TOP STORIES:

ಪ್ರಾಚೀನ_ಹೋರಾಟಗಾರರ ಕೊಲೆ ಮಾಯಕದ ರೂಪವೇ!?


ಪ್ರಾಚೀನ_ಹೋರಾಟಗಾರರ_ಕೊಲೆ_ಮಾಯಕದ_ರೂಪವೇ_!?

ಸಂದು ಹೋದ ವ್ಯಕ್ತಿ ಶಕ್ತಿಗಳನ್ನು ಮಣ್ಣು ಮರ ಕಲ್ಲುಗಳ ಸಂಕೇತದಿಂದ ಸ್ಮರಿಸಿ ಅವುಗಳನ್ನು ಮನುಷ್ಯ ಶರೀರದಲ್ಲಿ ಅವಾಹನೆಮಾಡಿಸಿ ಪೂಜಿಸುವ ಪ್ರಾಚೀನ ಪರಂಪರೆ ನಮ್ಮ ದೈವಾರಾಧನೆ. ಪೂರ್ವ ಪ್ರಾಚೀನ ಪರಂಪರೆಯಲ್ಲಿ ಆರಾಧನೆ ಖಾಸಗಿವಲಯಕ್ಕೆ ಸೀಮಿತ. ಯಾವಾಗ ಖಾಸಗಿ ವಲಯದಿಂದ ಬಯಲಿಗೆ ಕಾಲಿಟ್ಟಿತೋ ಅಂದೆ ಶಕ್ತಿಗಳನ್ನು ವಿಗ್ರಹ ಗಳಲ್ಲಿ ಆವಾಹನೆಮಾಡಿ ಅದಕ್ಕೊಂದು ಹೊಸ ಪುರಾಣಗಳನ್ನು ಸೃಷ್ಟಿಸಿ ಸಂದು ಹೋದವರ ಪ್ರಾಚೀನ ಚರಿತ್ರೆ ಮರೆಯಾಗಿ ಹೋಯಿತು. ಕಾಲದಲ್ಲಿಸರ್ವಾಧಿಕಾರಿಗಳ ದೋರಣೆಗೆ, ಜಾತಿ ಪದ್ದತಿಗೆ, ಅಸಮಾನತೆಗೆ, ಮತ್ಸರದ ಕಿಚ್ಚಿಗೆ ಬಲಿಯಾದ ಸತ್ಯ ಸಂಧರ ಕೊಲೆಗಳನ್ನು ದೈವಗಳತಲೆಗೆ ಹಚ್ಚಿ ಮಾಯಕ ಹೊಸ ರೂಪ ನೀಡಿ ಸ್ವಾಭಿಮಾನದ ಚರಿತ್ರೆಗೆ ಹೊಸ ರೂಪಕ ಸೃಷ್ಟಿಸಿದರು.

ಹೀಗೆ ದೈವಗಳ ಮಾಯಕದ ರೂಪಕಕ್ಕೆ ಬಲಿಯಾದವರಲ್ಲಿ ಪ್ರಮುಖರು ಮಾಯಂದಾಲ್, ಕಿನ್ನಿಮಾನಿ, ಕೊರಗತನಿಯ, ತನ್ನಿಮಾನಿಗ, ಕೋರ್ದಬ್ಬು.ಇನ್ನೂ ಕೆಲವು ದೈವಗಳು ದೇವರ ಬೆವರಿಂದ ಹುಟ್ಟಿದ್ದು, ಶಾಪದಿಂದ ಹುಟ್ಟಿದ್ದು, ಮೊಟ್ಟೆಯಿಂದ ಹುಟ್ಟಿದ್ದೆನ್ನುವ ಕಟ್ಟುಕಥೆಗಳು ಇಂದಿಗೆ ನಂಬಿಕೆಯಾಗಿ ಉಳಿದಿದೆಯಾದರೂ ಅವುಗಳ ಹಿಂದಿರುವ ಮರ್ಮ ವಾಸ್ತವಕ್ಕೆ ಪ್ರಶ್ನೆಯಾಗಿ ಉಳಿದಿದೆ. ಇಂದುನಾವುಗಳು ನಂಬುತ್ತಿರುವ ಮನುಷ್ಯ ರೂಪಿ ಶಕ್ತಿಗಳು ಅಥವಾ ಸತ್ಯಗಳು ಒಂದಿಲ್ಲೊಂದು ಕಾಲದಲ್ಲಿ ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆ,ಸರ್ವಾಧಿಕಾರಿ ದೋರಣೆಯ ವಿರುದ್ದ ಹೋರಾಡಿ ವೀರಮರಣವನ್ನಪಿದವರು.

ತುಳುನಾಡಿನ ಪ್ರಾಚೀನ ಆಚರಣೆ ನಂಬಿಕೆ ಮೇಲೆ ಕೇಂದ್ರೀಕೃತವಾಗಿದ್ದರೂ ಕೆಲವೊಂದು ಮೂಡ ನಂಬಿಕೆಗಳೂ ಕೂಡಸೇರಲ್ಪಟ್ಟಿವೆ.ಕೈ ಮುಗಿದು ಪ್ರಾರ್ಥನೆ ಮಾಡಿದ ತಕ್ಷಣ ಒಲಿಯುವ ದೈವಗಳು ಸತ್ಯ ಸಂಧರನ್ನು ಮಾಯಕ ಮಾಡುವುದೆಂದರೆನಂಬಲಸಾಧ್ಯ.ಮೂಲ ಮೈಸಂಧಾಯ ದೈವದಿಂದ ಕೊರಗ ತನಿಯ ಮಾಯಕ ಆಗುವುದು, ಜುಮಾದಿಯಿಂದ ಮಾಯಂದಾಲ್ಹಾಗೇನೆ ತಪ್ಪೇ ಮಾಡದ ಕಿನ್ನಿಮಾನಿಗೆ  ಉಳ್ಳಾಕ್ಲು ಶಿಕ್ಷಿಸೋದು ವಿಷಯಗಳ ಬಗ್ಗೆ ಮನೋಧರ್ಮ ಪುಸ್ತಕದಲ್ಲಿವಿಮರ್ಶಾತ್ಮಕವಾಗಿ ಬರೆದಿದ್ದಾರೆ ರವಿ ರಾ ಅಂಚನ್..

ತುಳುವರ ಭೂತಾರಾಧನೆಯಲ್ಲಿ ಗಂಡು ಹೆಣ್ಣಿನ ಸಂಯುಕ್ತ ಆರಾಧನೆಯ ನೆಲೆಯಲ್ಲಿ ತನ್ನಿಮಾನಿಗ ಕೋರ್ದಬ್ಬು ದೈವಗಳು ವಿಶಾಲಪಸರಣೆಯನ್ನು ಪಡೆದಿದೆ. ದೈವಾರಾಧನೆಯಲ್ಲಿ ತನ್ನಿಮಾನಿಗಳ ಸೋದರನಾಗಿ ಗುರುತಿಸಲ್ಪಡುವ ಕೋರ್ದಬ್ಬು ಬಿಲ್ವಿದ್ಯೆ, ಮಂತ್ರವಿದ್ಯೆ, ತಂತ್ರ ವಿದ್ಯೆ, ವೈದ್ಯ ವಿದ್ಯೆ ಯಲ್ಲಿ ಅದ್ವಿತೀಯ ಸಾಧಕ. ಈತನ ಪ್ರತಿಭೆ ಮನೆಮಾತಾದಾಗ ಸಮಾಜದ ಮತ್ಸರ ವೈರಗಳಿಗೆಗುರಿಯಾಗಬೇಕಾಯಿತು.ಸಭ್ಯತೆಯನ್ನು ಮೀರಿದ ಅಮಾನವೀಯತೆಯ ವ್ಯವಸ್ಥೆಯಲ್ಲಿ ಸಾಧನೆಗಿಂತ ಹುಟ್ಟು ಮೇಲಾದಾಗ ಪ್ರತಿಭೆಇದ್ದರೂ ಕೋರ್ದಬ್ಬು ಅವಕಾಶ ವಂಚಿತನಾಗಿದ್ದು ಮಾತ್ರವಲ್ಲದೆ ಜೀವಿಸುವ ಹಕ್ಕನ್ನೆ ಅಂದಿನ ಸಮಾಜ ಕಸಿದು ಬಾವಿಗಿಳಿಸಿ ಅದರಮೇಲೆ ಹಾಸುಕಲ್ಲು ಮುಚ್ಚುತ್ತಾರೆ. ಅಂದಿನ ಬಹುಸಮಾಜ ಇದನ್ನು ಪ್ರತಿಭಟಿಸದೇ ಇದ್ದಾಗ ತನ್ನಿಮಾನಿಗ ದಿಟ್ಟತನದಿಂದಪ್ರತಿಭಟಿಸುತ್ತಾಳೆ.ತನ್ನಿಮಾನಿಗಳಂತೆ ಕಲ್ಲುರ್ಟಿ ಕೂಡ ತನ್ನ ಸೋದರ ಕಲ್ಕುಡನಿಗೆ ಭೈರವ ಅರಸುವಿನಿಂದಾದ ಅನ್ಯಾಯಕ್ಕೆ ಸಿಡಿದೆದ್ದಅಸಾಮಾನ್ಯ ತಂಗಿಯಾಗಿ ತುಳುನಾಡಿನ ಪ್ರಾಚೀನತೆಯಲ್ಲಿ ಮಹಿಳೆಯೊಬ್ಬಳ ಹೋರಾಟ ಬದುಕನ್ನು ಚಿತ್ರಿಸುತ್ತದೆ.

ತನ್ನಿಮಾನಿಗ, ಬಬ್ಬು, ಕಲ್ಕುಡ ಕಲ್ಲುರ್ಟಿ ತಮಗಾದ ಅನ್ಯಾಯಕ್ಕೆ ಹೋರಾಡಿ ದೈವತ್ವ ಪಡೆದರೆ, ಇತ್ತ ಮಾಯಂದಾಲ್, ಕೊರಗತನಿಯ, ಕಿನ್ನಿಮಾನಿ ಸಂಘರ್ಷ ಹೋರಾಟದಲ್ಲಿ ಉಳ್ಳವರ, ಮೇಲ್ವರ್ಗದ ಜನರ, ಅಧಿಕಾರಶಾಹಿತ್ವಕ್ಕೆ ಬಲಿಯಾಗಿ ದೈವಗಳಮಾಯಕ ರೂಪಕಕ್ಕೆ ಕಥೆಯಾದವರು.ಜುಮಾದಿ ಗೆ ನೇಮ ನೀಡಲು ಪಾಂಗಳ ಬನ್ನಾರ ಹಾಗೂ ಆಲಿಬಾಲಿ ನಾಯಕರ ನಡುವೆನಡೆದ ವಾಗ್ವಾದಕ್ಕೆ ಜುಮಾದಿ ಕೈಯ್ಯಲ್ಲಿ ಆಲಿಬಾಲಿ ನಾಯಕನ ಸೋದರ ಸೊಸೆ ಮಾಯಂದಾಲ್ ಮಾಯಕ ಆಗುವುದರಲ್ಲಿನಿಗೂಢತೆ ಎದ್ದು ಕಾಣುತ್ತದೆ. ತಪ್ಪೇ ಮಾಡದ ಆಗ ತಾನೆ ಮಗುವಿಗೆ ಜನ್ಮ ನೀಡಿದ ಮಾಯಂದಾಲ್ ಳನ್ನು ಮಾಯಕ ಮಾಡುವಷ್ಟುಕ್ರೂರಿಯೆ ನಂಬಿದವರಿಗೆ ಇಂಬು ಕೊಡುವ ಜುಮಾದಿ. ಇಲ್ಲಿ ಬನ್ನಾರನಿಗೆ ಆಲಿಬಾಲಿ ನಾಯಕನಿಂದಾದ ಅವಮಾನಕ್ಕೆ ಬನ್ನಾರನೇಕೊಲೆ ಮಾಡಿ ತನ್ನೆಸರನ್ನು ಉಳಿಸಿಕೊಳ್ಳಲು ಜುಮಾದಿ ಮೇಲೆ ಹಾಕಿರುವ ಸಾಧ್ಯತೆಯೇ ಹೆಚ್ಚು.ಮುಂದಕ್ಕೆ ಬನ್ನಾರನ ಸೊಸೆದುಗ್ಗಮ್ಮೆ   ಕೊಲೆಯನ್ನು ಮಾಯಂದಾಲ್ ಮಾಡಿದಳೆನ್ನುವ ಕಥೆ ಕೂಡ ಇದೆ. ಇಲ್ಲೂ ಕೂಡ ಅನುಮಾನದ ಹೋಗೆಖಂಡಿತವಾಗಿಯೂ ಪುನಃ ಬನ್ನಾರನ ಕಡೆಗೆ ಹೋಗುತ್ತದೆ.ಇದೆ ರೀತಿಯಲ್ಲಿ ಕುಜುಂಬ ಮುದ್ದೆರನ ಹೆಂಡತಿ ಕಾವು ಸನಿಹದಮಾಡಂದೂರಿನ ಕಿನ್ನಿಮಾನಿ ಸಹ ತನ್ನ ಗಂಡನ ಮೋಸದಾಟವನ್ನು ವಿರೋಧಿಸಿ ತವರು ಸೇರುತ್ತಾಳೆ. ಮುದ್ದೆರ ಎಷ್ಟು ಕೇಳಿದರೂಪಡುಮಲೆಗೆ ಬರಲು ಒಪ್ಪದೇ ಇದ್ದಾಗ ಊರವರ ಮುಂದೆ ತನಗೆ ಅವಮಾನವಾಯಿತು ಎಂದು ಅವಳನ್ನು ಹತ್ಯೆ ಮಾಡಿಸಿದ ಎಂಬಅನುಮಾನ ಮನೋಧರ್ಮ ಪುಸ್ತಕದಲ್ಲಿದ್ದರೆ ಸ್ಥಳೀಯವಾಗಿ ಕಥೆ ಬೇರೇನೆ ಇದೆ. ಮನೆಬಿಟ್ಟು ಹೋದ ಹೆಂಡತಿಯನ್ನು ಕರೆತರಲುಮುದ್ದೆರ ಉಳ್ಳಾಕ್ಲು ಗೆ ಹರಕೆ ಹೇಳಿ ಅವನು ಅದಕ್ಕೆ ತಪ್ಪಿದಾಗ ಉಳ್ಳಾಕ್ಲು ಮಾಯಕ ಮಾಡಿದಾಗಿ ಪಸರಣೆ ಇದೆ. ಇಲ್ಲಿರುವ ಗೊಂದಲಹರಕೆಯ ಮಾತನ್ನು ತಪ್ಪಿದ್ದು ಕುಜುಂಬ ಮುದ್ದೆರ ಆದರೆ ಶಿಕ್ಷೆ ಕಿನ್ನಿಮಾನಿಗೆ ಮತ್ತದೆ ಪ್ರಶ್ನೆ !ಉಳ್ಳಾಕ್ಲು ಎಂಬ ರಾಜನ್ ದೈವ ತಪ್ಪುಮಾಡದ ಕಿನ್ನಿಮಾನಿಗೆ ಶಿಕ್ಷಿಸಲು ಸಾಧ್ಯವೇ !?

ಕೊರಗ ತನಿಯರ ಕಥೆಯನ್ನು ಒಮ್ಮೆ ಮೆಲುಕು ಹಾಕಿದರೆ ಸಾಕು ತಾಯಿ ಮೈರಕ್ಕೆ ಬೈದ್ಯೆತಿಯ ತಿರಿಬಾಳೆಯ ಹರಕೆಯನ್ನು ಕದಿರೆಗೆಕೊಂಡೊದಾಗ ಅಲ್ಲಿನ ಬಹುಜನ ಆತನ ಪ್ರವೇಶವನ್ನು ನಿರಾಕರಿಸುತ್ತಾರೆ. ತಾನು ತಂದ ಹರಕೆ ದೇವರಿಗೆ ಆಗುವುದಾದರೆ ತಾನ್ಯಾಕೆಆಗುವುದಿಲ್ಲ ಎಂಬ ಪ್ರಶ್ನೆಯನ್ನಿಟ್ಟು ದೇವಳದ ವಠಾರದಲ್ಲಿದ್ದ ಮಾದಳ ಮರ ಹತ್ತಿ ಹಣ್ಣು ಕೀಳಿದಾಗ ಈತನ ಕೊಲೆ ನಡೆಯುತ್ತದೆ. ತುಳುನಾಡಿನ ಭೂತಗಳ ಐತಿಹ್ಯದಲ್ಲಿ ಈತ ದೇವರ ಪ್ರಕೋಪಕ್ಕೆ ಬಲಿಯಾಗಿ ಮಾಯಕ ಆಗುತ್ತಾನೆ. ಇಲ್ಲಿ ದೇವರ ಪ್ರಕೋಪ ವನ್ನುಮುನ್ನೆಲೆಗೆ ತಂದು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಕೊರಗ ತನಿಯ ಕೊಲೆ ಸಂರಕ್ಷಣೆ ಪಡೆದುಕೊಂಡಿತು.

ತುಳುವರ ಮೌಖಿಕ ಪರಂಪರೆಯಲ್ಲಿ ದೈವಾರಾಧನೆ ನಿಂತಿರೋದೇ ನಂಬಿಕೆಯ ಮೇಲೆ.ಇಲ್ಲಿ ಪ್ರಾಚೀನ ಕಾಲದಲ್ಲಿನಹೋರಾಟಗಾರರು ಸ್ವಸ್ಥ  ಸಮಾಜಕ್ಕಾಗಿ ತಮ್ಮ ಜೀವವನ್ನು ತೆತ್ತು ನಮ್ಮ ಇಂದಿನ ಭಕ್ತಿಯ ನಂಬಿಕೆ ಗೆ ಇಂಬು ಕೊಡುತ್ತಾ ಬಂದಿದ್ದಾರೆ. ಇಲ್ಲಿ ದೈವಗಳಿಂದ ಮಾಯಕ ಆದ ಕಥೆಗಳು ಜನಜನಿತ ಆಗಿದ್ದರೂ ವಿಮರ್ಶೆಯ ದ್ರಿಷ್ಟಿ ಯಲ್ಲಿ ಅವುಗಳು ಕೊಲೆಗಳು ಎಂಬುದಾಗಿಮನವರಿಕೆಯಾದರೂ  ಕೊನೆಯಲ್ಲಿ ಉಳಿಯುವುದು ನಂಬಿಕೆ ಮಾತ್ರ. ನಮ್ಮ ಧೈವಾರಾಧನೆಯ ಬುನಾದಿಯೇ ನಂಬಿಕೆ..

 

✍ : ತೇಜು ಬಿರ್ವ ಕೇಪುಳು

ಮಾಹಿತಿ : ಮನೋಧರ್ಮ


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »