TOP STORIES:

ಕಲಾವಿದರ ಕಣ್ಮಣಿ ‘ರಂಜು ತುಳುರಂಗ ಪ್ರೇಮಿ’


ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಸಿಗಬೇಕೆಂಬ ಆಶಯದಿಂದ ತನ್ನ ತುಳುವನಾಡಿಗೆ ದುಡಿಯುತ್ತಿರುವ ಇವರು, ತುಳುನಾಡಿನೆಲ್ಲೆಡೆ ಇವರು ‘ರಂಜು ತುಳುರಂಗ ಪ್ರೇಮಿ’ ಎಂದೇ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಸಂತ್ ಪೂಜಾರಿ ಮತ್ತು ಉಷಾ ದಂಪತಿಯ ಸುಪುತ್ರನಾದ ಇವರು ಐಟಿಐ ಪದವೀಧರ , ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋಟ್ ನಲ್ಲಿ ಗ್ರೌಂಡ್ ಸಪೋರ್ಟ್ ಸೆರ್ವಿಸಸ್ ಮೈಂಟೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಣ್ಣದ ಲೋಕದ ಕಲಾವಿದನಾಗಿ,ನಾಟಕರಂಗದ ನಿರ್ದೇಶಕನಾಗಿ , ಭಜನಕಾರನಾಗಿ, ಗಾಯಕನಾಗಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಬರಹಗಾರನಾಗಿ , ಸಾಹಿತಿಯಾಗಿ ಹೀಗೆ ಸಕಲ ಕಲೆಗಳನ್ನು ಹೊಂದಿರುವ ಪ್ರತಿಭಾನ್ವಿತ ಸಾಧಕರಿವರು.

ಬಾಲ್ಯದಿಂದಲೇ ಭಜನೆಯ ಮೇಲಿನ ಒಲವು:

ಬಾಲ್ಯದಿಂದಲೇ ಇವರು ಉಳ್ಳಾಲ್ತಿ ಭಜನಾ ಮಂಡಳಿ, ಅರಂತಬೈಲಿನಲ್ಲಿ ದೇವರ ನಾಮಸ್ಮರಣೆ ಮಾಡಿಕೊಂಡು ಬಂದವರು.ಭಜನೆಯ ಮೇಲಿನ ಅಪಾರ ಪ್ರೀತಿಯಿಂದಾಗಿ ಇವರು ತನ್ನ ಊರಿನಲ್ಲೇ ಒಂದು ಭಜನಾ ತಂಡವನ್ನು ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ ‘ಶ್ರೀ ಶಬರಿ ಭಜನಾ ಮಂಡಳಿ’ ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು. ಊರು ಬಿಟ್ಟು ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಹೋದವರು ಅಲ್ಲೂ ‘ಮಕರ ಶ್ರೀ ಭಜನಾ ಮಂಡಳಿ’ ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು ಹಾಗೂ ಮದು ಬಂಗೇರ ಕಲ್ಲಡ್ಕ ಮತ್ತು ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ‘ಯುವವಾಹಿನಿ ಬೆಂಗಳೂರು ಘಟಕ’ ವನ್ನು ಸ್ಥಾಪಿಸಿ ಅದರ ಸಾಂಸ್ಕೃತಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ರಂಗಪ್ರೇಮಿಯ ಮನದ ಮಾತು:

“ನಾನು ಬರಹಗಾರನಲ್ಲ ಅಭಿಮಾನಿ.ಕಲಾವಿದರ ಪ್ರೀತಿ ಅಭಿಮಾವೇ ನನ್ನ ಬರಹದ ಘಳಿಕೆ ಮತ್ತು ಶ್ರೀರಕ್ಷೆ.ಕಲಾಕ್ಷೇತ್ರದಲ್ಲಿ ನಿರಂತರ ಸೇವೆಗೈಯುವ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವುದೇ ನನ್ನ ಉದ್ದೇಶ.ಇದು ನನ್ನ ಸಾಧನೆಯಲ್ಲ ಕೇವಲ ಒಂದು ಪ್ರಯತ್ನ, ತನ್ನ ಪ್ರತಿ ಕಾರ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಆತ್ಮೀಯ ಮಿತ್ರ ಸುಧೀರ್ ಎಸ್.ಕೆ ಮತ್ತು ಪ್ರಸಾದ್ ಕಲ್ಲಾಜೆ ” ಎನ್ನುತ್ತಾರೆ ತುಳುರಂಗ ಪ್ರೇಮಿ.

ರಂಗಭೂಮಿಯಲ್ಲಿನ ಪರಿಣಿತಿ:

ತಾನು ಒಬ್ಬ ಕಲಾವಿದನಾಗಬೇಕೆಂಬ ಆಸೆ ಹೊಂದಿದ್ದ ಇವರು ಅವಕಾಶವಿಲ್ಲದ ಕಾರಣ ಶಬರಿ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ ” ಬುದ್ಧಿ ಬನ್ನಗ” ಎಂಬ ತುಳು ನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದರು. ನಂತರ ‘ಗೌಜಿ ಗಮ್ಮತ್ತ್’ , ‘ಎನ್ನ ತಂಗಡಿ’ , ‘ಮಲ್ಲಸ್ತಿಕೆದ ಮರ್ಮಾಲ್’ , ‘ಒಂಜೆಕ್ ಒಂಜರೆ ಮಲ್ಪೊಚ್ಚಿ’ ನಾಟಕಗಳಿಗೆ ಸಾಹಿತ್ಯ ನೀಡಿ ನಿರ್ದೇಶಿಸಿ ನಟಿಸಿದ್ದಾರೆ. ಹಾಗೂ ಮೊದಲಬಾರಿಗೆ ಇವರು ‘ಗೋಲ್ಮಾಲ್’ ಎಂಬ ತುಳು ಚಲನಚಿತ್ರದಲ್ಲಿಯೂ ನವೀನ್ ಡಿ ಪಡಿಲ್ ರವರೊಡನೆ ನಟಿಸಿದ್ದಾರೆ. ತುಳುರಂಗಭೂಮಿ ಕಲಾವಿದರ ಸಲುವಾಗಿ ಇವರು ‘ಕಲಾವಿದೆರೆ ಕಡಲ್’ ವಾಟ್ಸಾಪ್ ಗ್ರೂಪ್ ರಚಿಸಿ ಒತ್ತಡದ ಕೆಲಸದ ಮಧ್ಯೆಯೂ ಕಲಾವಿದರಿಗೆ ತನ್ನ ಬರಹದ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಸಂದ ಗೌರವಗಳು:

ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ಸನ್ಮಾನ ,ಮಡಿಲು ಸಂಸ್ಥೆಯಿಂದ ‘ಮಡಿಲು ಪುರಸ್ಕಾರ’, ತೆಲಿಕೆದ ತೆನಾಲಿ ಕಾರ್ಲ ತಂಡದಿಂದ “ಕಲಾವಿದೆರೆ ಕಣ್ಮಣಿ” ಎಂಬ ಬಿರುದು ಹೀಗೆ ಹತ್ತು ಹಲವು ಕಡೆ ಇವರನ್ನು ಸನ್ಮಾನಿಸಲಾಗಿದೆ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ತಾನು ಹುಟ್ಟಿದ ಮಣ್ಣಿಗೆ ಋಣಿಯಾಗಿರು ಎಂಬಂತೆ, ಸದಾ ಮುಗುಳ್ನಗೆಯ ಮಾಲೀಕನಾಗಿರುವ ಇವರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಕಾರ್ಯನಿರತರಾಗಿದ್ದರೂ ತುಳುನಾಡು ಹಾಗೂ ತುಳು ಭಾಷೆಯ ಮೇಲಿನ ಇವರ ಅಭಿಮಾನವನ್ನು ಒಂಚೂರು ಕುಗ್ಗಿಸದೆ ,ರಂಗಭೂಮಿ ಕಲಾವಿದರಿಗೂ ಈ ಸಮಾಜದಲ್ಲಿ ಉನ್ನತ ಸ್ಥಾನ ಸಿಗಬೇಕೆಂಬ ನಿಮ್ಮ ನಿಸ್ವಾರ್ಥ ಭಾವನೆಗೆ ನಾವೆಂದಿಗೂ ಚಿರಋಣಿ. ನಿಮ್ಮ ಈ ರಂಗಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿ – ಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.

ಬರಹ: ಯಕ್ಷಿತಾ ಆರ್ ,ಮೂಡುಕೊಣಾಜೆ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »