TOP STORIES:

FOLLOW US

ಹೆಣ್ಣು ಕೂಡ ಒಂದು ಜೀವಿ ಎಂಬುವುದನ್ನು ಇಂದಿನ ಸಮಾಜ ಮರೆತಿದೆಯೇ ?


ಹೆಣ್ಣು
“ಯತ್ರ ನಾರ್ಯಸ್ತು ಪೂಜೆಯಂತೇ ತತ್ರ ದೇವತಾ”: ಅಂದರೆ “ಎಲ್ಲಿ ಹೆಣ್ಣನ್ನು ಪೂಜೆಸುತ್ತಾರೋ ಅಲ್ಲಿ ಸಕಲ ದೇವತೆಗಳು ನೆಲೆಸುತ್ತಾರೆ” ಆದರೆ ಬೇಸರದ ಸಂಗತಿಯೆಂದರೆ ಈ ೨೧ನೆಯ ಶತಮಾನದಲ್ಲಿ ಈ ಅರ್ಥ ಅಕ್ಷರಶ: ಸುಳ್ಳುಯೆನಿಸುತ್ತಿದೆ.

ಹೆಣ್ಣನ್ನು ಪೂಜೆಮಾಡುವುದು ಬೇಡ ಕನಿಷ್ಟ ಪಕ್ಷ ಅವಳು ಒಂದು ಜೀವಿ ,ಅವಳಿಗೂ ಈ ಭೂಮಿಯಲ್ಲಿ ಅವಳ ಇಚ್ಛೆಯಂತೇ ಬದುಕಲು ಬಿಟ್ಟರೆ ಸಾಕು..

‘ಹೆಣ್ಣು ‘ಒಬ್ಬಳು ಗಂಡಿನಂತೆ ಒಂದು ಜೀವಿ ,ಅವಳಿಗೂ ಮನಸ್ಸು ,ಭಾವನೆಗಳಿವೆ,ಅವಳು ಕೇವಲ ಉಸಿರಾಡುವ ಬೊಂಬೆಯಲ್ಲ ,ಅವಳಿಗೂ ಗಂಡಿನಂತೆ ಜೀವವಿದೆ . ಇದೆನ್ನೆಲ್ಲ ಮರೆತಂತಿದೆ ಗಂಡುಕುಲ . ‘ಹೆಣ್ಣು ‘ಅಂದರೆ ಕೇವಲ ನಿಮ್ಮ ಕಾಮದ ಬಯಕೆಗಳನ್ನ ತೀರಿಸುವ ಒಂದು ಯಂತ್ರವಾಗಿ ಕಾಣುತ್ತಾಳ ? ಮತ್ತೇಕೆ..ಅವಳ ಮೇಲಿನ ದೌರ್ಜನ್ಯ ,ಅತ್ಯಾಚಾರ, ಹಿಂಸೆ ಇನ್ನು ನಿಂತಿಲ್ಲ ..ಹೆಣ್ಣನ್ನು ಅಪಹರಿಸಿದಕ್ಕೆ ,ಹೆಣ್ಣಿನ ಮಾನಭಂಗ ಮಾಡಿದ್ದಕ್ಕೆ ರಾಮಾಯಣ ,ಮಹಾಭಾರತ ಎನ್ನುವ ಮಹಾಸಂಗ್ರಾಮವೇ ನಡೆದುಹೋಯಿತು. ಆದರೆ ಇಂದು ಹೆಣ್ಣಿನ ಮೇಲೆ ಅದೆಷ್ಟೋ ದೌರ್ಜನ್ಯ, ಅತ್ಯಾಚಾರಗಳು ನಡಿದಿದೆ ನಡೆಯುತ್ತಿದೆ . ಯಾಕಂದ್ರೆ ಅವಳು ‘ಹೆಣ್ಣು’ ಎನ್ನುವ ಕಾರಣವೆ??

   (Copyrights owned by: billavaswarriors.com )

ಒಂದೇ ರಾತ್ರಿಯಲ್ಲಿ ನೋಟ್ ಬ್ಯಾನ್ ಆಗುತ್ತೆ , ಒಂದೇ ರಾತ್ರಿಯಲ್ಲಿ ಸರಕಾರ ಬದಲಾಗುತ್ತೆ ,ಒಂದೇ ದಿನದಲ್ಲಿ ಎಲ್ಲ ಚೈನೀಸ್ ಆಪ್ ಟಿವಿ ಚಾನೆಲ್ ಬ್ಯಾನ್ ಆಗುತ್ತೆ ,ಆದರೆ ಯಾಕೆ ??ವ್ಯಾಘ್ರ ಕಾಮುಕರಿಗೆ ಶಿಕ್ಷೆ ಆಗುದಿಲ್ಲ. ಯಾಕಂದ್ರೆ ಒಂದೇ ಉತ್ತರ ಅವಳು ‘ಹೆಣ್ಣು’ ಅಲ್ಲವೇ.?

ಇಂದು ಮನುಷ್ಯ ಕಾಲಿಡದ ಕ್ಷೇತ್ರವಿಲ್ಲ . ಭೂಮಿಯಲ್ಲಿ ಮಾತ್ರವಲ್ಲದೆ ಹೊಸಜಗತ್ತನ್ನು ಹುಡುಕುತ್ತ ಆಕಾಶಕ್ಕೆ ಹಾರಿದ್ದಾನೆ . ಹಲವಾರು ಅಮೋಘ ಸಾಧನೆ ಮಾಡಿದ್ದಾನೆ. ಆದರೆ ಹೆಣ್ಣಿನ ಮೇಲಿನ ಅತ್ಯಾಚಾರಗಳು ನಡೆಯುತ್ತಲೇ ಇದೆ ಕಾರಣ ಅವಳು ‘ಹೆಣ್ಣು’…

ಗಂಡುಜಾತಿಯ ರಣಹೇಡಿಗಳೇ, ವ್ಯಾಘ್ರಕಾಮುಕರೇ ..ಯಾಕೆ ನಿಮಗೆ ಇನ್ನು ಅರ್ಥವಾಗುತ್ತಿಲ್ಲ ನಿಮಗೆ ಪ್ರೀತಿ ಕೊಟ್ಟು ನಿಮ್ಮನ್ನು ಒಂಭತ್ತು ತಿಂಗಳು ಸಾಕಿ ಸಲುಹಿದ ಆ ನಿಮ್ಮ ತಾಯಿಯು ಒಬ್ಬಳು ಹೆಣ್ಣಲ್ಲವೇ . ಅವಳು (ಹೆಣ್ಣು ) ಹುಟ್ಟುವಾಗ ಅಣ್ಣ- ತಮ್ಮ ಎನ್ನುವ ಪಟ್ಟಕಟ್ಟಿ ನಿಮಗೆ ಪ್ರೀತಿ ,ಸಂತೋಷ ನೀಡುವ ಅಕ್ಕ -ತಂಗಿ ಸ್ವರೂಪವಲ್ಲವೇ ಹೆಣ್ಣು ..

ಕೊನೆ ಪಕ್ಷ ನಿಮಗೆ ಹೆಣ್ಣಿಗೆ ತಾಯಿ ,ಅಕ್ಕ ,ತಂಗಿ ಸ್ಥಾನ ನೀಡಲು ಕಷ್ಟವಾದರೇ ಬಿಡಿ..ಕನಿಷ್ಟ ಪಕ್ಷ ಅವಳು ನಿಮ್ಮಂತೆಹೇ ಮನುಷ್ಯಳು ಅವಳಿಗೂ ಒಂದು ಜೀವವಿದೆ, ಜೀವನವಿದೆ..ಸಾವಿರಾರು ಬಣ್ಣ- ಬಣ್ಣದ ಕನಸುಗಳಿವೆ ,ಆ ಕನಸುಗಳಿಗೆ ಬಣ್ಣ ಹಚ್ಚುವ ಕೆಲಸಮಾಡದಿದ್ದರು ಪರವಾಗಿಲ್ಲ ಅವಳ ರೆಕ್ಕೆ ಕತ್ತರಿಸುವ ಕೆಲಸಮಾಡದಿರು ಮನುಜ…

ಒಮ್ಮೆ ಮನುಜನಾಗು ..ಹೆಣ್ಣನ್ನು ಕೆಟ್ಟ ದ್ರಷ್ಟಿಯಿಂದ ನೋಡುವುದನ್ನು ನಿಲ್ಲಿಸು ..ಈ ಮನುಷ್ಯ ಜನುಮದಲ್ಲಿ ಮಾನವನಾಗಿ ಬಾಳು .

“ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿ “ಈ ರೀತಿ ಹೇಳಿದ್ದಾರೆ “ಮಧ್ಯರಾತ್ರಿ ೧೨ಗಂಟೆಗೆ ಹೆಣ್ಣು ಹೊರಗಡೆ ಹೋಗಿ ಮನೆಗೆ ಸುರಕ್ಷಿತವಾಗಿ ಹಿಂತಿರುಗಿ ಬಂದರೆ ಆ ದಿನ ನಮಗೆ ಸ್ವಾತಂತ್ರಾ ಸಿಕ್ಕಿದೆ ಎಂದರ್ಥ”.ಒಮ್ಮೆ ಈ ಪ್ರಶ್ನೆಯನ್ನು ಮನದಲ್ಲಿ ಕೇಳಿ ನೋಡಿ ಉತ್ತರ ಪ್ರಶ್ನೆಯಾಗಿಯೇ ಉಳಿದುಬಿಡುತ್ತೆ
ಅಲ್ಲವೇ.. ಸಾಧ್ಯವಾದರೆ ಮಾತ್ರ ಮಾತ್ರ .. ಹೆಣ್ಣಿಗೆ ನಿಮ್ಮ ಬೆಂಬಲ ಸಹಾಯ ನೀಡಿ ಅದು ಬಿಟ್ಟು ಅವಳ ಮಾನಹರಣ ಮಾಡದಿರಿ ಅವಳ ಮೇಲಿನ ಅತ್ಯಾಚಾರ ನಿಲ್ಲುವ ನಿಟ್ಟಿಗೆ ಒಂದು ಪ್ರಯತ್ನ ಮಾಡಿ..ಅದು ಬಿಟ್ಟು ಅವಳ ದೌರ್ಜನ್ಯ ಮಾಡದಿರು, ಇಲ್ಲದಿದ್ದರೆ ಕೇಳು ಮನುಜ ಕಾಲ ಪಾಠ ಕಲಿಸಲು ಒಂದೊಂದು ಹೆಜ್ಜೆ ಮುಂದೆ ಇಟ್ಟಿದೆ ಪ್ರವಾಹ ,ಕರೋನ ಭೂಕಂಪ, ಪ್ರಕೃತಿ ವಿಕೋಪಗಳಿಂದ ಪಾಠ ಕಲಿಯದೇ ನೀ ಗೆದ್ದೇ ಎಂದು ಬೀಗಬೇಡ
ಮನುಜ…ಬೀಗಬೇಡ..ಕಾಲದಯೆದುರು ನೀ ತೃಣ ಸಮಾನವೆಂದು ನೆನಪಿಟ್ಟುಕೋ. ಇನ್ನಾದರೂ ಎಚ್ಚೆತ್ತಿಕೊ ಇಲ್ಲವಾದ್ರೆ ಕಾಲದ ಉಗ್ರರೂಪವ ಸಹಿಸುವ ಶಕ್ತಿ ನಿನ್ನಲ್ಲಿ ಇನ್ನು ಉಳಿದಿಲ್ಲ ಮನುಜ …ನೀ ಬದಲಾಗು ..ನೀ ಮನುಷ್ಯನಾಗಿ ಬದಲಾಗು..ಇನ್ನು ಬದಲಾಗದಿದ್ದರೆ ಕಾಲದ ಎದುರು ಸುಟ್ಟು ಭಸ್ಮವಾಗಿಬಿಡುತ್ತೀಯ.ಕಾಲ ತನ್ನ ಉಗ್ರರೂಪ ತೋರಿಸುವ ಸಮಯ ಬಹಳ ಹತ್ತಿರದಲ್ಲಿದೆ .

ರಮ್ಯಾ ಸಾಲಿಯಾನ್
ಬೋರುಗುಡ್ಡೆ, ಮೂಡಬಿದ್ರೆ

   (Copyrights owned by: billavaswarriors.com )


Share:

More Posts

Category

Send Us A Message

Related Posts

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »

ಮುಂಬಯಿ ಎನ್‌ಸಿಪಿ (ಎಸ್‌ಪಿ) ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಆಯ್ಕೆ


Share       ಮುಂಬಯಿ, ಮಾ. 21: ಎನ್‌ಸಿಪಿ (ಎಸ್‌ಪಿ) ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ತುಳು-ಕನ್ನಡಿಗಲಕ್ಷ್ಮಣ್ ಸಿ. ಪೂಜಾರಿ ಚಿತ್ರಾಪು ಅವರನ್ನು ಪಕ್ಷದ ಅಧ್ಯಕ್ಷೆ ರಾಖಿ ಜಾಧವ್ ಅವರು ನೇಮಕ ಮಾಡಿದ್ದಾರೆ. ಮಂಗಳೂರು ಚಿತ್ರಾಪು


Read More »

ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆ ; ಉಪ ಪೊಲೀಸ್ ಅಧಿಕ್ಷಕರಾದ ಎಸ್ ಮಹೇಶ್ ಕುಮಾರ್ ರವರ ಮನದಾಳದ ಮಾತು


Share       ಬಿಲ್ಲವಾಸ್ ಫ್ಯಾಮಿಲಿ ದುಬೈ, ಸಮುದಾಯದ ಸಾಮಾಜಿಕ ಚಟುವಟಿಕೆಗಳಲ್ಲಿ ಮಂಚೂಣಿ ಯಲ್ಲಿರುವ ಸಂಘಟನೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ದುಬೈಗೆ ಪ್ರಯಾಣ ಬೆಳೆಸಿದಾಗ ಈ ಸಂಘಟನೆಯ ಕಾರ್ಯವೈಖರಿ ಯನ್ನು ಕಣ್ಣಾರೆ ನೋಡುವ ಅವಕಾಶ ಒದಗಿ


Read More »

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಬೇಕು : ಪದ್ಮರಾಜ್ ಆರ್ ಪೂಜಾರಿ


Share       ಬಂಟ್ವಾಳ: ಯುವವಾಹಿನಿ(ರಿ.) ಮಾಣಿ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ದಿನಾಂಕ 10-03-2025 ರ ಸೋಮವಾರದಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ಜರುಗಿತು. ಪದಗ್ರಹಣ


Read More »

ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ಕತಾರ್ ಬಿಲ್ಲವಸ್ ಸಂಘದ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಅಪರ್ಣ ಶರತ್


Share       ಕೊಲ್ಲಿ ರಾಷ್ಟ್ರ ಕತಾ‌ರ್ ದೇಶದಲ್ಲಿ ನಮ್ಮ ತುಳುವರು ಹಲವಾರು ವರ್ಷಗಳಿಂದ ವಾಸವಿದ್ದಿದ್ದು, ಇಂದಿಗೂ ತುಳುವ ಮಣ್ಣಿನ ಪ್ರೀತಿಯನ್ನು ಮರೆತಿಲ್ಲ. ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯದೆ ಇಂದಿಗೂ ತಾವು ನೆಲೆ ನಿಂತ ಮಣ್ಣಿನಲ್ಲಿ ಸಂಭ್ರಮಿಸುತ್ತಾರೆ


Read More »

ದಮ್ಮಾಮ್: ಸೌದಿ ಬಿಲ್ಲವಾಸ್ ದಮ್ಮಾಮ್ ಸಂಘದ ಮಹಾಸಭೆ


Share       ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು


Read More »