TOP STORIES:

FOLLOW US

ಮುಂಬೈಗರ ಮನಗೆದ್ದ ಗೋವಿಂದ ಬಾಬು ಪೂಜಾರಿ


ಕರುನಾಡ ಕರುಣೆಯ ಕಾಮಧೇನು ಹಾಗೂ ನನ್ನ ಆತ್ಮೀಯರಾದ ಶ್ರೀ ಗೋವಿಂದ ಬಾಬು ಪೂಜಾರಿಯವರೇ,ನಿನ್ನೆ ಮುಂಬೈ ಬಿಲ್ಲವಭವನದಲ್ಲಿ ನಿಮಗೆ ಆಯೋಜಿಸಿದ ಗೌರವ ಪೂರ್ಣ ಸನ್ಮಾನಕ್ಕೆ ನಾವೆಲ್ಲ ಸಂಭ್ರಮ ಪಟ್ಟಿದ್ದೇವೆ.

ಹೌದು,

ನಿನ್ನೆ ನಾನಲ್ಲಿರಬೇಕಿತ್ತು

ಆದರೆ ಇರಲಾಗಲಿಲ್ಲ.

ನಿಮ್ಮ ಜೊತೆಗೆ ಮಾತಾಡುವ,ನಿಮ್ಮ ಮಾತಿಗೆ ಕಿವಿಯಾಗುವ ಅವಕಾಶಕ್ಕೆ ಅನಾನುಕೂಲ ಅಡ್ಡಿ ಆಯಿತು.ಮುಂಬೈಯಿಂದ ದೂರದಗುಜರಾತ್ ಅಹಮದ್ ನಗರಕ್ಕೆ ಬಂದಿದ್ದೆ.ಇಲ್ಲಿ ಕೊರೆಯುವ ಹಿಮದ ಚಳಿ.ಅದರ ತೀವ್ರತೆಗೆ ಜ್ವರ ಬಿಟ್ಟು ಹೋಗಲಾರೆ ಅನ್ನುತ್ತಿದೆ.

ನಿಮಗೆ ಸಿಗದೆ ಇದ್ದುದಕ್ಕೆ ಬೇಸರವಿದೆ.

ಇಂತಹ ಕಾರ್ಯಕ್ರಮಗಳಿಗೆ ಕಾರಣ ಹೇಳಿ ತಪ್ಪಿಸಿಕೊಳ್ಳಬಾರದು.

ಗೋವಿಂದ್ ಅಣ್ಣ ನಿನ್ನೆ ನಿಮ್ಮ ಸನ್ಮಾನ ವಾಚನದ ವೇಳೆ ಜನರ ಕಿವಿಗಡಚಿಕ್ಕುವ ಚಪ್ಪಾಳೆಗೆ ಇಡೀಯ ಸಭಾಂಗಣ ಸಾಕ್ಷಿಆಯಿತು.ನೀವು ಬದುಕಿನ ಹಾದಿಯಲ್ಲಿ ನಡೆದು ಬಂದ ಗಳಿಗೆಗಳ ಒಂದೊಂದು ಹೆಜ್ಜೆಗಳು ಅಲ್ಲಿ ಅನಾವರಣವಾಯಿತು.

ಹೊತ್ತಿನಲ್ಲಿಯೂ

ನಿಮ್ಮ ಮುಖದಲ್ಲಿ ಇದ್ದದ್ದು  ಮಂದಹಾಸ ಬಿಟ್ಟರೇ,ಅಹಂಕಾರದ ಲವಲೇಶವೂ ಇರಲಿಲ್ಲ.

ನನ್ನ ಅನೇಕ ಸ್ನೇಹಿತರು ಇವತ್ತು ಕಾಲ್ ಮಾಡಿ ನಿಮ್ಮ ಸರಳತೆಯ ಬಗ್ಗೆ ಸೌಜನ್ಯತೆಯ ಬಗ್ಗೆ ಮಾತನಾಡಿದರು.

ಬದುಕಿದರೆ ನಿಮ್ಮಂತೆ ಬದುಕಬೇಕು ಅಂದರು.ಅವರೆಲ್ಲರಿಗೂ ನೀವು ಸ್ಫೂರ್ತಿ ಆದಿರಿ.ಅನೇಕರನ್ನು ಕರೆದು ನಿಮ್ಮೊಂದಿಗೆ ನಾನಿದ್ದೇನೆಅನ್ನುವ ದೈರ್ಯದ ಮಾತುಗಳನ್ನು ಆಡಿದ್ದು ತಿಳಿಯಿತು.ಅಂತಹ ಸಾಂತ್ವನ ನಿಮ್ಮಂತವರು ಮಾತ್ರ ಕೊಡಲು ಸಾಧ್ಯ ಗೋವಿಂದ ಅಣ್ಣ.

ಹಣ ಗಳಿಸುವುದು,ಅಂತಸ್ತನ್ನು ಸಂಪಾದಿಸುವುದು ಬಂಗ್ಲೆ ಕಾರುಗಳನ್ನು ಖರೀದಿಸುವುದು ವಿಶೇಷವಲ್ಲ.ಆದರೆ ಜನರ ಪ್ರೀತಿಯನ್ನುಗಳಿಸುವುದು ಅದರಲ್ಲೂ ಅನ್ಯ ರಾಜ್ಯದಲ್ಲಿ ಇಲ್ಲಿನವರ ಅಭಿಮಾನಕ್ಕೆ ಪಾತ್ರರಾಗುವುದಿದೆಯಲ್ಲಾ ಅದು ಸರ್ವಶ್ರೇಷ್ಠ.ಮಾನವೀಯತೆಮತ್ತು ಪ್ರಾಮಾಣಿಕತೆ ನಿಮ್ಮ ಮೂಲ ಗುಣಗಳು.

ಅದನ್ನು ನಿನ್ನೆ ಮುಂಬೈಯ ಜನ ಗುರುತಿಸಿದ್ದಾರೆ.

ನಿಮ್ಮನ್ನು ಬೇಟಿಯಾಗದೆ ಇದ್ದುದಕ್ಕೆ ಕ್ಷಮೆ ಕೋರುತ್ತಾ,ನಾನಿದ್ದಲ್ಲಿಗೆ ಬಂದಾಗ ನಾನು ನಿಮಗೆ ಸಿಗಲಿಲ್ಲ.ಆದರೆ ಕೆಲವೇ ಕೆಲವುದಿನಗಳಲ್ಲಿ ನಾನು ನೀವು ಇದ್ದಲ್ಲಿಗೆ ಅಂದರೇ ಬೆಂಗಳೂರಿಗೆ ಬಂದು ನಿಮ್ಮ ಜೊತೆಗೊಂದಿಷ್ಟು ಹೊತ್ತು ಇದ್ದು ಬರಲುತೀರ್ಮಾನಿಸಿದ್ದೇನೆ….

ನಿಮ್ಮನ್ನು ಸನ್ಮಾನಿಸಿದ ಬಿಲ್ಲವರ ಅಸೋಸಿಯೇಷನ್ ನನ್ನೆಲ್ಲ ಆತ್ಮೀಯ ಬಳಗಕ್ಕೆ ವಂದಿಸುತ್ತಾ,ನಿಮ್ಮ ಪ್ರೀತಿಗೆ ತಲೆಬಾಗುತ್ತಾ,

ನಿಮ್ಮ ಸಲಹೆ ಸಹಕಾರ ಯಾವತ್ತೂ ಹೀಗೆಯೇ ಇರಲಿ ಎಂದು ಆಶಿಸುವ

ಇಂತೀ ನಿಮ್ಮವ,

✍️ಉದಯ್ ಕುಂದಾಪುರ

             (ಮುಂಬೈ)


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »