TOP STORIES:

FOLLOW US

ಗರ್ಭಿಣಿ ಹೊಟ್ಟೆ ಆಕಾರ ನೋಡಿದ್ರೆ ಮಗು ಗಂಡೋ, ಹೆಣ್ಣೋ ಅಂತ ತಿಳಿಯತ್ತಾ?; ಪ್ರೆಗ್ನೆಸಿಯ ಸತ್ಯ ಮಿಥ್ಯಗಳು ಇಲ್ಲಿವೆ


ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನವಜಾತ ಶಿಶುಗಳು ಅಥವಾ ಹುಟ್ಟಲಿರುವ ಶಿಶು ಯಾವುದು ಎಂಬ ಕುತೂಹಲ ಸಾಮಾನ್ಯ. ಅನೇಕರು ಗರ್ಭಿಣಿಯರ ಹೊಟ್ಟೆಯ ಆಕಾರ ನೋಡಿ ಅನೇಕರು ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಅಂದಾಜು ಮಾಡುತ್ತಾರೆ. ಅಲ್ಲದೇ ಅನೇಕ ಗರ್ಭಿಣಿಯರು ಕೂಡ ಈ ಕುರಿತು ವಿಚಾರವನ್ನು ಅಂತರ್ಜಾಲದಲ್ಲಿ ಹುಡುಕುತ್ತಾರೆ.  ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿನ ಅನೇಕ ವಿಚಾರಗಳ ಕುರಿತು ನಮ್ಮ ಸುತ್ತ ಮುತ್ತಲಿನವರು ಅನೇಕ ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಅವೆಲ್ಲವೂ ಸತ್ಯವಾಗಿರುವುದಿಲ್ಲ, ಅವುಗಳಲ್ಲಿ ಸತ್ಯಕ್ಕೆ ದೂರವಾದ ಮತ್ತು ಅವೈಜ್ಞಾನಿಕವಾದ ಮಾಹಿತಿಗಳು ಬಹಳಷ್ಟಿರುತ್ತವೆ. ನವಜಾತ ಶಿಶುವಿನ ತಾಯಂದಿರು ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಭಾವಿ ಅಮ್ಮಂದಿರ ಸುತ್ತಮುತ್ತ ತರಾವರಿ ಸಲಹೆಗಳನ್ನು ನೀಡುವ ಅಥವಾ ಊಹೆಗಳನ್ನು ಮಾಡುವ ಜನರ ದಂಡೇ ಇರುತ್ತದೆ ಎಂಬುವುದು ಸರ್ವಕಾಲಿಕ ಸತ್ಯ.

 

ಒಂದು ನವಜಾತ ಶಿಶುವಿನ ತಾಯಿ ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಮಹಿಳೆ ಆದಾಗಲೇ ದುರ್ಬಲಳಾಗಿರಬಹುದು ಅಥವಾ ಹೊಸ ಅನುಭವದ ಒತ್ತಡದ ಮನಸ್ಥಿತಿಯಲ್ಲಿ ಇರಬಹುದು, ಅಂತಹ ಸಂದರ್ಭದಲ್ಲಿ ಆಧಾರವಿಲ್ಲದ ಸಲಹೆಗಳಿಗೆ ಕಿವಿ ಕೊಡದೆ, ತಜ್ಞರು ನೀಡುವ ಮಾಹಿತಿಗಳನ್ನು ನಂಬುವುದು ಬಹಳ ಅಗತ್ಯ. ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

 

ಮಿಥ್ಯ 1: ಗರ್ಭಿಣಿಯ ಹೊಟ್ಟೆ ಎಷ್ಟು ಉಬ್ಬಿದೆ ಎಂಬುದನ್ನು ಆಧರಿಸಿ ಅದರ ಲಿಂಗವನ್ನು ನಿರ್ಧರಿಸಲಾಗುತ್ತದೆ. ಗರ್ಭಿಣಿಯ ಹೊಟ್ಟೆ ಕಡಿಮೆ ಉಬ್ಬಿದ್ದರೆ ಒಳಗಿರುವುದು ಗಂಡು ಮಗು. ಹೊಟ್ಟೆ ದೊಡ್ಡದಿದ್ದರೆ ಅದು ಹೆಣ್ಣು ಮಗು.
ಸತ್ಯ: ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್‍ಹೆಚ್‍ಎಸ್) ಪ್ರಕಾರ, ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಹೊಟ್ಟೆಯ ಗಾತ್ರಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಗರ್ಭಿಣಿಯ ಹೊಟ್ಟೆಯ ಗಾತ್ರ ಮತ್ತು ಆಕಾರವು ಆಕೆಯ ಸ್ನಾಯುವಿನ ಗಾತ್ರ, ರಚನೆ, ಭಂಗಿ ಮತ್ತು ಆಕೆಯ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಅವಲಂಬಿಸಿದೆ.

ಮಿಥ್ಯ 2 : ಕೊಲಸ್ಟ್ರಮ್ ಅಥವಾ ತಾಯಿಯ ಆರಂಭದ ಎದೆಹಾಲನ್ನು ಮಗುವಿಗೆ ಕುಡಿಸಬಾರದು. ಅದು ಅಶುದ್ಧವಾಗಿರುತ್ತದೆ.

ಸತ್ಯ : ಕೊಲಸ್ಟ್ರಮ್ ಎಂದರೆ ಹಳದಿ ಬಣ್ಣವುಳ್ಳ , ತಾಯಿಯ ಪ್ರಪ್ರಥಮ ಎದೆ ಹಾಲು. ಅತ್ಯಧಿಕ ಪ್ರೊಟೀನ್ ಹೊಂದಿರುವ ಆ ಹಾಲು ಸೋಂಕು ನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಇದನ್ನು ಕುಡಿಸಲು ಸೂಚಿಸಲಾಗುತ್ತದೆ. ಆದರೆ, ಭಾರತದಲ್ಲಿ ಕೆಲವು ಮಹಿಳೆಯರು ಇದನ್ನು ಇಂದಿಗೂ ಅಶುದ್ಧವೆಂದು ಭಾವಿಸಿದ್ದು, ಮಗುವಿಗೆ ಕುಡಿಸಲು ನಿರಾಕರಿಸುತ್ತಾರೆ.

ಮಿಥ್ಯ 3: ನವಜಾತ ಶಿಶುವಿನ ಜೀವನ ಸಿಹಿಯಾಗಿರಬೇಕು ಎಂಬುದರ ಸಂಕೇತವಾಗಿ, ಅದಕ್ಕೆ ಪ್ರಥಮವಾಗಿ ಜೇನು ತುಪ್ಪವನ್ನು ನೆಕ್ಕಿಸುವುದು ಅತ್ಯಂತ ಪುರಾತನ ಸಂಪ್ರದಾಯ.

ಸತ್ಯ: ನವಜಾತ ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ನಾಜೂಕಾಗಿ ಇರುತ್ತದೆ. ಮಗುವಿಗೆ ಅದರ ಮೊದಲ ಹುಟ್ಟುಹಬ್ಬಕ್ಕಿಂತ ಮೊದಲು ಜೇನು ತುಪ್ಪವನ್ನು ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಾರಣವೇನೆಂದರೆ, ಅದು ನವಜಾತ ಶಿಶುವಿನ ಅಪಕ್ವ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಲ್ಲ ಬ್ಯಾಕ್ಟೀರಿಯಾವಾದ ಕ್ಲೋಸ್ಟ್ರಿಡಿಯಂ ಬೊಟುಲಿನಮ್ ಬೀಜಕಗಳನ್ನು ಹೊಂದಿರುತ್ತದೆ, ಮತ್ತು ಆ ಬ್ಯಾಕ್ಟೀರಿಯಾ ಶಿಶುವಿಗೆ ಮಾರಕ ರೋಗವನ್ನು ಉಂಟು ಮಾಡಬಹುದು.

ಮಿಥ್ಯ 4: ನವಜಾತ ಶಿಶುವಿನ ಆಹಾರ ಕ್ರಮದಲ್ಲಿ ಜ್ಯೂಸ್‍ಗಳನ್ನು ಕೂಡ ಸೇರಿಸಬೇಕು.
ಸತ್ಯ : ಹಣ್ಣಿನ ರಸದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಮಗುವಿನ ಕರುಳಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು . ಏಕೆಂದರೆ ಆರಂಭದಲ್ಲಿ , ಅದರಲ್ಲೂ ಮುಖ್ಯವಾಗಿ ಜನಿಸಿದ ಒಂದು ವರ್ಷದವರೆಗೆ ಅವುಗಳಲ್ಲಿ ಹಣ್ಣಿನ ರಸವನ್ನು ಜೀರ್ಣ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವುದಿಲ್ಲ.

 

ಮಿಥ್ಯ 5 : ಎರಡನೇ ಮತ್ತು ಮೂರನೆಯ ಶಿಶುಗಳಿಗೆ ಹೋಲಿಸಿದರೆ, ಮೊದಲ ಮಗು ತಡವಾಗಿ ಹೊರ ಬರುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿದೆ.

ಸತ್ಯ : ವಾಸ್ತವ ಏನೆಂದರೆ, ನಿಮ್ಮ ಋತುಚಕ್ರದ ಅವಧಿಯ ಉದ್ದವು ನಿಮ್ಮ ಮಗುವಿನ ಆಗಮನವನ್ನು ನಿರ್ಧರಿಸುತ್ತದೆ. ನಿಮ್ಮ ಋತುಚಕ್ರದ ಅವಧಿ ಕಡಿಮೆ ಇದ್ದರೆ ಹೆರಿಗೆ ಬೇಗ ಆಗಬಹುದು, ಉದ್ದನೆಯ ಋತುಚಕ್ರದ ಅವಧಿ ಇದ್ದಲ್ಲಿ ಹೆರಿಗೆ ಕೂಡ ತಡ ಆಗಬಹುದು.ಆದರೂ ಋತುಚಕ್ರದ ಅವಧಿ 28 ದಿನಗಳದ್ದಾಗಿದ್ದರೆ, ನಿಮಗೆ ಹೆರಿಗೆಗೆ ನಿಗದಿ ಪಡಿಸಿದ ದಿನಾಂಕದ ಹತ್ತಿರದ ತಾರೀಖಿನಲ್ಲೇ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »