TOP STORIES:

FOLLOW US

ಕಲಾವಿದರ ಕಣ್ಮಣಿ ‘ರಂಜು ತುಳುರಂಗ ಪ್ರೇಮಿ’


ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಸಿಗಬೇಕೆಂಬ ಆಶಯದಿಂದ ತನ್ನ ತುಳುವನಾಡಿಗೆ ದುಡಿಯುತ್ತಿರುವ ಇವರು, ತುಳುನಾಡಿನೆಲ್ಲೆಡೆ ಇವರು ‘ರಂಜು ತುಳುರಂಗ ಪ್ರೇಮಿ’ ಎಂದೇ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಸಂತ್ ಪೂಜಾರಿ ಮತ್ತು ಉಷಾ ದಂಪತಿಯ ಸುಪುತ್ರನಾದ ಇವರು ಐಟಿಐ ಪದವೀಧರ , ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋಟ್ ನಲ್ಲಿ ಗ್ರೌಂಡ್ ಸಪೋರ್ಟ್ ಸೆರ್ವಿಸಸ್ ಮೈಂಟೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಣ್ಣದ ಲೋಕದ ಕಲಾವಿದನಾಗಿ,ನಾಟಕರಂಗದ ನಿರ್ದೇಶಕನಾಗಿ , ಭಜನಕಾರನಾಗಿ, ಗಾಯಕನಾಗಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಬರಹಗಾರನಾಗಿ , ಸಾಹಿತಿಯಾಗಿ ಹೀಗೆ ಸಕಲ ಕಲೆಗಳನ್ನು ಹೊಂದಿರುವ ಪ್ರತಿಭಾನ್ವಿತ ಸಾಧಕರಿವರು.

ಬಾಲ್ಯದಿಂದಲೇ ಭಜನೆಯ ಮೇಲಿನ ಒಲವು:

ಬಾಲ್ಯದಿಂದಲೇ ಇವರು ಉಳ್ಳಾಲ್ತಿ ಭಜನಾ ಮಂಡಳಿ, ಅರಂತಬೈಲಿನಲ್ಲಿ ದೇವರ ನಾಮಸ್ಮರಣೆ ಮಾಡಿಕೊಂಡು ಬಂದವರು.ಭಜನೆಯ ಮೇಲಿನ ಅಪಾರ ಪ್ರೀತಿಯಿಂದಾಗಿ ಇವರು ತನ್ನ ಊರಿನಲ್ಲೇ ಒಂದು ಭಜನಾ ತಂಡವನ್ನು ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ ‘ಶ್ರೀ ಶಬರಿ ಭಜನಾ ಮಂಡಳಿ’ ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು. ಊರು ಬಿಟ್ಟು ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಹೋದವರು ಅಲ್ಲೂ ‘ಮಕರ ಶ್ರೀ ಭಜನಾ ಮಂಡಳಿ’ ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು ಹಾಗೂ ಮದು ಬಂಗೇರ ಕಲ್ಲಡ್ಕ ಮತ್ತು ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ‘ಯುವವಾಹಿನಿ ಬೆಂಗಳೂರು ಘಟಕ’ ವನ್ನು ಸ್ಥಾಪಿಸಿ ಅದರ ಸಾಂಸ್ಕೃತಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ರಂಗಪ್ರೇಮಿಯ ಮನದ ಮಾತು:

“ನಾನು ಬರಹಗಾರನಲ್ಲ ಅಭಿಮಾನಿ.ಕಲಾವಿದರ ಪ್ರೀತಿ ಅಭಿಮಾವೇ ನನ್ನ ಬರಹದ ಘಳಿಕೆ ಮತ್ತು ಶ್ರೀರಕ್ಷೆ.ಕಲಾಕ್ಷೇತ್ರದಲ್ಲಿ ನಿರಂತರ ಸೇವೆಗೈಯುವ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವುದೇ ನನ್ನ ಉದ್ದೇಶ.ಇದು ನನ್ನ ಸಾಧನೆಯಲ್ಲ ಕೇವಲ ಒಂದು ಪ್ರಯತ್ನ, ತನ್ನ ಪ್ರತಿ ಕಾರ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಆತ್ಮೀಯ ಮಿತ್ರ ಸುಧೀರ್ ಎಸ್.ಕೆ ಮತ್ತು ಪ್ರಸಾದ್ ಕಲ್ಲಾಜೆ ” ಎನ್ನುತ್ತಾರೆ ತುಳುರಂಗ ಪ್ರೇಮಿ.

ರಂಗಭೂಮಿಯಲ್ಲಿನ ಪರಿಣಿತಿ:

ತಾನು ಒಬ್ಬ ಕಲಾವಿದನಾಗಬೇಕೆಂಬ ಆಸೆ ಹೊಂದಿದ್ದ ಇವರು ಅವಕಾಶವಿಲ್ಲದ ಕಾರಣ ಶಬರಿ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ ” ಬುದ್ಧಿ ಬನ್ನಗ” ಎಂಬ ತುಳು ನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದರು. ನಂತರ ‘ಗೌಜಿ ಗಮ್ಮತ್ತ್’ , ‘ಎನ್ನ ತಂಗಡಿ’ , ‘ಮಲ್ಲಸ್ತಿಕೆದ ಮರ್ಮಾಲ್’ , ‘ಒಂಜೆಕ್ ಒಂಜರೆ ಮಲ್ಪೊಚ್ಚಿ’ ನಾಟಕಗಳಿಗೆ ಸಾಹಿತ್ಯ ನೀಡಿ ನಿರ್ದೇಶಿಸಿ ನಟಿಸಿದ್ದಾರೆ. ಹಾಗೂ ಮೊದಲಬಾರಿಗೆ ಇವರು ‘ಗೋಲ್ಮಾಲ್’ ಎಂಬ ತುಳು ಚಲನಚಿತ್ರದಲ್ಲಿಯೂ ನವೀನ್ ಡಿ ಪಡಿಲ್ ರವರೊಡನೆ ನಟಿಸಿದ್ದಾರೆ. ತುಳುರಂಗಭೂಮಿ ಕಲಾವಿದರ ಸಲುವಾಗಿ ಇವರು ‘ಕಲಾವಿದೆರೆ ಕಡಲ್’ ವಾಟ್ಸಾಪ್ ಗ್ರೂಪ್ ರಚಿಸಿ ಒತ್ತಡದ ಕೆಲಸದ ಮಧ್ಯೆಯೂ ಕಲಾವಿದರಿಗೆ ತನ್ನ ಬರಹದ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಸಂದ ಗೌರವಗಳು:

ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ಸನ್ಮಾನ ,ಮಡಿಲು ಸಂಸ್ಥೆಯಿಂದ ‘ಮಡಿಲು ಪುರಸ್ಕಾರ’, ತೆಲಿಕೆದ ತೆನಾಲಿ ಕಾರ್ಲ ತಂಡದಿಂದ “ಕಲಾವಿದೆರೆ ಕಣ್ಮಣಿ” ಎಂಬ ಬಿರುದು ಹೀಗೆ ಹತ್ತು ಹಲವು ಕಡೆ ಇವರನ್ನು ಸನ್ಮಾನಿಸಲಾಗಿದೆ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ತಾನು ಹುಟ್ಟಿದ ಮಣ್ಣಿಗೆ ಋಣಿಯಾಗಿರು ಎಂಬಂತೆ, ಸದಾ ಮುಗುಳ್ನಗೆಯ ಮಾಲೀಕನಾಗಿರುವ ಇವರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಕಾರ್ಯನಿರತರಾಗಿದ್ದರೂ ತುಳುನಾಡು ಹಾಗೂ ತುಳು ಭಾಷೆಯ ಮೇಲಿನ ಇವರ ಅಭಿಮಾನವನ್ನು ಒಂಚೂರು ಕುಗ್ಗಿಸದೆ ,ರಂಗಭೂಮಿ ಕಲಾವಿದರಿಗೂ ಈ ಸಮಾಜದಲ್ಲಿ ಉನ್ನತ ಸ್ಥಾನ ಸಿಗಬೇಕೆಂಬ ನಿಮ್ಮ ನಿಸ್ವಾರ್ಥ ಭಾವನೆಗೆ ನಾವೆಂದಿಗೂ ಚಿರಋಣಿ. ನಿಮ್ಮ ಈ ರಂಗಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿ – ಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.

ಬರಹ: ಯಕ್ಷಿತಾ ಆರ್ ,ಮೂಡುಕೊಣಾಜೆ


Share:

More Posts

Category

Send Us A Message

Related Posts

ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ


Share       ಉಡುಪಿ: ಚತುರ್ಭಾಷಾ ತಾರೆ, ಮಂಗಳೂರು ಮೂಲದ ಚಿರಶ್ರೀ ಅಂಚನ್ ಅವರು ಮುಂಬಯಿನಲ್ಲಿ ಉದ್ಯಮಿ ಲೋಹಿತ್ ಪೂಜಾರಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಇನ್ನು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂಬೈ ಲೋನಾವಾಲದ ಉದ್ಯಮಿ ಲೋಹಿತ್ ಪೂಜಾರಿ ಅವರೊಂದಿಗೆ 


Read More »

ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ


Share       ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ವೆಂಕಪ್ಪ ಪೂಜಾರಿ ಆಯ್ಕೆ ಬಂಟ್ವಾಳ : ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ ನಾಮ


Read More »

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »