TOP STORIES:

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ

ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ

ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು ರಚಿಸಲು ಡಾ ಜಿ ಎನ್. ಉಪಾಧ್ಯ ಅವರು ಹೇಳುವವರೆಗೆ ಸುವರ್ಣರನ್ನು ತಿಳಿಯುವ ಪ್ರಯತ್ನವನ್ನು ನಾನೆಂದೂ ಮಾಡಿರಲಿಲ್ಲ. ನನ್ನದು ಸಾಹಿತ್ಯ ಪ್ರಪಂಚ. ಅಪರೂಪಕ್ಕೆ ಸಾಹಿತ್ಯ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ  ಮಾತ್ರ ಬಿಲ್ಲವ ಭವನಕ್ಕೆ ಭೇಟಿ ನೀಡುತ್ತಿದ್ದೆ. ಭವನದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಜಯ ಸುವರ್ಣರ ಉಪಸ್ಥಿತಿಯಿರುತ್ತಿತ್ತು. ಪ್ರತಿಯೊಬ್ಬರೂ ಅವರಿಗೆ ತೋರುವ ಪ್ರೀತಿ ಗೌರವಗಳು ಮತ್ತು ಮಾಡುವ ಸನ್ಮಾನಗಳನ್ನು ದೂರದಿಂದಲೇ ಕುತೂಹಲದಿಂದ ನೋಡುತ್ತಿದ್ದೆ. ಎಲ್ಲ ಸಮಾಜ ಬಾಂಧವರೊಂದಿಗೆ ಅವರಿಗಿರುವ ಆಪ್ತತೆ ನನ್ನಲ್ಲಿ ಬೆರಗು ಮೂಡಿಸುತ್ತಿತ್ತು.

2013ರಲ್ಲಿ  ಬಿಲ್ಲವ ಭವನದಲ್ಲಿ ಆಟಿಡೊಂಜಿ ಕೂಟ  ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ  ಅಹ್ವಾನಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಸುವರ್ಣರು ವಹಿಸಿಕೊಂಡಿದ್ದರು. ಅಂದು 4:30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುವರ್ಣರ ಅನುಪಸ್ಥಿತಿಯಿಂದ ವಿಳಂಭವಾಗಿತ್ತು. ಜಯ ಸುವರ್ಣರು ಬಂದಾಗ ಅಲ್ಲಿ ನೆರೆದವರೆಲ್ಲ  ಕಿಂಚಿತ್ತೂ ಬೇಸರಿಸದೆ ಖುಷಿಯಿಂದ ಬರಮಾಡಿಕೊಂಡ ರೀತಿ … ಎಲ್ಲವನ್ನೂ ಎಲ್ಲರನ್ನೂ  ಕುತೂಹಲದಿಂದ ಗಮನಿಸುತ್ತಿದ್ದೆ. ಜನ ಸಾಮಾನ್ಯರೆಲ್ಲರಿಗೂ ಇವರ ಮೇಲೆ ಯಾಕಿಷ್ಟು ಅಪಾರ ಪ್ರೀತಿ ಭಕ್ತಿ…ಇವೆಲ್ಲವೂ ಕಾಣುತ್ತಿದ್ದ ನನಗೆ ಸೋಜಿಗವೆನಿಸುತ್ತಿತ್ತು.

ಜಯ ಸುವರ್ಣರ ಕುರಿತು ನನ್ನ ಮನಸಲ್ಲಿ  ಸುಪ್ತ ವಾಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಅವರ  ಕುರಿತು ಆಳವಾದ ಅಧ್ಯಯನವನ್ನು ಕೈಗೊಂಡ ಮೇಲೆಯೇ. ಬಿಲ್ಲವ ಸಮಾಜಕ್ಕೆ ಆಧಾರ ಸ್ತಂಭವಾಗಿ ನಿಂತು, ಹಿರಿಯರು ಕಂಡ ಕನಸಿನ ಗಂಟನ್ನು ಹೆಗಲಲ್ಲಿ ಹೊತ್ತು,  ಸರ್ವ ಸಮಾಜದ ಬಾಂಧವರೊಡನೆ ಸಮಾನವಾಗಿ ಬೆರೆತು, ಸಮಾಜದ ಏಳಿಗೆಗೆ ಅನವರತ ದುಡಿದು  ಸಮಾಜವನ್ನು ಮೇರೆತ್ತರಕ್ಕೆ ಕೊಂಡೊಯ್ದ ಮಹಾನ್ ಚೇತನ ಜಯ ಸುವರ್ಣರು. ಇವರ ಜೀವನ ಸಾಧನೆಯ ಕುರಿತು ದಾಖಲಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ. ಸುವರ್ಣರ ಜೀವಿತಾವಧಿಯವರೆಗೆ ಅವರ  ಜೊತೆಗೆ ಒಡನಾಟದ ಸೌಭಾಗ್ಯವನ್ನು ಪಡೆದ ನೂರಾರು  ಪುಣ್ಯವಂತರನ್ನು ಭೇಟಿ ಮಾಡಿ ಜಯ ಸುವರ್ಣರನ್ನು ಅವರು ಬದುಕಿದ ರೀತಿಯನ್ನು ಅರಿತು ಅರಗಿಸಿಕೊಂಡವಳು ನಾನು.

ಸುವರ್ಣರ ಕುರಿತು ಬರೆಯುವಾಗ ಅವರ ಮಹಾನ್ ವ್ಯಕ್ತಿತ್ವದ ಕತೆಯನ್ನು ಪ್ರತಿದಿನ ನನ್ನ ಮಗಳಿಗೆ ಹೇಳುತ್ತಿದ್ದೆ. ಎಲ್ಲವನ್ನೂ ಹೇಳಿ ಮುಗಿಸಿದ ಮೇಲೆ, ಅವಳು, “ಅಮ್ಮ ಅವರಿರುವಾಗಲೇ ನೀನು ಈ ಕೃತಿಯನ್ನು ಬರೆದಿದ್ದರೆ ಅವರ ತ್ಯಾಗಮಯ ಜೀವನಕ್ಕೆ ಎಷ್ಟು ಧನ್ಯತಾಭಾವ ಸಿಗುತ್ತಿತ್ತು. ಅವರಿಗೆ ಎಷ್ಟೊಂದು ಖುಷಿಯಾಗುತ್ತಿತ್ತು ಅಲ್ಲವೇ” ಎಂದು ಹೇಳಿದಾಗ ನಾನಂದು ಉತ್ತರಿಸಲಾಗದೆ ಭಾವುಕಳಾಗಿದ್ದೆ.

ನಿಜ ಅವರ ತ್ಯಾಗಮಯ ಜೀವನವನ್ನು ನಾವೆಷ್ಟು ಅರ್ಥಮಾಡಿಕೊಂಡಿದ್ದೇವೆ? ಅವರ ಆದರ್ಶಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಅನ್ನುವ ಪ್ರಶ್ನೆಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ.

ಒಬ್ಬ ವ್ಯಕ್ತಿಗೆ ನಾವು ನಿಷ್ಠರಾಗಿದ್ದರೆ ಆ ವ್ಯಕ್ತಿ ಬದುಕಿದ್ದಾಗ ಮಾತ್ರವಲ್ಲ ಅವರು ಗತಿಸಿದ ಮೇಲೂ ಅವರನ್ನು ಗೌರವಿಸಬೇಕು ಅವರ ಸೇವೆಯನ್ನು ನೆನಪಿಟ್ಟುಕೊಂಡು ಮುನ್ನಡೆಯಬೇಕು. ಆಗ ಮಾತ್ರ ಮನುಷ್ಯತ್ವ ಎಂಬ ಪದಕ್ಕೆ ನಿಜವಾದ ಅರ್ಥ ಸಿಗಬಲ್ಲದು.

ಜಯ ಸುವರ್ಣರ ಕುರಿತು ಬರೆದ ಸುವರ್ಣಯುಗ ಕೃತಿಯನ್ನು ಈಗಾಗಲೇ ನೂರಾರು ಮಂದಿ ಹಿರಿಯ ಸಾಹಿತಿಗಳು ವಿಮರ್ಶಕರು ಸಹೃದಯ ಓದುಗರು ಓದಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಗ್ರಂಥವನ್ನು ಇಂಗ್ಲಿಷ್ ಗೆ ಭಾಷಾಂತರಿಸುತ್ತಿರುವ ಅನುವಾದಕರು, *ಈ ಕೃತಿಯನ್ನು ಪರ್ಸನಾಲಿಟಿ ಡೆವಲಪ್ಮೆಂಟ್ ಟ್ರೈನಿಂಗ್ ಗೆ ಟೆಕ್ಸ್ಟ್ ಮಾಡಬಹುದು. ತುಂಬ  ಉನ್ನತ ಮಟ್ಟದ ಸಾಧನೆ ಅವರದ್ದು. ಅವರ ಸಾಧನೆಗಳು ಈ ಕೃತಿಯಲ್ಲಿ ಎಳೆಎಳೆಯಾಗಿ ಅನಾವರಣಗೊಂಡಿವೆ.  ಇದೊಂದು ಸೃಜನಶೀಲ ಬರವಣಿಗೆ. ಈ ರೀತಿ ಬರೆಯುವುದು ಸುಲಭವಿಲ್ಲವೆಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಜಯ ಸುವರ್ಣರ ಮಹಾನ್ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಬೇಕೆನ್ನುವ ನನ್ನ ಪ್ರಯತ್ನ  ಸುವರ್ಣಯುಗ ಕೃತಿಯ ಮೂಲಕ ಫಲನೀಡಿತೆಂಬ ಧನ್ಯತಾಭಾವ ನನಗಿದೆ. ಇಂದು ಅವರ 78ನೆಯ ಜನ್ಮದಿನ. ಮರುಜನ್ಮವೊಂದಿದ್ದರೆ ಅವರು ನಮ್ಮ ಸಮಾಜದಲ್ಲಿಯೇ ಹುಟ್ಟಿ ಬರಲಿ. ಅವರಂಥ ನಾಯಕತ್ವವಿದ್ದರೆ ಖಂಡಿತವಾಗಿಯೂ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ.

ಅನಿತಾ ಪೂಜಾರಿ ತಾಕೊಡೆ


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »