TOP STORIES:

FOLLOW US

ಸಮಾಜದ ಸಮಸ್ಯೆಗಳ ಧ್ವನಿಯಾಗುವ ಪೊಲೀಸ್ ಅಧಿಕಾರಿ ಶ್ರೀಮತಿ ರೀನಾ ಸುವರ್ಣ ACP


ನೊಂದವರ ಕಣ್ಣೀರು ಒರೆಸಿ, ಸ್ನೇಹಭಾವದ ಬೀಜವನ್ನು ಬಿತ್ತಿ, ಹಿಂಸಾಚಾರ ತಡೆಯುವಲ್ಲಿ ರಕ್ಷಾಕವಚವಾಗಿ, ನ್ಯಾಯ ನೀತಿ ಧರ್ಮವನ್ನು ಪೋಷಿಸಿ, ಅನ್ಯಾಯವನ್ನು ಮೆಟ್ಟಿ, ಸಮಸ್ಯೆಗಳನ್ನು ಸಹನೆ ತಾಳ್ಮೆಯಿಂದ ಸ್ವೀಕರಿಸಿ ಜನರ ಸೇವೆಗೈವ ನಿಷ್ಠಾವಂತ ಪೊಲೀಸ್ ಅಧಿಕಾರಿಣಿ ಯೇ ನಮ್ಮ “ಶ್ರೀಮತಿ ರೀನಾ ಸುವರ್ಣ. ಎನ್. ”

ವಿಶ್ವ ಕಂಡ ಮಹಾನ್ ಸಾಹಿತಿ ಲಿಯೋ ಟಾಲಸ್ಟಾಯ್ ಹೇಳುತ್ತಾರೆ. “ಜೀವನದಲ್ಲಿ ಅತ್ಯಂತ ಶ್ರೇಯಸ್ಕರವಾದುದು ಎಂದರೆ ಮನುಕುಲದ ಒಳಿತಿಗಾಗಿ ಶ್ರಮಿಸುವುದು. “ಎಂದು. ಜನರ ಸೇವೆಯ ಜೊತೆಗೆ ಸಮಾಜದ ಕೆಲವು ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹರಿಸಲು “ಅಧಿಕಾರ ” ಮತ್ತು “ಜವಾಬ್ದಾರಿ ” ಇರಲೇಬೇಕು. ಎಂಬ ನಿಲುವಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿದ್ದು ಹೆಮ್ಮೆಯ ವಿಚಾರ.

ಶ್ರೀಮತಿ. ರೀನಾ ಸುವರ್ಣ.ಎನ್. ಡಿವೈ ಎಸ್ ಪಿ, ಸಿಐಡಿ ಬೆಂಗಳೂರು, ಕರ್ನಾಟಕ ರಾಜ್ಯ ಪೊಲೀಸ್ ಸೇವೆ. ಇವರು ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಭಾನ್ವಿತೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಮ್. ಎ. ಪದವಿಯಲ್ಲಿ, “ಚಿನ್ನದ ಪದಕ” ಗಳಿಸಿದ ಇವರು, ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ ಬಿ.ಎ ಯಲ್ಲಿ “ಕಾಲೇಜಿನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ “ಎಂಬ ಪ್ರಶಸ್ತಿಗೆ ಭಾಜನರು.

ಬಾಲ್ಯದಿಂದಲೂ ಪುಸ್ತಕಗಳಲ್ಲಿದ್ದ ಅಪಾರ ಪ್ರೇಮ, ಓದುವ ಛಲವೇ ಇವರನ್ನು ಇಂದು ಅತ್ಯಂತ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಎಂದರೆ ತಪ್ಪಲ್ಲ..

“ಹಗಲೆನ್ನದೆ ಇರುಳೆನ್ನದೆ, ಉಪಚಾರಗಳ ಹಂಗಿಲ್ಲದೆ ಜನರಿಗಾಗಿ ದುಡಿವ ಮಹಿಳಾ ಪೊಲೀಸ್ ಅಧಿಕಾರಿ ಎಲ್ಲರಿಗೂ ಸ್ಪೂರ್ತಿಯ ಸೆಲೆ. “ಇವರ ಕಾರ್ಯವೈಖರಿ ಅದ್ಭುತವೇ ಸರಿ.

2014 ರಲ್ಲಿ ಡಿವೈಎಸ್ಸ್ಪಿ ಯಾಗಿ ಕರ್ತವ್ಯಕ್ಕೆ ಸೇರಿದ ಇವರು ” ಬೆಂಗಳೂರು ಗ್ರಾಮೀಣ ಪ್ರೊಬೆಷನರಿ ಐಜಿ ದಕ್ಷಿಣ ಶ್ರೇಣಿ “ಯಿಂದ ಮೂರು ಮೆಚ್ಚುಗೆ ಪತ್ರಗಳನ್ನು ಗಳಿಸಿರುತ್ತಾರೆ.

ಹೊಸಕೋಟೆ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಕೇವಲ ಎರಡೇ ತಿಂಗಳಲ್ಲಿ 11 ಕಾಣೆಯಾದ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ. ಅನೇಕಲ್ ಅಟ್ಟಿಬೆಲೆಯಲ್ಲಿ 280 ಕಿ.ಗ್ರಾ ಗಾಂಜಾವನ್ನು ವಶಪಡಿಸಿಕೊಂಡಿದ್ದೂ ನಮ್ಮ ಮಹಿಳಾ ಸಾಧಕಿ “ಶ್ರೀಮತಿ.ರೀನಾ ಸುವರ್ಣ” ರವರೆ. ತಾನು ಉರಿದು ಸೇವೆಯೇ ಸರ್ವಸ್ವವೆಂದು ಕರ್ತವ್ಯ ನಿರ್ವಹಿಸುವ ಇವರು ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಶ್ರಮ ಪಟ್ಟಿರುತ್ತಾರೆ..

ಜಿಗಾನಿಯಲ್ಲಿ ಅರ್ಧ ದಿನದಲ್ಲಿ ಗುರುತಿಸಲೂ ಆಗದ ಮೃತದೇಹವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅಂದಿನ ಉಡುಪಿ ಎಸ್.ಪಿ ಲಕ್ಷ್ಮಣ ನಿಂಬರ್ಗಿ ಯವರಿಂದ ಮೆಚ್ಚುಗೆ ಪಡೆದವರು ನಮ್ಮ ಶ್ರೀಮತಿ. ರೀನಾ ಸುವರ್ಣ ರವರು.

ಇದಲ್ಲದೆ ಹೊಸ್ಕೊಟ್ ನಲ್ಲಿ 6 ಗಂಟೆಯ ಒಳಗೆ “ಪೊಕ್ಸೋ ” ಪ್ರಕರಣವನ್ನು ಪತ್ತೆಹಚ್ಚಿದ ಅದ್ಭುತ ಪತ್ತೇದಾರಿ ಪೊಲೀಸ್ ಇವರು.
“ಆರಕ್ಷಕರಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ ಹೇಳಿ???. ಸೇವೆಯುದ್ದಕ್ಕೂ ಸವಾಲುಗಳೇ, ಸಾವಿನಂಚಿಗೂ ತಲುಪುವ ಕ್ಲಿಷ್ಟ ಕಠಿಣ ಪ್ರಕರಣಗಳೇ, ದುರ್ವಿಧಿಯ ಸನ್ನಿವೇಶಗಳೇ.. ”

ಹೆಣ್ಣು ಬಲಹೀನ, ದುರ್ಬಲಳು, ಅವಲಂಬಕಿ ಎನ್ನುವ ಈ ಸಮಾಜಕ್ಕೆ ತಕ್ಕ ಪ್ರತಿ ಉತ್ತರವೇ ಡಿವೈ ಎಸ್ ಪಿ,ಶ್ರೀಮತಿ ರೀನಾ ಸುವರ್ಣ, ಎನ್.

ನಗರಸಭೆಯ ಬೆಂಬಲದೊಂದಿಗೆ ಹೊಸ್ಕೊಟ್ ನ ಪ್ರಮುಖ ಜಂಕ್ಷನ್ ಗಳಲ್ಲಿ ಸಿ.ಸಿ. ಟಿ. ವಿ. ಯನ್ನು ಅಳವಡಿಸಿ ಅನ್ಯಾಯಕ್ಕೆ ಪ್ರತಿಧ್ವನಿಯಾದವರು ಇವರು. ಅದಷ್ಟೇ ಅಲ್ಲದೇ, ಡ್ರಗ್ಸ್ ಮಾಫಿಯಾ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧ ಛಲಬಿಡದೆ ಹೋರಾಡುವ ಧೀಮಂತ ಪೊಲೀಸ್ ನಮ್ಮ ರೀನಾ ಸುವರ್ಣ.

ಒತ್ತಡಗಳನ್ನು, ಸವಾಲುಗಳನ್ನು ತನಗಿರುವ ಅವಕಾಶಗಳೆಂದು ಸ್ವೀಕರಿಸಿ ದುಡಿಯುವ ಇವರು ಪ್ರಸ್ತುತ ಎಸಿಪಿ ಯಾಗಿ ಜೆಸಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಆಡಿಕೊಳ್ಳುವವರ ಮುಂದೆ ಜಾರಿ ಬೀಳದೆ ತಲೆಯೆತ್ತಿ ನಡೆದು ಕೆಚ್ಚೆದೆಯಿಂದ ನಡೆಯುತ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ಬದುಕಿಗೊಂದು ಸಾರ್ಥಕತೆ ಒದಗಿಸಿಕೊಡಬೇಕು. ಆಗಲೇ ಬದುಕಿಗೊಂದು ಬೆಲೆಯೂ, ನೆಲೆಯೂ… ”

“ಪೊಲೀಸ್ ಸ್ವಸ್ಥ ಸಮಾಜದ ಭದ್ರತೆ ವಹಿಸಿ ಹಗಲಲ್ಲಿ ಸೂರ್ಯನಂತೆ, ರಾತ್ರಿ ಚಂದ್ರನಂತೆ ಸಮಾಜಕ್ಕಾಗಿ ದುಡಿಯುವ ಏಕೈಕ ಸರ್ಕಾರಿ ನೌಕರ.. ”
.
ಎಲ್ಲಾ ನಿಷ್ಠಾವಂತ ಪೊಲೀಸ್ ರಿಗೆ, ಮುಂದೆ “ಪೊಲೀಸ್ ಅಧಿಕಾರಿಣಿ ” ಯಾಗುವ ಛಲತೊಟ್ಟ ಹುಡುಗಿಯಿಂದ ಈ ಬರಹ ಅರ್ಪಣೆ..

Credits: ಚೈತ್ರ ಕಬ್ಬಿನಾಲೆ

Email us: billavaswarriors@gmail.com

www.billavaswarriors.com


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »