TOP STORIES:

FOLLOW US

ಏಷ್ಯಾದ ನಂಬರ್ 1 ಮ್ಯಾರಥನ್ ನಲ್ಲಿ ಮಿಂಚಿದ ಓಟಗಾರ ಹರೀಶ ಕರ್ಕೇರ


ಏಷ್ಯಾದ ನಂಬರ್ 1 ಮ್ಯಾರಥನ್ ನಲ್ಲಿ ಮಿಂಚಿದ ಓಟಗಾರ ಹರೀಶ ಕರ್ಕೇರಡ

ಸಾಧನೆ ಎಂಬ ಶಿಖರವನ್ನು ಒಂದು ಎರಡು ದಿನಗಳಲ್ಲಿ ಏರಲು ಸಾಧ್ಯವಿಲ್ಲ.ಒಂದು ವೇಳೆ ಅಲ್ಪ ಸಮಯದಲ್ಲಿ ಸಾಧನೆ ನಡೆದರೆ ಆ ಸಾಧನೆ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ.ಸಾಧನೆಯ ಹಾದಿ ಯಾವಾಗಲೂ ಕಠಿಣವಾಗಿರಬೇಕು, ಅತೀವವಾದ ಶ್ರಮವಿರಬೇಕು,ಹಲವಾರು ದಿನಗಳ ಪರಿಶ್ರಮ ಎದ್ದು ಕಾಣಬೇಕು.ಆಗ ನಿಜವಾದ ಸಾಧನೆಗೆ ಬೆಲೆ ಸಿಗೊದು ಆದಕ್ಕಾಗಿಯೇ ಹಿರಿಯರು ಹೇಳಿರೋದು ಸಾಧನೆ ಎಂಬುದು ಸಾಧಕನ ಸೊತ್ತೆ ಹೊರತು ಸೋಮಾರಿಯ ಸ್ವತ್ತಲ್ಲ.ಇದೇ ರೀತಿಯ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಮ್ಯಾರಥನ್ ಓಟಗಾರ ಹರೀಶ ಕರ್ಕೇರ.

ಇವರ ಜೀವನದ ಪುಟಗಳನ್ನು ಒಮ್ಮೆ ತಿರುವಿ ನೋಡಿದಾಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಣಾಜೆ ಗ್ರಾಮದ ಮಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ ಮತ್ತು ಮೋಹಿನಿ ದಂಪತಿಯ ಮುದ್ದಿನ ಮಗನಾಗಿ ಜನಿಸಿ ತಂದೆ ತಾಯಿಯ ಪ್ರೋತ್ಸಾಹದ ಜೊತೆ ಸಾಧನೆಯ ಹಾದಿ ಹಿಡಿದು ನಡೆದವರು.ಪ್ರಸ್ತುತ ಬೆಂಗಳೂರಿನ ಟೈಟಾನ್ ಕಂಪೆನಿಯಲ್ಲಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಧನೆಯಲ್ಲಿ ಯಶಸ್ಸು ಕಾಣಲು ಇಂತಹದೇ ನಿರ್ದಿಷ್ಟ ಕ್ಷೇತ್ರ ಬೇಕೆಂಬ ಅಗತ್ಯವಿಲ್ಲ.ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿ ಮತ್ತು ಪ್ರೀತಿ ಇರಬೇಕು.ಆಗ ಸಾಧನೆಯ ಹಾದಿ ಸುಲಭವಾಗಿ ಕಾಣುತ್ತದೆ ಅದೇ ರೀತಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ.ಇದೇ ರೀತಿಯ ಸಾಧನೆಯ ಹಾದಿ ಹಿಡಿದ ಹರೀಶ್ ಕರ್ಕೇರ ಅವರು ಆರಿಸಿದ್ದು ಕ್ರೀಡಾ ಕ್ಷೇತ್ರ.ಇವರ ಸಾಧನೆಯನ್ನು ಗಮನಿಸುತ್ತ ಹೋದಂತೆ ಇವರು ಟಾಟಾ ಮುಂಬೈ ನಡೆಸಿಕೊಡುವ ಏಷ್ಯಾದ_ನಂ.1 ಮ್ಯಾರಥನ್ ನಲ್ಲಿ ಭಾಗವಹಿಸಿ 42 ಕಿಲೋಮೀಟರ್ ದೂರವನ್ನು 4 ಗಂಟೆ 16 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದವರು,ಕಳೆದ ಬಾರಿ 42 ಕಿಲೋಮೀಟರ್ ದೂರವನ್ನು 4 ಗಂಟೆ 27 ನಿಮಿಷಗಳಲ್ಲಿ ಕ್ರಮಿಸಿ ದಾಖಲೆ ಮಾಡಿದ್ದರು,ಹಾಗೆಯೇ ಬೆಂಗಳೂರು ಮ್ಯಾರಥಾನ್ ನಲ್ಲಿ 21 ಕಿಲೋಮಿಟರ್ ಗಳನ್ನು 2 ಗಂಟೆ 01 ನಿಮಿಷಗಳಲ್ಲಿ,ಟಿ.ಸಿ.ಎಸ್ ಬೆಂಗಳೂರು ನಡೆಸಿಕೊಡುವ 10 ಕಿಲೋಮಿಟರ್ ಅನ್ನು 58 ನಿಮಿಷಗಳಲ್ಲಿ,ಎಸ್.ಬಿ.ಐ ಗ್ರೀನ್ ಮ್ಯಾರಥಾನ್ ಬೆಂಗಳೂರು ಇಲ್ಲಿ 2 ಗಂಟೆಯಲ್ಲಿ ಕ್ರಮಿಸಿದವರು ಹೀಗೆ ಮ್ಯಾರಥಾನ್ ನಲ್ಲಿ ಹತ್ತು ಹಲವಾರು ದಾಖಲೆ ನಿರ್ಮಿಸಿದ ಕೀರ್ತಿ ಇವರದ್ದು ಇವರ ಈ ಸಾಧನೆಯ ಹಿಂದೆ ಕಂಪೆನಿಯ M.D ಗಳಾದ ಭಾಸ್ಕರ್ ಭಟ್ ಹಾಗೂ ವೆಂಕಟರಮಣ್ ಅವರ ಸಹಕಾರ ತುಂಬಾ ಇದೆ ಎಂದು ನೆನಪಿಸಿಕೊಳ್ಳುತ್ತಾರೆ.ಇನ್ನು ಈ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಡಬೇಕು ಎಂಬ ಇವರ ಕನಸು ನನಸಾಗಲಿ ಇವರ ಈ ಸಾಧನೆಗೆ

ನಮ್ಮ
ಬಿಲ್ಲವ ವಾರಿಯಾರ್ಸ್ ಪೇಜ್
ವತಿಯಿಂದ ಶುಭ ಹಾರೈಕೆಗಳು…

 

✍️ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ


Share:

More Posts

Category

Send Us A Message

Related Posts

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »