TOP STORIES:

FOLLOW US

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ

ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ

ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು ರಚಿಸಲು ಡಾ ಜಿ ಎನ್. ಉಪಾಧ್ಯ ಅವರು ಹೇಳುವವರೆಗೆ ಸುವರ್ಣರನ್ನು ತಿಳಿಯುವ ಪ್ರಯತ್ನವನ್ನು ನಾನೆಂದೂ ಮಾಡಿರಲಿಲ್ಲ. ನನ್ನದು ಸಾಹಿತ್ಯ ಪ್ರಪಂಚ. ಅಪರೂಪಕ್ಕೆ ಸಾಹಿತ್ಯ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ  ಮಾತ್ರ ಬಿಲ್ಲವ ಭವನಕ್ಕೆ ಭೇಟಿ ನೀಡುತ್ತಿದ್ದೆ. ಭವನದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಜಯ ಸುವರ್ಣರ ಉಪಸ್ಥಿತಿಯಿರುತ್ತಿತ್ತು. ಪ್ರತಿಯೊಬ್ಬರೂ ಅವರಿಗೆ ತೋರುವ ಪ್ರೀತಿ ಗೌರವಗಳು ಮತ್ತು ಮಾಡುವ ಸನ್ಮಾನಗಳನ್ನು ದೂರದಿಂದಲೇ ಕುತೂಹಲದಿಂದ ನೋಡುತ್ತಿದ್ದೆ. ಎಲ್ಲ ಸಮಾಜ ಬಾಂಧವರೊಂದಿಗೆ ಅವರಿಗಿರುವ ಆಪ್ತತೆ ನನ್ನಲ್ಲಿ ಬೆರಗು ಮೂಡಿಸುತ್ತಿತ್ತು.

2013ರಲ್ಲಿ  ಬಿಲ್ಲವ ಭವನದಲ್ಲಿ ಆಟಿಡೊಂಜಿ ಕೂಟ  ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ  ಅಹ್ವಾನಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಸುವರ್ಣರು ವಹಿಸಿಕೊಂಡಿದ್ದರು. ಅಂದು 4:30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುವರ್ಣರ ಅನುಪಸ್ಥಿತಿಯಿಂದ ವಿಳಂಭವಾಗಿತ್ತು. ಜಯ ಸುವರ್ಣರು ಬಂದಾಗ ಅಲ್ಲಿ ನೆರೆದವರೆಲ್ಲ  ಕಿಂಚಿತ್ತೂ ಬೇಸರಿಸದೆ ಖುಷಿಯಿಂದ ಬರಮಾಡಿಕೊಂಡ ರೀತಿ … ಎಲ್ಲವನ್ನೂ ಎಲ್ಲರನ್ನೂ  ಕುತೂಹಲದಿಂದ ಗಮನಿಸುತ್ತಿದ್ದೆ. ಜನ ಸಾಮಾನ್ಯರೆಲ್ಲರಿಗೂ ಇವರ ಮೇಲೆ ಯಾಕಿಷ್ಟು ಅಪಾರ ಪ್ರೀತಿ ಭಕ್ತಿ…ಇವೆಲ್ಲವೂ ಕಾಣುತ್ತಿದ್ದ ನನಗೆ ಸೋಜಿಗವೆನಿಸುತ್ತಿತ್ತು.

ಜಯ ಸುವರ್ಣರ ಕುರಿತು ನನ್ನ ಮನಸಲ್ಲಿ  ಸುಪ್ತ ವಾಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಅವರ  ಕುರಿತು ಆಳವಾದ ಅಧ್ಯಯನವನ್ನು ಕೈಗೊಂಡ ಮೇಲೆಯೇ. ಬಿಲ್ಲವ ಸಮಾಜಕ್ಕೆ ಆಧಾರ ಸ್ತಂಭವಾಗಿ ನಿಂತು, ಹಿರಿಯರು ಕಂಡ ಕನಸಿನ ಗಂಟನ್ನು ಹೆಗಲಲ್ಲಿ ಹೊತ್ತು,  ಸರ್ವ ಸಮಾಜದ ಬಾಂಧವರೊಡನೆ ಸಮಾನವಾಗಿ ಬೆರೆತು, ಸಮಾಜದ ಏಳಿಗೆಗೆ ಅನವರತ ದುಡಿದು  ಸಮಾಜವನ್ನು ಮೇರೆತ್ತರಕ್ಕೆ ಕೊಂಡೊಯ್ದ ಮಹಾನ್ ಚೇತನ ಜಯ ಸುವರ್ಣರು. ಇವರ ಜೀವನ ಸಾಧನೆಯ ಕುರಿತು ದಾಖಲಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ. ಸುವರ್ಣರ ಜೀವಿತಾವಧಿಯವರೆಗೆ ಅವರ  ಜೊತೆಗೆ ಒಡನಾಟದ ಸೌಭಾಗ್ಯವನ್ನು ಪಡೆದ ನೂರಾರು  ಪುಣ್ಯವಂತರನ್ನು ಭೇಟಿ ಮಾಡಿ ಜಯ ಸುವರ್ಣರನ್ನು ಅವರು ಬದುಕಿದ ರೀತಿಯನ್ನು ಅರಿತು ಅರಗಿಸಿಕೊಂಡವಳು ನಾನು.

ಸುವರ್ಣರ ಕುರಿತು ಬರೆಯುವಾಗ ಅವರ ಮಹಾನ್ ವ್ಯಕ್ತಿತ್ವದ ಕತೆಯನ್ನು ಪ್ರತಿದಿನ ನನ್ನ ಮಗಳಿಗೆ ಹೇಳುತ್ತಿದ್ದೆ. ಎಲ್ಲವನ್ನೂ ಹೇಳಿ ಮುಗಿಸಿದ ಮೇಲೆ, ಅವಳು, “ಅಮ್ಮ ಅವರಿರುವಾಗಲೇ ನೀನು ಈ ಕೃತಿಯನ್ನು ಬರೆದಿದ್ದರೆ ಅವರ ತ್ಯಾಗಮಯ ಜೀವನಕ್ಕೆ ಎಷ್ಟು ಧನ್ಯತಾಭಾವ ಸಿಗುತ್ತಿತ್ತು. ಅವರಿಗೆ ಎಷ್ಟೊಂದು ಖುಷಿಯಾಗುತ್ತಿತ್ತು ಅಲ್ಲವೇ” ಎಂದು ಹೇಳಿದಾಗ ನಾನಂದು ಉತ್ತರಿಸಲಾಗದೆ ಭಾವುಕಳಾಗಿದ್ದೆ.

ನಿಜ ಅವರ ತ್ಯಾಗಮಯ ಜೀವನವನ್ನು ನಾವೆಷ್ಟು ಅರ್ಥಮಾಡಿಕೊಂಡಿದ್ದೇವೆ? ಅವರ ಆದರ್ಶಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಅನ್ನುವ ಪ್ರಶ್ನೆಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ.

ಒಬ್ಬ ವ್ಯಕ್ತಿಗೆ ನಾವು ನಿಷ್ಠರಾಗಿದ್ದರೆ ಆ ವ್ಯಕ್ತಿ ಬದುಕಿದ್ದಾಗ ಮಾತ್ರವಲ್ಲ ಅವರು ಗತಿಸಿದ ಮೇಲೂ ಅವರನ್ನು ಗೌರವಿಸಬೇಕು ಅವರ ಸೇವೆಯನ್ನು ನೆನಪಿಟ್ಟುಕೊಂಡು ಮುನ್ನಡೆಯಬೇಕು. ಆಗ ಮಾತ್ರ ಮನುಷ್ಯತ್ವ ಎಂಬ ಪದಕ್ಕೆ ನಿಜವಾದ ಅರ್ಥ ಸಿಗಬಲ್ಲದು.

ಜಯ ಸುವರ್ಣರ ಕುರಿತು ಬರೆದ ಸುವರ್ಣಯುಗ ಕೃತಿಯನ್ನು ಈಗಾಗಲೇ ನೂರಾರು ಮಂದಿ ಹಿರಿಯ ಸಾಹಿತಿಗಳು ವಿಮರ್ಶಕರು ಸಹೃದಯ ಓದುಗರು ಓದಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಗ್ರಂಥವನ್ನು ಇಂಗ್ಲಿಷ್ ಗೆ ಭಾಷಾಂತರಿಸುತ್ತಿರುವ ಅನುವಾದಕರು, *ಈ ಕೃತಿಯನ್ನು ಪರ್ಸನಾಲಿಟಿ ಡೆವಲಪ್ಮೆಂಟ್ ಟ್ರೈನಿಂಗ್ ಗೆ ಟೆಕ್ಸ್ಟ್ ಮಾಡಬಹುದು. ತುಂಬ  ಉನ್ನತ ಮಟ್ಟದ ಸಾಧನೆ ಅವರದ್ದು. ಅವರ ಸಾಧನೆಗಳು ಈ ಕೃತಿಯಲ್ಲಿ ಎಳೆಎಳೆಯಾಗಿ ಅನಾವರಣಗೊಂಡಿವೆ.  ಇದೊಂದು ಸೃಜನಶೀಲ ಬರವಣಿಗೆ. ಈ ರೀತಿ ಬರೆಯುವುದು ಸುಲಭವಿಲ್ಲವೆಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಜಯ ಸುವರ್ಣರ ಮಹಾನ್ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಬೇಕೆನ್ನುವ ನನ್ನ ಪ್ರಯತ್ನ  ಸುವರ್ಣಯುಗ ಕೃತಿಯ ಮೂಲಕ ಫಲನೀಡಿತೆಂಬ ಧನ್ಯತಾಭಾವ ನನಗಿದೆ. ಇಂದು ಅವರ 78ನೆಯ ಜನ್ಮದಿನ. ಮರುಜನ್ಮವೊಂದಿದ್ದರೆ ಅವರು ನಮ್ಮ ಸಮಾಜದಲ್ಲಿಯೇ ಹುಟ್ಟಿ ಬರಲಿ. ಅವರಂಥ ನಾಯಕತ್ವವಿದ್ದರೆ ಖಂಡಿತವಾಗಿಯೂ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ.

ಅನಿತಾ ಪೂಜಾರಿ ತಾಕೊಡೆ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »