TOP STORIES:

ವಿಷ ಕಾರುವವರಿಗೆ “ವಿಷಯ”ಯುಕ್ತ ಕಾರ್ಕೋಟಕ ವಿಷದಿಂದ ಅರ್ಪಣೆ…


ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗು ಇವತ್ತು ನಿನ್ನೆಯದ್ದಲ್ಲ, ಸಮಾರು ವರುಷದಿಂದ ಕೇಳಿ ಬಂದ ಕೂಗು ಇದಾಗಿದೆ.


ಈ ಕೂಗಿಗೆ ನಾನು ಧ್ವನಿಯಾಗಿದ್ದೆ, ಆ ಧ್ವನಿ ಮೆಲ್ಲಗೆ ಗಡಸು ಧ್ವನಿಯಾಗುತ್ತ ಬೆಳೆದಿತ್ತು..!!
ಕರಾವಳಿಗರ ಒಕ್ಕೊರಲ ಅಭಿಪ್ರಾಯಕ್ಕೆ ಒಂದು ರೀತಿಯ ಬಲವು ನಿಧಾನವಾಗಿ ಬಲ ಸೇರುತ್ತಿತ್ತು.!
ಆದರೆ ಅದರ ಬಲವನ್ನು ಕುಗ್ಗಿಸುವ ಸಣ್ಣ ಧ್ವನಿಯು ಕೂಡ ಮೆಲ್ಲಗೆ ಏಳುತ್ತಿದೆ ಎಂಬುದನ್ನು ಹೇಳಲು ಭಯ ಪಡಬೇಕಾಗಿಲ್ಲ.


ಇತ್ತೀಚೆಗೆ ಮಾನ್ಯ ಸ್ವಾಮೀಜಿಗಳಿಂದ ಒಂದು ಹೇಳಿಕೆಯ ಮಾತು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿತ್ತು.! ಕೋಟಿ-ಚೆನ್ನಯರ ಹೆಸರಿಗೆ ಬದಲಾಗಿ ಇನ್ನೊಂದು ಹೆಸರನ್ನು ಸೂಚಿಸಿದ್ದರು.! ಒಂದು ವಿಚಿತ್ರ ಅನಿಸಿದ್ದು ಆ ಹೆಸರಿಗೆ ಖಂಡಿತ ನಮ್ಮ ವಿರೋಧವಿಲ್ಲ, ಆದರೆ ಇಷ್ಟು ದಿನ ಇಲ್ಲದ ಆ ಹೆಸರು ಬಲು ಬೇಗನೆ ಬಂದ ಕಾರಣ ಗೊತ್ತಾಗಬೇಕಿತ್ತು ಅಷ್ಟೇ!! ಶ್ರೀ ಗಳೇ ಕೋಟಿ ಚೆನ್ನಯರು ಹಿಂದುಗಳು ಅಲ್ಲವೇ, ಅಲ್ಲದಿದ್ದರೆ ನೇರವಾಗಿ ಹೇಳಿಬಿಡಿ! ಅಥವಾ ಕೋಟಿ ಚೆನ್ನಯರ ಹೆಸರಿಗೆ ಇರುವ ಬಲದ ಶಕ್ತಿಯನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಿದಿರ, ಅಥವಾ ಇನ್ಯಾವುದೇ ಕುತಂತ್ರ ಶಕ್ತಿಗಳ ಒತ್ತಾಸೆಗೆ ಬಲಿಯಾದಿರಿ ಎಂಬುದು ನೀವೇ ಹೇಳಬೇಕಾಗಿದೆ..! ಕೋಟಿ ಚೆನ್ನಯರು ಮಾಡಿದ ಸಾಮಾಜಿಕ ಕಾರ್ಯದ ಬಗ್ಗೆ ಒಮ್ಮೆ ಗಮನ ಹರಿಸಿ ಬನ್ನಿ ಗುರುಗಳೇ..! ಇದನ್ನು ಗೌರವಯುತವಾಗಿಯೇ ಹೇಳುತ್ತಿದ್ದೇನೆ.

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರನ್ನು ಇಡಬಾರದೆಂದು ಹೇಳುವವರಲ್ಲಿ ಒಂದು ಸಣ್ಣ ಮನವಿ, ನೀವು ನೇರವಾಗಿ ಹೇಳಿಬಿಡಿ ಬೆಂಬಲವಿಲ್ಲ ಎಂದು, ಅದರ ಜೊತೆಗೆ ಕಾರಣವನ್ನು ತಿಳಿಸಿಬಿಡಿ ಅಷ್ಟೇ.

ಕೋಟಿ-ಚೆನ್ನಯರ ಹೆಸರನ್ನು ವಿರೋಧಿಸುವ ಅಥವಾ ಅವಮಾನಿಸುವ ವ್ಯಕ್ತಿಗಳು ಯಾರೇ ಇರಲಿ, ಯಾವುದೇ ಸಂಘಟನೆಯಿರಲಿ ಅಥವಾ ರಾಜಕೀಯ ಪಕ್ಷವೇ ಇರಲಿ ಅದು ನಿಮ್ಮ ಸಮಾಧಿಗೆ ನೀವೇ ತೋಡಿದ ಹೊಂಡದಂತೆ!

ರಾಜಕೀಯ ಪಕ್ಷಗಳ ಸ್ಥಿರತೆ ಅಸ್ಥಿರತೆಯ ಕಡೆಗೆ ಸಾಗುತ್ತದೆ ಅದು ಮಾತ್ರ ಸಣ್ಣಗೆ ನೆನಪಿರಲಿ.
ಮತ್ತೊಂದು ಬೇಸರದ ವಿಷಯವೆಂದರೆ ಯಾವುದೇ ಹಿಂದು ಸಂಘಟನೆಗಳು ಇದರ ಪರವಾದ ಮಾತುಗಳನ್ನೇ ಆಡಿಲ್ಲ, ಕೋಟಿ-ಚೆನ್ನಯರ ಹೆಸರಿಡಬೇಕೆಂಬ ಕೂಗಿಗೆ ಬಲವಾದ ಧ್ವನಿ ಆಗಲೇ ಇಲ್ಲ ಎಂಬುದು ನನ್ನಂತಹ ನೂರಾರು ಹಿಂದು ಕಾರ್ಯಕರ್ತರ ಮನದಾಳದ ಪ್ರಶ್ನೆಯಾಗಿಯೇ ಉಳಿದಿದೆ. ಹಿಂದು ಸಂಸ್ಕೃತಿಗೆ ಬೆಂಬಲವಾಗಿ ನಿಲ್ಲುವ ಬಾ.ಜ.ಪ ದಿಂದಲೂ ಇದಕ್ಕೆ ಸೂಕ್ತವಾದ ಬೆಂಬಲವೂ ಕೂಡ ವ್ಯಕ್ತವಾಗಿಲ್ಲ ಇದು ಕೂಡ ನನ್ನಂತಹ ಕಾರ್ಯಕರ್ತರಿಗೆ ಮೂಡಿದ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಮಿಥುನ್ ರೈ ಯವರು ಕೆಲ ದಿನಗಳ ಹಿಂದೆ ನಡೆಸಿದ ಪರ ಹೋರಾಟದ ದಾರಿ ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತದ್ದೇ, ಆದರೆ ಇದು ರಾಜಕೀಯದ ಆಸೆಗಾಗಿ ಸಾಗಬಾರದಷ್ಟೇ..!

ಎಲ್ಲಾ ಗ್ರಾಮಗಳಲ್ಲೂ ಬಲಿಷ್ಟವಾಗಿರುವ ನಮ್ಮ ಬಿಲ್ಲವ ಸಂಘಟನೆಯ ಮುಖಂಡರೆಲ್ಲೀ..??
ಕಳೆದ ಎರಡು ಮೂರು ವಾರಗಳಿಂದ ಕಾರ್ಯ ಚಟುವಟಿಕೆಗಳು ಮಾತ್ರ ಕಣ್ಣಿಗೆ ಗೋಚರಿಸುತ್ತಿದೆ, ಅದಕ್ಕಿಂತ ಮೊದಲಿನ ಪರ ಕಾರ್ಯಗಳೇ ಇಲ್ಲಾ..!
ಕರಾವಳಿಯ ಎಂ.ಪಿ ಮತ್ತು ಎಂ.ಎಲ್.ಎಗಳು ಇದರ ಪರವಾದ ಒಂದು ಮಾತನ್ನು ಆಡುತ್ತಿಲ್ಲ..!? ಕಾರಣ ಏನೆಂದು ತಿಳಿಸುವಿರಾ..!?

ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಮರು ನಾಮಕರಣ ಆಗಬೇಕೆಂಬ ಕೂಗು ಜಾತಿ, ಪಕ್ಷ ಮತ್ತು ಧರ್ಮಕ್ಕಿಂತ ಮೀರಿದ ಕೂಗು..! ನೆನಪಿರಲಿ ಇದು ಈಡೇರದಿದ್ದರೆ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾದೀತು ಜೋಕೆ..!!

– ವಿಜೇತ್ ಪೂಜಾರಿ ಶಿಬಾಜೆ.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »