TOP STORIES:

ಅರ್ಹ ಮಗುವಿಗೆ ಗುರುಬೆಳದಿಂಗಳು(ರಿ) ಕುದ್ರೋಳಿ ಮೂಲಕ ಶ್ರವಣ ಯಂತ್ರ ಕೊಡುಗೆ


ಸತೀಶ್ ಪೂಜಾರಿ ಬೆಳಪು, ದುಬೈ ಪಿತೃಶ್ರೀ ದಿ|ಸೂರು ಪೂಜಾರಿ ಪುಣ್ಯತಿಥಿ ಸ್ಮರಣಾರ್ಥ ಸಮಾಜಮುಖಿ ಕೊಡುಗೆ

ಸುಂದರ ಜೀವನ, ಜೀವನಕ್ಕಾಗಿ ದಾರಿ, ದಾರಿಗಾಗಿ ಕನಸು, ಕನಸಿಗಾಗಿ ಬದುಕು. ಎಲ್ಲವನ್ನು ರೂಪಿಸುವುದು ನಮ್ಮ ದೇಹ, ದೇಹದ ಪ್ರತಿಯೊಂದು ಅಂಗಗಳು , ಜ್ಞಾನೇಂದ್ರಿಯಗಳು ನಮ್ಮ ಜೀವನವನ್ನು ರೂಪಿಸುವ ಅಂಶವಾಗಿದೆ. ನೋವು, ಕಷ್ಟಗಳು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಯಾವ ಸಂದರ್ಭದಲ್ಲಿಯೂ, ಯಾವ ರೂಪದಲ್ಲಿಯೂ ಬರಬಹುದು. ಅದನ್ನು ನಿರ್ಣಯಿಸುವುದು ಸಮಯ. ಅದಕ್ಕೆ ವಯಸ್ಸಿನ ಅಂತರವಿಲ್ಲ ಜಾತಿಯ ಬೇಧವಿಲ್ಲ.

ಅಂಗಗಳ ನ್ಯೂನ್ಯತೆ ಬಂದಾಗ ಹತ್ತಿರದವರು ದೂರವಾಗುವುದು ಸಹಜ ಮತ್ತು ಅದನ್ನು ಸರಿಪಡಿಸುವುದು ಕಠಿಣ. ಈ ರೀತಿ ಸಮಸ್ಯೆಯೊಂದಿಗೆ ಮೂಲ್ಕಿಯ ಒಂದು ಪುಟ್ಟ ದ್ವೀಪದಲ್ಲಿ ಹುಟ್ಟಿದ ಮಗು ಶೌರ್ಯ. ಸುಂದರ ಮುಖ, ಮುಖದಲ್ಲಿ ನಿಷ್ಕಲ್ಮಶ ನಗು ಮತ್ತು ಶ್ರವಣ ಸಮಸ್ಯೆ. ಹುಟ್ಟಿದ ಮಗುವಿಗೆ ತನ್ನ ಒಂದು ವರ್ಷದ ಜೀವನದಲ್ಲಿ ಸಿಕ್ಕಿದ್ದು ಬಡತನ, ಕಂಡಿದ್ದು ತಂದೆಯ ಮರಣ, ತಾಯಿಯ ದುಃಖ ಕೇಳಿದ್ದು ಶೂನ್ಯ. ತಾಯಿ ಆಸ್ಪತ್ರೆಗೆ ಹೋದಾಗ ವೈದ್ಯರು ನೀಡಿದ್ದು 54000 ರೂ. ವೆಚ್ಚದ ಕಿವಿಯ ಯಂತ್ರ, ಮಾತಿನ ತರಬೇತಿಯ ಸಲಹೆ. ಅದು ಸಾಧ್ಯವಿಲ್ಲದ್ದಾಗ ಆ ತಾಯಿಯ ದಿಕ್ಕೇ ತೋಚದ ಭಾವ.

ಜೀವನವಿಡೀ ನೋವಿನ ಚೀಲವಾಗಿರುವಾಗ ನಂಬಿಕೆ ಮಾತ್ರ ಬದುಕಲು ದಾರಿ ತೋರುತ್ತದೆ. ಆದರೆ ಆ ನಂಬಿಕೆಯ ಹಸ್ತ ಮಾತ್ರ ವಿರಳವಾಗಿರುತ್ತದೆ. ಆ ನೊಂದ ತಾಯಿ ಮತ್ತು ಶೌರ್ಯನಿಗೆ ನಂಬಿಕೆಯ ಹಸ್ತವಾಗಿದ್ದು, ನಾರಾಯಣ ಗುರುಗಳ ಧ್ಯೇಯ ಹಾಗೂ ವಿಚಾರದಂತೆ ಕಾರ್ಯ ನಿರ್ವಹಿಸುತ್ತಿರುವ ಗುರುಬೆಳದಿಂಗಳು (ರಿ.) ಕುದ್ರೋಳಿ ಸಂಸ್ಥೆಯ ಪ್ರಮುಖ ದಾನಿಗಳಲ್ಲೋರ್ವರಾದ ಸದಾಕಾಲ ನೊಂದವರ ಮನಕ್ಕೆ ಸಾಂತ್ವನ ನೀಡುವ ಹಂಬಲವುಳ್ಳ, ಸಹೃದಯಿ ಸಮಾಜ ಸೇವಕ, ಕೊಡುಗೈ ದಾನಿ ಸತೀಶ್ ಪೂಜಾರಿ ಬೆಳಪು, ದುಬೈ ಇವರ ಪೂಜ್ಯ ತಂದೆಯವರಾದ ದಿ| ಸೂರು ಪೂಜಾರಿ ಇವರ ಪುಣ್ಯತಿಥಿಯ ಸ್ಮರಣಾರ್ಥ ಪುಟ್ಟ ಮಗು ಶೌರ್ಯನಿಗೆ ಶ್ರವಣ ಯಂತ್ರ ನೀಡುವ ಸಾರ್ಥಕ ಸೇವಾಕಾರ್ಯದ ಮೂಲಕ ತಮ್ಮ ಪಿತೃಶ್ರೀಯವರ ಹೆಸರು ಚಿರಕಾಲ ನೆನೆಯುವಂತೆ ಪುಣ್ಯತಿಥಿ ಆಚರಿಸಿದರು.

ಎರಡು ಜೀವನಕ್ಕೆ, ಎರಡು ಕನಸುಗಳಿಗೆ ಕಿವಿಕೊಟ್ಟು ಶೌರ್ಯನಿಗೆ ಆಧುನಿಕ ಯಂತ್ರ ನೀಡಿದ ದಾನಿಗಳಿಗೆ ನಾವು ಅಭಾರಿಯಾಗಿರುತ್ತೇವೆ.
ಮಗುವಿಗೆ ಇನ್ನೂ ಜೀವವಿದೆ, ಎಲ್ಲರಂತೆ ಓದುವ, ಬರೆಯುವ, ಕಲಿಯುವ ಅವಕಾಶವಿದೆ ಎಂದು ತೋರಿಸಿಕೊಟ್ಟ ದಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು. ನೀಡಿದ ನೆರವು ಮುಂದೊಂದು ದಿನ ಮರವಾಗಿ ಸಿಹಿಯಾದ ಫಲ ನಿಮ್ಮ ಮುಂದಿರುತ್ತದೆ ಎಂಬುದು ನಮ್ಮ ನಂಬಿಕೆ ಮತ್ತು ಆಶಯ.


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »