್ಲ. ಮಳೆಗಾಲದಲ್ಲಿ ಈ ನೋವು ಹೆಚ್ಚು ಎಂದು ಕೆಲವು ಅಧ್ಯಯನಗಳು ವಾದಿಸಿದರೆ, ಮತ್ತೆ ಕೆಲವು ಅಧ್ಯಯನಗಳು ಈ ಆರೋಪವನ್ನು ತಳ್ಳಿಹಾಕುತ್ತದೆ. ಆದರೆ, ತಜ್ಞರ ಪ್ರಕಾರ, ಪರಿಸರದಲ್ಲಿನ ಬದಲಾವಣೆಗಳು ಕೀಲು ನೋವಿಗೆ ಪ್ರಮುಖ ಕಾರಣವಾಗಿದೆ.

ಮಳೆಗಾಲದಲ್ಲಿ ಪರಿಸರದಲ್ಲಿನ ವಾಯುವಿನ ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿನ ಗಾಳಿಯ ಒತ್ತಡವೂ ಈ ಋತುಮಾನದಲ್ಲಿ ಕಡಿಮೆಯಾಗುತ್ತದೆ. ಫಲಿತಾಂಶವಾಗಿ ಕೀಲುಗಳ ಸುತ್ತಲು ಇರುವ ಸ್ನಾಯು, ಅಸ್ಥಿರಜ್ಜು ಮತ್ತು ಇನ್ನಿತರೆ ಟಿಶ್ಯೂಗಳ ಮೇಲೆ ಒತ್ತಡ ಬೀಳುತ್ತದೆ. ಇದು ಕೀಲು ನೋವಿಗೆ ಕಾರಣವಾಗುತ್ತದೆ. ಸಂಧಿವಾತದೊಂದಿಗೆ ಬಳಲುತ್ತಿರುವ ಮಂದಿ ಅಥವಾ ಇತರೆ ದೀರ್ಘ ನೋವಿನ ಅನುಭವ ಹೊಂದಿರುವವರು ಇದರಿಂದ ಕಿರಿಕಿರಿ ಅನುಭವಿಸುತ್ತಾರೆ. ವಾತಾವರಣ ಸರಿ ಹೋದಂತೆ ಗಾಳಿಯ ಒತ್ತಡವೂ ಹೊಂದಾಣಿಕೆಯಾಗುತ್ತದೆ. ಇದರಿಂದ ನೋವು ಕೂಡ ಕಡಿಮೆಯಾಗುತ್ತದೆ. ಕೀಲು ನೋವಿಗೆ ಇದು ಮಾತ್ರವಲ್ಲದೇ, ಇನ್ನಿತರೆ ಕಾರಣಗಳು ಸಹ ಇವೆ.

ಮಳೆ ವಾತಾವರಣದಿಂದ ಮನೆಯಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಮನೆಯಲ್ಲಿಯೇ ದೀರ್ಘಕಾಲ ಇರಬೇಕಾಗುತ್ತದೆ. ಮನೆಯಲ್ಲೇ ದೀರ್ಘಕಾಲ ಕುಳಿತಿರುವ ಕಾರಣ ಸ್ನಾಯು ಮತ್ತು ಕೀಲುಗಳು ಜಡತ್ವಗೊಂಡು ನೋವು ಹೆಚ್ಚುತ್ತದೆ.

ಮೋಡ ಕವಿದ ವಾತಾವರಣದಿಂದ ನಿಮ್ಮ ಮನಸ್ಥಿತಿ ಕೂಡ ಬದಲಾಗಬಹುದು. ಇದರಿಂದ ನಿಮ್ಮ ಗಮನ ನೋವಿನಂತಹ ನಕಾರಾತ್ಮಕ ಅಂಶಗಳಿಗೆ ಹೆಚ್ಚು ಹೋಗುತ್ತದೆ. ನೋವಿನ ಬಗ್ಗೆ ಹೆಚ್ಚು ಯೋಚಿಸಿದಂತೆ ಅದು ಮತ್ತಷ್ಟು ಕೆಟ್ಟದಾಗಬಹುದು.

ಅನೇಕ ಮಂದಿಗೆ ಮಳೆ ಬಂದರೆ ನೋವು ಹೆಚ್ಚಿದಂತೆ ಎಂಬ ಅಂಶ ತಲೆಯಲ್ಲಿ ಹೊಕ್ಕಿರುತ್ತದೆ. ಅವರ ಮನಸ್ಥಿತಿ ಅನುಸಾರವಾಗಿ ಕೂಡ ಅನೇಕ ಬಾರಿ ನೋವು ಹೆಚ್ಚುತ್ತದೆ.

ನೋವು ಕಡಿಮೆ ಮಾಡುವುದು ಹೇಗೆ? ಸಂಶೋಧನೆಗಳು ಮಳೆಗಾಲದಲ್ಲಿ ಕೀಲು ನೋವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತು ಮಾಡಲಿ, ಬಿಡಲಿ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಮುಖ್ಯವಾಗುತ್ತದೆ. ಹವಾಮಾನ ಬದಲಾಗುತ್ತಿದ್ದಂತೆ ಈ ಬಗ್ಗೆ ಕ್ರಮವಹಿಸಿ.

ಸ್ನಾಯು ಮತ್ತು ಮೂಳೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

ನಡೆದಾಡುವುದಕ್ಕಿಂತ ಒಟ್ಟಿಗೆ ಕುಳಿತುಕೊಳ್ಳುವುದು ಉತ್ತಮ. ನೀವು ಹೊರಗೆ ಹೋಗಲು ಸಾಧ್ಯವಾಗದೇ ಇದ್ದರೆ, ಮನೆಯ ಒಳಗಡೆಯೇ ಓಡಾಡಿ. ಟ್ರೆಡ್​ ಮಿಲ್​ನಲ್ಲಿ ವಾಕಿಂಗ್​ ಮಾಡುವುದು ಉತ್ತಮವಾಗಿರಲಿದೆ.

ತೂಕ ಹೆಚ್ಚಳ ಕೂಡ ಕೀಲು, ಸಂಧಿಗಳ ಮೇಲೆ ಒತ್ತಡ ಹೆಚ್ಚಾಗಿ ನೋವಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆ ತೂಕವನ್ನು ಕಡಿಮೆ ಮಾಡಿ. ಸಾಮಾನ್ಯ ತೂಕವನ್ನು ನೀವು ಹೊಂದಿದ್ದರೆ, ಅದನ್ನು ಹೆಚ್ಚಿಸಿ.

ಶಾಖ ಕೂಡ ಅನೇಕ ಬಾರಿ ನೋವಿನ ಉಪಶಮನ ಮಾಡುತ್ತದೆ. ಈ ಹಿನ್ನೆಲೆ ನೋವು ಇರುವ ಪ್ರದೇಶದಲ್ಲಿ ಬಿಸಿ ನೀರನ್ನು ಹಾಕಿಕೊಳ್ಳುವುದು ಉತ್ತಮ ಮಾರ್ಗವಾಗಿರಲಿದೆ. ಅಥವಾ ಆ ಪ್ರದೇಶದಲ್ಲಿ ಬಿಸಿ ನೀರಿನಲ್ಲಿ ಮುಳುಗಿ ಏಳಿಸಿದ ಟವೆಲ್​ ಅನ್ನು ಅನ್ನು ಇಡುವುದು ಆರಾಮದಾಯವಾಗಬಹುದು. ಸಾಧ್ಯವಾದರೆ, ಹೀಟಿಂಗ್​ ಪಾಡ್ಸ್​ ಅನ್ನು ಬಳಸಬಹುದು. ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ನೋವು ಕಡಿಮೆ ಮಾಡಲಿದೆ.

ಹೊಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ, ಕೀಲುಗಳು ಸರಿಯಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮಳೆಗಾಲದಲ್ಲೂ ಸಾಕಷ್ಟು ಪ್ರಮಾಣದ ನೀರು ಸೇವಿಸುವುದು ಉತ್ತಮ.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »