TOP STORIES:

FOLLOW US

ಅರ್ಹ ಮಗುವಿಗೆ ಗುರುಬೆಳದಿಂಗಳು(ರಿ) ಕುದ್ರೋಳಿ ಮೂಲಕ ಶ್ರವಣ ಯಂತ್ರ ಕೊಡುಗೆ


ಸತೀಶ್ ಪೂಜಾರಿ ಬೆಳಪು, ದುಬೈ ಪಿತೃಶ್ರೀ ದಿ|ಸೂರು ಪೂಜಾರಿ ಪುಣ್ಯತಿಥಿ ಸ್ಮರಣಾರ್ಥ ಸಮಾಜಮುಖಿ ಕೊಡುಗೆ

ಸುಂದರ ಜೀವನ, ಜೀವನಕ್ಕಾಗಿ ದಾರಿ, ದಾರಿಗಾಗಿ ಕನಸು, ಕನಸಿಗಾಗಿ ಬದುಕು. ಎಲ್ಲವನ್ನು ರೂಪಿಸುವುದು ನಮ್ಮ ದೇಹ, ದೇಹದ ಪ್ರತಿಯೊಂದು ಅಂಗಗಳು , ಜ್ಞಾನೇಂದ್ರಿಯಗಳು ನಮ್ಮ ಜೀವನವನ್ನು ರೂಪಿಸುವ ಅಂಶವಾಗಿದೆ. ನೋವು, ಕಷ್ಟಗಳು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಯಾವ ಸಂದರ್ಭದಲ್ಲಿಯೂ, ಯಾವ ರೂಪದಲ್ಲಿಯೂ ಬರಬಹುದು. ಅದನ್ನು ನಿರ್ಣಯಿಸುವುದು ಸಮಯ. ಅದಕ್ಕೆ ವಯಸ್ಸಿನ ಅಂತರವಿಲ್ಲ ಜಾತಿಯ ಬೇಧವಿಲ್ಲ.

ಅಂಗಗಳ ನ್ಯೂನ್ಯತೆ ಬಂದಾಗ ಹತ್ತಿರದವರು ದೂರವಾಗುವುದು ಸಹಜ ಮತ್ತು ಅದನ್ನು ಸರಿಪಡಿಸುವುದು ಕಠಿಣ. ಈ ರೀತಿ ಸಮಸ್ಯೆಯೊಂದಿಗೆ ಮೂಲ್ಕಿಯ ಒಂದು ಪುಟ್ಟ ದ್ವೀಪದಲ್ಲಿ ಹುಟ್ಟಿದ ಮಗು ಶೌರ್ಯ. ಸುಂದರ ಮುಖ, ಮುಖದಲ್ಲಿ ನಿಷ್ಕಲ್ಮಶ ನಗು ಮತ್ತು ಶ್ರವಣ ಸಮಸ್ಯೆ. ಹುಟ್ಟಿದ ಮಗುವಿಗೆ ತನ್ನ ಒಂದು ವರ್ಷದ ಜೀವನದಲ್ಲಿ ಸಿಕ್ಕಿದ್ದು ಬಡತನ, ಕಂಡಿದ್ದು ತಂದೆಯ ಮರಣ, ತಾಯಿಯ ದುಃಖ ಕೇಳಿದ್ದು ಶೂನ್ಯ. ತಾಯಿ ಆಸ್ಪತ್ರೆಗೆ ಹೋದಾಗ ವೈದ್ಯರು ನೀಡಿದ್ದು 54000 ರೂ. ವೆಚ್ಚದ ಕಿವಿಯ ಯಂತ್ರ, ಮಾತಿನ ತರಬೇತಿಯ ಸಲಹೆ. ಅದು ಸಾಧ್ಯವಿಲ್ಲದ್ದಾಗ ಆ ತಾಯಿಯ ದಿಕ್ಕೇ ತೋಚದ ಭಾವ.

ಜೀವನವಿಡೀ ನೋವಿನ ಚೀಲವಾಗಿರುವಾಗ ನಂಬಿಕೆ ಮಾತ್ರ ಬದುಕಲು ದಾರಿ ತೋರುತ್ತದೆ. ಆದರೆ ಆ ನಂಬಿಕೆಯ ಹಸ್ತ ಮಾತ್ರ ವಿರಳವಾಗಿರುತ್ತದೆ. ಆ ನೊಂದ ತಾಯಿ ಮತ್ತು ಶೌರ್ಯನಿಗೆ ನಂಬಿಕೆಯ ಹಸ್ತವಾಗಿದ್ದು, ನಾರಾಯಣ ಗುರುಗಳ ಧ್ಯೇಯ ಹಾಗೂ ವಿಚಾರದಂತೆ ಕಾರ್ಯ ನಿರ್ವಹಿಸುತ್ತಿರುವ ಗುರುಬೆಳದಿಂಗಳು (ರಿ.) ಕುದ್ರೋಳಿ ಸಂಸ್ಥೆಯ ಪ್ರಮುಖ ದಾನಿಗಳಲ್ಲೋರ್ವರಾದ ಸದಾಕಾಲ ನೊಂದವರ ಮನಕ್ಕೆ ಸಾಂತ್ವನ ನೀಡುವ ಹಂಬಲವುಳ್ಳ, ಸಹೃದಯಿ ಸಮಾಜ ಸೇವಕ, ಕೊಡುಗೈ ದಾನಿ ಸತೀಶ್ ಪೂಜಾರಿ ಬೆಳಪು, ದುಬೈ ಇವರ ಪೂಜ್ಯ ತಂದೆಯವರಾದ ದಿ| ಸೂರು ಪೂಜಾರಿ ಇವರ ಪುಣ್ಯತಿಥಿಯ ಸ್ಮರಣಾರ್ಥ ಪುಟ್ಟ ಮಗು ಶೌರ್ಯನಿಗೆ ಶ್ರವಣ ಯಂತ್ರ ನೀಡುವ ಸಾರ್ಥಕ ಸೇವಾಕಾರ್ಯದ ಮೂಲಕ ತಮ್ಮ ಪಿತೃಶ್ರೀಯವರ ಹೆಸರು ಚಿರಕಾಲ ನೆನೆಯುವಂತೆ ಪುಣ್ಯತಿಥಿ ಆಚರಿಸಿದರು.

ಎರಡು ಜೀವನಕ್ಕೆ, ಎರಡು ಕನಸುಗಳಿಗೆ ಕಿವಿಕೊಟ್ಟು ಶೌರ್ಯನಿಗೆ ಆಧುನಿಕ ಯಂತ್ರ ನೀಡಿದ ದಾನಿಗಳಿಗೆ ನಾವು ಅಭಾರಿಯಾಗಿರುತ್ತೇವೆ.
ಮಗುವಿಗೆ ಇನ್ನೂ ಜೀವವಿದೆ, ಎಲ್ಲರಂತೆ ಓದುವ, ಬರೆಯುವ, ಕಲಿಯುವ ಅವಕಾಶವಿದೆ ಎಂದು ತೋರಿಸಿಕೊಟ್ಟ ದಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು. ನೀಡಿದ ನೆರವು ಮುಂದೊಂದು ದಿನ ಮರವಾಗಿ ಸಿಹಿಯಾದ ಫಲ ನಿಮ್ಮ ಮುಂದಿರುತ್ತದೆ ಎಂಬುದು ನಮ್ಮ ನಂಬಿಕೆ ಮತ್ತು ಆಶಯ.


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »