TOP STORIES:

FOLLOW US

ಹೆಣ್ಣು ಕೂಡ ಒಂದು ಜೀವಿ ಎಂಬುವುದನ್ನು ಇಂದಿನ ಸಮಾಜ ಮರೆತಿದೆಯೇ ?


ಹೆಣ್ಣು
“ಯತ್ರ ನಾರ್ಯಸ್ತು ಪೂಜೆಯಂತೇ ತತ್ರ ದೇವತಾ”: ಅಂದರೆ “ಎಲ್ಲಿ ಹೆಣ್ಣನ್ನು ಪೂಜೆಸುತ್ತಾರೋ ಅಲ್ಲಿ ಸಕಲ ದೇವತೆಗಳು ನೆಲೆಸುತ್ತಾರೆ” ಆದರೆ ಬೇಸರದ ಸಂಗತಿಯೆಂದರೆ ಈ ೨೧ನೆಯ ಶತಮಾನದಲ್ಲಿ ಈ ಅರ್ಥ ಅಕ್ಷರಶ: ಸುಳ್ಳುಯೆನಿಸುತ್ತಿದೆ.

ಹೆಣ್ಣನ್ನು ಪೂಜೆಮಾಡುವುದು ಬೇಡ ಕನಿಷ್ಟ ಪಕ್ಷ ಅವಳು ಒಂದು ಜೀವಿ ,ಅವಳಿಗೂ ಈ ಭೂಮಿಯಲ್ಲಿ ಅವಳ ಇಚ್ಛೆಯಂತೇ ಬದುಕಲು ಬಿಟ್ಟರೆ ಸಾಕು..

‘ಹೆಣ್ಣು ‘ಒಬ್ಬಳು ಗಂಡಿನಂತೆ ಒಂದು ಜೀವಿ ,ಅವಳಿಗೂ ಮನಸ್ಸು ,ಭಾವನೆಗಳಿವೆ,ಅವಳು ಕೇವಲ ಉಸಿರಾಡುವ ಬೊಂಬೆಯಲ್ಲ ,ಅವಳಿಗೂ ಗಂಡಿನಂತೆ ಜೀವವಿದೆ . ಇದೆನ್ನೆಲ್ಲ ಮರೆತಂತಿದೆ ಗಂಡುಕುಲ . ‘ಹೆಣ್ಣು ‘ಅಂದರೆ ಕೇವಲ ನಿಮ್ಮ ಕಾಮದ ಬಯಕೆಗಳನ್ನ ತೀರಿಸುವ ಒಂದು ಯಂತ್ರವಾಗಿ ಕಾಣುತ್ತಾಳ ? ಮತ್ತೇಕೆ..ಅವಳ ಮೇಲಿನ ದೌರ್ಜನ್ಯ ,ಅತ್ಯಾಚಾರ, ಹಿಂಸೆ ಇನ್ನು ನಿಂತಿಲ್ಲ ..ಹೆಣ್ಣನ್ನು ಅಪಹರಿಸಿದಕ್ಕೆ ,ಹೆಣ್ಣಿನ ಮಾನಭಂಗ ಮಾಡಿದ್ದಕ್ಕೆ ರಾಮಾಯಣ ,ಮಹಾಭಾರತ ಎನ್ನುವ ಮಹಾಸಂಗ್ರಾಮವೇ ನಡೆದುಹೋಯಿತು. ಆದರೆ ಇಂದು ಹೆಣ್ಣಿನ ಮೇಲೆ ಅದೆಷ್ಟೋ ದೌರ್ಜನ್ಯ, ಅತ್ಯಾಚಾರಗಳು ನಡಿದಿದೆ ನಡೆಯುತ್ತಿದೆ . ಯಾಕಂದ್ರೆ ಅವಳು ‘ಹೆಣ್ಣು’ ಎನ್ನುವ ಕಾರಣವೆ??

   (Copyrights owned by: billavaswarriors.com )

ಒಂದೇ ರಾತ್ರಿಯಲ್ಲಿ ನೋಟ್ ಬ್ಯಾನ್ ಆಗುತ್ತೆ , ಒಂದೇ ರಾತ್ರಿಯಲ್ಲಿ ಸರಕಾರ ಬದಲಾಗುತ್ತೆ ,ಒಂದೇ ದಿನದಲ್ಲಿ ಎಲ್ಲ ಚೈನೀಸ್ ಆಪ್ ಟಿವಿ ಚಾನೆಲ್ ಬ್ಯಾನ್ ಆಗುತ್ತೆ ,ಆದರೆ ಯಾಕೆ ??ವ್ಯಾಘ್ರ ಕಾಮುಕರಿಗೆ ಶಿಕ್ಷೆ ಆಗುದಿಲ್ಲ. ಯಾಕಂದ್ರೆ ಒಂದೇ ಉತ್ತರ ಅವಳು ‘ಹೆಣ್ಣು’ ಅಲ್ಲವೇ.?

ಇಂದು ಮನುಷ್ಯ ಕಾಲಿಡದ ಕ್ಷೇತ್ರವಿಲ್ಲ . ಭೂಮಿಯಲ್ಲಿ ಮಾತ್ರವಲ್ಲದೆ ಹೊಸಜಗತ್ತನ್ನು ಹುಡುಕುತ್ತ ಆಕಾಶಕ್ಕೆ ಹಾರಿದ್ದಾನೆ . ಹಲವಾರು ಅಮೋಘ ಸಾಧನೆ ಮಾಡಿದ್ದಾನೆ. ಆದರೆ ಹೆಣ್ಣಿನ ಮೇಲಿನ ಅತ್ಯಾಚಾರಗಳು ನಡೆಯುತ್ತಲೇ ಇದೆ ಕಾರಣ ಅವಳು ‘ಹೆಣ್ಣು’…

ಗಂಡುಜಾತಿಯ ರಣಹೇಡಿಗಳೇ, ವ್ಯಾಘ್ರಕಾಮುಕರೇ ..ಯಾಕೆ ನಿಮಗೆ ಇನ್ನು ಅರ್ಥವಾಗುತ್ತಿಲ್ಲ ನಿಮಗೆ ಪ್ರೀತಿ ಕೊಟ್ಟು ನಿಮ್ಮನ್ನು ಒಂಭತ್ತು ತಿಂಗಳು ಸಾಕಿ ಸಲುಹಿದ ಆ ನಿಮ್ಮ ತಾಯಿಯು ಒಬ್ಬಳು ಹೆಣ್ಣಲ್ಲವೇ . ಅವಳು (ಹೆಣ್ಣು ) ಹುಟ್ಟುವಾಗ ಅಣ್ಣ- ತಮ್ಮ ಎನ್ನುವ ಪಟ್ಟಕಟ್ಟಿ ನಿಮಗೆ ಪ್ರೀತಿ ,ಸಂತೋಷ ನೀಡುವ ಅಕ್ಕ -ತಂಗಿ ಸ್ವರೂಪವಲ್ಲವೇ ಹೆಣ್ಣು ..

ಕೊನೆ ಪಕ್ಷ ನಿಮಗೆ ಹೆಣ್ಣಿಗೆ ತಾಯಿ ,ಅಕ್ಕ ,ತಂಗಿ ಸ್ಥಾನ ನೀಡಲು ಕಷ್ಟವಾದರೇ ಬಿಡಿ..ಕನಿಷ್ಟ ಪಕ್ಷ ಅವಳು ನಿಮ್ಮಂತೆಹೇ ಮನುಷ್ಯಳು ಅವಳಿಗೂ ಒಂದು ಜೀವವಿದೆ, ಜೀವನವಿದೆ..ಸಾವಿರಾರು ಬಣ್ಣ- ಬಣ್ಣದ ಕನಸುಗಳಿವೆ ,ಆ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸಮಾಡದಿದ್ದರು ಪರವಾಗಿಲ್ಲ ಅವಳ ರೆಕ್ಕೆ ಕತ್ತರಿಸುವ ಕೆಲಸಮಾಡದಿರು ಮನುಜ…

ಒಮ್ಮೆ ಮನುಜನಾಗು ..ಹೆಣ್ಣನ್ನು ಕೆಟ್ಟ ದ್ರಷ್ಟಿಯಿಂದ ನೋಡುವುದನ್ನು ನಿಲ್ಲಿಸು ..ಈ ಮನುಷ್ಯ ಜನುಮದಲ್ಲಿ ಮಾನವನಾಗಿ ಬಾಳು .

“ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ “ಈ ರೀತಿ ಹೇಳಿದ್ದಾರೆ “ಮಧ್ಯರಾತ್ರಿ ೧೨ಗಂಟೆಗೆ ಹೆಣ್ಣು ಹೊರಗಡೆ ಹೋಗಿ ಮನೆಗೆ ಸುರಕ್ಷಿತವಾಗಿ ಹಿಂತಿರುಗಿ ಬಂದರೆ ಆ ದಿನ ನಮಗೆ ಸ್ವಾತಂತ್ರಾ ಸಿಕ್ಕಿದೆ ಎಂದರ್ಥ”.ಒಮ್ಮೆ ಈ ಪ್ರಶ್ನೆಯನ್ನು ಮನದಲ್ಲಿ ಕೇಳಿ ನೋಡಿ ಉತ್ತರ ಪ್ರಶ್ನೆಯಾಗಿಯೇ ಉಳಿದುಬಿಡುತ್ತೆ
ಅಲ್ಲವೇ.. ಸಾಧ್ಯವಾದರೆ ಮಾತ್ರ ಮಾತ್ರ .. ಹೆಣ್ಣಿಗೆ ನಿಮ್ಮ ಬೆಂಬಲ ಸಹಾಯ ನೀಡಿ ಅದು ಬಿಟ್ಟು ಅವಳ ಮಾನಹರಣ ಮಾಡದಿರಿ ಅವಳ ಮೇಲಿನ ಅತ್ಯಾಚಾರ ನಿಲ್ಲುವ ನಿಟ್ಟಿಗೆ ಒಂದು ಪ್ರಯತ್ನ ಮಾಡಿ..ಅದು ಬಿಟ್ಟು ಅವಳ ದೌರ್ಜನ್ಯ ಮಾಡದಿರು, ಇಲ್ಲದಿದ್ದರೆ ಕೇಳು ಮನುಜ ಕಾಲ ಪಾಠ ಕಲಿಸಲು ಒಂದೊಂದು ಹೆಜ್ಜೆ ಮುಂದೆ ಇಟ್ಟಿದೆ ಪ್ರವಾಹ ,ಕರೋನ ಭೂಕಂಪ, ಪ್ರಕೃತಿ ವಿಕೋಪಗಳಿಂದ ಪಾಠ ಕಲಿಯದೇ ನೀ ಗೆದ್ದೇ ಎಂದು ಬೀಗಬೇಡ
ಮನುಜ…ಬೀಗಬೇಡ..ಕಾಲದಯೆದುರು ನೀ ತೃಣ ಸಮಾನವೆಂದು ನೆನಪಿಟ್ಟುಕೋ. ಇನ್ನಾದರೂ ಎಚ್ಚೆತ್ತಿಕೊ ಇಲ್ಲವಾದ್ರೆ ಕಾಲದ ಉಗ್ರರೂಪವ ಸಹಿಸುವ ಶಕ್ತಿ ನಿನ್ನಲ್ಲಿ ಇನ್ನು ಉಳಿದಿಲ್ಲ ಮನುಜ …ನೀ ಬದಲಾಗು ..ನೀ ಮನುಷ್ಯನಾಗಿ ಬದಲಾಗು..ಇನ್ನು ಬದಲಾಗದಿದ್ದರೆ ಕಾಲದ ಎದುರು ಸುಟ್ಟು ಭಸ್ಮವಾಗಿಬಿಡುತ್ತೀಯ.ಕಾಲ ತನ್ನ ಉಗ್ರರೂಪ ತೋರಿಸುವ ಸಮಯ ಬಹಳ ಹತ್ತಿರದಲ್ಲಿದೆ .

ರಮ್ಯಾ ಸಾಲಿಯಾನ್
ಬೋರುಗುಡ್ಡೆ, ಮೂಡಬಿದ್ರೆ

   (Copyrights owned by: billavaswarriors.com )


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »