TOP STORIES:

FOLLOW US

ಬಿಲ್ಲವರೇ… ಕ್ಷಮಿಸಿ ಹೇಳಲೇಬೆಕಾದ ಅನಿವಾರ್ಯತೆ


ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಇದರಿಂದ ಬಿಲ್ಲವ ಸಮಾಜದಲ್ಲಿನ ನಾಯಕರುಗಳ ಅಭಿಮಾನಿಗಳಿಗೆ ಇರುಸು ಮುರುಸಾಗಿ ಕೋಪ ಬರಲೂಬಹುದು ಆದರೆ ವಾಸ್ತವದ ಸತ್ಯವನ್ನು ಅರಗಿಸಿ ಪರಾಮರ್ಶೆ ಮಾಡಬೇಕಾಗಿದೆ..

ಕೇವಲ 3-4% ಇರೋ ಬ್ರಾಹ್ಮಣ ಸಮಾಜದ ಹೋರಾಟದ ಫಲದಿಂದ ಸೆನ್ಸಾರ್ ಬೋರ್ಡ್ ನಲ್ಲಿ ಆಕ್ಷೇಪಣೆ ಇಲ್ಲದೆ ಇದ್ದರೂ ಪೊಗರು ಚಿತ್ರದಿಂದ ಕೆಲ ಆಕ್ಷೇಪಾರ್ಹ ದೃಶ್ಯ ತುಣುಕುಗಳನ್ನು ತೆಗಿಸಿರೋದು ಅವರುಗಳ ನಾಯಕತ್ವ ಹಾಗೂ ಒಗ್ಗಟ್ಟಿಗೊಂದು ತಾಜಾ ಉದಾಹರಣೆ. ಮಗದೊಂದು ನಾಯಕತ್ವ ಹಾಗೂ ಒಗ್ಗಟ್ಟಿಗೆ ನಿದರ್ಶನ ಪಂಚಮಶಾಲಿಗಳ ಹೋರಾಟ. ಆದರೆ ಜಗದೀಶ ಅಧಿಕಾರಿಯ ಬೈದೇರುಗಳ ಬಗೆಗಿನ ಹೇಳಿಕೆ, ಕೋಟಿ ಚೆನ್ನಯ್ಯರ ಹೆಸರು ವಿಮಾನ ನಿಲ್ದಾಣಕ್ಕೆ ನಾಮಕರಣ, ಶಂಕರ ಶಾಂತಿಯವರ ಮೇಲಿನ ಹಲ್ಲೆ ಇವ್ಯಾವುದರ ಬಗ್ಗೆ ಚಕಾರ ಎತ್ತದಿರುವುದು ನಮ್ಮ ನಾಯಕರುಗಳ ವಿಫಲತೆಗೆ ನೂತನ ಉದಾಹರಣೆ.

ಸರಿ ಸುಮಾರು 20 ಲಕ್ಷದಷ್ಟಿರುವ ಬಿಲ್ಲವ ಸಮಾಜ ಹಾಗೂ ಉಪ ಪಂಗಡಗಳು ಅಧಿಕಾರವಷ್ಟೇ ನಾಯಕರ ಬಳುವಳಿ ಎಂಬ ಭಾಷ್ಯ ಬರೆದ ನಮ್ಮವರು ಇನ್ನಾದರೂ ಚಿಂತನೆಗೊಳಪಡಬೇಕಾಗಿದೆ. ನಮ್ಮಲ್ಲಿ ನಾಯಕರು, ಯುವನಾಯಕರ ಸಂಘಟನೆಗಳಿಗೆ ಕಮ್ಮಿಯೇನಿಲ್ಲ. ಆದರೆ ಬಿಲ್ಲವ ಸಮಾಜದ ಆಗುಹೋಗುಗಳಿಗೆ ಪ್ರಸ್ತುತ ಸನ್ನಿವೇಶದಲ್ಲಿ ಯಾರಿಂದಾದರೂ ಗೌರವ ತರುವ ಕೆಲಸಗಳಾಗಿವೆಯೇ.!? ಬಿಲ್ಲವರ ಹಿತರಕ್ಷಣೆಗೆ ಒಕ್ಕೊರಲ ಕೂಗಾಗಿದ್ದಾರೆಯೇ.!? ನಮ್ಮಲ್ಲಿ ನಾಯಕರೆನಿಸಿಕೊಂಡಿರುವ ಬಹಳಷ್ಟು ಮಹನೀಯರುಗಳಾದ ರಾಜಶೇಖರ್ ಕೋಟ್ಯಾನ್, ಜಯಂತ್ ನಡುಬೈಲ್, ಉಮಾನಾಥ್ ಕೋಟ್ಯಾನ್, ಸುನಿಲ್ ಕುಮಾರ್, ವಿನಯಕುಮಾರ್ ಸೊರಕೆ,ಕೋಟ ಶ್ರೀನಿವಾಸ್ ಪೂಜಾರಿ , ಪ್ರತೀಭಾ ಕುಳಾಯಿ, ಪೂಣೆಯ ಬಿಲ್ಲವ ಸಂಘದ ಅಧ್ಯಕ್ಷರು ವಿಶ್ವನಾಥ್  ಕಡ್ತಲ,  ಹರಿಕೃಷ್ಣ ಬಂಟ್ವಾಲ್  , ಸುದರ್ಶನ್, ಶಂಕರ ಪೂಜಾರಿ ಇವರುಗಳೊಂದಿಗೆ ಭವಿಷ್ಯದ ಬಿಲ್ಲವ ನಾಯಕರಾಗಬೇಕಾದ ಎಲ್ಲಾ ಲಕ್ಷಣಗಳಿದ್ದ ಬಿರುವೆರ್ ಕುಡ್ಲದ ಉದಯ ಪೂಜಾರಿ, ಯುವ ನಾಯಕರುಗಳಾದ ಅಕ್ಷಿತ್ ಸುವರ್ಣ, ವಿಶ್ವ ಕೋಡಿಕೆರೆ ಹೀಗೆ ಪಟ್ಟಿ ಬೆಳೆಯುತ್ತಾ ಹೋದರೂ ಬಿಲ್ಲವರ ಗಟ್ಟಿ ಧ್ವನಿ ಯಾವತ್ತೂ ಆಗಲಿಲ್ಲ ಅನ್ನೋದು ದುರಾದೃಷ್ಟ.

ಮೇಲ್ದರ್ಜೆಯ ನಾಯಕರುಗಳು ಕೆಲವರು ತಮ್ಮ ಪಕ್ಷಕ್ಕೆ ಸಮಾಜದ ನಾಯಕರುಗಳಾದರೆ ಇನ್ನು ಜಯಂತ್ ನಡುಬೈಲ್ನಂತವರು ಕೇವಲ ಅಧಿಕಾರದ ಆಸೆಗಳಿಗೆ ನಾಯಕನ ಪಟ್ಟ ಅಲಂಕರಿಸಿಕೊಂಡದ್ದು ಜಗಜ್ಜಾಹೀರಾಗಿರುವುದು ಸಮಾಜದ ಮುಂದಿರುವ ಸತ್ಯ. ಇನ್ನು ಇವರುಗಳಿಂದ ಸಮಾಜಕ್ಕೆ ಏನೂ ಸಹಾಯವೇ ಆಗಿಲ್ಲ ಅನ್ನುವಂತಿಲ್ಲ ಆದರೆ ತಮ್ಮ ಸ್ವಾರ್ಥ ಸಾಧನೆಗಾಗಿ ಬಿಲ್ಲವ ಸಮಾಜದ ಹಿತಾಸಕ್ತಿಯನ್ನು ಬಲಿ ಕೊಟ್ಟಿರೋದಂತು ಸುಳ್ಳಲ್ಲ. ಕೇವಲ ಅಧಿಕಾರವೇ ಪರಮ ಗುರಿ ಅನ್ನುವ ಮನಸ್ಥಿತಿಯ ನಾಯಕರುಗಳು ಸದ್ಯಕ್ಕೆ ಗೆಜ್ಜೆಗಿರಿ ಕ್ಷೇತ್ರದ ಅಧಿಕಾರದ ದಾಹಕ್ಕೋಸ್ಕರ ಬಹಿರಂಗವಾಗಿಯೇ ಅಲೆದಾಡುತ್ತಿರುವುದು ನಮ್ಮ ಕಣ್ಣ ಮುಂದಿದೆ. ಅಲ್ಲಿರುವ ತಪ್ಪುಗಳು ಆಚರಣಾ ಲೋಪ ದೋಷಗಳ ಬಗ್ಗೆ ಚಿಂತೆಯನ್ನು ಬಿಟ್ಟು ಧರ್ಮ ಚಾವಡಿಯನ್ನು ಕಲಹದ ಚಾವಡಿಯನ್ನಾಗಿ ಬದಲಾಯಿಸಿ ಬಿಲ್ಲವರಲ್ಲಿಯೇ ಎರಡೂ ಪಂಗಡಗಳನ್ನಾಗಿ ಮಾಡಿರುವುದು ಸದ್ಯದ ಅವರ ಸಾಧನೆ. ಬಿಲ್ಲವ ಸಂಘದಲ್ಲಿಯೇ ಬಣ ಸೃಷ್ಟಿಸಿದ ಇವರುಗಳಿಗೆ ಇದೇನು ದೊಡ್ಡದಲ್ಲ ಬಿಡಿ. ಮುಂದೊಂದು ದಿನ ಇತಿಹಾಸ ಖಂಡಿತವಾಗಿಯೂ ಇದನ್ನು ಪ್ರಶ್ನೆ ಮಾಡದೆ ಇರಲಾರದು.

ಇನ್ನು ಉಮಾನಾಥ್ ಕೋಟ್ಯಾನ್, ಸುದರ್ಶನ್, ಸುನಿಲ್ ಕುಮಾರ್ ಇವರುಗಳು ಜಗದೀಶ್ ಅಧಿಕಾರಿಯ ವಿಷಯದಲ್ಲಿ ತಮ್ಮ ಪಕ್ಷಕ್ಕಾಗಿ ತೋರಿಸಿದ ಮೃದು ಧೋರಣೆ, ನಾವುಗಳು ಅವರುಗಳ ಮೇಲಿಟ್ಟಿದ್ದ ನಂಬಿಕೆ ಕಳಚಿ ಹೋಗುವಂತೆ ಮಾಡಿರುವುದು ಸುಳ್ಳಲ್ಲ. ಸಿನಿಮಾ ವಿಷಯಕ್ಕೆ ಬ್ರಾಹ್ಮಣ ಸಮಾಜ ತೋರಿದ ಧೈರ್ಯ ಹಾಗೂ ಹಿಂದೂ ಧರ್ಮಕ್ಕೆ ಆದ ಅವಮಾನವೆಂಬಂತೆ ತೋರಿಸಿದ ಕಾಳಜಿಯೆದುರು ಇವರುಗಳು ಹಿಂದೂ ನಾಯಕರೆನಿಸಿ ಬೈದೇರುಗಳ ಹಾಗೂ ಬಿಲ್ಲವ ಸಮಾಜದೆದುರು ನಗಣ್ಯರೆನಿಸಿದ್ದು ಹಳಸಿದ ಸತ್ಯ. ಇನ್ನು ವಿನಯಕುಮಾರ್ ಸೊರಕೆಯವರು ಚುನಾವಣೆಯಲ್ಲಿ ಸೋತ ನಂತರ ಯಾಕೋ ಹಿನ್ನೆಲೆಗೆ ಹೋದಂತೆ ಕಾಣುತ್ತಿದೆ. ಹರಿಕೃಷ್ಣ ಬಂಟ್ವಾಳ್ ಅವರ ಬಗ್ಗೆ ಮಾತನಾಡದೆ ಇರೋದು ಒಳಿತು ಕಾರಣ ಅವರಿಗೆ ತಮ್ಮ ರಾಜಕೀಯ ಭವಿಷ್ಯಕ್ಕೆ ಸಮಾಜದ ಪ್ರೀತಿಯನ್ನೇ ಮಾರಿದಂತಹ ಮಹಾನ್ ಪುರುಷ. ರಾಜಶೇಖರ್ ಕೋಟ್ಯಾನ್ ಕೇವಲ ಮುಂಬೈ ಬಿಲ್ಲವರಿಗೆ ಪರಿಚಿತರದಾರೆ ಹೊರತು ಸಮಸ್ತ ಬಿಲ್ಲವರನ್ನು ತಲುಪುವಲ್ಲಿ ವಿಫಲರಾದವರು. ಕಾರಣ ಬಿಲ್ಲವರಿಗೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಲ್ಲುವ ಧೈರ್ಯ ತೋರಲಿಲ್ಲ. ಅಲ್ಲಲ್ಲಿ ಚೂರು ಚೂರಾದ ಬಿಲ್ಲವ ಸಮಾಜವನ್ನು ಒಗ್ಗೂಡಿಸುವಲ್ಲಿ ಯಾಕೋ ಒಂದು ಹೆಜ್ಜೆ ಹಿಂದಕ್ಕೆ ಇಟ್ಟರೆನ್ನಲಡ್ಡಿಯಿಲ್ಲ. ಜನಾರ್ಧನ ಪೂಜಾರಿಯವರಿಗೆ ತನ್ನದೇ ಪಕ್ಷದ ಕಾರ್ಯಕರ್ತ ಜೀವ ಬೆದರಿಕೆ ಹಾಕಿದ ಸಮಯದಲ್ಲೂ ಇವರ ಮೌನ ಪ್ರಶ್ನಾರ್ಹ !

ಇವರುಗಳ ಮೇಲಿದ್ದ ಅಸಹನೆಯ ಬೇಗೆಯಲ್ಲಿ ಆಶಾದೀಪವಾಗಿ ಕಂಡಿದ್ದು ಬಿರುವೆರ್ ಕುಡ್ಲದ ಉದಯ ಪೂಜಾರಿಯವರು. ತನ್ನ ಸಂಘಟನೆ ಮೂಲಕ ಬಡವರ ಕಣ್ಣೀರು ಒರೆಸಿ ಶ್ಲಾಘನೀಯರೆನಿಸಿದರೂ ಪ್ರಸ್ತುತ ಅವರ ಸಂಘಟನೆಯ ಕೆಲ ವರ್ತನೆಗಳಿಂದ ಯುವ ಸಮೂಹ ಅಂತರ ಕಾಯುತ್ತಿರುವ ವಿಷಯ ಸುಳ್ಳೇನು ಅಲ್ಲ. ಕಾವ್ಯ ಕೊಲೆ ಪ್ರಕರಣದಿಂದ ಒಮ್ಮೆಲೆ ಮುನ್ನೆಲೆಗೆ ಬಂದ ಸಂಘಟನೆ ಪ್ರಸ್ತುತ ಬಿಲ್ಲವ ಸಮಾಜದಲ್ಲಿನ ಅಪಮಾನ, ಹಲ್ಲೆ ಪ್ರಕರಣಗಳಿಗೆ ಧ್ವನಿ ಆಗಲೇ ಇಲ್ಲ. ಜಗದೀಶ ಅಧಿಕಾರಿಯ ವರ್ತನೆಗೆ ಖಂಡಿಸದೆ ಮೌನವಾಗಿದಿದ್ದು, ಕೋಟಿ ಚೆನ್ನಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವ ವಿಷಯದಲ್ಲಿ ಅವರಲ್ಲಿನ ಘಟಕ ಹಾಗೂ ಅದಕ್ಕೆ ಸಂಬಂಧಪಟ್ಟವರು ಕುರುಡುತನ ಪ್ರದರ್ಶಿಸಿದ್ದು, ಬ್ರಹ್ಮಾವರದಲ್ಲಿ ಶಂಕರ ಶಾಂತಿಯವರ ಹಲ್ಲೆ ಪ್ರಕರಣದಲ್ಲಿ ಮೌನ ತೋರಿಸಿ, ದಿನನಿತ್ಯ ಪೊಲೀಸ್ ಇಲಾಖೆಯಲ್ಲಿನ ಅವ್ಯವಹಾರದ ಪೋಸ್ಟ್ ನ್ನು ಮಾತ್ರ ಚಾಚೂ ತಪ್ಪದೆ ಹಾಕುತ್ತಿರುವ ಸಂಘಟನೆಯ ಪೇಜ್ ನ್ನು ಹಿಂಬಾಲಿಸುತ್ತಿರುವ ಕೆಲ ಯುವ ಸಮೂಹ ಕೂಡ ಒಂದು ಪಕ್ಷಕ್ಕೆ ಮಾತ್ರ ಸೀಮಿತರಾಗಿದ್ದಾರೆಯೇ ಅನ್ನುವ ಅನುಮಾನ ಬಿಲ್ಲವ ಯುವ ಸಮುದಾಯವನ್ನು ಕಾಡುತ್ತಿದೆ.

ಇನ್ನು ಅಕ್ಷಿತ್ ಸುವರ್ಣ ಇದ್ದಾರೋ ಇಲ್ಲವೋ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ.ತಡವಾದರೂ ಅಲ್ಲೊಂದು ಇಲ್ಲೊಂದು ಬಿಲ್ಲವಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಹೋರಾಟದ ಧ್ಯೇಯ ಬಿಲ್ಲವ ಸಮಾಜಕ್ಕಿರಲಿ ಅನ್ನೋದು ನಮ್ಮ ಭಾವನೆ. ಮುಂದೆ ನೀವು ಕೂಡ ಮೇಲ್ಪಂಕ್ತಿಯ ನಾಯಕರುಗಳ ಹಾದಿ ಹಿಡಿಯದಿದ್ದಲ್ಲಿ ನಿಮ್ಮಲ್ಲೊಂದು ಆಶಾಭಾವನೆ ಮೂಡಬಹುದು. ದಯವಿಟ್ಟು ಭ್ರಮನಿರಶನ ಮಾಡದಿರಿ. ಬಿಲ್ಲವ ಸಮಾಜದಲ್ಲಿ ಜನಸಂಖ್ಯೆ ಒಂದನ್ನು ಬಿಟ್ಟು ಇನ್ನ್ಯಾವುದು ಸರಿ ಇಲ್ಲ ಅನ್ನೋದು ಜಗಜ್ಜಾಹೀರಾಗಿದೆ. ಸದ್ಯಕ್ಕೆ ಹಿಂದೂ ಪರ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಕೆಲ ಬಿಲ್ಲವ ಪರ ಹೋರಾಟಗಳಿಂದ ಕಿಂಚಿತ್ತು ಆಸೆ ಹುಟ್ಟಿ ಹಾಕಿದರಾದರೂ ಮುಂದೆ ಕಾದು ನೋಡಬೇಕಿದೆ. ಹಾಗೇನೆ ಶಂಕರ ಶಾಂತಿಯವರ ಹಲ್ಲೆ ಪ್ರಕರಣಕ್ಕೆ ತಾರ್ಕಿಕ ನ್ಯಾಯ ಒದಗಿಸುವಲ್ಲಿ ಬಿಲ್ಲವ ಸಮಾಜ ಹಾಗೂ ನಾಯಕರೆಲ್ಲರು ಮೌನ ತಪಸ್ಸು ಆಚರಿಸುತ್ತಿರೋದರಿಂದ ಕಡೆಯ ಆಶಾಭಾವನೆಯಾಗಿ ಸತ್ಯಜಿತ್ ಅವರನ್ನು ಬಿಲ್ಲವ ಸಮಾಜ ಎದುರು ನೋಡುತಿದೆ.
ಇಷ್ಟೆಲ್ಲ ಸಮಸ್ಯೆಗಳ ಮುಂದೆ ನಮ್ಮ ನಾಯಕರೆನಿಸಿಕೊಂಡವರಲ್ಲಿ ಹೆಚ್ಚಿನವರು ತಮ್ಮ ಇರುವಿಕೆ ತೋರ್ಪಡಿಸಲು ಬಿಲ್ಲವ ಸಮಾಜ ಹಾಗೇನೆ ನಾರಾಯಣ ಗುರು ಹಾಗೂ ಕೋಟಿ ಚೆನ್ನಯರನ್ನು ಲೋಗೋ ಆಗಿ ಉಪಯೋಗಿಸಿಕ್ಕೊಳುವ ಕೆಟ್ಟ ಚಾಳಿಯನ್ನು ಇನ್ನೂ ಉಳಿಸಿಕೊಂಡಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ.

ಇನ್ನಾದರೂ ಸುಧಾರಿಸಿಕ್ಕೊಳ್ಳುವಿರೇನೋ ಅನ್ನುವ ಆಶಾಭಾವನೆಯೊಂದಿಗೆ…
ಬೇಸತ್ತಿರುವ ಬಿಲ್ಲವ ಸಮಾಜ.

ಬರಹ :- Wake Up Billavas

Copyrights@wake_up_billavas

Billavaswarriors.com


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »