TOP STORIES:

FOLLOW US

ನೃತ್ಯಪಟು ಬಹುಮುಖ ಬಾಲ ಪ್ರತಿಭೆ ದಿಶಾ ಕೆ ಪೂಜಾರಿ


‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತಿನಂತೆ ಚಿಕ್ಕ ವಯಸ್ಸಿನಲ್ಲೇ ಹಲವು ಪ್ರಶಸ್ತಿಗಳನ್ನು ಮುಡಿಗೆರಿಸಿ ಕೊಂಡವಳು.’ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು’ ಎನ್ನುವಾಗೆ ಇನ್ನೂ 11 ವರ್ಷದಲ್ಲೇ ಜಿಲ್ಲಾಮಟ್ಟ,ರಾಜ್ಯ ಮಟ್ಟದವರೆಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡು,ಸಾಧನೆಯ ಹಾದಿಯಲ್ಲಿ ಹೆಜ್ಜೆಗಳನ್ನಿಡುತ್ತ ಸಾಗುತ್ತಿರುವ ಹೆಮ್ಮೆಯ ನೃತ್ಯಪಟು ಬಹುಮುಖ ಬಾಲ ಪ್ರತಿಭೆ ದಿಶಾ.ಕೆ.ಪೂಜಾರಿ.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕೇಶವ ಪೂಜಾರಿ ಮತ್ತು ರಾಜೀವಿ.ಕೆ ದಂಪತಿಗಳ ಮೊದಲನೆ ಸುಪುತ್ರಿಯಾಗಿ 6/10/2009ರಲ್ಲಿ ಜನಿಸಿದರು. ಒಂದು ಸಹೋದರ ಒಳಗೊಂಡ ಚಿಕ್ಕ ಸಂಸಾರ ಇವರದ್ದು. ಪ್ರಸ್ತುತ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.

ಚಿಕ್ಕ ವಯಸ್ಸಿನಲ್ಲೇ ನೃತ್ಯದಲ್ಲಿ ಆಸಕ್ತಿ ಇದ್ದ ಇವರು, ಈಗಾಗಲೇ 500 ಮಿಕ್ಕಿ ವೇದಿಕೆಯಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿದ್ದಾರೆ.ಇಷ್ಟೇ ಅಲ್ಲದೆ ಯಕ್ಷಗಾನ,ನಾಟಕ,ಚಿತ್ರಕಲೆ,ಯೋಗ,ಭರತನಾಟ್ಯ,ಸಂಗೀತ ಮತ್ತು ನಿರೂಪಣೆ ಕ್ಷೇತ್ರದಲ್ಲು ಮುಂಚೂಣಿಯಲ್ಲಿರುವುದು ಇವರಲ್ಲಿ ಇರುವ ಪ್ರತಿಭೆಗೆ ಸಾಕ್ಷಿಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಹತ್ತು-ಹಲವು ಸಂಘ-ಸಂಸ್ಥೆಗಳು ಸನ್ಮಾನಗಳು ಇವರ ಮಡಿಲಿಗೆ ಸೇರಿದೆ. ಸ್ಥಳೀಯ ಟಿ.ವಿ ಚಾನೆಲ್ ಗಳು ನಡೆಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‘ರಾರಾಸಂ ಫೌಂಡೇಶನ್ ರವರು ನಡೆಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಯುವವಾಹಿನಿ ನಡೆಸುವ ‘ಡೆನ್ನಾನ ಡೆನ್ನಾನ’ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜನರ ಮನಸ್ಸನ್ನು ಗೆದ್ದ ಹೆಮ್ಮೆಯ ಬಾಲ ಸಾಧಕಿ.#Namma Tv ಚಾನೆಲ್ ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ‘ಬಿಟ್ ದಿ ಬಿಟ್’ ನೃತ್ಯ ಸ್ಪರ್ಧೆಯಲ್ಲಿ, ‘ವಾಯ್ಸ್ ಝೊನ್’ ಏರ್ಪಡಿಸಿದ ‘ನಮ್ಮ ಡ್ಯಾನ್ಸ್ ಚಾಂಪಿಯನ್’ ಟಿ.ವಿ ಶೋನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

#Bodhi media ಆಯೋಜಿಸಿದ “ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್” ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಗಳಿಸಿದ್ದಾರೆ. “ಡ್ಯಾನ್ಸ್ ಮಾಡಿ ಬಹುಮಾನ ಗೆಲ್ಲಿರಿ” ಎನ್ನುವ ವಿಭಿನ್ನ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ ಕೀರ್ತಿ ಈ ಬಾಲ ಪ್ರತಿಭೆಯದ್ದು, ಇಷ್ಟೇ ಅಲ್ಲದೆ ಮಾಜಿ ಸಚಿವರಾದ ರಮನಾಥ ರೈರವರಿಂದ ಸನ್ಮಾನವನ್ನು ಗಿಟ್ಟಿಸಿಕೊಂಡು,ಹೆಗ್ಗಳಿಕೆ ಮಾತುಗಳನ್ನಾಡಿ,ಶುಭ ಹಾರೈಸಿದ್ದಾರೆ. ಕನ್ನಡ ಚಲನಚಿತ್ರದಲ್ಲಿ ಬಾಲ ನಟಿಯಾಗಿ ಬಣ್ಣ ಹಚ್ಚಿ ನಟನೆ ಮಾಡಿರುವುದು ಇವರ ಸಾಧನೆಯ ದೊಡ್ಡ ಹೆಜ್ಜೆ ಆಗಿದೆ ಮತ್ತು ಈ ಚಲನಚಿತ್ರಯು ಸಾಧ್ಯದಲ್ಲೆ ಬಿಡುಗಡೆಗೊಳ್ಳಲಿದೆ.ಚಿಕ್ಕ ವಯಸ್ಸಿನಲ್ಲೇ ಹಲವು ಶಾರ್ಟ್ ಫಿಲ್ಮ್ ಮತ್ತು ಆಲ್ಬಮ್ ಸಾಂಗ್ ನಲ್ಲಿ ಪಾತ್ರಗಳನ್ನು ಮಾಡಿ ನಟನೆಯಲ್ಲು ತಮ್ಮ ಛಾಪುನ್ನು ಮೂಡಿಸಿದ್ದಾರೆ.

ಹತ್ತು ಹಲವು ಪ್ರಶಸ್ತಿ,ಸನ್ಮಾನಗಳನ್ನು ಬಾಚಿಕೊಂಡಿರುವ ದಿಶಾರವರು ಮತ್ತು ಈಗಾಗಲೇ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇವರು ಪ್ರಸ್ತುತ ‘ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್’ ಕಡೇಶಿವಾಲಯದ ತಂಡದ ನಾಯಕ ಮತ್ತು ಕೋರಿಯೊಗ್ರಾಪರ್ ಆದ ಮಹೇಶ್ ಕುಲಾಲ್ ಇವರಿಂದ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.

 

ನಿಮ್ಮೆಲ್ಲಾ ಕನಸು ನನಸಾಗಲಿ,ಸಾಧನೆಯ ಶಿಖರವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ,ಸಾಧನೆಯ ಹಾದಿ ಸುಗಮವಾಗಲಿ,ಇನ್ನಷ್ಟು ಅವಕಾಶಗಳು ನಿಮ್ಮ ಮಡಿಲಿಗೆ ಸೇರಲಿ,ಪ್ರಶಸ್ತಿ ಪುರಸ್ಕಾರಗಳು ನಿಮಗೆ ಹರಸಿ ಬರಲಿ ಎನ್ನುವ ಶುಭಾಶಯಗಳೊಂದಿಗೆ,ನೃತ್ಯ ಲೋಕದಲ್ಲಿ ಇನ್ನೂ ಎತ್ತರದ ಸ್ಥಾನಕ್ಕೇರಲು ಈ ಪ್ರತಿಭೆಯನ್ನು ಹರಸಿ,ಹಾರೈಸಿ,ಆರ್ಶಿವಾದಿಸೋಣ ಎನ್ನುವ ಕೋರಿಕೆ.

✍ ರಾಜೇಶ್ ಎಸ್ ಬಲ್ಯ


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »