TOP STORIES:

FOLLOW US

ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ


ಹೃದಯ ಹೃದಯಗಳಲ್ಲಿ ಬೆಸೆದ ಹೃದಯ ಶ್ರೀಮಂತ

ಜಯ ಸುವರ್ಣರ ಜನ್ಮದಿನದ ನೆನಪಿನ ಸಲುವಾಗಿ ನುಡಿನಮನ

ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿ ಎಚ್. ಡಿ ಕೋರ್ಸ್ ವರ್ಕ್ ನ ಸಲುವಾಗಿ ಜಯ ಸುವರ್ಣರ ಕುರಿತು ಶೋಧ ಪ್ರಬಂಧವನ್ನು ರಚಿಸಲು ಡಾ ಜಿ ಎನ್. ಉಪಾಧ್ಯ ಅವರು ಹೇಳುವವರೆಗೆ ಸುವರ್ಣರನ್ನು ತಿಳಿಯುವ ಪ್ರಯತ್ನವನ್ನು ನಾನೆಂದೂ ಮಾಡಿರಲಿಲ್ಲ. ನನ್ನದು ಸಾಹಿತ್ಯ ಪ್ರಪಂಚ. ಅಪರೂಪಕ್ಕೆ ಸಾಹಿತ್ಯ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ  ಮಾತ್ರ ಬಿಲ್ಲವ ಭವನಕ್ಕೆ ಭೇಟಿ ನೀಡುತ್ತಿದ್ದೆ. ಭವನದಲ್ಲಿ ಯಾವುದೇ ಕಾರ್ಯಕ್ರಮವಿರಲಿ ಜಯ ಸುವರ್ಣರ ಉಪಸ್ಥಿತಿಯಿರುತ್ತಿತ್ತು. ಪ್ರತಿಯೊಬ್ಬರೂ ಅವರಿಗೆ ತೋರುವ ಪ್ರೀತಿ ಗೌರವಗಳು ಮತ್ತು ಮಾಡುವ ಸನ್ಮಾನಗಳನ್ನು ದೂರದಿಂದಲೇ ಕುತೂಹಲದಿಂದ ನೋಡುತ್ತಿದ್ದೆ. ಎಲ್ಲ ಸಮಾಜ ಬಾಂಧವರೊಂದಿಗೆ ಅವರಿಗಿರುವ ಆಪ್ತತೆ ನನ್ನಲ್ಲಿ ಬೆರಗು ಮೂಡಿಸುತ್ತಿತ್ತು.

2013ರಲ್ಲಿ  ಬಿಲ್ಲವ ಭವನದಲ್ಲಿ ಆಟಿಡೊಂಜಿ ಕೂಟ  ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ  ಅಹ್ವಾನಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಸುವರ್ಣರು ವಹಿಸಿಕೊಂಡಿದ್ದರು. ಅಂದು 4:30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸುವರ್ಣರ ಅನುಪಸ್ಥಿತಿಯಿಂದ ವಿಳಂಭವಾಗಿತ್ತು. ಜಯ ಸುವರ್ಣರು ಬಂದಾಗ ಅಲ್ಲಿ ನೆರೆದವರೆಲ್ಲ  ಕಿಂಚಿತ್ತೂ ಬೇಸರಿಸದೆ ಖುಷಿಯಿಂದ ಬರಮಾಡಿಕೊಂಡ ರೀತಿ … ಎಲ್ಲವನ್ನೂ ಎಲ್ಲರನ್ನೂ  ಕುತೂಹಲದಿಂದ ಗಮನಿಸುತ್ತಿದ್ದೆ. ಜನ ಸಾಮಾನ್ಯರೆಲ್ಲರಿಗೂ ಇವರ ಮೇಲೆ ಯಾಕಿಷ್ಟು ಅಪಾರ ಪ್ರೀತಿ ಭಕ್ತಿ…ಇವೆಲ್ಲವೂ ಕಾಣುತ್ತಿದ್ದ ನನಗೆ ಸೋಜಿಗವೆನಿಸುತ್ತಿತ್ತು.

ಜಯ ಸುವರ್ಣರ ಕುರಿತು ನನ್ನ ಮನಸಲ್ಲಿ  ಸುಪ್ತ ವಾಗಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಅವರ  ಕುರಿತು ಆಳವಾದ ಅಧ್ಯಯನವನ್ನು ಕೈಗೊಂಡ ಮೇಲೆಯೇ. ಬಿಲ್ಲವ ಸಮಾಜಕ್ಕೆ ಆಧಾರ ಸ್ತಂಭವಾಗಿ ನಿಂತು, ಹಿರಿಯರು ಕಂಡ ಕನಸಿನ ಗಂಟನ್ನು ಹೆಗಲಲ್ಲಿ ಹೊತ್ತು,  ಸರ್ವ ಸಮಾಜದ ಬಾಂಧವರೊಡನೆ ಸಮಾನವಾಗಿ ಬೆರೆತು, ಸಮಾಜದ ಏಳಿಗೆಗೆ ಅನವರತ ದುಡಿದು  ಸಮಾಜವನ್ನು ಮೇರೆತ್ತರಕ್ಕೆ ಕೊಂಡೊಯ್ದ ಮಹಾನ್ ಚೇತನ ಜಯ ಸುವರ್ಣರು. ಇವರ ಜೀವನ ಸಾಧನೆಯ ಕುರಿತು ದಾಖಲಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ. ಸುವರ್ಣರ ಜೀವಿತಾವಧಿಯವರೆಗೆ ಅವರ  ಜೊತೆಗೆ ಒಡನಾಟದ ಸೌಭಾಗ್ಯವನ್ನು ಪಡೆದ ನೂರಾರು  ಪುಣ್ಯವಂತರನ್ನು ಭೇಟಿ ಮಾಡಿ ಜಯ ಸುವರ್ಣರನ್ನು ಅವರು ಬದುಕಿದ ರೀತಿಯನ್ನು ಅರಿತು ಅರಗಿಸಿಕೊಂಡವಳು ನಾನು.

ಸುವರ್ಣರ ಕುರಿತು ಬರೆಯುವಾಗ ಅವರ ಮಹಾನ್ ವ್ಯಕ್ತಿತ್ವದ ಕತೆಯನ್ನು ಪ್ರತಿದಿನ ನನ್ನ ಮಗಳಿಗೆ ಹೇಳುತ್ತಿದ್ದೆ. ಎಲ್ಲವನ್ನೂ ಹೇಳಿ ಮುಗಿಸಿದ ಮೇಲೆ, ಅವಳು, “ಅಮ್ಮ ಅವರಿರುವಾಗಲೇ ನೀನು ಈ ಕೃತಿಯನ್ನು ಬರೆದಿದ್ದರೆ ಅವರ ತ್ಯಾಗಮಯ ಜೀವನಕ್ಕೆ ಎಷ್ಟು ಧನ್ಯತಾಭಾವ ಸಿಗುತ್ತಿತ್ತು. ಅವರಿಗೆ ಎಷ್ಟೊಂದು ಖುಷಿಯಾಗುತ್ತಿತ್ತು ಅಲ್ಲವೇ” ಎಂದು ಹೇಳಿದಾಗ ನಾನಂದು ಉತ್ತರಿಸಲಾಗದೆ ಭಾವುಕಳಾಗಿದ್ದೆ.

ನಿಜ ಅವರ ತ್ಯಾಗಮಯ ಜೀವನವನ್ನು ನಾವೆಷ್ಟು ಅರ್ಥಮಾಡಿಕೊಂಡಿದ್ದೇವೆ? ಅವರ ಆದರ್ಶಗಳನ್ನು ನಾವೆಷ್ಟು ಪಾಲಿಸುತ್ತಿದ್ದೇವೆ ಅನ್ನುವ ಪ್ರಶ್ನೆಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ.

ಒಬ್ಬ ವ್ಯಕ್ತಿಗೆ ನಾವು ನಿಷ್ಠರಾಗಿದ್ದರೆ ಆ ವ್ಯಕ್ತಿ ಬದುಕಿದ್ದಾಗ ಮಾತ್ರವಲ್ಲ ಅವರು ಗತಿಸಿದ ಮೇಲೂ ಅವರನ್ನು ಗೌರವಿಸಬೇಕು ಅವರ ಸೇವೆಯನ್ನು ನೆನಪಿಟ್ಟುಕೊಂಡು ಮುನ್ನಡೆಯಬೇಕು. ಆಗ ಮಾತ್ರ ಮನುಷ್ಯತ್ವ ಎಂಬ ಪದಕ್ಕೆ ನಿಜವಾದ ಅರ್ಥ ಸಿಗಬಲ್ಲದು.

ಜಯ ಸುವರ್ಣರ ಕುರಿತು ಬರೆದ ಸುವರ್ಣಯುಗ ಕೃತಿಯನ್ನು ಈಗಾಗಲೇ ನೂರಾರು ಮಂದಿ ಹಿರಿಯ ಸಾಹಿತಿಗಳು ವಿಮರ್ಶಕರು ಸಹೃದಯ ಓದುಗರು ಓದಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಗ್ರಂಥವನ್ನು ಇಂಗ್ಲಿಷ್ ಗೆ ಭಾಷಾಂತರಿಸುತ್ತಿರುವ ಅನುವಾದಕರು, *ಈ ಕೃತಿಯನ್ನು ಪರ್ಸನಾಲಿಟಿ ಡೆವಲಪ್ಮೆಂಟ್ ಟ್ರೈನಿಂಗ್ ಗೆ ಟೆಕ್ಸ್ಟ್ ಮಾಡಬಹುದು. ತುಂಬ  ಉನ್ನತ ಮಟ್ಟದ ಸಾಧನೆ ಅವರದ್ದು. ಅವರ ಸಾಧನೆಗಳು ಈ ಕೃತಿಯಲ್ಲಿ ಎಳೆಎಳೆಯಾಗಿ ಅನಾವರಣಗೊಂಡಿವೆ.  ಇದೊಂದು ಸೃಜನಶೀಲ ಬರವಣಿಗೆ. ಈ ರೀತಿ ಬರೆಯುವುದು ಸುಲಭವಿಲ್ಲವೆಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಜಯ ಸುವರ್ಣರ ಮಹಾನ್ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಬೇಕೆನ್ನುವ ನನ್ನ ಪ್ರಯತ್ನ  ಸುವರ್ಣಯುಗ ಕೃತಿಯ ಮೂಲಕ ಫಲನೀಡಿತೆಂಬ ಧನ್ಯತಾಭಾವ ನನಗಿದೆ. ಇಂದು ಅವರ 78ನೆಯ ಜನ್ಮದಿನ. ಮರುಜನ್ಮವೊಂದಿದ್ದರೆ ಅವರು ನಮ್ಮ ಸಮಾಜದಲ್ಲಿಯೇ ಹುಟ್ಟಿ ಬರಲಿ. ಅವರಂಥ ನಾಯಕತ್ವವಿದ್ದರೆ ಖಂಡಿತವಾಗಿಯೂ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಲು ಸಾಧ್ಯ.

ಅನಿತಾ ಪೂಜಾರಿ ತಾಕೊಡೆ


Share:

More Posts

Category

Send Us A Message

Related Posts

ಬಹರೈನ್ ನಲ್ಲಿ ನಡೆದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಅಧ್ಯಕ್ಷರಾಗಿ ರಾಜ್ ಕುಮಾರ್ ಆಯ್ಕೆ


Share       ಮುಂಬಯಿ, (ಆರ್‌ಬಿಐ) ಜ.೧೧ : ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಬಹರೈನ್ ಇದರ ನೂತನ ಸಮಿತಿಯ ಪದಗ್ರಹನ ಹಾಗೂ ಕರ್ನಾಟಕ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ಬಹರೈನ್ ನ ದಿ ಇಂಡಿಯಾನ್ ಕ್ಲಬ್ ಸಭಾಂಗಣದಲ್ಲಿ


Read More »

ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಬಿಡುಗಡೆ


Share       ಯುವವಾಹಿನಿ(ರಿ) ಕೂಳೂರು ಘಟಕ ಪದಗ್ರಹಣ ಸಮಾರಂಭದಲ್ಲಿ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ  ಆಮಂತ್ರಣ ಬಿಡುಗಡೆ ಗೆಜ್ಜೆಗಿರಿಯ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಯುವವಾಹಿನಿ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್


Read More »

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »