TOP STORIES:

FOLLOW US

ಸಿಐಎಸ್‌ಎನಲ್ಲಿ ವಿಶ್ವಕ್ಕೆ ಅಗ್ರಸ್ಥಾನಿ ಗ್ರಾಮೀಣ ಪ್ರತಿಭೆ ಹೆಬ್ರಿ ಸಪ್ನಾ ಪೂಜಾರಿ ಸಾಧನೆ ಯುವ ಸಮುದಾಯಕ್ಕೆ ಮಾದರಿ


ಸಿಐಎಸ್‌ಎನಲ್ಲಿ ವಿಶ್ವಕ್ಕೆ ಅಗ್ರಸ್ಥಾನಿ

ಗ್ರಾಮೀಣ ಪ್ರತಿಭೆ ಹೆಬ್ರಿ ಸಪ್ನಾ ಪೂಜಾರಿ ಸಾಧನೆ | ಯುವ ಸಮುದಾಯಕ್ಕೆ ಮಾದರಿ

ಬದುಕಿನಲ್ಲಿ ಆಶಾವಾದವೇ ಛಲಕ್ಕೆ ಮೂಲ ಕಾರಣ. ಛಲವುಳ್ಳ ಬದುಕು ಸಾಧನೆಯ ಮೊದಲ ಹೆಜ್ಜೆ. ಅಂತಹ ಸಾಧನೆಯನ್ನು ಬೆನ್ನತ್ತಿಯಶಸ್ವಿಯಾದವರು ಹೆಬ್ರಿಯ ಸಪ್ನಾ ಪೂಜಾರಿ.

ಹೆಬ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯೊಬ್ಬಳು ಅಂತಾರಾಷ್ಟಿçà ಸಂಸ್ಥೆಯಾದ ಐಸಾಕನಡೆಸಿದ 2022ನೇ ಸಾಲಿನಲ್ಲಿ ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ (ಸಿಐಎಸ್‌ಎ) ಪರೀಕ್ಷೆಯಲ್ಲಿ ವಿಶ್ವಕ್ಕೆ ಟಾಪರ್ಆಗಿ ಹೊರಹೊಮ್ಮಿದ್ದಾರೆ. ಇಂತಹ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಮೆರಿಕಾದಬೋಸ್ಟನ್‌ನಲ್ಲಿ ಇತ್ತೀಚೆಗೆ ನಡೆದ ಡಿಜಿಟಲ್ ಟ್ರಸ್ಟ್ ವರ್ಲ್ಡ್ ಕಾನ್ಪರೆನ್ಸ್ ನಲ್ಲಿ ಇವರ ಸಾಧನೆಗೆ ಗೌರವ ಸನ್ಮಾನ ಲಭಿಸಿದೆ.

ಉಡುಪಿ ಜಿಲ್ಲೆ ಹೆಬ್ರಿಯ ಲೀಲಾವತಿ ಮತ್ತು ಭೋಜ ಪೂಜಾರಿ ದಂಪತಿಗಳ ಪುತ್ರಿಯಾದ ಸಪ್ನಾ ಅವರ ಹುಟ್ಟೂರು ಪೆರ್ಡೂರಿನಬೆಳ್ಳರ್ಪಾಡಿಯಲ್ಲಿ ಹಾಗೂ ಬೆಳೆದದ್ದು ಹೆಬ್ರಿ ಜರ್ವತ್ತಿನ ಕೂಡು ಕುಟುಂಬದಲ್ಲಿ. ಆರಂಭಿಕ ಪ್ರಾಥಮಿಕ ಶಿಕ್ಷಣವನ್ನು ಊರಿನ ಸರಕಾರಿಶಾಲೆಯಲ್ಲಿ ಪಡೆದರು. ಬಳಿಕ ಮುದ್ರಾಡಿಯ ಎಂಎನ್‌ಡಿಎಸ್‌ಎAನಲ್ಲಿ ಹೈಸ್ಕೂಲ್, ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿಪದವಿಪೂರ್ವ ಶಿಕ್ಷಣ, ಬೆಂಗಳೂರಿನ ಪೆಸಿಟ್‌ನಲ್ಲಿ ಬಿಇ ಶಿಕ್ಷಣ ಮುಗಿಸಿದರು. ಇವರ ಶಿಕ್ಷಣಕ್ಕೆ ಇಡೀ ಕುಟುಂಬ ಸಾಥ್ ನೀಡಿತ್ತು. ಬೆಂಗಳೂರಿಗೆ ತೆರಳಿದ ಸಂದರ್ಭ ಅಮ್ಮ ಕೂಡಾ ಜತೆಯಲ್ಲೇ ವಾಸ್ತವ್ಯ ಹೂಡಿ ಮಗಳ ವಿದ್ಯಾಭ್ಯಾಸಕ್ಕೆ ಬೆನ್ನಲುಬಾಗಿ ನಿಂತಿದ್ದರು. ಸಹೋದರ ಪ್ರಸನ್ನ ಕುಮಾರ್ ಅವರ ಮಾರ್ಗದರ್ಶನದಂತೆ ಶಿಕ್ಷಣದ ಬಳಿಕ ವೃತ್ತಿ ಜೀವನಕ್ಕೆ ಆಯ್ಕೆ ಮಾಡಿಕೊಂಡಿರುವುದು ಐಟಿಕಂಪನಿ.

ಮತ್ತಷ್ಟು ಸಾಧನೆ ತವಕ: ನಾರಾವಿ ತಿರ್ತೊಟ್ಟು ದಿ. ಬಾಬು ಪೂಜಾರಿ ಅವರ ಮೊಮ್ಮಗ ಪ್ರವೀಣ್ ಪೂಜಾರಿ ಅವರನ್ನು ಸಪ್ನಾವಿವಾಹವಾದರು. ಸಾಮಾನ್ಯವಾಗಿ ಉದ್ಯೋಗ ಸಿಕ್ಕ ಬಳಿಕ ಬಹುತೇಕ ಮಂದಿ ನಿರಾಳರಾಗುತ್ತಾರೆ. ಅದರಲ್ಲೂ ಮದುವೆಯಾದಬಳಿಕ ಸಾಕು ಎಂಬ ಭಾವನೆ ಮೂಡುತ್ತದೆ. ಆದರೆ ಸಪ್ನಾ ಅವರಿಗೆ ಮತ್ತಷ್ಟು ಕಲಿಯಬೇಕು, ಹೊಸತನಕ್ಕೆ ತೆರೆದುಕೊಳ್ಳಬೇಕು, ಸಾಧನೆಯ ಮತ್ತೊಂದು ಮಗ್ಗುಲು ಮುಟ್ಟಬೇಕು ಎಂಬ ಕನಸು ಮತ್ತಷ್ಟು ಚಿಗುರೊಡೆಯಿತು. ಇದಕ್ಕೆ ತಂದೆ, ತಾಯಿ, ಗಂಡ, ಅತ್ತೆ, ಮಾವ ಸೇರಿದಂತೆ ಸಂಪೂರ್ಣ ಕುಟುಂಬ ಬೆನ್ನೆಲುಬಾಗಿ ನಿಂತಿತು. ಇದಕ್ಕೆ ಪೂರಕವಾಗಿ ಉದ್ಯೋಗ ಮಾಡುತ್ತಿದ್ದ ಐಟಿ ಅಡಿಟಿಂಗ್ಕ್ಷೇತ್ರದಲ್ಲೇ ಮತ್ತಷ್ಟು ಅಧ್ಯಯನಕ್ಕೆ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಪ್ನಾ, ಅಧ್ಯಯನದಲ್ಲಿತೊಡಗಿಸಿಕೊಂಡರು. ಸರ್ಟಿಫೈಡ್ ಇನ್ ಫಾರ್ಮೇಶನ್ ಸಿಸ್ಟಮ್ ಅಡಿಟರ್ (ಸಿಐಎಸ್‌ಎ) ಪರೀಕ್ಷೆಗೆ ಸಿದ್ಧತೆ ನಡೆಸಿದರು. ಪರೀಕ್ಷೆಯು ಕಠಿಣ ಹಾಗೂ ಕ್ಲಿಷ್ಟಕರವಾಗಿರುವುದರಿಂದ ವಿಶ್ವದಲ್ಲಿ ಕೆಲವೇ ಕೆಲವು ಮಂದಿ ಬರೆಯುತ್ತಾರೆ. ಪರೀಕ್ಷೆಯಲ್ಲಿ ಸಪ್ನಾಅವರು ವಿಶ್ವಕ್ಕೆ ಟಾಪರ್ ಆಗಿ ಸಾಧನೆ ಮಾಡಿದ ಪ್ರಥಮ ಭಾರತೀಯ ಮಹಿಳೆ. 2022ರಲ್ಲಿ ಇವರ ಜತೆ ಜರ್ಮನಿಯ ಯುವಕನೊಬ್ಬಟಾಪರ್ ಸ್ಥಾನ ಹಂಚಿಕೊAಡಿದ್ದಾರೆ.

ಯುವ ಸಮುದಾಯಕ್ಕೆ ಮಾದರಿ: ಸಪ್ನಾ ಅವರು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷೆಯ ಬಗ್ಗೆ ಮಾಹಿತಿಕಲೆಹಾಕಿ, ಬಿಡುವಿನ ಸಮಯದಲ್ಲಿ ತಜ್ಞರಿಂದ ಮಾರ್ಗದರ್ಶನ ಪಡೆದರು. ಒಂದೆಡೆ ಗಂಡ, ಮಕ್ಕಳನ್ನೊಳಗೊಂಡ ಕುಟುಂಬ, ಇನ್ನೊಂದೆಡೆ ಉದ್ಯೋಗ. ಇವೆರಡರ ಮಧ್ಯೆ ಉನ್ನತ ಶಿಕ್ಷಣವನ್ನು ಮುಂದುವರಿಸಿ ಯಶಸ್ಸು ಕಂಡ ಅವರ ಸಾಧನೆ ಯುವ ಸಮಾಜಕ್ಕೆಮಾದರಿಯಾಗಿದೆ.

ನನಗೆ ಬಾಲ್ಯದಿಂದಲೂ ಒಳ್ಳೆಯದಾಗಿ ಕಲಿತು ಸಾಧನೆ ಮಾಡಬೇಕೆಂಬ ಹಂಬಲ ಇತ್ತು. ಅದಕ್ಕೆ ಸರಿಯಾಗಿ ಪ್ರಾಥಮಿಕ ಮತ್ತುಪ್ರೌಢಶಿಕ್ಷಣ ಭದ್ರ ಅಡಿಪಾಯ ಒದಗಿಸಿತು. ಐಟಿ ಕ್ಷೇತ್ರಕ್ಕೆ ಹೋದ ಬಳಿಕ ಸಿಐಎಸ್‌ಎ ಪರೀಕ್ಷೆ ಬಗ್ಗೆ ಆಸಕ್ತಿ ಹುಟ್ಟಿತು. ಕುಟುಂಬ, ಮನೆಯವರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ಇಂದಿನ ಯುವ ಸಮಾಜಕ್ಕೂ ನನ್ನ ಸಲಹೆ ಅವಕಾಶಗಳನ್ನುಬಳಸಿಕೊಂಡು ಸಾಧನೆ ಮಾಡೋಣ. ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಅದರಲ್ಲಿ ಒಳ್ಳೆಯ ಅಂಶಸ್ವೀಕರಿಸಿದಾಗ ಯಾವುದೇ ಕ್ಷೇತ್ರದಲ್ಲಿ ಮುನ್ನಡೆದಾಗ ಯಶಸ್ಸು ನಿಶ್ಚಿತ.

ಸಪ್ನಾ ಪೂಜಾರಿ ಹೆಬ್ರಿ, ಸಿಐಎಸ್‌ಎ ಟಾಪರ್


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »