TOP STORIES:

ದುಬಾಯಿ ಉದ್ಯಮಿ ಸತೀಶ್ ಪೂಜಾರಿ ಬಡವರ ಪಾಲಿನ ಸಂಜೀವಿನಿ


ಉಡುಪಿಯ ಬೆಳಪು ಸೂರು ಪೂಜಾರಿ- ಪದ್ಮ ಪೂಜಾರಿ ದಂಪತಿಗಳ ಪುತ್ರರಾಗಿ 1962ರಲ್ಲಿ ಜನಿಸಿದ ಸತೀಶ್ ಪೂಜಾರಿ ಅವರು 1986ರಲ್ಲಿ ದುಬಾಯಿಗೆ ಆಗಮಿಸಿ ಪಯೋನಿರ್ ಇನ್ಸೂರೆನ್ಸ್ ಸಂಸ್ಥೆಯ ಟೆಕ್ನಿಕಲ್ ಮೇನೆಜರ್ ಆಗಿ ಉದ್ಯೋಗ ನಿರ್ವಹಿಸ ತೊಡಗಿಕೊಂಡಿದ್ದು ಇದೀಗ ಜನರಲ್ ಮೇನೆಜರ್ ಆಗಿ ಭಡ್ತಿ ಹೊಂದಿ ಸಂಸ್ಥೆಯ ಉನ್ನತಿಗೆ ಕಾರಣೀಭೂತ ರಾಗಿದ್ದಾರೆ.

ಕೊಲ್ಲಿ ರಾಷ್ಟ್ರದ ಇದೀಗಾ ತಮ್ಮದೇ ಸ್ವಂತವಾದ ಹೋಟೆಲ್ ಉದ್ಯಮವನ್ನು‌ ಸ್ಥಾಪಿಸಿದರು. ಅ ಮೂಲಕ ಊರಿನ ಹಲವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು.

ಇವರು ಮುಲ್ಕಿ ವಿಜಯ ಕಾಲೇಜಿನಲ್ಲಿ ಬಿ.ಎ.ಪದವಿ ಶಿಕ್ಷಣ ಪಡೆದಿರುವ ಸತೀಶ್ ಪೂಜಾರಿ ಮುಂಬಯಿಯ ಮಿಥಿಬಾಯಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಹಾಗೂ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯದ ಡಿಪ್ಲೊಮಾ ಪದವಿ ಗಳಿಸಿಕೊಂಡಿದ್ದಾರೆ.ಸತೀಶ್ ಪೂಜಾರಿ ಅವರು ಬಾಲ್ಯ ಕಾಲದಿಂದಲೇ ಕಲೆ -ಸಾಂಸ್ಕೃತಿಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು, ನಾಟಕ-ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿ ಕೊಂಡರು. ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಸತೀಶ್ ಪೂಜಾರಿ ಅವರು ಕರ್ನಾಟಕ ಸಂಘ ಶಾರ್ಜ ಇದರ ಅಧ್ಯಕ್ಷ, ಬಿಲ್ಲವಾಸ್ ಫ್ಯಾಮಿಲಿ ದುಬಾಯಿ ಇದರ ಅಧ್ಯಕ್ಷ, ಇನ್ಸೂರೆನ್ಸ್ ಇಂಡಿಯಾದ ಗೌರವ ಸದಸ್ಯ,ಕೆನರಾ ಎಂಟರ್ ಪ್ರೈಸಸ್ ದುಬಾಯಿ ಇದರ ಸದಸ್ಯ,ನಮ್ಮ ತುಳುವೆರ್ ದುಬಾಯಿ ಯ ಸ್ಥಾಪಕ ಸದಸ್ಯ, ಯುಎಇ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಸದಸ್ಯ, ಧ್ವನಿ ಪ್ರತಿಷ್ಠಾನದ ಸದಸ್ಯತ್ವ ಹೀಗೆ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಗಲ್ಫ್ ನಾಡಿನಲ್ಲಿ ಕಲೆ, ಸಾಹಿತ್ಯ, ಕ್ರೀಡೆಗಳ ಪ್ರೋತ್ಸಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಕ್ತದಾನ, ಶಿಕ್ಷಣ ಸಹಾಯ, ಚಿಕಿತ್ಸಾ ಸಹಾಯ, ಬಡ ಹೆಣ್ಮಕ್ಕಳ ವಿವಾಹ ಸಹಾಯ ಮೊದಲಾದ ಸಮಾಜ ಸೇವೆಯಲ್ಲೂ ಇವರ ಕೊಡುಗೆ ಅಪಾರ ಬಡವರ ಪಾಲಿನ ಸಂಜೀವಿನಿ ಯಾಗಿದ್ದಾರೆ.

ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದರ ಜೊತೆಗೆ ಶಾರ್ಜ ಕರ್ನಾಟಕ ಸಂಘದ ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಹಾಗೂ ಧ್ವನಿ ಪ್ರತಿಷ್ಠಾನ ಯುಎಇ, ಬಿಲ್ಲವಾಸ್ ದುಬೈ ಎಂಡ್ ನಾರ್ಥನ್ ಎಮಿರೇಟ್ಸ್, ಬಿಲ್ಲವರ ಬಳಗ ಅಬುಧಾಬಿ, ಕನ್ಯಾಡಿ ರಾಮಕ್ಷೇತ್ರ, ಬಿಲ್ಲವರ ಸಂಘ ಮುಂಬಯಿ, ಉಡುಪಿ ಮೊದಲಾದೆಡೆಯ ಸನ್ಮಾನಗಳು ಸಂದಿದೆ.ಇವರ ಧರ್ಮಪತ್ನಿಯಾದ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಪತಿಯ ಸಾಮಾಜಿಕ, ಸಾಂಸ್ಕೃತಿಕ ರಂಗದ ಸೇವೆಗೂ ಸಾಥ್ ನೀಡುತ್ತಿದ್ದಾರೆ, ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಅವರು ಕೂಡ ಚಲನಚಿತ್ರ ಅಭಿನಯದಲ್ಲೂ ಸೈ ಎನಿಸಿದ್ದಾರೆ.

ಇಂತಃ ಸೇವಾ ಮನೋಭಾವದ ನಮ್ಮ ಬಿಲ್ಲವ ಸಮಾಜದ ಹಾಗೂ ತುಳುನಾಡಿನ ಹೆಮ್ಮೆಯ ಸಮಾಜ ಸೇವಕ ಸತೀಶ್ ಪೂಜಾರಿ, ತಾಯ್ನಾಡಿನ ಜನರ ಬಗ್ಗೆ ಇರುವ ಕಾಳಜಿ, ಜನರ ಕಷ್ಟಗಳನ್ನು ಆಲಿಸುತ್ತಾ ತನ್ನ ಕೈಯಲ್ಲಾದ ಸಹಾಯ ಮಾಡುತ್ತಾ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬರಹ: ಪುಷ್ಪರಾಜ್ ಪೂಜಾರಿ


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »