TOP STORIES:

FOLLOW US

ಅರ್ಹ ಮಗುವಿಗೆ ಗುರುಬೆಳದಿಂಗಳು(ರಿ) ಕುದ್ರೋಳಿ ಮೂಲಕ ಶ್ರವಣ ಯಂತ್ರ ಕೊಡುಗೆ


ಸತೀಶ್ ಪೂಜಾರಿ ಬೆಳಪು, ದುಬೈ ಪಿತೃಶ್ರೀ ದಿ|ಸೂರು ಪೂಜಾರಿ ಪುಣ್ಯತಿಥಿ ಸ್ಮರಣಾರ್ಥ ಸಮಾಜಮುಖಿ ಕೊಡುಗೆ

ಸುಂದರ ಜೀವನ, ಜೀವನಕ್ಕಾಗಿ ದಾರಿ, ದಾರಿಗಾಗಿ ಕನಸು, ಕನಸಿಗಾಗಿ ಬದುಕು. ಎಲ್ಲವನ್ನು ರೂಪಿಸುವುದು ನಮ್ಮ ದೇಹ, ದೇಹದ ಪ್ರತಿಯೊಂದು ಅಂಗಗಳು , ಜ್ಞಾನೇಂದ್ರಿಯಗಳು ನಮ್ಮ ಜೀವನವನ್ನು ರೂಪಿಸುವ ಅಂಶವಾಗಿದೆ. ನೋವು, ಕಷ್ಟಗಳು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಯಾವ ಸಂದರ್ಭದಲ್ಲಿಯೂ, ಯಾವ ರೂಪದಲ್ಲಿಯೂ ಬರಬಹುದು. ಅದನ್ನು ನಿರ್ಣಯಿಸುವುದು ಸಮಯ. ಅದಕ್ಕೆ ವಯಸ್ಸಿನ ಅಂತರವಿಲ್ಲ ಜಾತಿಯ ಬೇಧವಿಲ್ಲ.

ಅಂಗಗಳ ನ್ಯೂನ್ಯತೆ ಬಂದಾಗ ಹತ್ತಿರದವರು ದೂರವಾಗುವುದು ಸಹಜ ಮತ್ತು ಅದನ್ನು ಸರಿಪಡಿಸುವುದು ಕಠಿಣ. ಈ ರೀತಿ ಸಮಸ್ಯೆಯೊಂದಿಗೆ ಮೂಲ್ಕಿಯ ಒಂದು ಪುಟ್ಟ ದ್ವೀಪದಲ್ಲಿ ಹುಟ್ಟಿದ ಮಗು ಶೌರ್ಯ. ಸುಂದರ ಮುಖ, ಮುಖದಲ್ಲಿ ನಿಷ್ಕಲ್ಮಶ ನಗು ಮತ್ತು ಶ್ರವಣ ಸಮಸ್ಯೆ. ಹುಟ್ಟಿದ ಮಗುವಿಗೆ ತನ್ನ ಒಂದು ವರ್ಷದ ಜೀವನದಲ್ಲಿ ಸಿಕ್ಕಿದ್ದು ಬಡತನ, ಕಂಡಿದ್ದು ತಂದೆಯ ಮರಣ, ತಾಯಿಯ ದುಃಖ ಕೇಳಿದ್ದು ಶೂನ್ಯ. ತಾಯಿ ಆಸ್ಪತ್ರೆಗೆ ಹೋದಾಗ ವೈದ್ಯರು ನೀಡಿದ್ದು 54000 ರೂ. ವೆಚ್ಚದ ಕಿವಿಯ ಯಂತ್ರ, ಮಾತಿನ ತರಬೇತಿಯ ಸಲಹೆ. ಅದು ಸಾಧ್ಯವಿಲ್ಲದ್ದಾಗ ಆ ತಾಯಿಯ ದಿಕ್ಕೇ ತೋಚದ ಭಾವ.

ಜೀವನವಿಡೀ ನೋವಿನ ಚೀಲವಾಗಿರುವಾಗ ನಂಬಿಕೆ ಮಾತ್ರ ಬದುಕಲು ದಾರಿ ತೋರುತ್ತದೆ. ಆದರೆ ಆ ನಂಬಿಕೆಯ ಹಸ್ತ ಮಾತ್ರ ವಿರಳವಾಗಿರುತ್ತದೆ. ಆ ನೊಂದ ತಾಯಿ ಮತ್ತು ಶೌರ್ಯನಿಗೆ ನಂಬಿಕೆಯ ಹಸ್ತವಾಗಿದ್ದು, ನಾರಾಯಣ ಗುರುಗಳ ಧ್ಯೇಯ ಹಾಗೂ ವಿಚಾರದಂತೆ ಕಾರ್ಯ ನಿರ್ವಹಿಸುತ್ತಿರುವ ಗುರುಬೆಳದಿಂಗಳು (ರಿ.) ಕುದ್ರೋಳಿ ಸಂಸ್ಥೆಯ ಪ್ರಮುಖ ದಾನಿಗಳಲ್ಲೋರ್ವರಾದ ಸದಾಕಾಲ ನೊಂದವರ ಮನಕ್ಕೆ ಸಾಂತ್ವನ ನೀಡುವ ಹಂಬಲವುಳ್ಳ, ಸಹೃದಯಿ ಸಮಾಜ ಸೇವಕ, ಕೊಡುಗೈ ದಾನಿ ಸತೀಶ್ ಪೂಜಾರಿ ಬೆಳಪು, ದುಬೈ ಇವರ ಪೂಜ್ಯ ತಂದೆಯವರಾದ ದಿ| ಸೂರು ಪೂಜಾರಿ ಇವರ ಪುಣ್ಯತಿಥಿಯ ಸ್ಮರಣಾರ್ಥ ಪುಟ್ಟ ಮಗು ಶೌರ್ಯನಿಗೆ ಶ್ರವಣ ಯಂತ್ರ ನೀಡುವ ಸಾರ್ಥಕ ಸೇವಾಕಾರ್ಯದ ಮೂಲಕ ತಮ್ಮ ಪಿತೃಶ್ರೀಯವರ ಹೆಸರು ಚಿರಕಾಲ ನೆನೆಯುವಂತೆ ಪುಣ್ಯತಿಥಿ ಆಚರಿಸಿದರು.

ಎರಡು ಜೀವನಕ್ಕೆ, ಎರಡು ಕನಸುಗಳಿಗೆ ಕಿವಿಕೊಟ್ಟು ಶೌರ್ಯನಿಗೆ ಆಧುನಿಕ ಯಂತ್ರ ನೀಡಿದ ದಾನಿಗಳಿಗೆ ನಾವು ಅಭಾರಿಯಾಗಿರುತ್ತೇವೆ.
ಮಗುವಿಗೆ ಇನ್ನೂ ಜೀವವಿದೆ, ಎಲ್ಲರಂತೆ ಓದುವ, ಬರೆಯುವ, ಕಲಿಯುವ ಅವಕಾಶವಿದೆ ಎಂದು ತೋರಿಸಿಕೊಟ್ಟ ದಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು. ನೀಡಿದ ನೆರವು ಮುಂದೊಂದು ದಿನ ಮರವಾಗಿ ಸಿಹಿಯಾದ ಫಲ ನಿಮ್ಮ ಮುಂದಿರುತ್ತದೆ ಎಂಬುದು ನಮ್ಮ ನಂಬಿಕೆ ಮತ್ತು ಆಶಯ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »