TOP STORIES:

ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..


ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ಮುಂದಿಟ್ಟುಕೊಂಡು ಯುವ ಸಮುದಾಯವನ್ನು ಜಾತಿ ಮತಬೇಧ ಮರೆತು ಸಂಘಟನೆಯಲ್ಲಿ ತೊಡಗಿಸಿಕೊಂಡು ಅಸಹಾಯಕರ ಸೇವೆ ಮಾಡುವಂತೆ ಸಂಘಟಿತರನ್ನಾಗಿ ಮಾಡುತ್ತಿರುವ ರಾಕೇಶ್ ಪೂಜಾರಿ ಅಧ್ಯಕ್ಷೆತೆಯ “ಬಿರುವೆರ್ ಕುಡ್ಲ(ರಿ)” ಸಂಘಟನೆಯ ಸ್ಥಾಪಕಾಧ್ಯಕ್ಷರಾದ, ಯುವ ನಾಯಕ “ಉದಯ್ ಪೂಜಾರಿ”ಯವರ ಜನುಮ ದಿನದಂದು(01/06/2020) “ಬೆದ್ರ ಘಟಕ”ದ ಸಂಕಲ್ಪದಂತೆ ಅಸಹಾಯಕರ ಹಸಿವನ್ನು ನೀಗಿಸುವ ಉದ್ದೇಶದಂತೆ ಮರೋಡಿಯ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಸುಮಾರು 4 ಎಕ್ರೆಯಷ್ಟು ಗದ್ದೆಯನ್ನು ಘಟಕದ ಉಪಾಧ್ಯಕ್ಷರಾದ “ಕೃಷ್ಣಪ್ಪ ಪೂಜಾರಿ”ಯವರ ನೇತೃತ್ವದಲ್ಲಿ ಘಟಕದ ಸದಸ್ಯರೆಲ್ಲರ ಸಹಕಾರದೊಂದಿಗೆ ಎರಡು ಹಂತಗಳಲ್ಲಿ ಸಾಗುವಳಿ ಮಾಡಿ, ಅದರಲ್ಲಿ ದೊರೆತಂತಹ ಅಕ್ಕಿಯನ್ನು ಇಂದು 53 ಫಲಾನುಭವಿಗಳನ್ನು ಗುರುತಿಸಿ ತಲಾ 25 kg ಯಂತೆ ಒಟ್ಟು 1325 KG ಅಕ್ಕಿಯನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಜಾತಿ ಮತಭೇದ ಮರೆತು ಈ ದಿನ ಸರಳವಾಗಿ ಮೂಡಬಿದ್ರೆಯ ಸಮಾಜಮಂದಿರದಲ್ಲಿ ವಿತರಿಸಲಾಯಿತು..
ಈ ನಮ್ಮ ಕಾರ್ಯವನ್ನು ಕಂಡು ಸಮಾಜಮಂದಿರದ ಆಡಳಿತ ಮಂಡಲಿಯವರು ಉಚಿತವಾಗಿ ಸಭಾಂಗಣವನ್ನು ನೀಡುವ ಮೂಲಕ ಸಹಕರಿಸಿದರು..
ನಮ್ಮ ಆಶಯದಂತೆ ಈ ಗದ್ದೆಯಲ್ಲಿ ಸಾಗುವಳಿ ಮಾಡಿ ದೊರೆತಿರುವಂತಹ ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗಷ್ಟೇ ಅಲ್ಲದೇ ಮೂಕ ಪ್ರಾಣಿಗಳಾದ “ಬೀದಿ ನಾಯಿಗಳಿ”ಗೆ ಪ್ರತಿನಿತ್ಯ ಅನ್ನ ನೀಡುತ್ತಿರುವ ಮಂಗಳೂರಿನ ಶ್ರೀಮತಿ “ರಜನಿ ಶೆಟ್ಟಿ” ಯವರಿಗೂ 50kg ಅಕ್ಕಿಯನ್ನು ಇತ್ತೀಚೆಗೆ ಘಟಕದ ಪರವಾಗಿ ನೀಡಿರುತ್ತೇವೆ..
ಜೊತೆಗೆ ಈ ಸಾಗುವಳಿ ಕಾರ್ಯದಲ್ಲಿ ದೊರೆತಂತಹ ಬೈ ಹುಲ್ಲನ್ನು ವೇಣೂರಿನ ಗೋಶಾಲೆ ಹಾಗೂ ಕೆಂಜಾರುವಿನ ಕಪಿಲಾ ಗೋಶಾಲೆಗಳ ಗೋವುಗಳ ಮೇವಿಗಾಗಿ ಉಚಿತವಾಗಿ ಈ ಮೊದಲೇ ನೀಡಿರುತ್ತೇವೆ..

ಈ ಕೃಷಿಕಾರ್ಯಕ್ಕೆ ಮುಂದಾದ ದಿನದಿಂದ ಇವತ್ತಿನವೆರೆಗೂ ನಮ್ಮೊಂದಿಗೆ ಕೈಜೋಡಿಸಿ ವಿವಿಧ ರೀತಿಯಲ್ಲಿ ನೆರವಾದವರೆಲ್ಲರಿಗೂ ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಪರವಾಗಿ ಮನದಾಳದ ಕೃತಜ್ಞತೆಗಳು..
ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ

 

www.billavaswarriors.com


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »