ನವದೆಹಲಿ: ಭಾರತದ ಭೂಪಟ ನೋಡಿದಾಗ ಶ್ರೀಲಂಕಾ ಅದರಲ್ಲಿ ಕಾಣಿಸುತ್ತದೆ. ಆದರೆ, ಯಾವುದೇ ನೆರೆ ಹೊರೆಯ ದೇಶಗಳು ಕಾಣಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಶ್ರೀಲಂಕಾದೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದುಕೊಂಡರೆ ತಪ್ಪಾಗುತ್ತದೆ.
ಇದರ ಹಿಂದೆ ಪ್ರಮುಖ ಕಾರಣವಿದೆ.
ಭಾರತ ಭೂಪಟದಲ್ಲಿ ಶ್ರೀಲಂಕಾ ಕಾಣಿಸಿಕೊಂಡಿರುವುದರ ಹಿಂದೆ ಕಡಲ ಕಾನೂನು ಕಾರಣವಾಗಿದೆ. ಇದನ್ನು ಸಾಗರ ಕಾನೂನು ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆ ಸ್ಥಾಪನೆ ನಂತರ ಈ ಕಾನೂನು ಅಸ್ತಿತ್ವಕ್ಕೆ ಬಂದಿದೆ. ಈ ಕಾಯ್ದೆ ಜಾರಿಗೆ ತರಲು ಸಾಗರ ಕಾನೂನಿನ ಮೇಲಿನ ವಿಶ್ವಸಂಸ್ಥೆ ಸಮಾವೇಶವನ್ನು (UNCLOC-1) ಮೊದಲ ಬಾರಿಗೆ 1956ರಲ್ಲಿ ನಡೆಸಲಾಯಿತು. 1958 ರಿಂದ ಈ ಕಾನೂನು ಜಾರಿಯಲ್ಲಿದೆ.
UNCLOC-1ರಲ್ಲಿ ಕಡಲಿಗೆ ಸಂಬಂಧಿಸಿದ ಗಡಿಗಳು, ಒಪ್ಪಂದಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿದೆ. ನಂತರ 1982 ರವರೆಗೆ ಮೂರು ಸಮ್ಮೇಳನಗಳು ನಡೆದಿವೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮುದ್ರಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ.
ಸಾಗರ ಕಾನೂನು ಎಂದರೆ ಏನು?
ಈ ಕಾಯ್ದೆಯನ್ನು ಜಾರಿಗೆ ತಂದಾಗ, ಭಾರತದ ನಕ್ಷೆಯಲ್ಲಿ ಬೇಸ್ ಲೈನ್ ನಿಂದ 200 ನಾಟಿಕಲ್ ಮೈಲಿ ದೂರದಲ್ಲಿರುವ ಪ್ರದೇಶವನ್ನು ಅಂದರೆ, ಆ ದೇಶದ ಬೇಸ್ ಲೈನ್ ತೋರಿಸುವುದು ಕಡ್ಡಾಯವೆಂದು ನಿರ್ಧರಿಸಲಾಗಿದೆ. ಅಂದರೆ ಒಂದು ದೇಶ ಕರಾವಳಿಯಲ್ಲಿದ್ದರೆ ಅಥವಾ ಅದರ ಭಾಗ ಸಮುದ್ರಕ್ಕೆ ಸಂಪರ್ಕ ಹೊಂದಿದ್ದರೆ, ಆ ದೇಶದ ಗಡಿ ಸುತ್ತಲಿನ ಪ್ರದೇಶವನ್ನು ಸಹ ಆ ದೇಶದ ನಕ್ಷೆಯಲ್ಲಿ ತೋರಿಸಲಾಗುತ್ತದೆ. ಭಾರತದ ಭೂಪಟದಲ್ಲಿ ಶ್ರೀಲಂಕಾವನ್ನು ತೋರಿಸಲು ಇದೇ ಕಾರಣ. ಏಕೆಂದರೆ ಶ್ರೀಲಂಕಾ ಭಾರತದಿಂದ 200 ನಾಟಿಕಲ್ ಮೈಲುಗಳ ಅಂತರದಲ್ಲಿದೆ. ಭಾರತದ ಗಡಿಯ 200 ನಾಟಿಕಲ್ ಮೈಲುಗಳೊಳಗಿನ ದೂರದಲ್ಲಿದೆ. ಅದಕ್ಕಾಗಿಯೇ ಶ್ರೀಲಂಕಾ ಭಾರತದ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.