TOP STORIES:

ಸುವರ್ಣ ನ್ಯೂಸ್ ವರದಿಗಾರ ಭರತ್ ರಾಜ್ ಸನಿಲ್ ಗೆ TNIT ಬೆಸ್ಟ್ ರಿಪೋರ್ಟರ್ ಪ್ರಶಸ್ತಿ


ಮಾಧ್ಯಮ ಕ್ಷೇತ್ರದ ಸಾಧನೆಗೆ ಮಂಗಳೂರಿನ ಭರತ್ ರಾಜ್ ಗೆ ಬೆಸ್ಟ್ ರಿಪೋರ್ಟರ್ ಪ್ರಶಸ್ತಿ

ಮಂಗಳೂರು: ಮಾಧ್ಯಮ ಕ್ಷೇತ್ರದ ಸಾಧನೆ ಪರಿಗಣಿಸಿ ಕೊಡಲಾಗುವ ದಿ ನ್ಯೂ ಇಂಡಿಯನ್ ಟೈಮ್ಸ್ ಅವಾರ್ಡ್ಸ್ ನಲ್ಲಿ (The New India Time Award) ಏಷ್ಯಾನೆಟ್ ಸುವರ್ಣ ನ್ಯೂಸ್ ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರ ಭರತ್ ರಾಜ್ ಗೆ ಉತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಒಲಿದಿದೆ.

x

 

ಸತತ ನಾಲ್ಕನೇ ಆವೃತ್ತಿಯ TNIT ಮೀಡಿಯಾ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನ (Bengaluru ) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಮಂಗಳೂರಿನ ಕುಂಪಲ ನಿವಾಸಿಯಾದ ಭರತ್ ರಾಜ್.ಕೆ.ಸನಿಲ್, ಪ್ರಸ್ತುತ ಏಷ್ಯಾನೆಟ್ ಸುವರ್ಣ ನ್ಯೂಸ್ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟು 12 ವರ್ಷ ಸಂದಿದ್ದು, ಜಯಕಿರಣ ಕನ್ನಡ ದಿನಪತ್ರಿಕೆಯಲ್ಲಿ 5 ವರ್ಷ, ಬಿಟಿವಿ ನ್ಯೂಸ್ ನಲ್ಲಿ 3 ವರ್ಷ, ಪ್ರಸ್ತುತ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ 4 ವರ್ಷದಿಂದ ವರದಿಗಾರನಾಗಿದ್ದಾರೆ. ದ‌.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಂಡಿತ್ ಹೌಸ್ ನಲ್ಲಿ ಹುಟ್ಟಿದ ಭರತ್ ರಾಜ್, ಪ್ರಸ್ತುತ ಮಂಗಳೂರು ತಾಲೂಕಿನ ಕುಂಪಲ ಎಂಬಲ್ಲಿ ವಾಸ. ಎಸ್ಸೆಸ್ಸೆಲ್ಸಿವರೆಗೆ ಮಂಗಳೂರು ತಾಲೂಕಿನ ಬಬ್ಬುಕಟ್ಟೆ ಪ್ರೌಢಶಾಲೆಯಲ್ಲಿ ಶಿಕ್ಷಣ. ಆ ಬಳಿಕ ಉಳ್ಳಾಲದ ಭಾರತ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ. ಪಿಯುಸಿ ವೇಳೆ ಬೆಳಿಗ್ಗೆ ಹಾಲು ಪೇಪರ್ ಹಾಕಿಕೊಂಡು ದುಡಿಮೆ. ನಂತರ ಕುಟುಂಬದ ತೀವ್ರ ಆರ್ಥಿಕ ಸಮಸ್ಯೆಯಿಂದ ಓದು ಮುಂದುವರೆಸಲಾಗದೇ ಕೊರಿಯರ್ ಡೆಲಿವರಿ ಬಾಯ್ ಕೆಲಸಕ್ಕೆ ಸೇರ್ಪಡೆ. ಈ ವೇಳೆ ಓದಿನ ಆಸಕ್ತಿ ಇದ್ದ ಕಾರಣ ಮಂಗಳೂರಿನ ಬೆಸೆಂಟ್ ಸಂಜೆ ಕಾಲೇಜಿನಲ್ಲಿ ರಾತ್ರಿ ಕಲಿಕೆಯಲ್ಲಿ ದ್ವಿತೀಯ ಪಿಯುಸಿ ಪೂರ್ಣ. ಹಗಲಿನಲ್ಲಿ ಕೆಲಸ ‌ಮುಂದುವರೆಸಿಕೊಂಡೇ ಪಿಯುಸಿ ಪೂರ್ಣ. ಸಂಜೆ ಕಾಲೇಜಿನ ಶಿಕ್ಷಣದ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಮೆ.

ಪತ್ರಿಕೋದ್ಯಮಕ್ಕೆ ಪ್ರವೇಶ:

ಹಗಲು ಕೆಲಸ, ಸಂಜೆ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗಲೇ ಪತ್ರಿಕೋದ್ಯಮದ ಕಡೆಗೆ ಸೆಳೆತ. ಸಂಜೆ ಕಾಲೇಜಿನಲ್ಲಿ ಪಿಯುಸಿ ಮುಗಿದ ಬೆನ್ನಲ್ಲೇ ಮಂಗಳೂರಿನ ಜಯಕಿರಣ ದಿನಪತ್ರಿಕೆಯಲ್ಲಿ ರಾತ್ರಿ ಉಪಸಂಪಾದಕನಾಗಿ ಕೆಲಸಕ್ಕೆ ಸೇರ್ಪಡೆ. 18ನೇ ವಯಸ್ಸಿನಲ್ಲೇ ಜಯಕಿರಣ ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ ಆರಂಭ. ಎರಡು ವರ್ಷ ಉಪಸಂಪಾದಕನಾಗಿದ್ದವನಿಗೆ ವರದಿಗಾರನಾಗಿ ಭಡ್ತಿ. ಆ ಬಳಿಕ ಅದೇ ಪತ್ರಿಕೆಯಲ್ಲಿ ಮೂರು ವರ್ಷಗಳ ಕಾಲ ಮಂಗಳೂರು ನಗರ ವರದಿಗಾರನಾಗಿ ಕೆಲಸ. ‌ಸುಮಾರು ಐದು ವರ್ಷಗಳ ಕಾಲ ಜಯಕಿರಣ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ. ಈ ಹೊತ್ತಲ್ಲೇ 2014ರಲ್ಲಿ ಆರಂಭವಾದ ಕನ್ನಡ ನ್ಯೂಸ್ ಚಾನೆಲ್ ಬಿಟಿವಿ ನ್ಯೂಸ್ ಗೆ ದ.ಕ ಜಿಲ್ಲಾ ವರದಿಗಾರನಾಗಿ ಆಯ್ಕೆ. ಬಿಟಿವಿ ಜಿಲ್ಲಾ ‌ವರದಿಗಾರನಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ. ಆ ಬಳಿಕ 2017ರಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಸೇರ್ಪಡೆ. ಪ್ರಸ್ತುತ ನಾಲ್ಕು ವರ್ಷಗಳಿಂದ ಏಷ್ಯಾನೆಟ್ ಸುವರ್ಣ ‌ನ್ಯೂಸ್ ನಲ್ಲಿ ದ.ಕ ಜಿಲ್ಲಾ ವರದಿಗಾರರಾಗಿ ಕಾರ್ಯ. 18 ವರ್ಷ ವಯಸ್ಸಿನಲ್ಲಿ ‌ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿ ನಿರಂತರ 12 ವರ್ಷಗಳಿಂದ ಉಪಸಂಪಾದಕ ಕೆಲಸ ಹಾಗೂ ಹಲವು ವರ್ಷಗಳ ಕಾಲ ದ‌.ಕ ಜಿಲ್ಲೆಯ ಜಿಲ್ಲಾ ವರದಿಗಾರನಾಗಿ ಕಾರ್ಯ. ಬಿಟಿವಿ ನ್ಯೂಸ್ ಅವಧಿಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಮೊಟ್ಟ ಮೊದಲ ಮುಖಾಮುಖಿ ಟಿವಿ ಸಂದರ್ಶನ ನಡೆಸಿದ್ದು, ಈ ವೇಳೆ ಬಿಟಿವಿ ನ್ಯೂಸ್ ನಿರೂಪಕ ಕೆಲಸಕ್ಕೆ ಅವಕಾಶ. ಹೀಗಾಗಿ ಬೆಂಗಳೂರಿನ ಬಿಟಿವಿ ಕಚೇರಿಯಲ್ಲಿ ಕೆಲ ಕಾಲ ನಿರೂಪಕ ತರಬೇತಿ ಪಡೆದಿದ್ದು, ಕಾರಣಾಂತರಗಳಿಂದ ಸುವರ್ಣ ನ್ಯೂಸ್ ದ‌‌.ಕ ಜಿಲ್ಲಾ ವರದಿಗಾರನಾಗಿ ಅವಕಾಶ ಸಿಕ್ಕ ಹಿನ್ನೆಲೆ ಮತ್ತೆ ಮಂಗಳೂರಿನಲ್ಲೇ ಕಾರ್ಯ. ವರದಿಗಾರನಾಗಿದ್ದುಕೊಂಡೇ ಕಲ್ಲಡ್ಕ ಪ್ರಭಾಕರ ಭಟ್, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಮೋಹನ್ ಆಳ್ವಾ ಸೇರಿದಂತೆ ಕರಾವಳಿಯ ಹಲವು ಪ್ರಮುಖರ ಮುಖಾಮುಖಿ ಸಂದರ್ಶನ ನಡೆಸಿದ ಹೆಗ್ಗಳಿಕೆ.
ಸದ್ಯ ಟಿಐಎನ್ ಟಿ ಅವಾರ್ಡ್ಸ್‌ನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನಾಲ್ಕು ಪ್ರಶಸ್ತಿಗಳು ಲಭಿಸಿವೆ.2017ರಿಂದ ಆರಂಭವಾದ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ ಸತತ 3 ವರ್ಷ ಯಶಸ್ವಿಯಾಗಿ ನಡೆದಿತ್ತು. 2019-20 ನೇ ಸಾಲಿನ ಪ್ರಶಸ್ತಿ ಪ್ರಧಾನಕ್ಕೆ ಕೊರೋನಾ ಅಡ್ಡಿಯಾಗಿತ್ತು. ಅನಿವಾರ್ಯವಾಗಿ ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಇದೀಗ ಒಂದು ವರ್ಷದ ಅವಾರ್ಡ್ಸ್ ಬ್ರೇಕ್ ನ ಬಳಿಕ 2020-21 ನೇ ಸಾಲಿನ ಕಾರ್ಯಕ್ರಮವನ್ನು ಅರ್ಥಾತ್ 4 ನೇ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಡೆಸಲಾಗಿದೆ. ಮಾಧ್ಯಮ ಕ್ಷೇತ್ರದ ಸಾಧಕರನ್ನು ಗೌರವಿಸುವ ಟಿಎನ್ ಐಟಿ ಮೀಡಿಯಾ ಅವಾರ್ಡ್ಸ್ ನಲ್ಲಿ ಟಿವಿ ನಿರೂಪಕರು, ವರದಿಗಾರರು, ವಿಡಿಯೋ ಎಡಿಟರ್ ಗಳು, ವಾಯ್ಸ್ ಓವರ್ ಆರ್ಟಿಸ್ಟ್, ಕ್ಯಾಮರಾಮನ್ ಗಳು ಸೇರಿದಂತೆ ವಿವಿಧ ಕೆಟಗರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಜೊತೆಗೆ ಕೆಲವು ವಿಶೇಷ ಅವಾರ್ಡ್ಸ್ ಸಹ ನೀಡಲಾಗುತ್ತದೆ. ಎಲ್ಲಾ ವಿಭಾಗದಲ್ಲಿಯೂ ಪುರುಷ ಮತ್ತು ಮಹಿಳಾ ಸಾಧಕರನ್ನು ಗೌರವಿಸಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಚಿತ್ರ ನಟರಾದ ರಾಘವೇಂದ್ರ ರಾಜ್ ಕುಮಾರ್, ನೆನಪಿರಲಿ ಪ್ರೇಮ್, ವಷಿಷ್ಠ ಸಿಂಹ, ಮೇಘನಾ ಗಾಂವ್ಕರ್, ನಿಖಿಲ್ ಕುಮಾರಸ್ವಾಮಿ, ದೊಡ್ಡಣ್ಣ, ಗಾಯಕಿ ಶಮಿತಾ ಮಲ್ನಾಡ್, ಸಾಹಿತಿ ದೊಡ್ಡರಂಗೇಗೌಡರು, ಸಿದ್ದಗಂಗಾ ಮಠದ ಶ್ರೀಗಳು ಸೇರಿ ಹಲವು ಗಣ್ಯರು ಹಾಜರಿದ್ದರು. ಇತರೆ ವಾಹಿನಿಗಳ ಹಲವಾರು ಮಂದಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರು.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »