TOP STORIES:

FOLLOW US

ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..


ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ಮುಂದಿಟ್ಟುಕೊಂಡು ಯುವ ಸಮುದಾಯವನ್ನು ಜಾತಿ ಮತಬೇಧ ಮರೆತು ಸಂಘಟನೆಯಲ್ಲಿ ತೊಡಗಿಸಿಕೊಂಡು ಅಸಹಾಯಕರ ಸೇವೆ ಮಾಡುವಂತೆ ಸಂಘಟಿತರನ್ನಾಗಿ ಮಾಡುತ್ತಿರುವ ರಾಕೇಶ್ ಪೂಜಾರಿ ಅಧ್ಯಕ್ಷೆತೆಯ “ಬಿರುವೆರ್ ಕುಡ್ಲ(ರಿ)” ಸಂಘಟನೆಯ ಸ್ಥಾಪಕಾಧ್ಯಕ್ಷರಾದ, ಯುವ ನಾಯಕ “ಉದಯ್ ಪೂಜಾರಿ”ಯವರ ಜನುಮ ದಿನದಂದು(01/06/2020) “ಬೆದ್ರ ಘಟಕ”ದ ಸಂಕಲ್ಪದಂತೆ ಅಸಹಾಯಕರ ಹಸಿವನ್ನು ನೀಗಿಸುವ ಉದ್ದೇಶದಂತೆ ಮರೋಡಿಯ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಸುಮಾರು 4 ಎಕ್ರೆಯಷ್ಟು ಗದ್ದೆಯನ್ನು ಘಟಕದ ಉಪಾಧ್ಯಕ್ಷರಾದ “ಕೃಷ್ಣಪ್ಪ ಪೂಜಾರಿ”ಯವರ ನೇತೃತ್ವದಲ್ಲಿ ಘಟಕದ ಸದಸ್ಯರೆಲ್ಲರ ಸಹಕಾರದೊಂದಿಗೆ ಎರಡು ಹಂತಗಳಲ್ಲಿ ಸಾಗುವಳಿ ಮಾಡಿ, ಅದರಲ್ಲಿ ದೊರೆತಂತಹ ಅಕ್ಕಿಯನ್ನು ಇಂದು 53 ಫಲಾನುಭವಿಗಳನ್ನು ಗುರುತಿಸಿ ತಲಾ 25 kg ಯಂತೆ ಒಟ್ಟು 1325 KG ಅಕ್ಕಿಯನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಜಾತಿ ಮತಭೇದ ಮರೆತು ಈ ದಿನ ಸರಳವಾಗಿ ಮೂಡಬಿದ್ರೆಯ ಸಮಾಜಮಂದಿರದಲ್ಲಿ ವಿತರಿಸಲಾಯಿತು..
ಈ ನಮ್ಮ ಕಾರ್ಯವನ್ನು ಕಂಡು ಸಮಾಜಮಂದಿರದ ಆಡಳಿತ ಮಂಡಲಿಯವರು ಉಚಿತವಾಗಿ ಸಭಾಂಗಣವನ್ನು ನೀಡುವ ಮೂಲಕ ಸಹಕರಿಸಿದರು..
ನಮ್ಮ ಆಶಯದಂತೆ ಈ ಗದ್ದೆಯಲ್ಲಿ ಸಾಗುವಳಿ ಮಾಡಿ ದೊರೆತಿರುವಂತಹ ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗಷ್ಟೇ ಅಲ್ಲದೇ ಮೂಕ ಪ್ರಾಣಿಗಳಾದ “ಬೀದಿ ನಾಯಿಗಳಿ”ಗೆ ಪ್ರತಿನಿತ್ಯ ಅನ್ನ ನೀಡುತ್ತಿರುವ ಮಂಗಳೂರಿನ ಶ್ರೀಮತಿ “ರಜನಿ ಶೆಟ್ಟಿ” ಯವರಿಗೂ 50kg ಅಕ್ಕಿಯನ್ನು ಇತ್ತೀಚೆಗೆ ಘಟಕದ ಪರವಾಗಿ ನೀಡಿರುತ್ತೇವೆ..
ಜೊತೆಗೆ ಈ ಸಾಗುವಳಿ ಕಾರ್ಯದಲ್ಲಿ ದೊರೆತಂತಹ ಬೈ ಹುಲ್ಲನ್ನು ವೇಣೂರಿನ ಗೋಶಾಲೆ ಹಾಗೂ ಕೆಂಜಾರುವಿನ ಕಪಿಲಾ ಗೋಶಾಲೆಗಳ ಗೋವುಗಳ ಮೇವಿಗಾಗಿ ಉಚಿತವಾಗಿ ಈ ಮೊದಲೇ ನೀಡಿರುತ್ತೇವೆ..

ಈ ಕೃಷಿಕಾರ್ಯಕ್ಕೆ ಮುಂದಾದ ದಿನದಿಂದ ಇವತ್ತಿನವೆರೆಗೂ ನಮ್ಮೊಂದಿಗೆ ಕೈಜೋಡಿಸಿ ವಿವಿಧ ರೀತಿಯಲ್ಲಿ ನೆರವಾದವರೆಲ್ಲರಿಗೂ ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಪರವಾಗಿ ಮನದಾಳದ ಕೃತಜ್ಞತೆಗಳು..
ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ

 

www.billavaswarriors.com


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »