TOP STORIES:

ಗರ್ಭಿಣಿ ಹೊಟ್ಟೆ ಆಕಾರ ನೋಡಿದ್ರೆ ಮಗು ಗಂಡೋ, ಹೆಣ್ಣೋ ಅಂತ ತಿಳಿಯತ್ತಾ?; ಪ್ರೆಗ್ನೆಸಿಯ ಸತ್ಯ ಮಿಥ್ಯಗಳು ಇಲ್ಲಿವೆ


ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ನವಜಾತ ಶಿಶುಗಳು ಅಥವಾ ಹುಟ್ಟಲಿರುವ ಶಿಶು ಯಾವುದು ಎಂಬ ಕುತೂಹಲ ಸಾಮಾನ್ಯ. ಅನೇಕರು ಗರ್ಭಿಣಿಯರ ಹೊಟ್ಟೆಯ ಆಕಾರ ನೋಡಿ ಅನೇಕರು ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಅಂದಾಜು ಮಾಡುತ್ತಾರೆ. ಅಲ್ಲದೇ ಅನೇಕ ಗರ್ಭಿಣಿಯರು ಕೂಡ ಈ ಕುರಿತು ವಿಚಾರವನ್ನು ಅಂತರ್ಜಾಲದಲ್ಲಿ ಹುಡುಕುತ್ತಾರೆ.  ಅಷ್ಟೇ ಅಲ್ಲದೇ ಗರ್ಭಾವಸ್ಥೆಯಲ್ಲಿನ ಅನೇಕ ವಿಚಾರಗಳ ಕುರಿತು ನಮ್ಮ ಸುತ್ತ ಮುತ್ತಲಿನವರು ಅನೇಕ ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಅವೆಲ್ಲವೂ ಸತ್ಯವಾಗಿರುವುದಿಲ್ಲ, ಅವುಗಳಲ್ಲಿ ಸತ್ಯಕ್ಕೆ ದೂರವಾದ ಮತ್ತು ಅವೈಜ್ಞಾನಿಕವಾದ ಮಾಹಿತಿಗಳು ಬಹಳಷ್ಟಿರುತ್ತವೆ. ನವಜಾತ ಶಿಶುವಿನ ತಾಯಂದಿರು ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಭಾವಿ ಅಮ್ಮಂದಿರ ಸುತ್ತಮುತ್ತ ತರಾವರಿ ಸಲಹೆಗಳನ್ನು ನೀಡುವ ಅಥವಾ ಊಹೆಗಳನ್ನು ಮಾಡುವ ಜನರ ದಂಡೇ ಇರುತ್ತದೆ ಎಂಬುವುದು ಸರ್ವಕಾಲಿಕ ಸತ್ಯ.

 

ಒಂದು ನವಜಾತ ಶಿಶುವಿನ ತಾಯಿ ಅಥವಾ ಸದ್ಯದಲ್ಲಿಯೇ ಶಿಶುವಿಗೆ ಜನ್ಮ ನೀಡಲಿರುವ ಮಹಿಳೆ ಆದಾಗಲೇ ದುರ್ಬಲಳಾಗಿರಬಹುದು ಅಥವಾ ಹೊಸ ಅನುಭವದ ಒತ್ತಡದ ಮನಸ್ಥಿತಿಯಲ್ಲಿ ಇರಬಹುದು, ಅಂತಹ ಸಂದರ್ಭದಲ್ಲಿ ಆಧಾರವಿಲ್ಲದ ಸಲಹೆಗಳಿಗೆ ಕಿವಿ ಕೊಡದೆ, ತಜ್ಞರು ನೀಡುವ ಮಾಹಿತಿಗಳನ್ನು ನಂಬುವುದು ಬಹಳ ಅಗತ್ಯ. ನವಜಾತ ಶಿಶು ಅಥವಾ ಜನಿಸಲಿರುವ ಶಿಶುವಿನ ಕುರಿತು ನೀಡುವ ಕೆಲವು ತಪ್ಪು ಮಾಹಿತಿಗಳು ಮತ್ತು ಆ ಕುರಿತ ವಾಸ್ತವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

 

ಮಿಥ್ಯ 1: ಗರ್ಭಿಣಿಯ ಹೊಟ್ಟೆ ಎಷ್ಟು ಉಬ್ಬಿದೆ ಎಂಬುದನ್ನು ಆಧರಿಸಿ ಅದರ ಲಿಂಗವನ್ನು ನಿರ್ಧರಿಸಲಾಗುತ್ತದೆ. ಗರ್ಭಿಣಿಯ ಹೊಟ್ಟೆ ಕಡಿಮೆ ಉಬ್ಬಿದ್ದರೆ ಒಳಗಿರುವುದು ಗಂಡು ಮಗು. ಹೊಟ್ಟೆ ದೊಡ್ಡದಿದ್ದರೆ ಅದು ಹೆಣ್ಣು ಮಗು.
ಸತ್ಯ: ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್‍ಹೆಚ್‍ಎಸ್) ಪ್ರಕಾರ, ಈ ಊಹೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಮತ್ತು ಹೊಟ್ಟೆಯ ಗಾತ್ರಕ್ಕೂ ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಗರ್ಭಿಣಿಯ ಹೊಟ್ಟೆಯ ಗಾತ್ರ ಮತ್ತು ಆಕಾರವು ಆಕೆಯ ಸ್ನಾಯುವಿನ ಗಾತ್ರ, ರಚನೆ, ಭಂಗಿ ಮತ್ತು ಆಕೆಯ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಅವಲಂಬಿಸಿದೆ.

ಮಿಥ್ಯ 2 : ಕೊಲಸ್ಟ್ರಮ್ ಅಥವಾ ತಾಯಿಯ ಆರಂಭದ ಎದೆಹಾಲನ್ನು ಮಗುವಿಗೆ ಕುಡಿಸಬಾರದು. ಅದು ಅಶುದ್ಧವಾಗಿರುತ್ತದೆ.

ಸತ್ಯ : ಕೊಲಸ್ಟ್ರಮ್ ಎಂದರೆ ಹಳದಿ ಬಣ್ಣವುಳ್ಳ , ತಾಯಿಯ ಪ್ರಪ್ರಥಮ ಎದೆ ಹಾಲು. ಅತ್ಯಧಿಕ ಪ್ರೊಟೀನ್ ಹೊಂದಿರುವ ಆ ಹಾಲು ಸೋಂಕು ನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಮಗುವಿಗೆ ಇದನ್ನು ಕುಡಿಸಲು ಸೂಚಿಸಲಾಗುತ್ತದೆ. ಆದರೆ, ಭಾರತದಲ್ಲಿ ಕೆಲವು ಮಹಿಳೆಯರು ಇದನ್ನು ಇಂದಿಗೂ ಅಶುದ್ಧವೆಂದು ಭಾವಿಸಿದ್ದು, ಮಗುವಿಗೆ ಕುಡಿಸಲು ನಿರಾಕರಿಸುತ್ತಾರೆ.

ಮಿಥ್ಯ 3: ನವಜಾತ ಶಿಶುವಿನ ಜೀವನ ಸಿಹಿಯಾಗಿರಬೇಕು ಎಂಬುದರ ಸಂಕೇತವಾಗಿ, ಅದಕ್ಕೆ ಪ್ರಥಮವಾಗಿ ಜೇನು ತುಪ್ಪವನ್ನು ನೆಕ್ಕಿಸುವುದು ಅತ್ಯಂತ ಪುರಾತನ ಸಂಪ್ರದಾಯ.

ಸತ್ಯ: ನವಜಾತ ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆ ತುಂಬಾ ನಾಜೂಕಾಗಿ ಇರುತ್ತದೆ. ಮಗುವಿಗೆ ಅದರ ಮೊದಲ ಹುಟ್ಟುಹಬ್ಬಕ್ಕಿಂತ ಮೊದಲು ಜೇನು ತುಪ್ಪವನ್ನು ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಾರಣವೇನೆಂದರೆ, ಅದು ನವಜಾತ ಶಿಶುವಿನ ಅಪಕ್ವ ವ್ಯವಸ್ಥೆಯಲ್ಲಿ ಸೇರಿಕೊಳ್ಳಬಲ್ಲ ಬ್ಯಾಕ್ಟೀರಿಯಾವಾದ ಕ್ಲೋಸ್ಟ್ರಿಡಿಯಂ ಬೊಟುಲಿನಮ್ ಬೀಜಕಗಳನ್ನು ಹೊಂದಿರುತ್ತದೆ, ಮತ್ತು ಆ ಬ್ಯಾಕ್ಟೀರಿಯಾ ಶಿಶುವಿಗೆ ಮಾರಕ ರೋಗವನ್ನು ಉಂಟು ಮಾಡಬಹುದು.

ಮಿಥ್ಯ 4: ನವಜಾತ ಶಿಶುವಿನ ಆಹಾರ ಕ್ರಮದಲ್ಲಿ ಜ್ಯೂಸ್‍ಗಳನ್ನು ಕೂಡ ಸೇರಿಸಬೇಕು.
ಸತ್ಯ : ಹಣ್ಣಿನ ರಸದಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಮಗುವಿನ ಕರುಳಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು . ಏಕೆಂದರೆ ಆರಂಭದಲ್ಲಿ , ಅದರಲ್ಲೂ ಮುಖ್ಯವಾಗಿ ಜನಿಸಿದ ಒಂದು ವರ್ಷದವರೆಗೆ ಅವುಗಳಲ್ಲಿ ಹಣ್ಣಿನ ರಸವನ್ನು ಜೀರ್ಣ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುವುದಿಲ್ಲ.

 

ಮಿಥ್ಯ 5 : ಎರಡನೇ ಮತ್ತು ಮೂರನೆಯ ಶಿಶುಗಳಿಗೆ ಹೋಲಿಸಿದರೆ, ಮೊದಲ ಮಗು ತಡವಾಗಿ ಹೊರ ಬರುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿದೆ.

ಸತ್ಯ : ವಾಸ್ತವ ಏನೆಂದರೆ, ನಿಮ್ಮ ಋತುಚಕ್ರದ ಅವಧಿಯ ಉದ್ದವು ನಿಮ್ಮ ಮಗುವಿನ ಆಗಮನವನ್ನು ನಿರ್ಧರಿಸುತ್ತದೆ. ನಿಮ್ಮ ಋತುಚಕ್ರದ ಅವಧಿ ಕಡಿಮೆ ಇದ್ದರೆ ಹೆರಿಗೆ ಬೇಗ ಆಗಬಹುದು, ಉದ್ದನೆಯ ಋತುಚಕ್ರದ ಅವಧಿ ಇದ್ದಲ್ಲಿ ಹೆರಿಗೆ ಕೂಡ ತಡ ಆಗಬಹುದು.ಆದರೂ ಋತುಚಕ್ರದ ಅವಧಿ 28 ದಿನಗಳದ್ದಾಗಿದ್ದರೆ, ನಿಮಗೆ ಹೆರಿಗೆಗೆ ನಿಗದಿ ಪಡಿಸಿದ ದಿನಾಂಕದ ಹತ್ತಿರದ ತಾರೀಖಿನಲ್ಲೇ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ.


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »