TOP STORIES:

ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನಟಿ ನವ್ಯಾ ಪೂಜಾರಿ


ಜೀವನವೆ ನಾಟಕ ರಂಗ. ನಾವೆಲ್ಲಾ ಸೃಷ್ಟಿಯ ಸೂತ್ರದ ಬೊಂಬೆಗಳು. ಸುಖ ದುಃಖಗಳ ಪರೀಕ್ಷೆಯ ನಡುವೆ ನಮ್ಮೆಲ್ಲರ ಮುಖದಲ್ಲಿ ಮಂದಹಾಸವ ಬರಿಸಲು ನಮ್ಮೆಲ್ಲರನ್ನು ಮನೊರಂಜಿಸಲು ತೆರೆಯ‌ ಮೇಲೆ ಬಣ್ಣ ಹಚ್ಚಿ ನಾಟಕ, ಸಿನಿಮಾ ರಂಗದಲ್ಲಿ ಜನರ ಮನಸೆಳೆವರು ರಂಗದ ಕಲಾವಿದರು. ಅಂತಹ ಸಿನಿಮಾ ರಂಗದಲ್ಲಿ ನಮ್ಮ ಬಿರುವ ಕುಲಕೆ ಹೆಮ್ಮೆಯ ಗುರುತಾಗಿ ಸದ್ದಿಲ್ಲದೆ ಮಿಂಚುತ್ತಿರುವ ನಗುಮುಖದ ಚೆಲುವೆ ನವ್ಯ ಪೂಜಾರಿ. ಮುಖದಲ್ಲಿ ಚೈತನ್ಯದ ಚಿಲುಮೆ, ಭೂಲೋಕದ ಅಪ್ಸರೆ, ನಕ್ಕರೆ ಮಲ್ಲಿಗೆ ಅರಳಿದಂತೆ, ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನವ್ಯಾ ಪೂಜಾರಿ.

ಯಾದವ ಪೂಜಾರಿ ಹಾಗೂ ಸುಮಿತರವರ ಇಬ್ಬರು ಮಕ್ಕಳಲ್ಲಿ ಮೊದಲ ಮಗಳು ನವ್ಯಾ ಹಾಗೂ ಇವರ ತಂಗಿಯ ಹೆಸರು ಕಾವ್ಯಾ.ಈ ಸುಂದರ ಸಂಸಾರ ಪ್ರಸ್ತುತ ಸುರತ್ಕಲ್ ನಲ್ಲಿ ವಾಸವಾಗಿದ್ದಾರೆ. N.I.TK ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ಹಾಗೂ ನಿಟ್ಟೆ ಕರ್ನಾಟಕ ಕಾಲೇಜ್ ನಲ್ಲಿ Computer Science ವಿಭಾಗದಲ್ಲಿ ಕಲಿತು ಮೊದಲಿಗೆ ಒಂದು ಕಚೇರಿಯಲ್ಲಿ ವೃತ್ತಯನ್ನು ಮಾಡುತ್ತಿದ್ದ ಅನುಭವ ಇವರದ್ದು. ತದನಂತರ ಉಮಿಲ್ ಚಲನಚಿತ್ರದ ಆಡಿಷನ್ ನಲ್ಲಿ ಆಯ್ಕೆಯಾಗಿ ಸಿನೆಮಾ ರಂಗಕ್ಕೆ ಕಾಲಿಟ್ಟರು.

ಸಿನಿಮಾ ಕ್ಷೆತ್ರವು ಇವರಿಗೆ ಬಯಸದೆ ಬಂದ ಭಾಗ್ಯವಾಯಿತು. ಆ ಕಲೆಯ ಕಳೆ ಇವರ ಮೊಗದಲ್ಲಿ ಹೊಳೆಯುತ್ತಿತ್ತು. ಅದೇ ಕಾರಣ ಇವರಿಗೆ ಮೊದಲು ತುಳು ಸಿನೆಮಾ ಉಮಿಲ್ ಚಿತ್ರದಲ್ಲಿ ನಟಿಸಲು ಅವಕಾಶ ದೊರಕಿತು. ಸಣ್ಣ ವಯಸ್ಸಿನಲ್ಲೇ ಸಿನೆಮಾ ರಂಗದ ಪುಟ್ಟ ಕನಸು ಬೆಳೆಸಿದ್ದರೂ ಕೂಡ ವಿದ್ಯಾಭ್ಯಾಸಕ್ಕೋಸ್ಕರ ಆ ಕನಸನ್ನೇ ಮರೆತ ಇವರು ಮುಂದೆ ಜೀವನದಲ್ಲಿ ತಾನೊಬ್ಬಳು ಸಿನಮಾ ನಟಿ ಆಗುವೆ ಅಂತಹ ಅವಕಾಶ ಸಿಗಬಹುದು ಎಂದು ಅಂದುಕೊಂಡಿರಲಿಲ್ಲ. ಕಾಲದ ಮಹಿಮೆ ಯಾರು ಅರಿಯರು ಸಾಮರ್ಥ್ಯವಿದ್ದರೆ ಯಾವುದೇ ಕ್ಷೇತ್ರದಲ್ಲಿ ಅನುಭವ ರಹಿತ ಮಿಂಚಬಹುದು. ಹಾಗೇ ಇವರ ಕಥೆ ತನಗೆ ಬಯಸದೆ ಬಂದ ಅವಕಾಶವಾದರೂ ಮೊದಲ ಸಿನೆಮಾದಲ್ಲೇ ಜನರ ಮನಮುಟ್ಟಿ ಒಬ್ಬ ಅದ್ಭುತ ಕಲಾವಿದೆಯಾಗಿ ಮುಂದೆ ಈ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಗುರಿಯೊಂದನ್ನು ಇಟ್ಟುಕೊಂಡು ನವನವೀನತೆಯಿಂದ ಭವಿಷ್ಯದ ಬಾಗಿಲ ತರೆದರು‌. ಸಿನೆಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ಕಲಿಕೆಯ ಸಂದರ್ಭದಲ್ಲಿ ಇವರು ನೃತ್ಯ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಅಪಾರ ಒಲವು ಹೊಂದಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ ಉತ್ಸಾಹಿ ವಿಧ್ಯಾರ್ಥಿಯಾಗಿದ್ದರು.

ಉಮಿಲ್ ಇವರ ಮೊದಲ ತುಳು ಚಲನಚಿತ್ರವಾಗಿದ್ದು.ರಂಜಿತ್ ಬಜ್ಪೆರವರ ನಿರ್ದೇಶನದಲ್ಲಿ ಡಿಸೆಂಬರ್ ೨೦೧೮ ರಂದು ಬಿಡುಗಡೆಯಾಗಿದ್ದು. ಹೊಸ ಪರಿಚಯದ ಹೆಜ್ಜೆಯ ಗುರುತು ಸದ್ದಿಲ್ಲದೆ ಸಿನೆಮಾ ರಂಗದಲ್ಲಿ ಸುದ್ಧಿ ಮಾಡ ತೊಡಗಿತು.

ತದನಂತರ ಇವರು ತ್ರಿಬಲ್ ತಲಾಕ್ ಎಂಬ ಆರ್ಟ್ ಮೂವಿಯಲ್ಲಿ ನಟಿಸಿದರು. ಇದು ಇವರ ಮೊದಲ ಆರ್ಟ್ ಮೂವಿಯಾಗಿದೆ. ಈ ಚಲನಚಿತ್ರವು ಹೊಸ ತಂಡದ ಹೊಸ ಪ್ರಯತ್ನದಲ್ಲಿ ಲಂಡನ್ ನಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರವು ವಿಭಿನ್ನವಾಗಿದ್ದು ಬ್ಯಾರಿ ಸಂಸ್ಕೃತಿಯ ಕುರಿತಾಗಿತ್ತು. ಇದರಲ್ಲಿ ನವ್ಯಾರವರು ಒಬ್ಬ ಮುಸ್ಲಿಂ ಮಹಿಳೆಯಾಗಿ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವರು. ದ್ವಿರುಕ್ತಿ ಎಂಬ ಕನ್ನಡ ಚಲನಚಿತ್ರದಲ್ಲಿ ಪಾತ್ರವಹಿಸಿದ್ದು ಇದುವರೆಗಿನ ಇವರ ಮೊದಲ ಕನ್ನಡ ಚಲನಚಿತ್ರವಾಗಿದೆ.

ಸುಂದರ ಕನಸಿನೊಂದಿಗೆ ಇತ್ತೀಚಿಗೆ ತೆರೆಕಂಡ ವಿಶೇಷ ಚಲನಚಿತ್ರ ಕನಸು ಮಾರಾಟಕ್ಕಿದೆ ಎಂಬ ಸಿನೆಮಾದಲ್ಲಿಯೂ ಇವರು ಅಭಿನಯಿಸಿರು. ಚಿತ್ತದಲ್ಲಿರುವ ಉದಯೋನ್ಮುಖ ಕಲಾವಿದರ ನಡುವೆ ತಾನು ಒಬ್ಬ ಯುವ ನಟಿಯಾಗಿ ಪಾತ್ರವಹಿಸಿರುವರು.

ಸಿನೆಮಾ ರಂಗದಲ್ಲಿ ಮುಂದುವರಿಯಲು ಇವರಿಗೆ ಇವರ ಮನೆಯವರ ಅಪಾರ ಪ್ರೋತ್ಸಾಹವಿದ್ದು‌. ಇದೇ ಇವರಿಗೆ ಮುನ್ನಡೆಯಲು ದೀಕ್ಷೆ ಎನ್ನುತ್ತಾರೆ ನವ್ಯಾ ಪೂಜಾರಿಯವರು.

ಎರಡೆಕ್ರೆ, ಇಂಗ್ಲಿಷ್, ಬೋಜರಾಜ್ ಎಂ.ಬಿ.ಬಿ.ಎಸ್, ಗಬ್ಬರ್ ಸಿಂಗ್, ತುಳುನಾಡ ಮಡಿಲು, ಬಿಂದಾಸ್, ಗೂಗ್ಲಿ ಮೊದಲಾದ ಸಿನೆಮಾಗಳು ಬಿಡುಗಡೆಯಾಗಲಿದ್ದು ಈ ಉದಯೋನ್ಮುಖ ನಟಿಗೆ ಪ್ರೋತ್ಸಾಹದ ಜೊತೆಗೆ ಮತ್ತಷ್ಟು ಅವಕಾಶಗಳು ದೊರಕಲಿ. ಮುಖ್ಯವಾಗಿ ತುಳು ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಆದಷ್ಟು ತುಳು ಸಿನೆಮಾಗಳಲ್ಲಿ ನಟಿಸಲು ಬಯಸುತ್ತಾರೆ. ಹುಟ್ಟಿದ ಮಣ್ಣಿನ ಮೇಲಿನ ಅಭಿಮಾನವೇ ಇವರನ್ನು ಎತ್ತರಕ್ಕೆ ಬೆಳೆಸಲು ಕಾರಣವಾಗಬಹುದು. ಹಾಗೆಯೇ ತುಳು, ಕನ್ನಡ ಇತರ ಭಾಷಾ ರಂಗದಲ್ಲೂ ಅವಕಾಶಗಳು ನಿಮ್ಮ ಮುಡಿಗೇರಲಿ. ನಟನೆಯ ಹಾದಿಯಲ್ಲಿ ಯಶಸ್ವಿ ನಟಿಯಾಗಿ ಮಿಂಚುವ ತೌಳವ ಸಿರಿಗೆ ಸವಿನಯದ ಶುಭಾಶಯಗಳು.

✍️ ತೃಪ್ತಿ.ಜಿ.ಕುಂಪಲ


Related Posts

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »