TOP STORIES:

FOLLOW US

ತನ್ನ ಸೇವಾ ತಂಡವನ್ನು ಒಟ್ಟುಸೇರಿಸಿ ಪರರ ಕಷ್ಟಗಳಿಗೆ ಸ್ಪಂದಿಸುವ,ಯುವ ಮನಸ್ಸಿನ ತೆರೆಮರೆಯ ಸೇವಾ ಮಾಣಿಕ್ಯ ಸುಕೇಶ್ ಜಿ ಅಂಚನ್.


ಮೂಡಬಿದ್ರೆ ತಾಲೂಕಿನ ತೋಡಾರಿನ ಗಿರಿಯ ಸುವರ್ಣ ಮತ್ತು ಗುಲಾಬಿ ದಂಪತಿಗಳ ನಾಲ್ಕನೇ ಪುತ್ರನಾಗಿ ಜನಿಸಿದರು. ತನ್ನಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ, ಬಂಗಾಬೆಟ್ಟು,ಪ್ರೌಢ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ಬಂಗಾಬೆಟ್ಟು,ಮಿಜಾರು ಇಲ್ಲಿ ಮುಗಿಸಿದರು.

ಬಡತನದಲ್ಲಿ ಹುಟ್ಟಿದ ಇವರು ಬಡವರ ಕಷ್ಟ ಏನೆಂದು ತಿಳಿದುಕೊಂಡಿದ್ದರು.ಕಷ್ಟದಲ್ಲೆ ಜೀವನ ಸಾಗಿಸುತ್ತಿದ್ದ ಇವರಿಗೆವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು ಆದರೆ, ಶಾಲೆಯ ದಿನಗಳಲ್ಲಿ ನಾಟಕ,ನೃತ್ಯ ಮತ್ತು ಇನ್ನಿತರ ಚಟುವಟಿಕೆಗಳಲ್ಲಿಭಾಗವಹಿಸುತ್ತಿದ್ದರು.

ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ, ಕೆಲಸವನ್ನು ಹುಡುಕುತ್ತಾ ಮಹಾನಗರವಾದ ಮುಂಬೈಗೆ ಹೋಗುತ್ತಾರೆ. ಚಿಕ್ಕಂದಿನಿಂದಲೇಕಷ್ಟ, ನೋವು ಏನೆಂದು ತಿಳಿದಿದ್ದ ಇವರಿಗೆ, ಬಡವರ ಪಾಲಿಗೆ ಆಸರೆಯಾಗಬೇಕು ಎನ್ನುವ ತವಕ ಅವರಲ್ಲಿ ಆಗಲೇ ಇತ್ತು. ಹಾಗೆಯೇಮುಂಬೈನಲ್ಲಿ ಕೆಲಸ ಮಾಡುತ್ತಾಲೆ,ಅಲ್ಲಿದ್ದ ನೊಂದವರಿಗೆ ಆಸರೆಯಾದರು.ಲಾಕ್ ಡೌನ್ ಸಂದರ್ಭದಲ್ಲಿ, ಮುಂಬೈನಲ್ಲಿಗೃಹಿಣಿಯೊಬ್ಬಳು ಸಂಕಷ್ಟದಲ್ಲಿದ್ದಾಗ ಅವರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸುವ ದೊಡ್ಡ ಕಾರ್ಯವನ್ನು ಮಾಡಿದವರು. ಅಷ್ಟಲ್ಲದೇ ಲಾಕ್ ಡೌನ್ ನಲ್ಲಿ ಹಲವು ಬಡವರಿಗೆ ತಮ್ಮ ಸ್ವಂತ ಖರ್ಚಿನಿಂದ ಕಿಟ್ ವಿತರಿಸಿ ನೊಂದವರ ಪಾಲಿಗೆ ಆಸರೆಯಾದರು.

ಮುಂದಿನ ದಿನಗಳಲ್ಲಿ ಮುಂಬೈನಿಂದ ಊರಿಗೆ ಬಂದ ಇವರು 21-05-2020 ರಂದು ಕನಸಿನ ಯೋಜನೆಯಾದ#ನವಚೇತನ_ಸೇವಾ_ಬಳಗ_(ರಿ.) ವನ್ನು ತಮ್ಮ ಆತ್ಮೀಯ ಗೆಳೆಯನಾದ ಜಯಂತ್ ಕೋಟ್ಯಾನ್ ಕುಕ್ಯಾಡಿಯವರೊಂದಿಗೆಜೊತೆಗೂಡಿ ತೋಡಾರಿನಲ್ಲಿ ಪ್ರಾರಂಭಿಸಿದರು. ಬಳಗದಲ್ಲಿ ತರುಣರನ್ನು ಒಟ್ಟುಗೂಡಿಸಿ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು #28_ಸೇವಾ_ಕಾರ್ಯ ವನ್ನು ಮಾಡುವ ಮೂಲಕ ಬಡವರ, ಅನಾರೋಗ್ಯದಲ್ಲಿದ್ದ,ನೊಂದವರ ಕಣ್ಣೊರೆಸುವಕಾರ್ಯವನ್ನು ಮಾಡಿದರು. ಸುಮಾರು #8_ಲಕ್ಷಕ್ಕೂ_ಮಿಕ್ಕಿ_ಹಣವನ್ನು ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾದ ಮಾಣಿಕ್ಯ. ದೇವಸ್ಥಾನಗಳ ಬ್ರಹ್ಮಕಳಶ, ಮಹೋತ್ಸವ ಇರಲಿ, ಜಾತ್ರೆ ಇರಲಿ ಅಥವಾ ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇವರ ತಂಡವುಸೇವಾ ಕಾರ್ಯದ ನಿಮಿತ್ತ ಹಾಜರಿರುತ್ತಿದ್ದರು. #ಭವತಿ_ಭಿಕ್ಷಾಂ_ದೇಹಿ ಎಂಬ ಯೋಜನೆಯಲ್ಲಿ ಬ್ರಹ್ಮ ಬೈದರ್ಕಳ ಗರಡಿ ಮಿಜಾರುಇಲ್ಲಿಯ ವಾರ್ಷಿಕ ಉತ್ಸವದಲ್ಲಿ,ಗುರುಪುರ ಬಂಡಿ ಜಾತ್ರೆಯಲ್ಲಿ,ದುರ್ಗಾ ಪರಮೇಶ್ವರಿ ದೇವಸ್ಥಾನ, ಇರುವೈಲು ಇದರ ಜಾತ್ರೆಯಸಂದರ್ಭದಲ್ಲಿ ಸುಮಾರು #2_ಲಕ್ಷಕ್ಕೂ ಅಧಿಕ ಧನ ಸಂಗ್ರಹಿಸಿ ಬಡವರ ಪಾಲಿಗೆ ಆಸರೆಯಾಗಿದ್ದಾರೆ.

ತಂಡದಲ್ಲಿ ಸೇವಾ ಕಾರ್ಯವನ್ನು ಮಾಡುತ್ತಿರುವುದ್ದಲ್ಲದೇ, ಪರೋಕ್ಷವಾಗಿ, ತಂಡದ ಸದಸ್ಯರಿಗೆ ಹಾಗೂ ಇತರರಿಗೂ ಸಹಾಯಮಾಡುತ್ತ,ನಿಸ್ವಾರ್ಥವಾದ ಸೇವೆಯನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ#ನವಚೇತನ_ಕಲಾ_ವೇದಿಕೆ ಸಂಸ್ಥೆಯನ್ನು ಪ್ರಾರಂಭಿಸಿ ತೆರೆಮರೆಯಲ್ಲಿ ಇರುವ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಕೂಡಮಾಡುತ್ತಿದ್ದಾರೆ.

ಸದಾ ನಿಸ್ವಾರ್ಥ ಮನೋಭಾವದ ವ್ಯಕ್ತಿಯಾದ ಇವರು ಎಲ್ಲರ ಆಪತ್ಕಾಲಕ್ಕೂ ನೆರವಾಗುತ್ತ,ತನ್ನೊಳಗೆ ನೋವು ಇದ್ದರೂ,ಬಡವರಮುಖದಲ್ಲಿ ನಗು ಕಾಣಬೇಕು ಎನ್ನುವ,ಯಾರಿಗೂ ಕೇಡನ್ನು ಬಯಸದ,ಸಹಾಯ ಹಸ್ತ ಚಾಚಿ ಬಂದವರಿಗೆ ಇಲ್ಲ ಎನ್ನದೆ ಕರ ಚಾಚಿನೀಡುವ ವ್ಯಕ್ತಿತ್ವದ, ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಮೇರು ವ್ಯಕ್ತಿತ್ವದ,

ಎಲ್ಲರೊಂದಿಗೆ ಆತ್ಮೀಯರಾಗಿ ಇದ್ದು ಕಷ್ಟ ಕಾಲಕ್ಕೂ ಸ್ಪಂದಿಸುವ #ಯುವ_ಚೇತನ ರಾಗಿದ್ದಾರೆ.

ನಿಸ್ವಾರ್ಥ ಮನಸ್ಸಿನ, ನೊಂದ ಜೀವಕ್ಕೆ ಆಸರೆಯಾಗುವ, ಎಲ್ಲರೊಂದಿಗೆ ಬೆರೆತು ನಾಯಕ  ಎನಿಸಿರುವ #ನವ_ಚೇತನ ಬಳಗದ#ಯುವ_ಚೇತನ ರಾದ ಸುಕೇಶ್ ಜಿ ಅಂಚನ್ ರವರು ನಮ್ಮ ಇಂದಿನ #ಪರಿಚಯ_ಸಂಚಿಕೆ ಚೇತನ ಆಗಿದ್ದಾರೆ.

ರಾಜೇಶ್ ಎಸ್ ಬಲ್ಯ


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »