TOP STORIES:

ಮದುವೆಯಿಂದ ಮಲಿನಗೊಳ್ಳುತ್ತಿರುವ ಸಮಾಜ


ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ನಮ್ಮೆಲ್ಲರ  ಹೊಂದಾಣಿಕೆಗೊಳಗಾದ ಕೆಲವು ನಿರ್ಬಂಧಗಳು ಮುಂದಕ್ಕೂ ಹಾಗೆಯೇಇರಬೇಕೆಂದು ಕೆಲವು ಬಾರಿ ಅನ್ನಿಸುವುದಿದೆ. ನಿಯಮಿತವೆಂದೆನಿಸಿ  ನಿರಾಡಂಬರಗೊಂಡಿರುವ ನಮ್ಮಲ್ಲಿನ ಮದುವೆಸಮಾರಂಭಗಳನ್ನು ಕಂಡಾಗಲಂತೂ ಇದನ್ನು ಒಪ್ಪಲೇಬೇಕು.

  ಹೌದು ವರ್ತಮಾನವನ್ನು ಅನುಲಕ್ಷಿಸಿದರೆ ಇದು ವ್ಯಾಪಕವಾಗಿ ಪ್ರಸಾರಗೊಳ್ಳಲೇಬೇಕಾದ ಸಂದೇಶ. ಅತಿರೇಕದ ವಿವಾಹ, ಮದರಂಗಿ, ಹಲ್ದಿ ಮೊದಲಾದ ಸಮಾರಂಭಗಳು ಸದ್ಯಕ್ಕೆ ನಮ್ಮ ಹಿಂದೂ ಸಮಾಜಕ್ಕಿರುವ ಅತಿ ದೊಡ್ಡ ಪಿಡುಗು. ನಮ್ಮ  ಬದುಕುಹೊಸಸ್ಫೂರ್ತಿ ಪಡೆಯುವ ವಿವಾಹ, ಗೃಹಪ್ರವೇಶ, ಸೀಮಂತ ಮುಂತಾದ ಶುಭಾವಸರದಲ್ಲಿ ಇನ್ನೊಬ್ಬರ ಜೀವನವನ್ನುವ್ಯಸನಕ್ಕೀಡುಮಾಡಿಸಿ ದಾರಿತಪ್ಪಿಸುವುದು ಪರಮಪಾಪವಲ್ಲದೆ ಇನ್ನೇನು ?

ಮಗನೊಬ್ಬ ನಮ್ಮ ಸಮಾರಂಭವೊಂದರಿಂದ ಮೊದಲಾಗಿ ಕುಡಿತಕ್ಕೆ ಬಿದ್ದನೆಂದು ತಿಳಿದರೆ ಕೊನೆಗೊಮ್ಮೆ ಆತನ ಅಧೋಗತಿಯನ್ನುಕಂಡು‌ ಮಮ್ಮಲ ಮರುಗುವ  ಹೆತ್ತಕರುಳಿನ ಹಿಡಿಶಾಪ ನಮ್ಮನ್ನು ತಾಕದಿದ್ದೀತೇ ?

ಇವೆಷ್ಟೇ ಅಲ್ಲ.

ಇನ್ನೂ ಇದೆ, ಓದಿ.

        ನೀವು ಗಮನಿಸಿರಬಹುದು.

ಈಗಿನ ನಮ್ಮ ಸುಶಿಕ್ಷಿತ ವಧುವರರಿಗೆ ಸನಾತನ ಮದುವೆಯ ಶಾಸ್ತ್ರವಿಧಿಗಳಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳಲು ನಾಚಿಕೆ. ಅದಕ್ಕಾಗಿತೀರಾ ಆಪ್ತರನ್ನು ಮಾತ್ರ ಆಹ್ವಾನಿಸಿ, ಮನೆಯಿಂದ ಸಾಕಷ್ಟು ದೂರವೇ ಇರುವ ದೇಗುಲದಲ್ಲಿ ಯಾರಿಗೂ ಕಾಣದಂತೆ, ಬರಿಯಸಾಕ್ಷಿಗಾಗಿ ಮಾತ್ರ ಒಂದೆರಡೇ ಫೋಟೋ ಕ್ಲಿಕ್ಕಿಸಿ (ಅದಕ್ಕೂ ದೇಗುಲದೊಳಗಡೆ ಅನುಮತಿ ಇಲ್ಲದಿದ್ದರೆ ಖುಷಿಪಟ್ಟು),  ಇನ್ನೂರುಜೋಡಿಗಳಲ್ಲಿ ತಾವೂ ಒಂದೆನಿಸಿ ಮುಹೂರ್ತ ತಪ್ಪಿ ಮದುವೆಯಾಗುತ್ತಾರೆ.

                  ನಂತರ ಅಂದೋ ಅಥವಾ ಶುಭಾಶುಭ ದಿನದ ಹಂಗಿಲ್ಲದೆ ಯಾವಗಲಾದರೊಂದು ದಿನ ತಮ್ಮವರೆಲ್ಲರನ್ನೂ ಆಹ್ವಾನಿಸಿ, ಎಲ್ಲರಿಗೂ ಕಾಣುವಂತೆ ನಗರದ ಮಧ್ಯೆಯೇ ಇರುವ ಬೃಹತ್ ಸಭಾಂಗಣದಲ್ಲಿ ಪ್ರತಿಷ್ಠೆಯ ರಿಸೆಪ್ಷನ್. ಯಥಾವತ್ ಹಿಂದಿಸೀರಿಯಲನ್ನೇ ಹೋಲುವ ವಸ್ತ್ರಸಂಹಿತೆ, ಅಲಂಕಾರ, ನೃತ್ಯವಿನೋದಾವಳಿ ಸಹಿತ ಸ್ವಾಗತ, ಕೇಕ್‌ಗೆ ಚೂರಿ ತಿವಿತ, ಪಾಶ್ಚಾತ್ಯವೃಂದನೃತ್ಯ, ಕೊನೆಯಲ್ಲಿ ತಿನ್ನುವುದಕ್ಕಿಂತ ಹೆಚ್ಚು ಪೋಲಾಗಿಸುವ 20‌ ರಿಂದ 40 ರಷ್ಟು ಅಪರಿಚಿತ ಖಾದ್ಯಯುಕ್ತ ಪುಷ್ಕಲ ಭೋಜನ. ಅವುಗಳಲ್ಲಿ ಮತ್ತೆ  5 ಭೋಜನಾಪೂರ್ವ ಖಾದ್ಯಗಳು. 5 ಭೋಜನೋತ್ತರ ಖಾದ್ಯಗಳು.

          ವಿವಾಹದ ಖರ್ಚಿಗಿಂತಲೂ ಮುಪ್ಪಟ್ಟು ಹೆಚ್ಚಾಗುವಷ್ಟು ವೆಚ್ಚದಲ್ಲಿ ಏರ್ಪಡಿಸುವ ರಾತ್ರಿಯ ಡಿಜೆ ಪಾರ್ಟಿ. 6 ಅಂತಸ್ತಿನಲ್ಲಿಸೌಂಡ್ ಬಾಕ್ಸ್‌ಗಳು, ಮದುವೆ ಮನೆಯವರಿಗೆ ಪರಿಚಿತರಾಗಿರಬೇಕು ಎಂಬ ಕನಿಷ್ಟ ನಿರ್ಬಂಧವೂ ಇಲ್ಲದಂತೆ ಸರ್ವರಿಗೂಮುಕ್ತವಾಗಿರುವ ಮನೆಮುಂದಿನ (ಕೆಲವೆಡೆ ಹಿಂದಿನ) ಓಪನ್ ಬಾರ್. ಬಂದವರನೇಕರಿಗೆ ಅಂದಿನ ಮದುಮಕ್ಕಳ್ಯಾರು, ಮನೆಯಾರದ್ದೆಂಬುದೇ ಗೊತ್ತಿರುವುದಿಲ್ಲ. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ತೊಡಗಿ ಹಣ್ಣಣ್ಣಾದ ವೃದ್ಧರೆಲ್ಲರೂ ಕಲೆತು ನಮ್ಮಅಪರೂಪದಒಗ್ಗಟ್ಟು ಸಾರುವ ಸಾಮೂಹಿಕ ಪಾನಸಮಾವೇಶ. ಕಾವ್ಯಗಳಲ್ಲಿ ವರ್ಣಿತವಾಗಿರುವ ನೃತ್ಯಪಾನಗೊಷ್ಠಿಯ (ಈಗಿನ ಲೈವ್‌ಬ್ಯಾಂಡ್‌ನ) ಫೀಲ್.ಆಗುವಂತೆ ಕೆಲವೆಡೆ ಟೇಬಲ್‌ಗೆ ಬಾಟಲಿ ಸಪ್ಲೈಸರ್ವ್ ಮಾಡಲೆಂದೇ ಅಂದಚೆಂದದ ಹುಡುಗಿಯರಂತೆ.ಎಲ್ಲರಲ್ಲೂ ಹೊಸಹೊಸ ಇತಿಹಾಸ ನಿರ್ಮಾಣ ಮಾಡುವ ಆತುರ. ಹೀಗೆ ವೇಳೆಏರುತ್ತಿದ್ದಂತೆಯೇ  ತಂತಾನೇ ಒಳಮೂಡಿಬರುವ ನೃತ್ಯಾವೇಶ. ಆರ್ಭಟ, ಕೊನೆಕೊನೆಗೆ ದೈವಾರಾಧನೆ, ಯಕ್ಷಗಾನ ಮೊದಲಾದ ಪವಿತ್ರ ಆರಾಧನಾ ಕಲೆಗಳ ಅಣಕು ಪ್ರದರ್ಶನ, ಬಗೆಗಿನವ್ಯಂಗ್ಯಾಭಿವ್ಯಕ್ತಿಗೆ ಬಾರೀ ಬೇಡಿಕೆಮೆಚ್ಚುಗೆ. ಇಷ್ಟಕ್ಕೆ ಮುಗಿಯಲಿಲ್ಲ. ನಾಟ್ಯದ ನವರಂಗ ಮಂಟಪದಲ್ಲಿ ಸ್ತ್ರೀಯರಿಗೂ ಇದೆಮೀಸಲಾತಿ.  ಯಾರ್ಯಾರೋ ಅಪಾಪೋಲಿ ಯುವಕರೊಂದಿಗೆ  ಮದುಮಗಳ ಸಹಿತ ಮನೆಯ ಮಹಿಳೆಯರೆಲ್ಲರ ಕುಡಿತ -‌ಕುಣಿತ. ಇದೂ ಒಂದು‌ ವಿಧದ ಎಂತಹ ಸ್ತ್ರೀಪುರುಷ ಸಮಾನತೆ.

ಆಹಾ, ಎಲ್ಲಾ ಕಾರಣಗಳಿಂದ ಮನೆಯವರಿಗೆ‌ ಮಾತ್ರವಲ್ಲ, ನೆರೆಕರೆಯವರಿಗೂ ಗಳಿಗೆ ಜೀವನಪರ್ಯಂತ ಅವಿಸ್ಮರಣೀಯ!!!

 ಇಷ್ಟೆಲ್ಲಾ ಮುಗಿದು ಮರುದಿನ ಮದುವೆ ಮನೆಯನ್ನೊಮ್ಮೆ ನೋಡಿದರೆ ಕುರ್ಚಿ, ಆಹಾರ, ಅಲಂಕಾರ, ಚಪ್ಪಲಿ, ಬಾಟಲಿಎಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದು, ಆಗಷ್ಟೇ ಸಮರ ಸಮಾಪನಗೊಂಡ ರಣರಂಗದಂತಿರುತ್ತದೆ.

ನನಗಿರುವುದು ಒಂದೇ ಪ್ರಶ್ನೆ. ಧರ್ಮಸಂರಕ್ಷಣಾ ಕಾರ್ಯಗಳೆಲ್ಲದಕ್ಕೂ ಸನ್ನದ್ಧರೆನ್ನುವ ನಮ್ಮ ಏರುತ್ಸಾಹದ ಯುವಕರು ಧರ್ಮಘಾತಕತನದ ಬಗ್ಗೆ ಏಕೆ ಕಿಂಚಿತ್ತೂ ಲಕ್ಷ್ಯ ಹರಿಸುವುದಿಲ್ಲ ? ಹೇಳಿಕೆ ಮಾತ್ರಕ್ಕೆ ನಾವೆಂದಿಗೂ ಧರ್ಮಪರರೆನಿಸಿಕೊಳ್ಳುವವರು ವಿಚಾರದಲ್ಲಿ  ಎಡವುತ್ತಿರುವುದು ಏಕೆ? ಮೂರ್ಕಾಸಿನ ಲಾಭವಿಲ್ಲದ ರಾಜಕೀಯ ಅಸಮಾಧಾನಕ್ಕೆ ತಕ್ಷಣ ಉರಿದು ಬೀಳುವರಿಗೆ   ಇದು ನಮ್ಮತನದ ಸ್ವಾಭಿಮಾನಕ್ಕೆ ಬೀಳುವ ಪೆಟ್ಟಾಗಿ ಏಕೆ ಕಾಣುವುದಿಲ್ಲ. ಸಮಾರಂಭವನ್ನು ಅಪವಿತ್ರಗೊಳಿಸುವುದು ಶಾಸ್ತ್ರವಿರೋಧವಲ್ಲವೇ ? ಅಕ್ಷಮ್ಯ ಧರ್ಮದ್ರೋಹವಲ್ಲವೇ ? ಇದರ ವಿರುದ್ಧ ಸಾರ್ವತ್ರಿಕ ಹೋರಾಟ ಅವಶ್ಯವಲ್ಲವೇ ?

ಸೂಕ್ಷ್ಮವಾಗಿ ಗಮನಿಸಿದರೆ ತಿಳಿದೀತು : ಬಲಿಯಾಗುತ್ತಿರುವವರು ಅಂತಸ್ತಿಲ್ಲಿ ಉನ್ನತರಲ್ಲ. ಎಲ್ಲರೂ ಮಧ್ಯಮವರ್ಗದ ಯುವಕಯುವತಿ, ವಿದ್ಯಾರ್ಥಿಗಳು ಮಾತ್ರ.

 ಇನ್ನು ಕೆಲವರು ಕೇಳಬಹುದು.. “ಅವರ ಹಣ, ಅವರ ಖರ್ಚು ನಿಮಗೇನು ನಷ್ಟ ? ನೀವು ಕುಡಿಯದಿದ್ದರೆ ಬೇಡ ಬಿಡಿ. ಅದು ಅವರವರ ಸ್ವಾತಂತ್ರ್ಯ, ಅವರವರ ಇಚ್ಛೆ

          

  ಹಾಗೆ ನೋಡಿದರೆ ಯಾವುದೂ ತಪ್ಪಲ್ಲ. ಯಾರೋ ಕೊಲೆಯೊಂದನ್ನು ಮಾಡಿದಾಕ್ಷಣಕೊಂದವನು ಅವನುಸತ್ತವನುಇವನು. ನಮಗೇನು ನಷ್ಟ ? ಅದು ಅವನವನ ಇಚ್ಛೆಎಂದು ನಿರ್ಲಕ್ಷ್ಯ ಧೋರಣೆಯಿಂದ ಸಮಾಜ ಕ್ಷಮಿಸುವುದಾದರೆ ಇದೂತಪ್ಪಲ್ಲ.  ಅಮಲುಮುಕ್ತ ಸುಸಭ್ಯ ಸಮಾಜ ನಿರ್ಮಾಣವಾಗದಿದ್ದರೆ ಮುಂದೊಂದು ದಿನ ಘೋರ ಪಶ್ಚಾತಾಪ ಪಡಬೇಕಾದೀತು. ಏಕೆಂದರೆ ಇದು ಕೂಡಾ ಸಮೂಹದ ಭಾವನಾತ್ಮಕ ಕೊಲೆ. ದಿವ್ಯಾದರ್ಶಗಳ ಮುಖೇನ ಸಮಾಜ ಬೆಳಗಬೇಕಾದ ಭವಿಷ್ಯದಪೀಳಿಗೆಯ ಕಗ್ಗೊಲೆ.

    

            ಡಾ॥.ಅರುಣ್ ಉಳ್ಳಾಲ್


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »