TOP STORIES:

FOLLOW US

ಮುಂಬೈಗರ ಮನಗೆದ್ದ ಗೋವಿಂದ ಬಾಬು ಪೂಜಾರಿ


ಕರುನಾಡ ಕರುಣೆಯ ಕಾಮಧೇನು ಹಾಗೂ ನನ್ನ ಆತ್ಮೀಯರಾದ ಶ್ರೀ ಗೋವಿಂದ ಬಾಬು ಪೂಜಾರಿಯವರೇ,ನಿನ್ನೆ ಮುಂಬೈ ಬಿಲ್ಲವಭವನದಲ್ಲಿ ನಿಮಗೆ ಆಯೋಜಿಸಿದ ಗೌರವ ಪೂರ್ಣ ಸನ್ಮಾನಕ್ಕೆ ನಾವೆಲ್ಲ ಸಂಭ್ರಮ ಪಟ್ಟಿದ್ದೇವೆ.

ಹೌದು,

ನಿನ್ನೆ ನಾನಲ್ಲಿರಬೇಕಿತ್ತು

ಆದರೆ ಇರಲಾಗಲಿಲ್ಲ.

ನಿಮ್ಮ ಜೊತೆಗೆ ಮಾತಾಡುವ,ನಿಮ್ಮ ಮಾತಿಗೆ ಕಿವಿಯಾಗುವ ಅವಕಾಶಕ್ಕೆ ಅನಾನುಕೂಲ ಅಡ್ಡಿ ಆಯಿತು.ಮುಂಬೈಯಿಂದ ದೂರದಗುಜರಾತ್ ಅಹಮದ್ ನಗರಕ್ಕೆ ಬಂದಿದ್ದೆ.ಇಲ್ಲಿ ಕೊರೆಯುವ ಹಿಮದ ಚಳಿ.ಅದರ ತೀವ್ರತೆಗೆ ಜ್ವರ ಬಿಟ್ಟು ಹೋಗಲಾರೆ ಅನ್ನುತ್ತಿದೆ.

ನಿಮಗೆ ಸಿಗದೆ ಇದ್ದುದಕ್ಕೆ ಬೇಸರವಿದೆ.

ಇಂತಹ ಕಾರ್ಯಕ್ರಮಗಳಿಗೆ ಕಾರಣ ಹೇಳಿ ತಪ್ಪಿಸಿಕೊಳ್ಳಬಾರದು.

ಗೋವಿಂದ್ ಅಣ್ಣ ನಿನ್ನೆ ನಿಮ್ಮ ಸನ್ಮಾನ ವಾಚನದ ವೇಳೆ ಜನರ ಕಿವಿಗಡಚಿಕ್ಕುವ ಚಪ್ಪಾಳೆಗೆ ಇಡೀಯ ಸಭಾಂಗಣ ಸಾಕ್ಷಿಆಯಿತು.ನೀವು ಬದುಕಿನ ಹಾದಿಯಲ್ಲಿ ನಡೆದು ಬಂದ ಗಳಿಗೆಗಳ ಒಂದೊಂದು ಹೆಜ್ಜೆಗಳು ಅಲ್ಲಿ ಅನಾವರಣವಾಯಿತು.

ಹೊತ್ತಿನಲ್ಲಿಯೂ

ನಿಮ್ಮ ಮುಖದಲ್ಲಿ ಇದ್ದದ್ದು  ಮಂದಹಾಸ ಬಿಟ್ಟರೇ,ಅಹಂಕಾರದ ಲವಲೇಶವೂ ಇರಲಿಲ್ಲ.

ನನ್ನ ಅನೇಕ ಸ್ನೇಹಿತರು ಇವತ್ತು ಕಾಲ್ ಮಾಡಿ ನಿಮ್ಮ ಸರಳತೆಯ ಬಗ್ಗೆ ಸೌಜನ್ಯತೆಯ ಬಗ್ಗೆ ಮಾತನಾಡಿದರು.

ಬದುಕಿದರೆ ನಿಮ್ಮಂತೆ ಬದುಕಬೇಕು ಅಂದರು.ಅವರೆಲ್ಲರಿಗೂ ನೀವು ಸ್ಫೂರ್ತಿ ಆದಿರಿ.ಅನೇಕರನ್ನು ಕರೆದು ನಿಮ್ಮೊಂದಿಗೆ ನಾನಿದ್ದೇನೆಅನ್ನುವ ದೈರ್ಯದ ಮಾತುಗಳನ್ನು ಆಡಿದ್ದು ತಿಳಿಯಿತು.ಅಂತಹ ಸಾಂತ್ವನ ನಿಮ್ಮಂತವರು ಮಾತ್ರ ಕೊಡಲು ಸಾಧ್ಯ ಗೋವಿಂದ ಅಣ್ಣ.

ಹಣ ಗಳಿಸುವುದು,ಅಂತಸ್ತನ್ನು ಸಂಪಾದಿಸುವುದು ಬಂಗ್ಲೆ ಕಾರುಗಳನ್ನು ಖರೀದಿಸುವುದು ವಿಶೇಷವಲ್ಲ.ಆದರೆ ಜನರ ಪ್ರೀತಿಯನ್ನುಗಳಿಸುವುದು ಅದರಲ್ಲೂ ಅನ್ಯ ರಾಜ್ಯದಲ್ಲಿ ಇಲ್ಲಿನವರ ಅಭಿಮಾನಕ್ಕೆ ಪಾತ್ರರಾಗುವುದಿದೆಯಲ್ಲಾ ಅದು ಸರ್ವಶ್ರೇಷ್ಠ.ಮಾನವೀಯತೆಮತ್ತು ಪ್ರಾಮಾಣಿಕತೆ ನಿಮ್ಮ ಮೂಲ ಗುಣಗಳು.

ಅದನ್ನು ನಿನ್ನೆ ಮುಂಬೈಯ ಜನ ಗುರುತಿಸಿದ್ದಾರೆ.

ನಿಮ್ಮನ್ನು ಬೇಟಿಯಾಗದೆ ಇದ್ದುದಕ್ಕೆ ಕ್ಷಮೆ ಕೋರುತ್ತಾ,ನಾನಿದ್ದಲ್ಲಿಗೆ ಬಂದಾಗ ನಾನು ನಿಮಗೆ ಸಿಗಲಿಲ್ಲ.ಆದರೆ ಕೆಲವೇ ಕೆಲವುದಿನಗಳಲ್ಲಿ ನಾನು ನೀವು ಇದ್ದಲ್ಲಿಗೆ ಅಂದರೇ ಬೆಂಗಳೂರಿಗೆ ಬಂದು ನಿಮ್ಮ ಜೊತೆಗೊಂದಿಷ್ಟು ಹೊತ್ತು ಇದ್ದು ಬರಲುತೀರ್ಮಾನಿಸಿದ್ದೇನೆ….

ನಿಮ್ಮನ್ನು ಸನ್ಮಾನಿಸಿದ ಬಿಲ್ಲವರ ಅಸೋಸಿಯೇಷನ್ ನನ್ನೆಲ್ಲ ಆತ್ಮೀಯ ಬಳಗಕ್ಕೆ ವಂದಿಸುತ್ತಾ,ನಿಮ್ಮ ಪ್ರೀತಿಗೆ ತಲೆಬಾಗುತ್ತಾ,

ನಿಮ್ಮ ಸಲಹೆ ಸಹಕಾರ ಯಾವತ್ತೂ ಹೀಗೆಯೇ ಇರಲಿ ಎಂದು ಆಶಿಸುವ

ಇಂತೀ ನಿಮ್ಮವ,

✍️ಉದಯ್ ಕುಂದಾಪುರ

             (ಮುಂಬೈ)


Share:

More Posts

Category

Send Us A Message

Related Posts

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »

ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು. ಉಚಿತ ಆರೋಗ್ಯತಪಾಸಣಾ ಶಿಬಿರ ಮತ್ತು ಬಿಲ್ಲವಾಸ್ ಕತಾರ್ ನ ಅಧೀಕೃತ ಲಾಂಛನ (ಲೋಗೋ) ಬಿಡುಗಡೆ


Share       Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ  ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ


Read More »