TOP STORIES:

ಶ್ರೀ ಗೆಜ್ಜೆಗಿರಿ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಶ್ರೀ ನವೀನ್ ಪೂಜಾರಿ ಪಡು ಇನ್ನಾ, ಮುಂಬೈ


ಮಾಯಾನಗರಿ ಮುಂಬೈಯಲ್ಲಿ ಚತುರ ಸಂಘಟಕನಾಗಿ, ನಾಟಕ, ಯಕ್ಷಗಾನ ಮತ್ತು ಚಲನ ಚಿತ್ರ ಸಂಚಾಲಕರಾಗಿ  ಮಿನುಗುತ್ತಿರುವಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಮಲ ಕಲಾ ವೇದಿಕೆ ಮುಂಬಯಿಯ ರೂವಾರಿ  ನಮ್ಮ ತುಳುನಾಡ ಪ್ರತಿಭೆ, ಕ್ಯಾಂಟಿನ್ ಉದ್ಯಮಿ ಶ್ರೀ ನವೀನ್ ಪಡು ಇನ್ನಾ, ಮುಂಬೈ ಅವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಪಡು ಇನ್ನಾ ಗ್ರಾಮದವರು ತನ್ನಭವಿಷ್ಯದ ಹೊಂಗನಸನ್ನು ಸಾಕಾರಗೊಳಿಸಲು ಮಾಯಾನಗರಿ ಮುಂಬೈಗೆ ಆಗಮಿಸಿ ಫೋರ್ಟ್ ನಲ್ಲಿರುವ ಕನ್ನಡ ಭವನಜ್ಯೂನಿಯರ್ ಕಾಲೇಜಿನಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಾ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಮಾಲೀಕರ ಪ್ರೀತಿ ವಿಶ್ವಾಸವನ್ನುಗಳಿಸಿ ನಂತರ ಎಲ್ಲರೊಂದಿಗೆ ಆತ್ಮೀಯತೆಯ ಒಡನಾಟ ಮತ್ತು  ಸಹಕಾರವನ್ನು ಸೂಕ್ತವಾಗಿ ಬಳಸಿಕೊಂಡು ನಗರದಲ್ಲಿ ಯುವಕ್ಯಾಂಟೀನ್ ಉದ್ಯಮಿಯಾಗಿ ತನನ್ನು ಪರಿಚಯಿಸಿಕೊಂಡರು.  ಶ್ರೀ ನವೀನ್ ರವರು ದೈವ ದೇವರ ಧಾರ್ಮಿಕ ಕಾರ್ಯಗಳಲ್ಲೂಕೂಡಾ ತುಂಬಾ ಆಸಕ್ತಿಯನ್ನು ಹೊಂದಿ ತನ್ನ ಶಾಲಾ ದಿನಗಳಿಂದಲೇ ಸಂಘಟನಾ ಚಾತುರ್ಯ ಹಾಗೂ ಕ್ರೀಡಾ ನಾಯಕತ್ವದಗುಣಗಳಿಂದ ಮಾಯಾನಗರಿ  ಮುಂಬಯಿಯಲ್ಲಿ ನವೀನ್ ಪಡು ಇನ್ನಾ ಎಂದೇ ಪರಿಚಿತರಾಗಿ, ಕಲಾಪ್ರೇಮಿ ಯಾಗಿ ಕಳೆದ ಹತ್ತುವರ್ಷಗಳಿಂದ ತನ್ನ ಅಜ್ಜಿಯ ಹೆಸರಲ್ಲಿ ಕಮಲ ಕಲಾ ವೇದಿಕೆ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಸಂಚಾಲಕತ್ವ ವನ್ನು ವಹಿಸಿ ಸಾಂಸ್ಕ್ರತಿಕಕಾರ್ಯಕ್ರಮಗಳ ಮುಖೇನ ನಾಟಕದ ಪ್ರದರ್ಶನಗಳನ್ನು ಯಶಸ್ವಿಯಾಗಿಆಯೋಜಿಸಿಕೊಂಡು *ತವರೂರ ಹಾಗೂ ನಗರದಸುಮಾರು 50 ಕ್ಕೂ ಹೆಚ್ಚಿನ ಕಲಾವಿದರನ್ನು, ಸಮಾಜ ಸೇವಕರನ್ನು  ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿದಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಇವರ ಸಾಮಾಜಿಕ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯು ಆರ್ಯಭಟಅಂತರಾಷ್ಟ್ರೀಯ ಪ್ರಶಸ್ತಿ -2017 ನ್ನು ನೀಡಿ ಗೌರವಿಸಿದೆಇಷ್ಟು ಮಾತ್ರವಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ “ಮದಿಪು” ತುಳುಚಿತ್ರವನ್ನು ತನ್ನ ಚೊಚ್ಚಲ ಸಂಚಾಲಕತ್ವದಲ್ಲಿ  ಮಹಾರಾಷ್ಟ್ರದಾದ್ಯಂತ ಬಿಡುಗಡೆ ಗೊಳಿಸಿ ಸುಮಾರು 20 ಕ್ಕೂ ಮಿಕ್ಕಿದಪ್ರದರ್ಶನಗಳ್ಳನ್ನು ನೀಡಿದ ಕೀರ್ತಿಯನ್ನೂ ಗಳಿಸಿದ್ದಾರೆ.

ಬಾಲ್ಯದಿಂದಲೇ ಪ್ರತಿಭಾವಂತರಾದ ಇವರಿಗೆ ಎಮ್. ವಿ. ಶಾಸ್ತ್ರಿ ಆಯುರ್ವೇದ ಭೂಷಣ ಹೈಸ್ಕೂಲ್ ಇನ್ನಾ ವು ಯುವರತ್ನ ಬಿರುದು, ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ರಿಂದ  ಚತುರ ಸಂಘಟಕ‘, ಸಮಾಜಪರಕಲಾ ಸೇವೆಗಾಗಿ ನಮನ ಫ್ರೆಂಡ್ಸ್ ಮುಂಬಯಿ, ಬಿಲ್ಲವರ ಎಸೋಸಿಯೇಶನ್ ಅಂಧೇರಿ ಸ್ಥಳೀಯ ಕಛೇರಿ, ಫ್ರೆಂಡ್ಸ್ ಸರ್ಕಲ್ ಕಣಂಜಾರು  ಮುಂಬಯಿ, ನಮ್ಮ ಕಲಾವಿದೆರ್ ಬೆದ್ರ  ತಂಡದವರಿಂದ ‘ಉತ್ತಮ ಸಂಘಟಕ‘ ಬಿರುದನ್ನು ನೀಡಿರುತ್ತಾರೆ.  ಸಮಾಜದಲ್ಲಿಎಲ್ಲರೊಂದಿಗೂ ಬೆರೆಯುವ ಸ್ವಭಾವದೊಂದಿಗೆ ಹಲವು ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಶ್ರೀ ವಿಠಲಪ್ರತಿಷ್ಠಾಪನೆ ಮುಂಬಯಿ ಇದರ ಯುವ ವಿಭಾಗದ ಸಂಚಾಲಕ ರಾಗಿ, ಶಿವಾಯ್ ಫೌಂಡೇಶನ್ ಮುಂಬಯಿ ಮತ್ತು ರಂಗಮಿಲನ ಮುಂಬಯಿ   ಉಪಾಧ್ಯಕ್ಷ ರಾಗಿ, ಶ್ರೀ ಬ್ರಹ್ಮಶ್ರೀ ಗುರುನಾರಾಯಣ ಭಕ್ತವ್ರಂದ ಇದರ ಗೌ. ಕೋಶಾಧಿಕಾರಿ ಯಾಗಿ, ಇನ್ನಾ ಹಿತವರ್ಧಕ ಸಂಘ ಮುಂಬಯಿ  ಜೊತೆ ಕೋಶಾಧಿಕಾರಿ ಯಾಗಿ, ಯಂಗ್ ಫ್ರೆಂಡ್ಸ್ ಮುಂಬಯಿ ಯ ಸ್ಥಾಪಕ ರಾಗಿ, ಉಮೇಶ್ ಮಿಜಾರ್ ರವರ ನಮ್ಮ ಕಲಾವಿದೆರ್ ಬೆದ್ರ  ಹಾಗೂ ತುಳುವೆರ್ ಉಡಲ್ ಜೋಡುಕಲ್ಲು ನಾಟಕತಂಡಗಳ ಮುಂಬಯಿ ಸಂಚಾಲಕ ರಾಗಿ, ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಬೇಲಾಪುರ್ ಹಾಗೂ ಸಪ್ತಸ್ವರ ಕಲ್ಚರಲ್ಎಸೋಸಿಯೇಶನ್(ರಿಇದರ ಸಕ್ರಿಯ ಕಾರ್ಯಕರ್ತ  ನಾಗಿ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಕೋರೋನಾ  ಮಹಾಮಾರಿಯ ಸಂಕಟದ ಪರಿಸ್ಥಿತಿಯಲ್ಲಿ ತಮ್ಮ  ಸಂಸ್ಥೆ ಕಮಲಾ ಕಲಾ ವೇದಿಕೆ  ಆಶ್ರಯದಲ್ಲಿ ದಾನಿಗಳಸಹಾಯದಿಂದ ಸುಮಾರು 200 ಕ್ಕೂ  ಹೆಚ್ಚಿನ ಬಡ ಕುಟುಂಬಗಳಿಗೆ ಸಹಾಯ ಮಾಡಿರುವುದು ನಿಜವಾಗಲೂ ವಂದನೀಯ.

ನವೀನ್ ಪಡು ಇನ್ನಾ ರವರು ತನ್ನ ಬಾಳ ಸಂಗಾತಿ ಜ್ಯೋತಿ ಯವರೊಂದಿಗೆ ದಿನಾಂಕ 29/11/2017 ರಂದು ಸಪ್ತಪದಿ ತುಳಿದುಇದೀಗ ಮುದ್ದು ಕಂದ ಅಧ್ವಿಕ್  ನೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.

ಇದೀಗ ತೆಂಕುತಿಟ್ಟಿನ ನೂತನ ಮೇಳ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ಶ್ರೀಗೆಜ್ಜೆಗಿರಿ ಯಕ್ಷಗಾನ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀ ನವೀನ್ ಪೂಜಾರಿ ಪಡು ಇನ್ನಾ ಅವರಿಗೆ ಕ್ಷೇತ್ರದ ವತಿಯಿಂದ ಅಭಿನಂದನೆಗಳೊಂದಿಗೆ ತಮ್ಮ ಮುಂಬೈಯ ವ್ಯವಸ್ಥಾಪಕತ್ವದಲ್ಲಿ ಮಾಯಾನಗರಿ ಮುಂಬೈನಲ್ಲಿ ಶ್ರೀಗೆಜ್ಜೆಗಿರಿ ಮೇಳದ ಗೆಜ್ಜೆಸೇವೆಯ ಹೆಚ್ಚಿನ ಯಕ್ಷಗಾನವನ್ನು ಪ್ರದರ್ಶಿಸುವಂತಾಗಲಿ.  ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಉತ್ತಮ ಆರೋಗ್ಯಭಾಗ್ಯವನ್ನು ಕರುಣಿಸಿ ನಿಮ್ಮ ಎಲ್ಲಾ ಇಷ್ಟಾರ್ಥ ನೆರವೇರಿಸಲಿ ಎಂದು ಪ್ರಾರ್ಥಿಸುತ್ತೇವೆ.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »