TOP STORIES:

”ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಸಂದೇಶ”, ಮಮತೆಯ ಮಾತೃ ಹೃದಯ…ಇಲ್ಲಿದೆ ಸ್ವಲ್ಪ ವಿವರಣೆ


ವಾಟ್ಸ್ ಪ್ ಕೃಪೆ

ಮೊಬೈಲ್ ನಲ್ಲಿ ಬಂದದ್ದನ್ನೆಲ್ಲಾ ಇನ್ನೊಬ್ಬರಿಗೆ ಹಂಚುವ ಮೊದಲು ನೂರು ಸಲ ಆಲೋಚಿಸ ಬೇಕಾದೀತೇ?
ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಶಬ್ದ ಸಂದೇಶದ ಒಂದು ವಿಮರ್ಶೆ ಹೀಗಿದೆ.

ನಿಮ್ಮ ಕಣ್ಣಿನ ನೇರಕ್ಕೆ ಕಂಡದನ್ನು ಮಾತ್ರ ಸಮರ್ಥನೆ ಮಾಡುವುದು ಒಳಿತಲ್ಲ ಎಂಬುವುದು ನನ್ನ ಅಭಿಪ್ರಾಯ.
ಹೀಗಿದೆ ಆ ಬರಹ

ವೈರಲ್ ಆದ ಆಡಿಯೋದಲ್ಲಿ… ಮಗ ಕರೆ ಮಾಡಿ ಏನು ಹೇಳುತ್ತಿದ್ದಾನೆ ಎಂದು ಸರಿಯಾಗಿ ಕೇಳದಿದ್ದರು ಇನ್ನೊಂದು ಕಡೆಯಿಂದ ಮಮತೆಯ ಮಾತೃ ಹೃದಯ ತನ್ನ ಮಗು ಹಸಿವಿಗಾಗಿಯೇ ಕರೆ ಮಾಡಿರಬಹುದೇನೋ ಎಂದು ಊಹಿಸಿ ಬಾಣಲೆಯಲ್ಲಿ ಸಜ್ಜಿಗೆ ಇದೆ ತಿನ್ನು ಮಗನೇ ಎನ್ನುವ ಆಡಿಯೋ ಟ್ರೋಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಸ್ವಲ್ಪ ವಿವರಣೆ .

ಆ ಘಟನೆಯ ತಾಯಿಯನ್ನು ಹತ್ತಿರದಿಂದ ನೋಡಿದವನು ನಾನು…. ತನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸ್ವ-ಸಹಾಯ ಸಂಘದಿಂದ, ಪರಿಚಯಸ್ತರಿಂದ ಸಾಲ ಮಾಡಿ ಬದುಕಿಸಲು ಕೈ ಮೀರಿ ಪ್ರಯತ್ನ ಮಾಡಿದರೂ ಉಳಿಸಲು ಅಸಾಧ್ಯವಾಗಿ, ಮನೆಯ ಆಧಾರ ಸ್ತಂಭ ಕುಸಿದಾಗ ನನ್ನ ಮಕ್ಕಳ ಬೇಕು ಬೇಡಗಳನ್ನು ಪೂರೈಸಿ, ಎಲ್ಲರಂತೆ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವ ಕನಸು ಕಾಣುವ ತಾಯಿ ಆಕೆ.

ಪತಿಯ ಅನಾರೋಗ್ಯದ ಸಂದರ್ಭದಲ್ಲಿ ಮಾಡಿದ ಸಾಲವನ್ನು ತೀರಿಸಲು ರಾತ್ರಿ ಹಗಲು ಬೀಡಿ ಕಟ್ಟಿ ತನ್ನ ಇಬ್ಬರು ಸಣ್ಣ ಮಕ್ಕಳನ್ನು ಸಾಕುವ ಕಷ್ಟದ ಜೀವನ ನಡೆಸುತ್ತಿದ್ದಾರೆ.

ಇನ್ನೊಂದು ಕಡೆ ಕೋರೊನ, ಈ ಕೋರೊನದಿಂದಾಗಿ ಸ್ವಲ್ಪ ದಿನ ಬೀಡಿ ಉದ್ಯಮವು ನಿಂತಿತು., ಬೀಡಿಯ ಆದಾಯವು ನಿಂತಿತು.

ಮಕ್ಕಳಿಗೆ ಮೊಬೈಲ್ ನೀಡಬಾರದು ನಿಜ ಅದು ತಿಳಿದೂ ಆಕೆ ತನ್ನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು, ಮೊಬೈಲ್ ಬಳಕೆಯ ಮಾಹಿತಿ ಗೊತ್ತಿಲ್ಲದ ಆಕೆ ಮಗನಿಗೆ online class ಗಾಗಿ ಸಣ್ಣ Touch ಮೊಬೈಲ್ ನೀಡಿದಳು… ಆತ ಮೊಬೈಲ್ ಸಿಕ್ಕ ಖುಷಿಯಲ್ಲಿ online class ಹಾಗೂ ಗೇಮ್ ಆಡುತ್ತಿದ್ದ.. ಮತ್ತೊಂದು ವಿಷಯ ಏನೆಂದರೆ ಆ ಮೊಬೈಲ್ ನಲ್ಲಿ ಎಲ್ಲ ಕರೆಗಳು Record ಆಗುತಿತ್ತು ಅದು ಕೂಡ ಈ ಘಟನೆಯ ನಂತರವೇ ತಿಳಿದದ್ದು.

ಆ ತಾಯಿಯ ಮಗನೂ ಸಹ ಮೊಬೈಲ್ ಬಳಕೆಯ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದವ.. ಜೋಕುಲಾಟಿಕೆ ಎಂಬಂತೆ ಮೊಬೈಲ್ ನಲ್ಲಿದ್ದ ಪದ್ಯ ಹಾಗೂ call record ನ್ನೂ ಸಹ ತನ್ನ whatsappನಲ್ಲಿ ಗೆಳೆಯರಿಗೆ ಕಳುಹಿಸಿದ್ದಾನೆ.. ಆದು ಒಬ್ಬರಿಂದ ಒಬ್ಬರಿಗೆ forward ಆಗುತ್ತಲೇ ಹೋಯಿತು.

ಆ ತಾಯಿಯ ಸ್ವರ ಬಲ್ಲವರು ಆಕೆಯನ್ನು ಕರೆ ಮಾಡಿ ವಿಚಾರಿಸುತ್ತಿರುವಾಗ ಆಕೆ “ಕೊರೊನಾ ಸುರುವಾದ್ ಮಗಕ್ ಸಾಲೆ ಸುರುವಾವಂದೆ, ಮೊಬೈಲ್ ಡ್ ಪಾಠ ಮಲ್ಪುವೆರ್ ಗೆ, ಮೊಬೈಲ್ ಕೊರ್ದು ಈತ್ ಮಾತ ಮಲ್ತ್ ಪಾಡಿಯೆ.. ನನ ಪೋನು ಮುಟ್ಪರೆ ಬುಡ್ಪುಜಿ…” ಎಂದು ತುಂಬಾ ನೊಂದುಕೊಳ್ಳುತ್ತಿದ್ದಾಳೆ.

ಇಲ್ಲಿ ತಪ್ಪು ಯಾರದು..?ಕೊರೊನದ್ದಾ? ಮಕ್ಕಳಿಗೆ online class ಪ್ರಾರಂಭ ಮಾಡಿದ ಸರಕ್ಕಾರದ್ದೋ? ಮಗನಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು ಮೊಬೈಲ್ ಕೊಟ್ಟ ತಾಯಿಯದ್ದೋ? auto call record ಆಗುತ್ತಿದ್ದ ಮೊಬೈಲಿದ್ದೋ? ಮೊಬೈಲ್ ಬಳಕೆ ಸರಿಯಾಗಿ ಗೊತ್ತಿಲ್ಲದೆ ಎಲ್ಲವನ್ನೂ ಕಳುಹಿಸಿದ ಮಗನದ್ದೊ? ಸ್ವೀಕರಿಸಿದವರು ಕೇಳಿ ಆನಂದಿಸಿ ಎಲ್ಲರೂ ಖುಷಿ ಪಡೆಯಲಿ ಎಂದು ಒಬ್ಬರಿಂದ ಒಬ್ಬರಿಗೆ forward ಈಗಲೂ ಮಾಡುತ್ತಿರುವವರದ್ದೊ? ಎಂಬುವುದನ್ನು ನೀವು ನಿರ್ಧರಿಸಿ.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »