TOP STORIES:

FOLLOW US

ಬೆಮ್ಮೆರ್ – ಬ್ರಹ್ಮ


Author Venkatesh Karkera

Team Prajnaanambrahmah

ತುಳುನಾಡ ದೈವಗಳಲ್ಲಿ ಅತಿಪ್ರಮುಖ ಶಕ್ತಿ ಎಂದರೆ ಬೆಮ್ಮೆರ್ ಯಾ ಬೆರ್ಮೆರ್. ಆಲಡೆಗಳಲ್ಲಿ, ನಾಗಮೂಲಸ್ಥಾನಗಳಲ್ಲಿ, ಗರಡಿಗಳಲ್ಲಿ, ದೈವಸ್ಥಾನಗಳಲ್ಲಿ ಹೀಗೆ ಹೆಚ್ಚುಕಡಿಮೆ ತುಳುನಾಡ ಉದ್ದಗಲಕ್ಕೂ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುತ್ತಿದೆ. ಕೆಲವೆಡೆ ಬೆಮ್ಮೆರ್ ಕೋಲನೇಮ ಪಡೆದುಕೊಂಡು ದೈವಗಳಂತೆ ಆರಾಧನೆ ಪಡೆದರೆ ಇತರೆಡೆ ದೇವರಂತೆ ಪೂಜಿಸಲ್ಪಡುತ್ತಾರೆ.
ಕೆಲ‌ ಸ್ಥಳಗಳಲ್ಲಿ ಬೆಮ್ಮೆರ್ ಪುನರ್ನಾಮಕಗೊಂಡು ಬ್ರಹ್ಮಲಿಂಗೇಶ್ವರ / ಮಹಾಲಿಂಗೇಶ್ವರ/ ಖಡ್ಗೇಶ್ವರಿ ಹೀಗೆಲ್ಲಾ ಹೊಸ ಹೆಸರಿನೊಂದಿಗೆ ಪೂಜಿಸಲ್ಪಡುತ್ತಿದ್ದಾರೆ. ಈ ರೀತಿಯ ಪುನರ್ನಾಮಕರಣ ಸರಿಯೋ ತಪ್ಪೋ‌ ಎಂಬುದು ಖಂಡಿತವಾಗಿಯೂ ವಿಚಾರಾರ್ಹ. ಆದರೆ ಈಗೀಗ ಈ ವಿಚಾರ ಜಾತಿಯ‌ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ. ಈ ರೀತಿಯ ನಾಮಾಂತರಕ್ಕೆಲ್ಲಾ ವೈದಿಕರೇ ಕಾರಣ, ನಮ್ಮ ದೈವಗಳ ವೈದಿಕೀಕರಣ ಎಂದೆಲ್ಲ ವೈದಿಕ ಸಮುದಾಯವನ್ನು ದೂರುವುದು ಅಲ್ಲಲ್ಲಿ ಕಂಡುಬರುತ್ತಿದೆ. © https://prajnaanambrahmah.wordpress.com

‘ಬೆಮ್ಮೆರ್’ ಎಂಬ ಶಬ್ದ ‘ಪೆರಿಯಮ್ಮೆರ್’ ಎಂಬ ಪದದಿಂದ ಹುಟ್ಟಿದೆಯೇ ಹೊರತು ‘ಬ್ರಹ್ಮ’ ಎಂಬ ಪದದಿಂದ ಅಲ್ಲ, ಈ ‘ಬೆಮ್ಮೆರ್’ ಎಂಬಾತ ತುಳುನಾಡಿನ ಮೂಲನಿವಾಸಿಗಳ ಹಿರಿಯನೋ ಅಥವಾ ರಾಜನೋ ಆಗಿರಬೇಕು ಎಂಬುದು ವೈದಿಕೀಕರಣ ವಿರೋಧಿಗಳ ಅಭಿಪ್ರಾಯ. ಅಂತೂ ಇಂತೂ ಬೆಮ್ಮೆರ್ ಬ್ರಹ್ಮನಲ್ಲ ಎಂಬುದು ಅವರ ವಾದ. ಬೆಮ್ಮೆರ್ ಬ್ರಹ್ಮನೋ ಅಲ್ಲವೋ ಹೇಳುವುದು ಕಷ್ಟಸಾಧ್ಯ. ಆದರೆ ‘ಬ್ರಹ್ಮ’ ಅಂದ ಕೂಡಲೆ ತಥಾಕಥಿತ ‘ವೈದಿಕರ ಚತುರ್ಮುಖ ಬ್ರಹ್ಮ’ ಎಂದು ಅರ್ಥೈಸಿಕೊಳ್ಳುವುದು ತಥಾಕಥಿತ ಬುದ್ದಿಜೀವಿಗಳ ಮೊದಲ ಲಕ್ಷಣ. ನಮಗೆ ಅದು ಏನು ಎಂಬುದನ್ನು ಸಾಧಿಸುವುದಕ್ಕಿಂತ ಅದು ಏನು ಅಲ್ಲ ಎಂಬುದನ್ನು ಸಾಧಿಸುವುದೇ ಮುಖ್ಯವಾದಾಗ ಆಗುವ ಗೊಂದಲವಿದು. ಕತ್ತಲೆ ಕೋಣೆಯಲ್ಲಿ ನಡೆಯುವಾಗ ಕಣ್ಣನ್ನು ಸಾಧ್ಯವಿದ್ದಷ್ಟು ತೆರೆದಿಟ್ಟುಕೊಳ್ಳುವುದು ಜಾಣತನ. ಅದರ ಬದಲಿಗೆ ಮೊದಲೇ ಒಂದು ಕಣ್ಣುಪಟ್ಟಿ ಕಟ್ಟಿಕೊಂಡು ನಡೆವವರನ್ನು ಹಿಡಿಯಲು ಪ್ರಯತ್ನಿಸುವುದು ವ್ಯರ್ಥ.
ವೈದಿಕ ಸಾಹಿತ್ಯದಲ್ಲಿ ಬ್ರಹ್ಮ ಅಂದರೆ ಚತುರ್ಮುಖ ಬ್ರಹ್ಮ ಒಬ್ಬನೇ ಅಲ್ಲ. ಚತುರ್ಮುಖ ಬ್ರಹ್ಮನ ಸ್ಥಾನದಲ್ಲಿ ಈಗಾಗಲೆ ಹಲವಾರು ಬ್ರಹ್ಮರು ಆಗಿಹೋಗಿದ್ದಾರೆ. ಮುಂದೆಯೂ ಹಲವಾರು ಬ್ರಹ್ಮರು ಬರಲಿದ್ದಾರೆ. ತ್ರಿಮೂರ್ತಿಗಳು ಮತ್ತು ಇತರೆಲ್ಲಾ ದೇವತೆಗಳಿಗೂ ಸೃಷ್ಟಿಕರ್ತನಾದ ವಿಶ್ವನಿಯಾಮಕ ಶಕ್ತಿಯನ್ನು ವೇದಾಂತದಲ್ಲಿ ‘ಬ್ರಹ್ಮನ್’, ‘ಪರಬ್ರಹ್ಮ’, ‘ಆತ್ಮ’, ‘ಪರಮಾತ್ಮ’ ಇತ್ಯಾದಿಯಾಗಿ ಕರೆಯಲಾಗುತ್ತದೆ. ವೈಷ್ಣವರು ಅದನ್ನೇ ‘ಮಹಾವಿಷ್ಣು’ ಎಂದು, ಶೈವರು ‘ಪರಶಿವ’ ಎಂದು, ಶಾಕ್ತೇಯರು ‘ಆದಿಶಕ್ತಿ/ ಪರಾಶಕ್ತಿ’ ಎಂದು, ಗಾಣಪತ್ಯರು ‘ಮಹಾಗಣಪತಿ’ ಎನ್ನುವುದು. ನಮ್ಮಲ್ಲಿ ಕಂಡುಬರುವ ಪ್ರಾಚೀನ ದೇವಾಲಯಗಳಲ್ಲೆಲ್ಲಾ ‘ಮಹಾಗಣಪತಿ/ ಮಹಾಲಿಂಗೇಶ್ವರ/ ಮಹತೋಬಾರ ಎಂದೆಲ್ಲಾ ಈ ಮಹತ್ ತತ್ವಕ್ಕೇ ಮಣೆ ಹಾಕಿದ್ದನ್ನು ಗಮನಿಸಿ. ಹಾಗಾಗಿ ಬೆಮ್ಮೆರ್ ಚತುರ್ಮುಖ ಬ್ರಹ್ಮನೇ ಆಗಬೇಕಿಲ್ಲ, ಪರಬ್ರಹ್ಮನೂ ಆಗಬಹುದು, ಯಾಕೆ ಆಗಿರಬಾರದು?
ಬ್ರಹ್ಮ ಎಂಬುದಕ್ಕೆ ಬೃಹತ್ ಮಾತ್ರವಲ್ಲದೆ ಹಿರಿಯ ಎಂಬ ಅರ್ಥವೂ ಸಂಸ್ಕೃತದಲ್ಲಿ ಇದೆ. ಈ ಹಿರಿಯ ಮತ್ತು ಪೆರಿಯಮ್ಮೆರ್ ಎಂಬ ತುಳು ಮೂಲಗಳನ್ನು ಹೋಲಿಸಿ‌‌ ನೋಡಿ. ಬೆಮ್ಮೆರ್ ಮತ್ತು‌ ಬ್ರಹ್ಮ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಏನಾದರೂ ಇದೆಯೆ?
ಬೆಮ್ಮೆರ್ ಬಗ್ಗೆ ಹೇಳುವುದು ಮುಂದಕ್ಕೂ ಇದ್ದೇ ಇದೆ. ಅಲ್ಲಿಯವರೆಗೆ ನಿಮ್ಮ ಅಂತರಂಗದಲ್ಲಿ ಬೆಮ್ಮೆರ್‌ರ ಬಗ್ಗೆ ಚಿಂತನೆ ನಡೆಸಲು ಹೇಳುತ್ತಾ ಇಂದಿನ ಬರವಣಿಗೆಗೆ ವಿಶ್ರಾಂತಿ‌ ನೀಡುತ್ತೇನೆ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »