TOP STORIES:

ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆ “ಬಿರುವೆರ್ ಕುಡ್ಲ”


ಬರಹ: ಪುಷ್ಪರಾಜ್ ಪೂಜಾರಿ

 

ಜನರ ಕಷ್ಟಗಳಿಗೆ ಸದಾ ಸ್ಪಂದನೆ ನೀಡುತ್ತಾ, ಯುವಕರಿಗೆ ಉದ್ಯೋಗ ನೀಡುತ್ತಾ, ಸದಾ ಬಡ ಜನರ ಸೇವೆಗೆ ಮುಡಿಪಾಗಿರುವ ಈ ಸಂಘ, ಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿ ಪಾಲನೆ ಮಾಡುತ್ತ ನಡೆಸುತ್ತಾ ಬಂದಿರುವ “ಬಿರುವೆರ್ ಕುಡ್ಲ” – ಯಾವುದೆ ಜಾತಿ – ಮತ – ಭೇದವಿಲ್ಲದೆ, ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆಯಾಗಿದೆ.

ಇನ್ನೋಂದು ರೀತಿಯಲ್ಲಿ ಈ ಸಂಸ್ಥೆ ನಮ್ಮ ಸಮಾಜದ ಯುವಕರು ದಾರಿ ತಪ್ಪುವ ಸಮಯದಲ್ಲಿ ಯುವಕರಿಗೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಿಗೆ ತೋಡಗಿಸಿ ಯುವಕರನ್ನು ಒಗ್ಗೂಡಿಸಿ ಸಮಾಜ ಸೇವೆಗೆ ಉತ್ತೇಜನ ನೀಡುತ್ತಿರುವ ಸಂಸ್ಥೆಯು ಆಗಿದೆ.

ಬಿಲ್ಲವರನ್ನು ಸಮಾಜದಲ್ಲಿ ಗುರುತಿಸಿ ನಾಯಕತ್ವದ ಬೆಲೆಯನ್ನು ತೋರಿಸಿಕೊಂಡು ಬಂದಿರುವ ಶ್ರಿ ಜನಾರ್ಧನ ಪೂಜಾರಿಯವರ ಸ್ಫೂರ್ತಿ ಪಡೆದು , ಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ಥಾಪಿಸಿದ ಈ ಸಂಸ್ಥೆಯ ನಾಯಕ ಉದಯ್ ಪೂಜಾರಿಯವರು ಬಿಲ್ಲವ ವಾರಿಯರ್ಸ್ ಗೆ ಮಾತಿಗೆ ಸಿಕ್ಕಾಗ…

ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾ…

-. ಈ ಬಿರುವೆರ್ ಕುಡ್ಲ ಸಂಸ್ಥೆಯ ಉದ್ದೇಶ ವೇನು?

ಮೊದಲನೆದಾಗಿ ಯಾವುದೆ ಜಾತಿ – ಮತ – ಭೇದವಿಲ್ಲದೆ ನಡೆಯುಂತ ಸಂಸ್ಥೆಯಾಗಿರುವುದರಿಂದ, ಸಮಾಜದಲ್ಲಿ ಒಗ್ಗಟ್ಟಾಗಿ ಇರಬೇಕು ಹಾಗೂ ಬಡ- ಜನರಿಗೆ ಸಹಾಯವಾಗುವ ದ್ರಷ್ಟಿಯಲ್ಲಿ ಈ ಸಂಸ್ಥೆ ಸ್ಥಾಪಿತವಾಗಿದೆ. ಬಿಲ್ಲವ ಯುವಕರಿ ನಾಯಕತ್ವವನ್ನು ನೀಡಿ ಸಮಾಜದ ಜನರಿಗೆ ಸಹಾಯವಾಗುವ ರೀತಿಯಲ್ಲಿ ನಡೆಯಬೇಕು. ಯುವಕರು ಸಮಾಜದಲ್ಲಿ ಗಲಭೆಗಳಿಗೆ ಪಾಲ್ಗೋಳ್ಳದಂತೆ ಸಮಾಜ ಸೇವೆಗೆ ಮುಡಿಪಾಗಬೇಕು, ನಾಲ್ಕು ಜನರಿಗೆ ಸಹಾಯವಾಗಲಿ ಎನ್ನುವುದು ಉದ್ದೇಶವಾಗಿದೆ.

– ಈ ಸಂಘಟನೆ ಆದ ನಂತರದ ಬೆಂಬಲ ಹೇಗಿತ್ತು?

– ಎಲ್ಲಾ ವರ್ಗದ ಜನರಿಂದಲು, ಯಾವುದೆ ಜಾತಿ – ಭೇದ ನೋಡದೆ, ಸಂಘಟನೆ ಪರವಾಗಿ ನಿಂತಿದ್ದಾರೆ. ಈ ಸಂಸ್ಥೆ ಟ್ರೇಂಡ್ ಆಗಿದೆ, ಯಾಗೆಂದರೆ ಪಿಲಿ ನಲಿಕೆ ಯಲ್ಲು ಚಿಕ್ಕ- ಮಕ್ಕಳ ಹಿಡಿದು , ದೊಡ್ಡವರಿಗೂ ಬಿರುವೆರ್ ಕುಡ್ಲ ಬ್ರಾಂಡ್ ಆಯಿತು. ಕೇವಲ ಒಂದೇ ಜಾತಿಯವರಲ್ಲ ಎಲ್ಲಾ ಜಾತಿಯಿಂದಲು ಬೆಂಬಲ ದೊರಕಿದೆ.

– ಜನರ ಬಳಿ ಬಿರುವೆರ್ ಕುಡ್ಲ ಎಂದರೆ, ಮುಖದಲ್ಲಿ ಆನಂದದಿಂದ ಉತ್ತರಿಸುತ್ತಾರೆ ಅಂತಹ ಕೆಲಸ ಈ ಸಂಸ್ಥೆಯಿಂದ ಏನಾಗಿದೆ.?

ಬಡ ಜನರ ಕಷ್ಟಗಳಿಗೆ ಕೈಯಲ್ಲಾಗುವಷ್ಟು ಸಹಕರಿಸಿದೆ, ಯುವಕರಿಗೆ ಉದ್ಯೋಗ, ಬಡ ಜನರ ಸಮಸ್ಯೆ ಎಲ್ಲಾದಕ್ಕೂ ಸ್ಪಂದಿಸುತ್ತಿದೆ. ನ್ಯಾಯ ವದಗಿಸುವ ಕಾರ್ಯವನ್ನು ನಡೆಸುತ್ತಿದೆ. ಜನರಿಗೆ ತುಂಬ ಇಷ್ಟವಾಗಿದೆ. ಜನರ ಸಮಸ್ಯೆಗೆ ನಮ್ಮ ಈ ”ಬಿರುವೆರ್ ಕುಡ್ಲ” ಸದಾ ಇರುತ್ತದೆ. ಕೇವಲ ಮಂಗಳೂರಿನಲ್ಲಿ ಸೀಮಿತವಾಗಿರದೆ, ವೀದೆಶದಲ್ಲೂ ಘಟಕ ಮಾಡಿದ್ದಾರೆ. ಆರು ವರ್ಷಗಳಲ್ಲಿ ಸುಮಾರು ಒಂದುವರೆ ಕೋಟಿ ರೂಪಾಯಿಗಳ ಸಹಾಯ ನೀಡಿದ್ದೆವೆ,

– ಕಾಲು ಏಳೆಯಿವ ಪ್ರಯತ್ನ ಎಲ್ಲಾ ಜಾತಿಯಲ್ಲು ನಡೆಯುತ್ತದೆ. ನಿಮಗೂ ಅನುಭವ ಆಗಿದೆಯ?

ಎಲ್ಲಾ ಸಂಘಟನೆ ಹಾಗೂ ಎಲ್ಲಾ ಜಾತಿಯಲ್ಲು ಇದೆ, ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾನೆ ಎಂದು ಗೊತ್ತಾಗೊದು ಕಾಲು ಏಳೆಯುವಾಗ. ಯುವಕರು ನೆನಪಿಟ್ಟುಕೋಳ್ಳಿ ನೀವು ಬೇಳೆಯುತ್ತಿದ್ದೀರಿ ಅನ್ನೋದು ಗೊತ್ತಾಗೊದು ನಿಮ್ಮನ್ನು ಹಿಂದೆಯಿಂದ ಜನ ಮಾತಾಡುವಾಗ ಹಾಗೂ ಕಾಲು ಏಳೆಯುವಾಗ. ಒಳ್ಳೆಯ ಮನಸ್ಸಿನಿಂದ ಸಮಾಜ ಒಪ್ಪುವ ಕೆಲಸ ಮಾಡಿ.

ಹೀಗೆ ಸಮಾಜ ಸೇವೆ ಮುಂದುವರಿಯಲಿ.. ದೀನ ದಲಿತರ ಸೇವೆಗೆ ಬಿರುವೆರ್ ಕುಡ್ಲ ಸಂಘಟನೆಯ ಸದಾ ಮುಡಿಪಾಗಿರಲಿ, ಸಂಘಟನೆಯ ಎಲ್ಲಾ ಕಾರ್ಯಕರ್ತರು ಹೀಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ಸಮಾಜದ ಏಳಿಗೆಗೆ ಶ್ರಮಿಸುಂತಾಗಳಿ. ಸಮಾಜದಲ್ಲಿ ಓಗ್ಗೂಡಿ ಕಾರ್ಯನಿರ್ವಹಿಸುವಂತಾಗಳಿ ಎಂದು ಆಶಿಸೋಣ…

ಬರಹ: ಪುಷ್ಪರಾಜ್ ಪೂಜಾರಿ

 


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »