TOP STORIES:

FOLLOW US

ಬರವುದ ಬಂಗಾರ್, ತುಳುವ ಕೇಸರಿ; ನಮ್ಮ ಹೆಮ್ಮೆಯ ಜನನಾಯಕ ಗಣೇಶ್ ಬಿ ಅಳಿಯೂರು


ತುಳು ರಂಗಭೂಮಿಯ ಹೆಸರಾಂತ ಕಥೆಗಾರ, ಗೀತರಚನೆಕಾರ, ನಿರ್ದೇಶಕ, ನಿರೂಪಕ ಹಾಗೂ ಕಲಾವಿದ. ಹಾಗೆಯೇ ತುಳುವ ಮಣ್ಣಿನ ಗಂಡುಕಲೆ ಯಕ್ಷಗಾನದ ಯಕ್ಷಕೃತಿ ರಚನೆಕಾರ. ಬರವುದ ಬಂಗಾರ್, ತುಳುವ ಕೇಸರಿ ಬಿರುದಾಂಕಿತ ನಮ್ಮ ಹೆಮ್ಮೆಯ ಜನನಾಯಕ ಗಣೇಶ್ ಬಿ ಅಳಿಯೂರು.

ಹೌದು ಒಬ್ಬ ಉತ್ತಮ ಗುರುವಿಗೆ ಅತ್ಯುತ್ತಮ ಶಿಷ್ಯ ನಾಗಬೇಕು, ಅಂತೆಯೇ ಹೆತ್ತ ತಂದೆ ತಾಯಿಯು, ತನ್ನ ಮಗನ ಸಾಧನೆಯಿಂದ ನಾಲ್ಕು ಜನ ಹೆಮ್ಮೆಯಿಂದ ಕೊಂಡಾಡಬೇಕು.
ಮಗ ಸಾಧನೆಯಲ್ಲಿ ಎತ್ತರ ಎತ್ತರವಾಗಿ ಬೆಳೆಯಬೇಕು ಅದೇ ತಾನೇ ಪೋಷಕರ ಮನ ಬಯಸುವುದು.ಅಂತಹ ಉನ್ನತ ಸಾಧಕರಲ್ಲಿ ನಮ್ಮ ಹೆಮ್ಮೆಯ ಗಣೇಶ್ ಬಿ ಅಳಿಯೂರು.

ದಿ. ಬಾಲಕೃಷ್ಣ ಪೂಜಾರಿ ಹಾಗೂ ವಿಮಲ ಬಾಲಕೃಷ್ಣ ಪೂಜಾರಿಯವರ ದ್ವಿತೀಯ ಪುತ್ರನಾಗಿ ಅಳಿಯೂರಿನ ಲೋಕೇಶ್ ನಿವಾಸದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಅಳಿಯೂರು ಹಾಗೂ ಪ್ರೌಢಶಿಕ್ಷಣವನ್ನು ಸರಕಾರಿ ಸಂಯುಕ್ತ ಪ್ರೌಢಶಾಲೆ ಅಳಿಯೂರಿ ನಲ್ಲಿ ಮುಗಿಸಿದರು.ಬಾಲ್ಯದಲ್ಲೇ ನಟನೆಯ ಬಗ್ಗೆ ಅಪಾರ ಒಲವು ತೋರುತ್ತಿದ್ದ ಇವರು ಶಾಲಾ ದಿನಗಳಲ್ಲಿ ಪ್ರತಿಭಾಕಾರಂಜಿಯಲ್ಲಿ ಬಾಗವಹಿಸಿ ಬಹುಮಾನ ಗೆದ್ದು ಬುರುತ್ತಿದ್ದರು ಇದು ಇವರ ಕಲಾಸೇವೆಯ ಮೇಲಿದ್ದ ಅಪಾರವಾದ ಆಸಕ್ತಿಯನ್ನು ತೋರಿಸುತಿತ್ತು.ಬರವುದ ಬೀರೆ ಖ್ಯಾತಿಯ ದಿ.ಸುರೇಂದ್ರ ಕುಮಾರ್ ಕಲಾತ್ರ್ಪಾದೆ ಇವರ ಶಿಷ್ಯರಾಗಿ ಕಲಾಮಾತೆಯ ಸೇವೆಗೆ ಬರುತ್ತಾರೆ.

ನಾಟಕಕ್ಷೇತ್ರಕ್ಕೆ ಹೆಚ್ಚಿನ ಒಲವು ತೋರಿ ಸುಮಾರು 12ನಾಟಕಗಳನ್ನು ಬರೆದಿರುವ ಇವರು ತುಳುರಂಗಭೂಮಿಗೆ ಹಿಟ್ ನಾಟಕಗಳನ್ನ ಕೊಡುಗೆಯಾಗಿ ನೀಡಿದ್ದಾರೆ ಇವರ ಅಗೆಲ್ ತುಳು ನಾಟಕಕ್ಕೆ ಜಿಲ್ಲಾ ಪ್ರಶಸ್ತಿಯೊಂದಿಗೆ ಮುಂಬಯಿಯಲ್ಲಿ ಸೇರಿ ಹಲವಾರು ಯಶಸ್ವಿ ಪ್ರಯೋಗ ಕಂಡು ಜನಮೆಚ್ಚುಗೆ ಪಡೆದಿರುತ್ತದೆ ಬರಿತ ಇಲ್ಲಾದ ಭಾರತಿ ತುಳು ನಾಟಕ ನೂರಾರು ಪ್ರಯೋಗದೊಂದಿಗೆ ಮಾಧ್ಯಮಗಳಿಂದ ಉತ್ತಮ ಕಥೆ ಎಂಬ ಪ್ರಶಂಸೆ ಲಭಿಸಿದೆ ನಾಲ್ ಗೋಡೆದ ನಡುಟು ಎಂಬ ನಾಟಕ ಬೆಂಗಳೂರು ಮಂಗಳೂರಿನಲ್ಲಿ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದು ಭಾರೀ ಬೇಡಿಕೆಯ ನಾಟಕವಾಗಿ ಹೊರಹೊಮ್ಮಿದೆ ಮೂರ್ತೆ ಮುದರೆ ತುಳುನಾಡಿನ ದೈವಗಳ ಮಾಯ ಶಕ್ತಿಯ ನಂಬಿಕೆ ಹಾಗೂ ಅದರ ಶಕ್ತಿಯನ್ನ ತೋರಿಸಿಕೊಟ್ಟಿತು. ಈ ನಾಟಕ ಇಡೀ
ತುಳು ರಂಗಭೂಮಿಯನ್ನೆ ತಲ್ಲಣ ಗೊಳಿಸಿ ಹೊಸ ಮಿಂಚು ಹರಿಸಿದ ಒಂದು ಅದ್ಭುತ ನಾಟಕ.

ಸದ್ದುನ ಸುದ್ದಿಜ್ಜಿ, ಪಾರಿಜಾತ, ದೇವೆರ್ ತೂಪೆರ್, ಗೌರಿ ಗಣಪೆ ಮುಂತಾದ ಯಶಸ್ವಿ ನಾಟಕಗಳನ್ನು ತುಳುರಂಗಭೂಮಿಗೆ ನೀಡಿದ ಖ್ಯಾತಿ ಇವರಿಗೆ ಸಲ್ಲಬೇಕು.ಇನ್ನೂ ಕೇವಲ ರಂಗಭೂಮಿಯಲ್ಲಿ ಅಲ್ಲದೇ ತೌಳವ ರಾಜ್ಯದ ಗಂಡುಕಲೆ ಯಕ್ಷಗಾನ ಕ್ಷೇತ್ರಕ್ಕೂ ಇವರು ಕೊಡುಗೆ ನೀಡಿದ್ದಾರೆ. ತನ್ನ ಚೊಚ್ಚಲ ಮೊದಲ ಕಥಾ ಹಂದರ ಬನತ ಬಾಲೆ ಎಂಬ ಯಕ್ಷಕೃತಿ ಅಪಾರ ಜನಮೆಚ್ಚುಗೆಯಿಂದ ಪ್ರದರ್ಶನ ಕಂಡಿತು.ಇವರ ಬಂಗಾರ್ದ ತೊಟ್ಟಿಲ್, ಪರಕೆ ಪ್ರಸಂಗ ಸುಂಕದಕಟ್ಟೆ ಮೇಳ ಮಂಗಳಾದೇವಿ ಮೇಳಗಳಲ್ಲಿ ಪ್ರದರ್ಶನ ಪಡೆಯುತ್ತಿವೆ.ಇನ್ನೂ ಇವರು ನಿರೂಪಣೆಯಲ್ಲಿಯೂ ತನ್ನ ಚಾಪನ್ನು ಮೂಡಿಸಿದ್ದಾರೆ. ತನ್ನ ಧ್ವನಿಯಲ್ಲಿ ಅದೆಷ್ಟೋ ತುಳುನಾಡಿನ ಜನರನ್ನು ಮೋಡಿ ಮಾಡಿದ್ದಾರೆ.ಇವರ ನಿರೂಪಣೆಯ ಇಂಪನ್ನೂ ಕೇಳಿ ಯಾರು ಮಾರ್ರೆ ನಿರೂಪಣೆ ತುಂಬ ಒಳ್ಳೆಯದುಂಟು ಸಕತ್ ವಾಯ್ಸ್ ಮಾರ್ರೆ ಎಂದವರು ಅನೇಕರು.

ತುಳುವ ಜನಪದ ಶೈಲಿಯ ಕಾರ್ಯಕ್ರಮಗಳಲ್ಲಿ ಪ್ರಸಿದ್ದಿ ಪಡೆದು ಪ್ರಸ್ತುತ ಕೆಲ ಚಾನೆಲ್ ಗಳಲ್ಲಿ ಅತಿಥಿ ನಿರೂಪಕರಾಗಿ ಕೆಲಸವನ್ನು ಮಾಡುತ್ತಿದ್ದರೆ.ಕೆಲ ಟೆಲಿಪಿಲ್ಮ್ ಗಳಿಗೆ ತನ್ನ ಧ್ವನಿ ಡಬ್ಬಿಂಗ್ ನೀಡುತ್ತ ಯುವ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತ ಕಲಾಸೇವೆಗೈಯುತ್ತಿದ್ದರೆ.ತನ್ನ ಏಳವೆಯಲ್ಲೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಮತಗಳಿಂದ ಗೆದ್ದು ಅಳಿಯೂರಿನ ಅಭಿವ್ರಧ್ದಿಯಲ್ಲಿ ತೊಡಗಿಸಿಕೊಂಡು.ಜನರ ಕಷ್ಟಕ್ಕೆ ಹಗಲಿರುಳು ಎನ್ನದೇ ಸ್ಪಂದಿಸುತ್ತ.ಊರಿನಲ್ಲಿ ಜನಪ್ರಿಯ ಯುವನಾಯಕರಾಗಿ ಗುರುತಿಸಿಕೊಂಡು ಗರಡಿ ಫ್ರೆಂಡ್ಸ್ ಅಳಿಯೂರು ಕೂಟದ ಮುಖೇನ ಸಮಾಜಸೇವೆ ಮಾಡುತ್ತ ಊರಿಗೆ ಸಮಾಜಕ್ಕೆ ಹೆಸರು ತರುತ್ತಾ ಹತ್ತೂರಿನಲ್ಲಿ ತನ್ನದೇ ಅಭಿಮಾನಿ ಬಳಗವನ್ನ ಪಡೆದಿರುತ್ತಾರೆ.ಇವರ ಕಲಾಸೇವೆಗೆ ಸಂದಿರುವ ಗೌರವಗಳು
ನಾಟಕ ರಂಗ, ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ 2016 ಪ್ರೇಂಡ್ಸ್ ಕ್ಲಬ್ ರಿ ಹೊಸಂಗಡಿ ಗೌರವ ಸನ್ಮಾನ ನಮ ಮಾತೆರ್ಲ ಒಂಜೆ ಕಲಾ ತಂಡದ ಗೌರವ ಸನ್ಮಾನ 2018
ಅಳ್ವಾಸ್ ರಂಗ್ 2019ಗೌರವ ಸನ್ಮಾನ ನೀಡಿ ಗುರುತಿಸಿದ್ದಾರೆ.

ಒಡಿಯೂರು ಸಂಸ್ಥಾನದಿಂದ ಆಟಿದ ತಮ್ಮನ 2019 ಗೌರವ ಸನ್ಮಾನ ನೀಡಿ ಗುರುತಿಸಿದ್ದಾರೆ. 2020ಕರಾವಳಿ ಕೇಸರಿ ಗೌರವ ಸನ್ಮಾನ ಹೀಗೆ ನಾಟಕ ರಂಗದಲ್ಲಿ ಉಡುಪಿ ದ.ಕ ಜಿಲ್ಲೆಯ ಹಲವು ಕಡೆ ಯುವಕ ಮಂಡಲ ಮಹಿಳಾ ಮಂಡಳಿ ಜಾತ್ರೋತ್ಸವ ಸಮಿತಿಗಳಿಂದ 45ಗೌರವ ಸನ್ಮಾನ ಯಕ್ಷಗಾನ ಪ್ರಸಂಗ ರಚನೆಗಾಗಿ ಸುಮಾರು 7ಗೌರವ ಸನ್ಮಾನ ಕಾರ್ಯಕ್ರಮ ನಿರೂಪಣೆಗಾಗಿ 3ಸನ್ಮಾನ ದೊಂದಿಗೆ ಬರವುದ ಬಂಗಾರ್ ತುಳುವ *ಕೇಸರಿ ಎಂಬ ಬಿರುದು ಪಡೆದಿರುತ್ತಾರೆ.ಇವರ ಈ ಕಲಾಸೇವೆಯು ಹೀಗೆಯೇ ಮುಂದುವರಿಯಲಿ ನಿಮ್ಮಿಂದ ತುಳುರಂಗಭೂಮಿಗೆ ಇನ್ನಷ್ಟೂ ಕೊಡುಗೆ ಸಿಗಲಿ ಹಾಗೆಯೇ ರಾಜಕೀಯದಲ್ಲೂ ಇನ್ನಷ್ಟೂ ಗೆಲುವು ಸಿಗಲಿ,ಕನಸು ಹೊತ್ತ ಯವ ಮನಸ್ಸುಗಳಿಗೆ ನೀವೂ ಮಾದರಿಯಾಗಲಿ ಎಂದು ನಮ್ಮ ಶುಭಹಾರೈಕೆ.

Credits: ವಿನೀತ್ ಆರ್ ಕೋಟ್ಯಾನ್ ಅಳಿಯೂರು & ಸುಕೇಶ್ ಪೂಜಾರಿ ಅಳಿಯೂರು

Write to us: billavaswarriors@gmail.com


Share:

More Posts

Category

Send Us A Message

Related Posts

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »

“ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ” ಪ್ರತಿಭಾ ಕುಳಾಯಿ ಆಯ್ಕೆ 


Share       ಮಂಗಳೂರು: ಸಮಾಜ ಸೇವೆಗಾಗಿ ಕುಳಾಯಿ ಫೌಂಡೇಶನ್ ರಚಿಸಿ ೫೦೦ಕ್ಕೂ ಹೆಚ್ಚು ಮಹಿಳೆ ಮತ್ತು ಮಕ್ಕಳಿಗೆ ಬದುಕು ಕಟ್ಟಿಕೊಡುತ್ತಿರುವ, ಯುವ ರಾಜಕಾರಣಿ ಪ್ರತಿಭಾ ಕುಳಾಯಿ, ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ಸ್ ಗೆ ಆಯ್ಕೆಯಾಗಿದ್ದಾರೆ. ರಷ್ಯಾದ


Read More »

ವಿದೇಶದ ಇಸ್ರೇಲ್ ನಲ್ಲಿದ್ದು ತುಳುನಾಡಿನ ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ ವ್ಯಕ್ತಿ ದಿನಕರ ಪೂಜಾರಿ


Share       ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ  ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ. ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ


Read More »