TOP STORIES:

ಕಲಾವಿದರ ಕಣ್ಮಣಿ ‘ರಂಜು ತುಳುರಂಗ ಪ್ರೇಮಿ’


ಓರ್ವ ಕಲಾವಿದನಿಗೆ ಕಲೆಯೇ ತನ್ನ ಬಣ್ಣದ ಪ್ರಪಂಚವಾದರೆ , ಇನ್ನೊಂದೆಡೆ ಆ ಕಲಾವಿದರ ಏಳಿಗೆಯೇ ತನ್ನ ಜಗತ್ತು ಮತ್ತವರ ಆಶೀರ್ವಾದನೇ ತನಗೆ ಶ್ರೀ ರಕ್ಷೆ ಎಂದುಕೊಂಡು ರಂಜಿತ್ ಕಕ್ಕಿಂಜೆ ಇವರು ಕಾರ್ಯಪ್ರವೃತ್ತರಾಗಿದ್ದಾರೆ. ರಂಗಸೇವಕರಿಗೆ ಈ ಸಮಾಜದಲ್ಲಿ ಒಂದೊಳ್ಳೆ ಸ್ಥಾನ ಸಿಗಬೇಕೆಂಬ ಆಶಯದಿಂದ ತನ್ನ ತುಳುವನಾಡಿಗೆ ದುಡಿಯುತ್ತಿರುವ ಇವರು, ತುಳುನಾಡಿನೆಲ್ಲೆಡೆ ಇವರು ‘ರಂಜು ತುಳುರಂಗ ಪ್ರೇಮಿ’ ಎಂದೇ ಜನರಿಗೆ ಚಿರಪರಿಚಿತರಾಗಿದ್ದಾರೆ.

ವಸಂತ್ ಪೂಜಾರಿ ಮತ್ತು ಉಷಾ ದಂಪತಿಯ ಸುಪುತ್ರನಾದ ಇವರು ಐಟಿಐ ಪದವೀಧರ , ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋಟ್ ನಲ್ಲಿ ಗ್ರೌಂಡ್ ಸಪೋರ್ಟ್ ಸೆರ್ವಿಸಸ್ ಮೈಂಟೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಣ್ಣದ ಲೋಕದ ಕಲಾವಿದನಾಗಿ,ನಾಟಕರಂಗದ ನಿರ್ದೇಶಕನಾಗಿ , ಭಜನಕಾರನಾಗಿ, ಗಾಯಕನಾಗಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಬರಹಗಾರನಾಗಿ , ಸಾಹಿತಿಯಾಗಿ ಹೀಗೆ ಸಕಲ ಕಲೆಗಳನ್ನು ಹೊಂದಿರುವ ಪ್ರತಿಭಾನ್ವಿತ ಸಾಧಕರಿವರು.

ಬಾಲ್ಯದಿಂದಲೇ ಭಜನೆಯ ಮೇಲಿನ ಒಲವು:

ಬಾಲ್ಯದಿಂದಲೇ ಇವರು ಉಳ್ಳಾಲ್ತಿ ಭಜನಾ ಮಂಡಳಿ, ಅರಂತಬೈಲಿನಲ್ಲಿ ದೇವರ ನಾಮಸ್ಮರಣೆ ಮಾಡಿಕೊಂಡು ಬಂದವರು.ಭಜನೆಯ ಮೇಲಿನ ಅಪಾರ ಪ್ರೀತಿಯಿಂದಾಗಿ ಇವರು ತನ್ನ ಊರಿನಲ್ಲೇ ಒಂದು ಭಜನಾ ತಂಡವನ್ನು ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ ‘ಶ್ರೀ ಶಬರಿ ಭಜನಾ ಮಂಡಳಿ’ ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು. ಊರು ಬಿಟ್ಟು ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಹೋದವರು ಅಲ್ಲೂ ‘ಮಕರ ಶ್ರೀ ಭಜನಾ ಮಂಡಳಿ’ ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು ಹಾಗೂ ಮದು ಬಂಗೇರ ಕಲ್ಲಡ್ಕ ಮತ್ತು ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ‘ಯುವವಾಹಿನಿ ಬೆಂಗಳೂರು ಘಟಕ’ ವನ್ನು ಸ್ಥಾಪಿಸಿ ಅದರ ಸಾಂಸ್ಕೃತಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ರಂಗಪ್ರೇಮಿಯ ಮನದ ಮಾತು:

“ನಾನು ಬರಹಗಾರನಲ್ಲ ಅಭಿಮಾನಿ.ಕಲಾವಿದರ ಪ್ರೀತಿ ಅಭಿಮಾವೇ ನನ್ನ ಬರಹದ ಘಳಿಕೆ ಮತ್ತು ಶ್ರೀರಕ್ಷೆ.ಕಲಾಕ್ಷೇತ್ರದಲ್ಲಿ ನಿರಂತರ ಸೇವೆಗೈಯುವ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವುದೇ ನನ್ನ ಉದ್ದೇಶ.ಇದು ನನ್ನ ಸಾಧನೆಯಲ್ಲ ಕೇವಲ ಒಂದು ಪ್ರಯತ್ನ, ತನ್ನ ಪ್ರತಿ ಕಾರ್ಯದಲ್ಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಆತ್ಮೀಯ ಮಿತ್ರ ಸುಧೀರ್ ಎಸ್.ಕೆ ಮತ್ತು ಪ್ರಸಾದ್ ಕಲ್ಲಾಜೆ ” ಎನ್ನುತ್ತಾರೆ ತುಳುರಂಗ ಪ್ರೇಮಿ.

ರಂಗಭೂಮಿಯಲ್ಲಿನ ಪರಿಣಿತಿ:

ತಾನು ಒಬ್ಬ ಕಲಾವಿದನಾಗಬೇಕೆಂಬ ಆಸೆ ಹೊಂದಿದ್ದ ಇವರು ಅವಕಾಶವಿಲ್ಲದ ಕಾರಣ ಶಬರಿ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ ” ಬುದ್ಧಿ ಬನ್ನಗ” ಎಂಬ ತುಳು ನಾಟಕವನ್ನು ಸ್ವತಃ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದರು. ನಂತರ ‘ಗೌಜಿ ಗಮ್ಮತ್ತ್’ , ‘ಎನ್ನ ತಂಗಡಿ’ , ‘ಮಲ್ಲಸ್ತಿಕೆದ ಮರ್ಮಾಲ್’ , ‘ಒಂಜೆಕ್ ಒಂಜರೆ ಮಲ್ಪೊಚ್ಚಿ’ ನಾಟಕಗಳಿಗೆ ಸಾಹಿತ್ಯ ನೀಡಿ ನಿರ್ದೇಶಿಸಿ ನಟಿಸಿದ್ದಾರೆ. ಹಾಗೂ ಮೊದಲಬಾರಿಗೆ ಇವರು ‘ಗೋಲ್ಮಾಲ್’ ಎಂಬ ತುಳು ಚಲನಚಿತ್ರದಲ್ಲಿಯೂ ನವೀನ್ ಡಿ ಪಡಿಲ್ ರವರೊಡನೆ ನಟಿಸಿದ್ದಾರೆ. ತುಳುರಂಗಭೂಮಿ ಕಲಾವಿದರ ಸಲುವಾಗಿ ಇವರು ‘ಕಲಾವಿದೆರೆ ಕಡಲ್’ ವಾಟ್ಸಾಪ್ ಗ್ರೂಪ್ ರಚಿಸಿ ಒತ್ತಡದ ಕೆಲಸದ ಮಧ್ಯೆಯೂ ಕಲಾವಿದರಿಗೆ ತನ್ನ ಬರಹದ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ.

ಸಂದ ಗೌರವಗಳು:

ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ಸನ್ಮಾನ ,ಮಡಿಲು ಸಂಸ್ಥೆಯಿಂದ ‘ಮಡಿಲು ಪುರಸ್ಕಾರ’, ತೆಲಿಕೆದ ತೆನಾಲಿ ಕಾರ್ಲ ತಂಡದಿಂದ “ಕಲಾವಿದೆರೆ ಕಣ್ಮಣಿ” ಎಂಬ ಬಿರುದು ಹೀಗೆ ಹತ್ತು ಹಲವು ಕಡೆ ಇವರನ್ನು ಸನ್ಮಾನಿಸಲಾಗಿದೆ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ತಾನು ಹುಟ್ಟಿದ ಮಣ್ಣಿಗೆ ಋಣಿಯಾಗಿರು ಎಂಬಂತೆ, ಸದಾ ಮುಗುಳ್ನಗೆಯ ಮಾಲೀಕನಾಗಿರುವ ಇವರು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಕಾರ್ಯನಿರತರಾಗಿದ್ದರೂ ತುಳುನಾಡು ಹಾಗೂ ತುಳು ಭಾಷೆಯ ಮೇಲಿನ ಇವರ ಅಭಿಮಾನವನ್ನು ಒಂಚೂರು ಕುಗ್ಗಿಸದೆ ,ರಂಗಭೂಮಿ ಕಲಾವಿದರಿಗೂ ಈ ಸಮಾಜದಲ್ಲಿ ಉನ್ನತ ಸ್ಥಾನ ಸಿಗಬೇಕೆಂಬ ನಿಮ್ಮ ನಿಸ್ವಾರ್ಥ ಭಾವನೆಗೆ ನಾವೆಂದಿಗೂ ಚಿರಋಣಿ. ನಿಮ್ಮ ಈ ರಂಗಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿ – ಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ.

ಬರಹ: ಯಕ್ಷಿತಾ ಆರ್ ,ಮೂಡುಕೊಣಾಜೆ


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »