TOP STORIES:

FOLLOW US

ಶ್ರೀ ಗೆಜ್ಜೆಗಿರಿ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಶ್ರೀ ನವೀನ್ ಪೂಜಾರಿ ಪಡು ಇನ್ನಾ, ಮುಂಬೈ


ಮಾಯಾನಗರಿ ಮುಂಬೈಯಲ್ಲಿ ಚತುರ ಸಂಘಟಕನಾಗಿ, ನಾಟಕ, ಯಕ್ಷಗಾನ ಮತ್ತು ಚಲನ ಚಿತ್ರ ಸಂಚಾಲಕರಾಗಿ  ಮಿನುಗುತ್ತಿರುವಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ, ಕಮಲ ಕಲಾ ವೇದಿಕೆ ಮುಂಬಯಿಯ ರೂವಾರಿ  ನಮ್ಮ ತುಳುನಾಡ ಪ್ರತಿಭೆ, ಕ್ಯಾಂಟಿನ್ ಉದ್ಯಮಿ ಶ್ರೀ ನವೀನ್ ಪಡು ಇನ್ನಾ, ಮುಂಬೈ ಅವರು ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಪಡು ಇನ್ನಾ ಗ್ರಾಮದವರು ತನ್ನಭವಿಷ್ಯದ ಹೊಂಗನಸನ್ನು ಸಾಕಾರಗೊಳಿಸಲು ಮಾಯಾನಗರಿ ಮುಂಬೈಗೆ ಆಗಮಿಸಿ ಫೋರ್ಟ್ ನಲ್ಲಿರುವ ಕನ್ನಡ ಭವನಜ್ಯೂನಿಯರ್ ಕಾಲೇಜಿನಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಾ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಮಾಲೀಕರ ಪ್ರೀತಿ ವಿಶ್ವಾಸವನ್ನುಗಳಿಸಿ ನಂತರ ಎಲ್ಲರೊಂದಿಗೆ ಆತ್ಮೀಯತೆಯ ಒಡನಾಟ ಮತ್ತು  ಸಹಕಾರವನ್ನು ಸೂಕ್ತವಾಗಿ ಬಳಸಿಕೊಂಡು ನಗರದಲ್ಲಿ ಯುವಕ್ಯಾಂಟೀನ್ ಉದ್ಯಮಿಯಾಗಿ ತನನ್ನು ಪರಿಚಯಿಸಿಕೊಂಡರು.  ಶ್ರೀ ನವೀನ್ ರವರು ದೈವ ದೇವರ ಧಾರ್ಮಿಕ ಕಾರ್ಯಗಳಲ್ಲೂಕೂಡಾ ತುಂಬಾ ಆಸಕ್ತಿಯನ್ನು ಹೊಂದಿ ತನ್ನ ಶಾಲಾ ದಿನಗಳಿಂದಲೇ ಸಂಘಟನಾ ಚಾತುರ್ಯ ಹಾಗೂ ಕ್ರೀಡಾ ನಾಯಕತ್ವದಗುಣಗಳಿಂದ ಮಾಯಾನಗರಿ  ಮುಂಬಯಿಯಲ್ಲಿ ನವೀನ್ ಪಡು ಇನ್ನಾ ಎಂದೇ ಪರಿಚಿತರಾಗಿ, ಕಲಾಪ್ರೇಮಿ ಯಾಗಿ ಕಳೆದ ಹತ್ತುವರ್ಷಗಳಿಂದ ತನ್ನ ಅಜ್ಜಿಯ ಹೆಸರಲ್ಲಿ ಕಮಲ ಕಲಾ ವೇದಿಕೆ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ಸಂಚಾಲಕತ್ವ ವನ್ನು ವಹಿಸಿ ಸಾಂಸ್ಕ್ರತಿಕಕಾರ್ಯಕ್ರಮಗಳ ಮುಖೇನ ನಾಟಕದ ಪ್ರದರ್ಶನಗಳನ್ನು ಯಶಸ್ವಿಯಾಗಿಆಯೋಜಿಸಿಕೊಂಡು *ತವರೂರ ಹಾಗೂ ನಗರದಸುಮಾರು 50 ಕ್ಕೂ ಹೆಚ್ಚಿನ ಕಲಾವಿದರನ್ನು, ಸಮಾಜ ಸೇವಕರನ್ನು  ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಿದಹೆಗ್ಗಳಿಕೆಗೆ ಪಾತ್ರರಾಗಿದ್ದಾರೆಇವರ ಸಾಮಾಜಿಕ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯು ಆರ್ಯಭಟಅಂತರಾಷ್ಟ್ರೀಯ ಪ್ರಶಸ್ತಿ -2017 ನ್ನು ನೀಡಿ ಗೌರವಿಸಿದೆಇಷ್ಟು ಮಾತ್ರವಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ “ಮದಿಪು” ತುಳುಚಿತ್ರವನ್ನು ತನ್ನ ಚೊಚ್ಚಲ ಸಂಚಾಲಕತ್ವದಲ್ಲಿ  ಮಹಾರಾಷ್ಟ್ರದಾದ್ಯಂತ ಬಿಡುಗಡೆ ಗೊಳಿಸಿ ಸುಮಾರು 20 ಕ್ಕೂ ಮಿಕ್ಕಿದಪ್ರದರ್ಶನಗಳ್ಳನ್ನು ನೀಡಿದ ಕೀರ್ತಿಯನ್ನೂ ಗಳಿಸಿದ್ದಾರೆ.

ಬಾಲ್ಯದಿಂದಲೇ ಪ್ರತಿಭಾವಂತರಾದ ಇವರಿಗೆ ಎಮ್. ವಿ. ಶಾಸ್ತ್ರಿ ಆಯುರ್ವೇದ ಭೂಷಣ ಹೈಸ್ಕೂಲ್ ಇನ್ನಾ ವು ಯುವರತ್ನ ಬಿರುದು, ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ರಿಂದ  ಚತುರ ಸಂಘಟಕ‘, ಸಮಾಜಪರಕಲಾ ಸೇವೆಗಾಗಿ ನಮನ ಫ್ರೆಂಡ್ಸ್ ಮುಂಬಯಿ, ಬಿಲ್ಲವರ ಎಸೋಸಿಯೇಶನ್ ಅಂಧೇರಿ ಸ್ಥಳೀಯ ಕಛೇರಿ, ಫ್ರೆಂಡ್ಸ್ ಸರ್ಕಲ್ ಕಣಂಜಾರು  ಮುಂಬಯಿ, ನಮ್ಮ ಕಲಾವಿದೆರ್ ಬೆದ್ರ  ತಂಡದವರಿಂದ ‘ಉತ್ತಮ ಸಂಘಟಕ‘ ಬಿರುದನ್ನು ನೀಡಿರುತ್ತಾರೆ.  ಸಮಾಜದಲ್ಲಿಎಲ್ಲರೊಂದಿಗೂ ಬೆರೆಯುವ ಸ್ವಭಾವದೊಂದಿಗೆ ಹಲವು ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಶ್ರೀ ವಿಠಲಪ್ರತಿಷ್ಠಾಪನೆ ಮುಂಬಯಿ ಇದರ ಯುವ ವಿಭಾಗದ ಸಂಚಾಲಕ ರಾಗಿ, ಶಿವಾಯ್ ಫೌಂಡೇಶನ್ ಮುಂಬಯಿ ಮತ್ತು ರಂಗಮಿಲನ ಮುಂಬಯಿ   ಉಪಾಧ್ಯಕ್ಷ ರಾಗಿ, ಶ್ರೀ ಬ್ರಹ್ಮಶ್ರೀ ಗುರುನಾರಾಯಣ ಭಕ್ತವ್ರಂದ ಇದರ ಗೌ. ಕೋಶಾಧಿಕಾರಿ ಯಾಗಿ, ಇನ್ನಾ ಹಿತವರ್ಧಕ ಸಂಘ ಮುಂಬಯಿ  ಜೊತೆ ಕೋಶಾಧಿಕಾರಿ ಯಾಗಿ, ಯಂಗ್ ಫ್ರೆಂಡ್ಸ್ ಮುಂಬಯಿ ಯ ಸ್ಥಾಪಕ ರಾಗಿ, ಉಮೇಶ್ ಮಿಜಾರ್ ರವರ ನಮ್ಮ ಕಲಾವಿದೆರ್ ಬೆದ್ರ  ಹಾಗೂ ತುಳುವೆರ್ ಉಡಲ್ ಜೋಡುಕಲ್ಲು ನಾಟಕತಂಡಗಳ ಮುಂಬಯಿ ಸಂಚಾಲಕ ರಾಗಿ, ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಬೇಲಾಪುರ್ ಹಾಗೂ ಸಪ್ತಸ್ವರ ಕಲ್ಚರಲ್ಎಸೋಸಿಯೇಶನ್(ರಿಇದರ ಸಕ್ರಿಯ ಕಾರ್ಯಕರ್ತ  ನಾಗಿ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದದ್ದು. ಕೋರೋನಾ  ಮಹಾಮಾರಿಯ ಸಂಕಟದ ಪರಿಸ್ಥಿತಿಯಲ್ಲಿ ತಮ್ಮ  ಸಂಸ್ಥೆ ಕಮಲಾ ಕಲಾ ವೇದಿಕೆ  ಆಶ್ರಯದಲ್ಲಿ ದಾನಿಗಳಸಹಾಯದಿಂದ ಸುಮಾರು 200 ಕ್ಕೂ  ಹೆಚ್ಚಿನ ಬಡ ಕುಟುಂಬಗಳಿಗೆ ಸಹಾಯ ಮಾಡಿರುವುದು ನಿಜವಾಗಲೂ ವಂದನೀಯ.

ನವೀನ್ ಪಡು ಇನ್ನಾ ರವರು ತನ್ನ ಬಾಳ ಸಂಗಾತಿ ಜ್ಯೋತಿ ಯವರೊಂದಿಗೆ ದಿನಾಂಕ 29/11/2017 ರಂದು ಸಪ್ತಪದಿ ತುಳಿದುಇದೀಗ ಮುದ್ದು ಕಂದ ಅಧ್ವಿಕ್  ನೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.

ಇದೀಗ ತೆಂಕುತಿಟ್ಟಿನ ನೂತನ ಮೇಳ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ಶ್ರೀಗೆಜ್ಜೆಗಿರಿ ಯಕ್ಷಗಾನ ಮೇಳದ ಮುಂಬೈಯ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವ ಶ್ರೀಯುತ ಶ್ರೀ ನವೀನ್ ಪೂಜಾರಿ ಪಡು ಇನ್ನಾ ಅವರಿಗೆ ಕ್ಷೇತ್ರದ ವತಿಯಿಂದ ಅಭಿನಂದನೆಗಳೊಂದಿಗೆ ತಮ್ಮ ಮುಂಬೈಯ ವ್ಯವಸ್ಥಾಪಕತ್ವದಲ್ಲಿ ಮಾಯಾನಗರಿ ಮುಂಬೈನಲ್ಲಿ ಶ್ರೀಗೆಜ್ಜೆಗಿರಿ ಮೇಳದ ಗೆಜ್ಜೆಸೇವೆಯ ಹೆಚ್ಚಿನ ಯಕ್ಷಗಾನವನ್ನು ಪ್ರದರ್ಶಿಸುವಂತಾಗಲಿ.  ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಉತ್ತಮ ಆರೋಗ್ಯಭಾಗ್ಯವನ್ನು ಕರುಣಿಸಿ ನಿಮ್ಮ ಎಲ್ಲಾ ಇಷ್ಟಾರ್ಥ ನೆರವೇರಿಸಲಿ ಎಂದು ಪ್ರಾರ್ಥಿಸುತ್ತೇವೆ.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ(ರಿ) ಮತ್ತು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »